<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-752423363868781697</id><updated>2011-04-22T01:23:52.864+05:30</updated><category term='Fruit Fly'/><category term='Low Gravity'/><category term='Protein'/><category term='Microchip'/><category term='Lithium-Ion Battery'/><category term='Sharmila Bhattacharya'/><category term='Drunken Driving'/><category term='Airlines'/><category term='Fly Immunity'/><category term='Linux'/><category term='Brazil'/><category term='Space Shuttle'/><category term='Mobile Phone'/><category term='Alcohol'/><category term='Toyota'/><category term='Tera Chip'/><category term='Operating System'/><category term='ISS'/><category term='Intel'/><category term='NASA'/><category term='Multi Core'/><category term='Insect Habitat'/><category term='Receptor'/><title type='text'>ನೆಟ್‍ನೋಟ</title><subtitle type='html'>[ಈ ದರ್ಶನ, ಇನ್ನೂ Beta ವರ್ಶನ] 
The Monday Weekly Column by Haldodderi Sudhindra In The Editorial Page of Vijaya Karnataka, The Largest Circulated Kannada Daily Newspaper</subtitle><link rel='http://schemas.google.com/g/2005#feed' type='application/atom+xml' href='http://netnota.blogspot.com/feeds/posts/default'/><link rel='self' type='application/atom+xml' href='http://www.blogger.com/feeds/752423363868781697/posts/default?max-results=100'/><link rel='alternate' type='text/html' href='http://netnota.blogspot.com/'/><link rel='hub' href='http://pubsubhubbub.appspot.com/'/><author><name>HNS</name><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_WOq6aPUeAO4/SdR5qYZ87xI/AAAAAAAAAWg/cXIYJSqE8Z4/S220/sudhi1.jpg'/></author><generator version='7.00' uri='http://www.blogger.com'>Blogger</generator><openSearch:totalResults>35</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-752423363868781697.post-37612227376553715</id><published>2007-10-22T22:01:00.000+05:30</published><updated>2007-10-22T22:02:57.677+05:30</updated><title type='text'>ಕದಡಿದ ನೀರಲಿ ಮೀನಿನ ಹೆಜ್ಜೆಯ ಹುಡುಕುತ .....</title><content type='html'>&lt;strong&gt;&lt;span style="font-size:180%;"&gt;ಸ&lt;/span&gt;&lt;/strong&gt;ದ್ಯದ ರಾಜಕೀಯ ಪರಿಸ್ಥಿತಿಯನ್ನು ವಿವರಿಸುವಾಗ ‘ಕ್ಷೋಭೆ’ (turbulence) ಎಂಬ ಪದವನ್ನು ವಿಪರೀತವಾಗಿ ಬಳಸಲಾಗುತ್ತಿದೆ.  ಹಠಾತ್ ತಿರುವು ಹಾಗೂ ಸುಳಿಗಳನ್ನೊಳಗೊಂಡ ಯಾವುದೇ ಕ್ರಮ ರಹಿತ ಚಲನೆ ಕ್ಷೋಭೆ ಎನಿಸಿಕೊಳ್ಳುತ್ತದೆ.  ಎಂಜಿನೀರಿಂಗ್ ಕ್ಷೇತ್ರದಲ್ಲಿ ದ್ರವ ಅಥವಾ ಅನಿಲದ ಏರುಪೇರಿನ ಚಲನೆಯ ಬಗ್ಗೆ ಪ್ರಸ್ತಾಪಿಸುವಾಗ ನೆನಪಿಗೆ ಬರುವ ಶಬ್ದ ಕ್ಷೋಭೆ.  ಸ್ಥಳೀಯವಾಗಿ ದ್ರವವೊಂದರ ಒತ್ತಡ ಅಥವಾ ವೇಗ ಯಾವುದೇ ನಿರ್ದಿಷ್ಟ ಕ್ರಮವಿಲ್ಲದೆಯೆ ಏರುಪೇರಾದರೆ ಕ್ಷೋಭೆ ಸಂಭವಿಸುತ್ತದೆ.  ದ್ರವದ ಕ್ಷೋಭೆಯನ್ನು ನೀವು ಸ್ವತಃ ಅನುಭವಿಸಬಹುದು.  ಪಾತ್ರೆಯೊಂದರಲ್ಲಿಟ್ಟ ನೀರಲ್ಲಿ ಕೈಬೆರಳುಗಳನ್ನಿಳಿಸಿ ಬಿರುಸಾಗಿ ಅಲುಗಾಡಿಸಹೊರಟರೆ ಸಾಕು, ನೀರಿನ ಅಲೆಗಳು ಎತ್ತೆತ್ತಲೋ ತಾಂಡವವಾಡುತ್ತವೆ.  ಅಷ್ಟೇಕೆ, ಮನೆಯ ಗಾಜಿನ ತೊಟ್ಟಿಯಲ್ಲಿ ಮೀನುಗಳು ಯರ್ರಾಬಿರ್ರಿ ಚಲಿಸಲಾರಂಭಿಸಿದರೆ ಆ ನೀರಿನಲ್ಲಿ ಕ್ಷೋಭೆ ತಲೆದೋರುತ್ತದೆ.  ವಿಮಾನದಲ್ಲಿ ಪಯಣಿಸುವಾಗ ಒಮ್ಮೊಮ್ಮೆ ವಿಪರೀತ ಅಲುಗಾಟದ ಅನುಭವ ನಿಮಗುಂಟಾಗಬಹುದು.  ಏನಾಯಿತೊ ಎಂಬ ಗಾಭರಿಯಲ್ಲಿ ನೀವಿರುವಾಗ ಚಾಲಕ ತಣ್ಣನೆಯ ದನಿಯಲ್ಲಿ ‘ವಿಮಾನ ಗಾಳಿಯ ಪ್ರಕ್ಷುಬ್ದ ಚಲನೆಗೆ ಸಿಲುಕಿದೆ, ಅಡಚಣೆಗಾಗಿ ಕ್ಷಮೆಯಿರಲಿ’ ಎಂದು ಸಮಾಧಾನಿಸಿರುತ್ತಾನೆ.  ನ್ಯೂಟನ್ ನಿಯಮ ನಿಮಗೆ ಗೊತ್ತು.  ಯಾವುದೇ ಒಂದು ವಸ್ತು ತನ್ನ ತಟಸ್ಥ ಸ್ಥಿತಿ ಅಥವಾ ನಿರ್ದಿಷ್ಟ ಚಲನೆಯಿಂದ ಆಚೆಗೆ ಬರಬೇಕಾದರೆ ಹೊರಗಿನಿಂದ ಬಲ ಪ್ರಯೋಗವಾಗಿರಬೇಕು.  ಅಂದರೆ ಅಲ್ಲಿ ಶಕ್ತಿ ಸಂಚಯನವಾಗಿರಬೇಕು.  ತಟಸ್ಥ ಸ್ಥಿತಿ ಅಥವಾ ನಿರ್ದಿಷ್ಟ ಚಲನೆಯಲ್ಲಿರುವ ನೀರು ಅಥವಾ ಗಾಳಿಗೆ ಪ್ರಕ್ಷುಬ್ದತೆ ಉಂಟು ಮಾಡಬೇಕಾದರೆ ಶಕ್ತಿಯನ್ನು ವ್ಯಯ ಮಾಡಿರಲೇಬೇಕು.  ಅಂದರೆ ಕ್ಷೋಭೆಗೆ ಒಳಗಾದ ಗಾಳಿ ಅಥವಾ ನೀರಿನಲ್ಲಿ ಶಕ್ತಿ ಸಂವಹನೆಯಾಗಿರುತ್ತದೆ.  ಹೀಗೆ ಸಂವಹನೆಯಾದ ಶಕ್ತಿ ಮತ್ತಷ್ಟು ಪ್ರಕ್ಷುಬ್ದತೆಗೆ ಕಾರಣವಾಗುತ್ತಾ ವ್ಯಯವಾಗುತ್ತದೆ. &lt;br /&gt; ಮತ್ತೆ ಮೀನಿನ ಚಲನೆಯನ್ನು ಹಿಂಬಾಲಿಸೋಣ.  ನದಿ, ಸಮುದ್ರಗಳಲ್ಲಿ ಹರಿದಾಡುವ ಮೀನುಗಳು ತಮ್ಮ ಸುತ್ತಲಿರುವ ಅಗಾಧ ಶಕ್ತಿ ಹೊಂದಿರುವ ಪ್ರಕ್ಷುಬ್ದ ಅಲೆಗಳಿಂದ ಒಂದಷ್ಟು ಶಕ್ತಿಯನ್ನು ಆವಾಹಿಸಿಕೊಳ್ಳುತ್ತವೆ.  ಈ ಕಾರ್ಯಕ್ಕೆ ತಮ್ಮ ಈಜು ರೆಕ್ಕೆಗಳನ್ನು ಪ್ರಕ್ಷುಬ್ದ ಅಲೆಗಳ ಚಲನೆಗೆ ಅನುಗುಣವಾಗಿ ಬಾಗಿ, ಬಳುಕಿಸಿಕೊಳ್ಳುತ್ತವೆ.  ಸಣ್ಣ ಪುಟ್ಟ ತೊಟ್ಟಿಗಳಲ್ಲಿ ಒಂದು ಮೀನು ಸೃಷ್ಟಿಸಿದ ಕ್ಷೋಭೆಗೆ ಕದಡಿದ ನೀರಿನಿಂದ ಮತ್ತೊಂದು ಮೀನು ಶಕ್ತಿಯನ್ನು ಸಂಚಯಿಸಿಕೊಳ್ಳುತ್ತದೆ.  ಹೀಗೆ ಉತ್ಪತ್ತಿಯಾಗುವ ಶಕ್ತಿಯನ್ನು ಸಂಗ್ರಹಿಸಬಹುದೆ? ಎಂಬ ಪ್ರಶ್ನೆ ವಿಜ್ಞಾನಿಗಳನ್ನು ಬಹುದಿನಗಳಿಂದ ಕಾಡುತ್ತಿತ್ತು.  ಇದಕ್ಕೆಂದೇ ಅಮೆರಿಕದ ಪಸಡೀನಾದಲ್ಲಿರುವ ‘ಕ್ಯಾಲಿಫೋರ್ನಿಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ವಿದ್ಯಾಸಂಸ್ಥೆಯಲ್ಲಿ ಒಂದು ಅಧ್ಯಯನ ಪೀಠ ಸ್ಥಾಪನೆಯಾಗಿತ್ತು.  ನೀರಿನಲ್ಲಿ ವಾಸಿಸುವ ಜೀವಿಗಳಲ್ಲಿನ ಚಲನೆ, ಆ ಚಲನೆಗೆ ಅಗತ್ಯವಿರುವ ಶಕ್ತಿ ಸಂಚಯನೆ ಮುಂತಾದ ವಿಷಯಗಳ ಬಗ್ಗೆ ಇಲ್ಲಿ ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ.  ಸುಳಿಗೆ ಸಿಲುಕಿದ ದ್ರವಗಳಿಂದ ಶಕ್ತಿಯನ್ನು ಸೆಳೆಯುವಂಥ ಯಂತ್ರಗಳನ್ನು ನಿರ್ಮಿಸುವ ಪ್ರಯತ್ನಗಳು ಇಲ್ಲಿ ನಡೆದಿವೆ.  ಇದಕ್ಕೆಂದು ಮೀನು ಮತ್ತಿತರ ಜಲಚರಗಳ ನಡುಗೆಗಳ ಕಂಪ್ಯೂಟರ್ ಮಾದರಿಗಳನ್ನು ಸೃಷ್ಟಿಸಿ ಅವುಗಳ ಹಿಂದಿನ ‘ಗಣಿತ ಸೂತ್ರ’ಗಳನ್ನು ಅರ್ಥೈಸಿಕೊಳ್ಳುವ ಯತ್ನಗಳು ಸಾಗಿವೆ.&lt;br /&gt; ಮೀನು ನಾವು ತಿಳಿದುಕೊಂಡಿರುವುದಕ್ಕಿಂತಲೂ ಬುದ್ಧಿವಂತ ಜಲಚರ.  ಹರಿವ ನೀರಿನಲ್ಲಿ ಸುಳಿಗಳೇಳುವುದು ನಿಮಗೆ ಗೊತ್ತು.  ಈ ಸುಳಿಗಳು ಒಂದು ಆವರ್ತನೆಯಲ್ಲಿ ಗಡಿಯಾರ ಸುತ್ತುವಂತೆ ಪ್ರದಕ್ಷಿಣೆ ಹಾಕಿದರೆ ಮತ್ತೊಂದು ಆವರ್ತನೆಯಲ್ಲಿ ಅಪ್ರದಕ್ಷಿಣೆ ಹಾಕುತ್ತವೆ.  ಇಂಥ ಉಂಗುರದಲೆಗಳಲ್ಲಿ ಹುದುಗಿರುವ ಶಕ್ತಿಯನ್ನು ತಮ್ಮ ಚಲನೆಗೆ ಅನುಕುಳವಾಗುವಂತೆ ಬಳಸಿಕೊಳ್ಳಲು ಮೀನುಗಳು ಒಂದು ಬದಿಯಿಂದ ಮತ್ತೊಂದು ಬದಿಗೆ ಚಲಿಸತೊಡಗುತ್ತವೆ.  ಯಾವುದೇ ಶ್ರಮವಿಲ್ಲದೆಯೆ ಸುಳಿಗಳಿಂದ ಉಂಟಾದ ಶಕ್ತಿಯನ್ನು ತಮ್ಮ ಚಲನೆಗೆ ಮೀನುಗಳು ಬಳಸಿಕೊಳ್ಳುತ್ತವೆ.  ಇದೇ ರೀತಿ ಯಂತ್ರಗಳು ಶಕ್ತಿಯನ್ನು ತುಂಬಿಕೊಳ್ಳಬಯಸಿದರೆ ಅವು ಥೇಟ್ ಮೀನುಗಳಂತೆ ಸುಳಿಗಳಿಗನುಗುಣವಾಗಿ ಬದಿಯಿಂದ ಬದಿಗೆ ಚಲಿಸಬೇಕು.  ಅವುಗಳಿಗಿರುವಂತೆಯೇ ಬಾಗಿ ಬಳುಕಬಲ್ಲ ರೆಕ್ಕೆಗಳನ್ನು ಅಂಟಿಸಿಕೊಂಡಿರಬೇಕು.  ಮುಂದಿನ ಜಲಧಾರೆ ಯಾವ ರೀತಿ ಅಮರಿಕೊಳ್ಳಬಹುದೆಂದು ನಿರ್ಧರಿಸಿಕೊಂಡು ತನ್ನ ಹೆಜ್ಜೆಯನ್ನು ಸೂಕ್ಷ್ಮ ಹಾಗೂ ಸುರಕ್ಷವಾಗಿ ಮುಂದಿಡುವ ಚಾಕಚಕ್ಯತೆಯನ್ನೂ ಅವು ಹೊಂದಿರಬೇಕು.  ಸುಳಿಗೆ ಸಿಲಿಕಿದೊಡನೆಯೆ ಅದರಿಂದ ಸಾಧ್ಯವಾದಷ್ಟು ಹೆಚ್ಚಿನ ಶಕ್ತಿಯನ್ನು ಹೀರಿಕೊಳ್ಳುವ ಸಾಮರ್ಥ್ಯ ಅವುಗಳಿಗಿರಬೇಕು.  ಇಲ್ಲಿ ನೆನಪಿಡಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ, ಎದುರಾಗುವ ಅಲೆಗಳಿಗೆ ಅಥವಾ ಸುಳಿಗೆ ಮೀನು ಹೇಗೆ ತನ್ನ ಮೂತಿಯ ಕೋನವನ್ನು ಬದಲಿಸಿಕೊಂಡು ಮುಂದೆ ಸಾಗುವುದೋ ಅದೇ ರೀತಿ ಈ ಯಂತ್ರಗಳು ಮುನ್ನಡೆ ಸಾಧಿಸಿದಲ್ಲಿ ಮಾತ್ರ ಶಕ್ತಿ ಸಂವಹನೆಯಾಗಬಲ್ಲದು.&lt;br /&gt; ಇದರಲ್ಲೇನು, ವಿಶೇಷ?  ಗಾಳಿಯಲೆಗಳಿಂದ ಶಕ್ತಿ ಉತ್ಪಾದಿಸುವ ಯಂತ್ರಗಳನ್ನು ನಾವು ಸೃಷ್ಟಿಸಿಕೊಂಡಿಲ್ಲವೆ? ಎಂದು ಪ್ರಶ್ನಿಸುವ ಮುನ್ನ ಯೋಚಿಸಿ ನೋಡಿ.  ಈ ಯಂತ್ರಗಳು ಕೇವಲ ಸರಾಗವಾಗಿ ಹರಿಯುವ ಗಾಳಿಯ ಬಲದಿಂದ ಮಾತ್ರ ಶಕ್ತಿಯನ್ನು ಉತ್ಪಾದಿಸಿಕೊಳ್ಳಬಲ್ಲವು.  ಪ್ರಕ್ಷುಬ್ದವಾದ ವಾತಾವರಣದಲ್ಲಿ ಅವು ಕಾರ್ಯನಿರ್ವಹಿಸಲಾರವು.  ನಮ್ಮ ನಗರ ಪ್ರದೇಶಗಳಲ್ಲಿ ಎತ್ತರೆತ್ತರದ ಕಟ್ಟಡಗಳಿರುತ್ತವೆ.  ಈ ಕಟ್ಟಡಗಳ ಮೇಲ್ತುದಿಯಲ್ಲಿ ನಿಂತರೆ ಬೆಕ್ಕಸ ಬೆರಗಾಗಿಸುವ ಗಾಳಿಯ ಹರಿದಾಟ ಅನುಭವಕ್ಕೆ ಬಂದೀತು.  ಆದರೆ ಇಲ್ಲಿ ಹರಿದಾಡುವುದು ಪ್ರಕ್ಷುಬ್ದ ಅಲೆಯ ಗಾಳಿ, ವಿಪರೀತು ಸುಳಿಗಳನ್ನು ಹೊಂದಿರುವಂಥದು.  ಹೀಗಾಗಿ ಇಂಥ ಕಟ್ಟಡಗಳ ತುದಿಯಲ್ಲಿ ಗಾಳಿಯಂತ್ರಗಳನ್ನು ಸ್ಥಾಪಿಸಿ, ಶಕ್ತಿ ಉತ್ಪಾದಿಸಲಾಗುವುದಿಲ್ಲ.  ಇಲ್ಲಿ ಬೇಕಾಗಿರುವುದು ಮೀನಿನಂತೆ ಸುಳಿಗಳಿಂದ ಶಕ್ತಿ ಹೀರಬಲ್ಲ ಯಂತ್ರಗಳು.&lt;br /&gt; ಕ್ಯಾಲಿಫೋರ್ನಿಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಜಾನ್ ಡಾಬಿರಿ ಎಂಬ ಪ್ರಾಧ್ಯಾಪಕರ ನೇತೃತ್ವದಲ್ಲಿ ವಿಶಿಷ್ಟವಾದ ಅಧ್ಯಯನವೊಂದು ಮುನ್ನಡೆ ಸಾಧಿಸಿದೆ.  ಪ್ರಕ್ಷುಬ್ದತೆಗೆ ಸಿಲುಕಿದ ನೀರು ಹಾಗೂ ಗಾಳಿ ಎರಡರಲ್ಲೂ ಕಾರ್ಯನಿರ್ವಹಿಸಿ ಶಕ್ತಿ ಉತ್ಪಾದಿಸಬಲ್ಲ ಪುಟ್ಟ ಪುಟ್ಟ ಯಂತ್ರಗಳ ಸೃಷ್ಟಿ ಕಾರ್ಯ ಇಲ್ಲಿ ನಡೆಯುತ್ತಿದೆ.  ಸ್ವಾಭಾವಿಕವಾಗಿ ಉತ್ಪತ್ತಿಯಾಗುವ ಸುಳಿಗಳಲ್ಲಿ ಶಕ್ತಿ ಹೇಗೆ ಕೇಂದ್ರೀಕೃತವಾಗುತ್ತದೆ, ಅದನ್ನು ಹೊರತೆಗೆಯುವುದು ಹೇಗೆ? ಎಂದು ಅರಿತುಕೊಳ್ಳಲು ಇಲ್ಲಿ ಪ್ರಯೋಗಗಳನ್ನು ನಡೆಸಲಾಗುತ್ತಿದೆ.  ಇಲ್ಲಿ ಕೇವಲ ಮೀನೊಂದರ ಮರುಸೃಷ್ಟಿಯಾಗುತ್ತಿಲ್ಲ, ಚಲನೆಗೆ ಸಂಬಂಧಿಸಿದಂತೆ ಮೀನಿನ ಹೊರಮೈನ ಹೊಯ್ದಾಟ, ಅವುಗಳ ನಿರ್ದಿಷ್ಟ ಗತಿ ಮತ್ತಿತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮೀನಿಗಿಂತಲೂ ಹೆಚ್ಚು ಕಾರ್ಯಕ್ಷಮತೆಯ ಯಂತ್ರವನ್ನು ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ.  ಸಾಮಾನ್ಯ ಗಾಳಿಯಂತ್ರಗಳು ಉತ್ಪಾದಿಸುವಷ್ಟು ಶಕ್ತಿಯನ್ನು ಇಂಥ ಯಂತ್ರಗಳು ಉತ್ಪಾದಿಸಲು ಸಾಧ್ಯವಾಗದು ಎಂಬ ಮಾತು ದಿಟ.  ಆದರೆ ಸುಳಿಗಾಳಿಯಲ್ಲಿ ಸಾಮಾನ್ಯ ಗಾಳಿಯಂತ್ರಗಳು ಕೆಲಸ ಮಾಡದೆಯೆ ಇರುವುದರಿಂದ ಈ ಬಗೆಯ ಹೋಲಿಕೆ ಸಲ್ಲ.&lt;br /&gt; ಇಷ್ಟಕ್ಕೂ ಈ ಬಗೆಯ ಪ್ರಯೋಗಗಳ ಮಹತ್ವವೇನು? ಎಂಬ ಪ್ರಶ್ನೆ ನಿಮ್ಮ ಮುಂದಿರಬಹುದು.  ರಾಕೆಟ್‍ಗಳಿಂದ ಹಿಡಿದು ನಮ್ಮ ಗಾಳಿಯಂತ್ರದವರೆಗೆ ಸ್ತಿಮಿತ ಸ್ಥಿತಿಯಲ್ಲಿರುವ ದ್ರವಗಳ ಪರಿಚಲನೆಯ ಸೂತ್ರಗಳು ಉಪಯೋಗಕ್ಕೆ ಬರುವುದು ನಿಮಗೆ ಗೊತ್ತು.  ಆದರೆ ಪ್ರಕೃತಿಯಲ್ಲಿನ ಬಹುತೇಕ ಜೀವಿಗಳ ಚಲನೆ ಹಾಗೂ ನೈಸರ್ಗಿಕ ವಿದ್ಯಮಾನಗಳಲ್ಲಿ ಸ್ತಿಮಿತ ಸ್ಥಿತಿಯಲ್ಲಿಲ್ಲದಿರುವ ದ್ರವಗಳದೇ ಮೇಲಾಟ.  ಅದು ನಮ್ಮ ದೇಹದಲ್ಲಿ ರಕ್ತ ಪರಿಚಲನೆಗೆ ನೆರವಾಗುವ ಹೃದಯವೆಂಬ ಪಂಪ್‍ನ ಕಾರ್ಯವಿರಬಹುದು ಅಥವಾ ನೀರಿನಾಳದಲ್ಲಿ ಚಡಪಡಿಸುವ ಅಂಬಲಿ ಮೀನಿನ ಹರಿದಾಟವಿರಬಹುದು.  ಎಲ್ಲವೂ ಗಣಿತ ಸೂತ್ರಗಳಿಗೆ, ಕಂಪ್ಯೂಟರ್ ಮಾದರಿಗಳಿಗೆ ಸುಲಭವಾಗಿ ಸಿಗದ ಪರಿಚಲನೆಗಳು.  ಇವುಗಳನ್ನು ಅರ್ಥೈಸಿಕೊಂಡರೆ ನಮ್ಮ ಸುಗಮ ಜೀವನಕ್ಕೆ ಅನುಕೂಲ ತರುವಂಥ ಅನೇಕಾನೇಕ ಯಂತ್ರಗಳನ್ನು ಸೃಷ್ಟಿಸಿಕೊಳ್ಳಬಹುದು.  ಈ ಒಂದು ಮಹದಾಸೆಯಿಂದ ಕ್ಯಾಲಿಫೋರ್ನಿಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳು ಜಗತ್ತಿನ ಅನೇಕ ಸಂಶೋಧನಾಲಯಗಳ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಬೃಹತ್ ಕಾರ್ಯವೊಂದನ್ನು ಹಮ್ಮಿಕೊಂಡಿದ್ದಾರೆ. &lt;br /&gt; ಯಾವುದೇ ಒಂದು ಕ್ಷಿಪ್ರ ಚಲನೆಗೆ ಆ ವಸ್ತುವಿನ ಉದ್ದ ಹಾಗೂ ವ್ಯಾಸದ ನಡುವಿನ ಅನುಪಾತ ಮುಖ್ಯವಾಗುತ್ತದೆ.  ಉದಾಹರಣೆಗೆ ಸಮುದ್ರದಾಳಕ್ಕೆ ಇಳಿಯುವ ಈಜುಗಾರರು ತಮ್ಮ ವೇಗದ ಚಲನೆಗೆ ಬೆನ್ನಿಗೆ ರಾಕೆಟ್‍ನಂಥ ಶಕ್ತಿ ಸಂವಾಹಕವನ್ನು ಹೊತ್ತುಕೊಂಡಿರುತ್ತಾರೆ.  ಅವರು ಮುನ್ನಡೆಯುವ ಭಂಗಿ, ವೇಗವನ್ನು ನಿರ್ಧರಿಸಬಲ್ಲ ಪ್ರಮುಖ ಅಂಶವಾಗುತ್ತದೆ.  ಅಂತೆಯೇ ಸಮುದ್ರದಾಳದಲ್ಲಿ ಚಲಿಸುವ ಸಬ್‍ಮರೀನ್‍ಗಳ ಆಕಾರ ಹಾಗೂ ಗಾತ್ರವೂ ಸಹಾ ಅವುಗಳು ಚಲಿಸುವ ವೇಗವನ್ನು ನಿಯಂತ್ರಿಸುತ್ತವೆ.  ಸಮುದ್ರದಲ್ಲಿನ ನೀರು ಸ್ತಿಮಿತವಲ್ಲದ ಸ್ಥಿತಿಯಲ್ಲಿರುವಂತೆ ವಾತಾವರಣದಲ್ಲಿನ ಗಾಳಿಯೂ ಸ್ತಿಮಿತದಲ್ಲಿರುವುದಿಲ್ಲ.  ಆದ್ದರಿಂದ ವಿಮಾನ ಅಥವಾ ಯಾವುದೇ ಹಾರುವ ಯಂತ್ರಗಳ ವಿನ್ಯಾಸ ಮಾಡುವಾಗ ಆಕಾರ, ಗಾತ್ರ ಹಾಗೂ ಕೋನಗಳನ್ನು ಲೆಕ್ಕ ಹಾಕಿ ವಿನ್ಯಾಸಗೊಳಿಸಲಾಗಿರುತ್ತದೆ. &lt;br /&gt; ಎಲ್ಲವೂ ಸರಿ, ಸದ್ಯಕ್ಕೆ ಮೀನಿನಂಥ ಯಂತ್ರಗಳ ಸೃಷ್ಟಿ ಕಾರ್ಯ ಎಷ್ಟು ಪ್ರಗತಿ ಸಾಧಿಸಿದೆ?  ನಾಲ್ಕು ವರ್ಷಗಳ ಹಿಂದೆ ಜಗದ್ವಿಖ್ಯಾತ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಮೊದಲ ಬಾರಿಗೆ ಇಂಥ ಯಂತ್ರಗಳನ್ನು ನಿರ್ಮಿಸಿದ ವಿಜ್ಞಾನಿ ಜೇಮ್ಸ್ ಲಿಯಾವೊ ಅವರ ಮಾತು ಇಲ್ಲಿ ಮುಖ್ಯವಾಗುತ್ತದೆ.  ‘ಯೋಜನೆ ನಿರ್ದಿಷ್ಟ ಗತಿಯಲ್ಲಿ ಮುನ್ನಡೆದಿದೆ.  ಈ ಕೆಲಸದ ವ್ಯಾಪ್ತಿ ಹೆಚ್ಚುತ್ತಿದ್ದು, ಬಹಳಷ್ಟು ಯಂತ್ರಗಳ ಸೃಷ್ಟಿಗೆ ಇದು ಪ್ರೇರಕವಾಗುತ್ತಿದೆ.  ಸದ್ಯಕ್ಕೆ ನಿರ್ಮಾಣವಾಗುತ್ತಿರುವ ಯಂತ್ರದ ಮಾದರಿ ಸರಳವಾಗಿದೆ.  ಆದರೆ ಜಲಚರದ ಚಲನೆಗಳೆಲ್ಲವನ್ನೂ ಮೈಗೂಡಿಸಿಕೊಂಡ ಪೂರ್ಣ ಪ್ರಮಾಣದ ಯಂತ್ರಗಳ ನಿರ್ಮಾಣಕ್ಕೆ ಇನ್ನೂ ಸಮಯ ಪಕ್ವವಾಗಿಲ್ಲ.  ಏಕೆಂದರೆ ದ್ರವ ಹಾಗೂ ಮೀನಿನ ಚಲನೆಗಳೆರಡನ್ನೂ ಒಂದೇ ವ್ಯಾಪ್ತಿಗೆ ಸಿಲುಕಿಸುವುದು ಅಷ್ಟು ಸುಲಭವಲ್ಲ’.  ಲಿಯಾವೊ ಹೇಳಿರುವ ಮಾತುಗಳಲ್ಲಿ ಸತ್ಯವಿದೆ.  ಮೀನುಗಳು ತಮ್ಮ ಮುಂದಿರುವ ಸುಳಿಯೆಂಥದು? ಎಂಬುದನ್ನು ಗ್ರಹಿಸಿ, ತನ್ನ ಚಲನೆಯ ಗತಿ, ದಿಸೆಗಳನ್ನು ಬದಲಿಸಿಕೊಳ್ಳುತ್ತವೆ.  ಈ ಬಗೆಯ ಚೂಟಿತನವನ್ನು ಯಂತ್ರಗಳಲ್ಲಿ ಮೈಗೂಡಿಸದ ಹೊರತು ಯಂತ್ರಗಳ ಕಾರ್ಯಕ್ಷಮತೆಯನ್ನು ಹಿಗ್ಗಿಸಲಾಗುವುದಿಲ್ಲ.  ಹಾಗೆಂದ ಮಾತ್ರಕ್ಕೆ ನಿರಾಶರಾಗಬೇಕಿಲ್ಲ.  ಜಗತ್ತಿನೆಲ್ಲೆಡೆ ವಿವಿಧ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪ್ರಯೋಗಗಳನ್ನು ಗಮನಿಸಿದರೆ ಈ ಕೆಲಸ ಕೆಲವೇ ವರ್ಷಗಳಲ್ಲಿ ಪೂರ್ಣಗೊಳ್ಳುವುದರಲ್ಲಿ ಸಂಶಯವಿಲ್ಲ.&lt;br /&gt; ಮೀನಿನ ಹೆಜ್ಜೆಯನ್ನು ಗುರುತಿಸುವುದೇ ಕಷ್ಟದ ಕೆಲಸ.  ಅದರಲ್ಲೂ ಕದಡಿದ ನೀರಿನಲ್ಲಿ ಮೀನಿನ ಪರಿಚಲನೆಯನ್ನು ಗ್ರಹಿಸುವುದು ಮತ್ತಷ್ಟು ಕಷ್ಟದ ಕೆಲಸ.  ಹೀಗೆ ಗ್ರಹಿಸಿದ ಚಲನೆಯ ಹಿಂದಿನ ಗಣಿತ ಸೂತ್ರಗಳನ್ನು ಅರ್ಥೈಸಿಕೊಂಡು ಅವುಗಳ ಆಧಾರದ ಮೇಲೆ ಕಂಪ್ಯೂಟರ್ ಮಾದರಿಗಳನ್ನು ಮರುಸೃಷ್ಟಿಸುವುದು ಮಗದಷ್ಟು ಕ್ಲಿಷ್ಟದ ಕಾರ್ಯ.  ಆನಂತರ ಅವುಗಳ ನೆರವಿನಿಂದ ಮೀನುಗಳಂತೆ ಕಾರ್ಯನಿರ್ವಹಿಸುವ ಯಂತ್ರವನ್ನು ವಿನ್ಯಾಸಗೊಳಿಸುವುದು ಎಂಜಿನೀರ್‌ಗಳ ಮುಂದಿರುವ ಅತಿ ದೊಡ್ಡ ಸವಾಲು.  ಈ ಸವಾಲನ್ನು ಮುಂದಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿ-ತಂತ್ರಜ್ಞರನ್ನು ನಿಜವಾದ ಆಶಾವಾದಿಗಳೆನ್ನಬೇಕು.&lt;br /&gt;&lt;strong&gt;&lt;em&gt;(ಕೃಪೆ: ವಿಜಯ ಕರ್ನಾಟಕ; 22-10-2007)&lt;/em&gt;&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/752423363868781697-37612227376553715?l=netnota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://netnota.blogspot.com/feeds/37612227376553715/comments/default' title='Post Comments'/><link rel='replies' type='text/html' href='http://www.blogger.com/comment.g?blogID=752423363868781697&amp;postID=37612227376553715' title='6 Comments'/><link rel='edit' type='application/atom+xml' href='http://www.blogger.com/feeds/752423363868781697/posts/default/37612227376553715'/><link rel='self' type='application/atom+xml' href='http://www.blogger.com/feeds/752423363868781697/posts/default/37612227376553715'/><link rel='alternate' type='text/html' href='http://netnota.blogspot.com/2007/10/blog-post_2861.html' title='ಕದಡಿದ ನೀರಲಿ ಮೀನಿನ ಹೆಜ್ಜೆಯ ಹುಡುಕುತ .....'/><author><name>HNS</name><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_WOq6aPUeAO4/SdR5qYZ87xI/AAAAAAAAAWg/cXIYJSqE8Z4/S220/sudhi1.jpg'/></author><thr:total>6</thr:total></entry><entry><id>tag:blogger.com,1999:blog-752423363868781697.post-6826202173230272890</id><published>2007-10-22T21:57:00.000+05:30</published><updated>2007-10-22T22:00:28.723+05:30</updated><title type='text'>ಈ ಫೋನ್ ಮುಂದೆ ಬಾಯಿಬಿಟ್ಟರೆ ಬಣ್ಣಗೇಡು!</title><content type='html'>&lt;strong&gt;&lt;span style="font-size:180%;"&gt; ‘ಆ&lt;/span&gt;&lt;/strong&gt;ತ್ಮವಿಶ್ವಾಸದ ನಗುವಿಗಾಗಿ’  ಇಲ್ಲವೆ ‘ಉಸಿರಿನ ದುರ್ವಾಸನೆಯ ನಿವಾರಣೆಗಾಗಿ’ ಇಂಥದೇ ಟೂತ್‍ಪೇಸ್ಟ್ ಬಳಸಿ ಎಂದು ಕರೆಕೊಡುವ ನೂರಾರು ಜಾಹೀರಾತುಗಳನ್ನು ನೀವು ಕಂಡಿರುತ್ತೀರಿ.  ಜತೆಗೆ ಸುಗಂಧ ಬೀರುವ ಶ್ವಾಸಕ್ಕೆಂದೇ ತಯಾರಿಸಲಾದ ಅನೇಕ ‘ಚ್ಯೂಯಿಂಗ್ ಗಮ್’, ‘ಮಿಂಟ್ ಚಾಕೊಲೆಟ್’ಗಳು ಅಂಗಡಿಗಳಲ್ಲಿ ಭರದಿಂದ ಮಾರಾಟವಾಗುವುದೂ ನಿಮಗೆ ಗೊತ್ತು.  ಒಂದೆಡೆ ಈ ಬಗ್ಗೆ ವಿಪರೀತ ಜಾಗರೂಕರಾಗಿ ಒಂದಲ್ಲಾ ಒಂದು ವಸ್ತುವನ್ನು ಬಾಯಿಯಲ್ಲಿ ಜಗಿಯುವವರಿರುತ್ತಾರೆ.  ಮತ್ತೊಂದೆಡೆ ತಮ್ಮ ಬಾಯಿಯಿಂದ ಹೊರಡುವ ವಾಸನೆಯನ್ನೂ ಗ್ರಹಿಸುವ ವ್ಯವಧಾನವಿಲ್ಲದೆ ಅಕ್ಕಪಕ್ಕದವರಿಗೆ ಮುಜುಗರ ಉಂಟುಮಾಡುವ ಭಂಡರೂ ಇದ್ದಾರೆ.  ಹಾಗಿದ್ದರೆ ವಾಸನೆಯಲ್ಲಿ ಎಷ್ಟರ ಮಟ್ಟಿಗೆ ದುರ್ಗಂಧವಿದೆಯೆಂದು ಗುರುತಿಸಬಲ್ಲ ಮಾಪಕ ಇಲ್ಲವೆ? ಎಂಬುದು ನಿಮ್ಮ ಮುಂದಿನ ಪ್ರಶ್ನೆ.  ರಾತ್ರಿ ಒಬ್ಬಂಟಿಯಾಗಿ ವಾಹನ ಚಲಿಸುತ್ತಿದ್ದರೆ ಮಾರ್ಗ ಮಧ್ಯದಲ್ಲಿ ಪೊಲೀಸರು ತಡೆಹಿಡಿದು ನೀವು ಮದ್ಯ ಸೇವಿಸಿರುವಿರೆ? ಎಂದು ಪರೀಕ್ಷೆಗೀಡು ಮಾಡುವುದು ನಿಮ್ಮ ಅನುಭವಕ್ಕೆ ಬಂದಿರಬಹುದು.  ಒಮ್ಮೊಮ್ಮೆ ಹೆಚ್ಚಿನ ಸಂಖ್ಯೆಯ ಸವಾರರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರೆ ‘ಉಸಿರು ವಿಶ್ಲೇಷಕ’ದ ಬದಲು ತಮ್ಮ ಮೂಗಿನಿಂದಲೇ ನಿಮ್ಮ ಬಾಯಿಂದ ಹೊರಟ ವಾಸನೆಯನ್ನು ಪರಿಶೀಲಿಸುವುದೂ ಉಂಟು.   ಹಿಂದೆ ಇದೇ ಅಂಕಣದಲ್ಲಿ ಬಾಯಿಯಿಂದ ಹೊರಡುವ ಮದ್ಯದ ವಾಸನೆಯ ಮೇಲೆಯೇ ಚಾಲಕನ ಸ್ಥಿಮಿತವನ್ನು ನಿರ್ಧರಿಸಿಕೊಂಡು ಕಾರೊಂದು ಸ್ವಯಂಚಾಲಿತವಾಗಿ ಬಂದ್ ಆಗುವ ವ್ಯವಸ್ಥೆಯೊಂದರ ಬಗ್ಗೆ ಓದಿದ್ದ ನೆನಪು ನಿಮಗಿರಬಹುದು.  ಪ್ರಸ್ತುತ ಇಂದಿನ ಚರ್ಚೆಯ ವಿಷಯ - ಬಾಯಿಯಿಂದ ಹೊರಡುವ ದುರ್ವಾಸನೆಯನ್ನು ಸುಲಭವಾಗಿ ಸ್ವಯಂಪರೀಕ್ಷೆ ಮಾಡಿಕೊಳ್ಳಬಹುದಾದ ಸಾಧನ.&lt;br /&gt; ವಾಸನೆ, ಅದರಲ್ಲೂ ದುರ್ವಾಸನೆ ಎಂಬುದನ್ನು ನಿರ್ಧರಿಸುವುದು ಹೇಗೆ?  ನಾಲಿಗೆಯ ಹಿಂಬಾಗದಲ್ಲಿ ಸೇರಿಕೊಳ್ಳುವ ಬ್ಯಾಕ್ಟೀರಿಯಗಳಿಂದ ಹಿಡಿದು ಜೀರ್ಣ ವ್ಯವಸ್ಥೆಯಲ್ಲಿನ ಏರುಪೇರಿನಿಂದ ದುರ್ವಾಸನೆ ಬೀರುವ ಅನಿಲಗಳು ಉತ್ಪಾದನೆಯಾಗುತ್ತವೆ.  ಕೆಲವೊಮ್ಮೆ ತೀಕ್ಷ್ಣ ವಾಸನೆ ಬೀರುವ ಬೆಳ್ಳುಳ್ಳಿ ಮತ್ತಿತರ ಆಹಾರ ಪದಾರ್ಥಗಳು ಬಾಯಿಯಲ್ಲಿ ಒಂದಷ್ಟು ದುರ್ಗಂಧವನ್ನು ಉಳಿಸಿಡಬಹುದು.  ಬಾಯಿಯನ್ನು ಸ್ವಚ್ಛವಾಗಿಟ್ಟುಕೊಂಡಿರದ ಸಂದರ್ಭಗಳಲ್ಲಿ ಅಥವಾ ಆಲ್ಕೋಹಾಲ್‍ನಂಥ ದ್ರಾವಕಗಳು ಉತ್ಪಾದಿಸುವ ಭಾಷ್ಪದಿಂದ ಉಸಿರಿನಲ್ಲಿ ದುರ್ವಾಸನೆ ಹೆಚ್ಚು ಕಾಲ ಇರಬಲ್ಲದು.  ಅಸಲಿಗೆ ದುರ್ಗಂಧವೆಂದರೆ ಇತರೆ ಅನಿಲಗಳೊಂದಿಗೆ ಗಂಧಕ ಸೇರಿಹೋದ ವಿವಿಧ ಬಗೆಯ ಸಲ್ಫೈಡ್ ಅನಿಲಗಳ ಮಿಶ್ರಣ.  ಸಲ್ಫೈಡ್‍ಗಳೆಂಥವು? ಅವುಗಳಲ್ಲಿ ಸೇರಿಹೋದ ಮೂಲ ವಸ್ತುಗಳ್ಯಾವುವು? ಯಾವ ವಸ್ತುವಿನಿಂದ ಇಂಥ ಅನಿಲಗಳು ಉತ್ಪತ್ತಿಯಾಗಿವೆ? ಮುಂತಾದ ಮಾಹಿತಿಗಳನ್ನು ಇಂದಿನ ರಸಾಯನ ವಿಜ್ಞಾನದ ನೆರವಿನಿಂದ ಸುಲಭವಾಗಿ ಪಡೆಯಬಹುದು.  ಚಿಕಿತ್ಸಾಲಯಗಳಲ್ಲಿ ಸ್ಥಾಪಿಸಬಹುದಾದ ಇಂಥ ವಿಶ್ಲೇಷಕಗಳು ದುಬಾರಿ ವೆಚ್ಚದ್ದು.  ಜತೆಗೆ ಇವುಗಳ ನಿಖರ ವಿಶ್ಲೇಷಣೆಗೆ ತರಬೇತಿ ಪಡೆದ ರಸಾಯನ ವಿಜ್ಞಾನಿಗಳು ಬೇಕು.    &lt;br /&gt; ಯಾವುದೇ ಒಂದು ಹೊಸ ವ್ಯವಸ್ಥೆಯನ್ನು ನಮ್ಮ ಜೀವನಶೈಲಿಗೆ ಒಗ್ಗಿಸಿಕೊಳ್ಳುವುದು ಕಷ್ಟದ ಕೆಲಸ.  ಪ್ರತಿದಿನ ಹತ್ತಾರು ಎಲೆಕ್ಟ್ರಾನಿಕ್ ಸಾಧನಗಳನ್ನು ಜೇಬಿನಲ್ಲಿ, ಕೈಚೀಲದಲ್ಲಿ, ಕಾರಿನಲ್ಲಿ ಹೊತ್ತೊಯ್ಯುತ್ತಿರುತ್ತೀರಿ.  ಸಹೋದ್ಯೋಗಿ ಅಥವಾ ಸಹಧರ್ಮಿಣಿ ಇಲ್ಲವೆ ಪ್ರಿಯತಮೆಯನ್ನು ಮೆಚ್ಚಿಸುಲೋಸುಗ ಮತ್ತೊಂದು ‘ವಾಸನೆ ಮೀಟರ್’ ಅನ್ನು ಕೊಂಡೊಯ್ಯುವುದು ತ್ರಾಸದಾಯಕ.  ಈ ಕಾರಣದಿಂದ ನಿಮ್ಮ ನಿತ್ಯ ಬಳಕೆಯ ಯಾವುದಾದರೂ ಒಂದು ಸಾಧನದಲ್ಲಿ ದುರ್ವಾಸನಾ ವಿಶ್ಲೇಷಕವನ್ನು ಅಳವಡಿಸುವ ಪ್ರಯತ್ನಗಳು ನಡೆಯುತ್ತಿವೆ.  ಇತ್ತೀಚೆಗಂತೂ ಮೊಬೈಲ್ ಫೋನ್‍ಗಳು ಬಹುತೇಕ ಕೆಲಸಗಳಿಗೆ ಬಳಕೆಯಾಗುತ್ತಿವೆ.  ಉದಾಹರಣೆಗೆ ಸಂಗೀತ ಸುಧೆಯನ್ನು ನೀಡುವ, ಸುದ್ದಿ-ಮಾಹಿತಿ ಹಂಚುವ, ರೇಡಿಯೊ-ಟೀವಿ ಗಳನ್ನು ಬಿತ್ತರಿಸುವ, ಇಂಟರ್‌ನೆಟ್ ಸೌಕರ್ಯ ನೀಡುವ, ಜೀಪೀಎಸ್ ವ್ಯವಸ್ಥೆ ಅಳವಡಿಸಬಲ್ಲ, ಧ್ವನಿ-ಚಿತ್ರ-ಚಲನಚಿತ್ರ ದಾಖಲಿಸಬಲ್ಲ, ಟಾರ್ಚ್‍ನ ಕೆಲಸ ಮಾಡಬಲ್ಲ, ಕಂಪ್ಯೂಟರ್‌ಗೆ ಸಾಟಿಯಾಗಬಲ್ಲ ...... ಕೆಲಸಗಳನ್ನು ಮೊಬೈಲ್ ಫೋನ್‍ಗಳು ಇಂದು ನಿರ್ವಹಿಸಬಲ್ಲವು.  ಅಂದ ಮೇಲೆ ಮೊಬೈಲ್ ಫೋನಿಗೆ ದುರ್ವಾಸನೆಯನ್ನು ಗ್ರಹಿಸಿ ಎಚ್ಚರಿಸಬಲ್ಲ ಸೌಕರ್ಯವನ್ನು ನೀಡಬಹುದು. &lt;br /&gt; ಜಪಾನ್ ದೇಶದ ಎಲೆಕ್ಟ್ರಾನಿಕ್ಸ್ ವಸ್ತುಪ್ರದರ್ಶನವೊಂದರಲ್ಲಿ ಕಳೆದ ವಾರವಷ್ಟೇ ಮಿತ್ಸುಬಿಷಿ ಕಂಪನಿ ಅನಾವರಣಗೊಳಿಸಿದ ಹೊಸ ಮೊಬೈಲ್ ಫೋನ್‍ನಲ್ಲಿ ಕೇವಲ ಉಸಿರು ವಿಶ್ಲೇಷಕವಷ್ಟೇ ಅಳವಡಿಕೆಯಾಗಿಲ್ಲ.  ನಿಮ್ಮ ಚಟುವಟಿಕೆಯ ಮಟ್ಟ, ನಿಮ್ಮ ನಾಡಿ ಮಿಡಿತ, ಜತೆಗೆ ನಿಮ್ಮ ಬೊಜ್ಜನ್ನು ಪರಿಶೀಲಿಸಿ ಸಲಹೆ ನೀಡಬಲ್ಲ ಸಾಧನಗಳನ್ನು ಜೋಡಿಸಲಾಗಿದೆ.  ಅಂಗೈಯಲ್ಲಿ ಇದನ್ನು ಹಿಡಿದಾಗ ಅಲ್ಪ ಶಕ್ತಿಯ ವಿದ್ಯುತ್ ಸಂಕೇತಗಳನ್ನು ದೇಹಕ್ಕೆ ರವಾನಿಸಿ ತನಗೆ ಅಗತ್ಯವಿರುವ ಮಾಹಿತಿಯನ್ನು ಪಡೆದುಕೊಳ್ಳಬಲ್ಲದು.  ದೇಹಕ್ಕೆ ನಿತ್ಯ ತುರುಕಿಕೊಳ್ಳುತ್ತಿರುವ ಕ್ಯಾಲೊರಿಗಳನ್ನು ದಾಖಲಿಸುತ್ತಾ ಹೋದಂತೆ, ಖರ್ಚಾಗುತ್ತಿರುವ ದರದೊಡನೆ ತಾಳೆ ನೋಡಿಕೊಂಡು ಮತ್ತಷ್ಟು ಆಹಾರ ಸೇವಿಸಬೇಕೆ? ಇಲ್ಲ ಇನ್ನೊಂದಷ್ಟು ವ್ಯಾಯಾಮ ಮಾಡಬೇಕೆ? ಎಂದು ಮೊಬೈಲ್ ಫೋನ್ ಸೂಚನೆ ನೀಡಬಲ್ಲದು.  ತನ್ನಲ್ಲಿರುವ ಮಾಹಿತಿ ಭಂಡಾರವನ್ನು ಅರಸಿ, ಸರಾಸರಿ ಕ್ಯಾಲೊರಿ ಊಡಿಕೆ/ನೀಡಿಕೆಗಳನ್ನು ನಿರ್ಧರಿಸಿಕೊಂಡು, ಆ ನಿರ್ದಿಷ್ಟ ದಿನದ ನಿಮ್ಮ ಕ್ಯಾಲೊರಿ ಖರ್ಚು/ವೆಚ್ಚಗಳನ್ನು ಹೋಲಿಸಿ ನೋಡಬಲ್ಲದು.  ಉಪಹಾರಗೃಹವೊಂದಕ್ಕೆ ಭೇಟಿಯಿತ್ತಾಗ ಅಲ್ಲಿ ಸರ್ವ್ ಮಾಡಿದ ಪೀಡ್ಝಾದಲ್ಲಿ ಒಟ್ಟಾರೆ ಎಷ್ಟು ಕ್ಯಾಲೊರಿಗಳಿರಬಹುದು ಎಂಬ ಮಾಹಿತಿ ನಿಮಗಿರುವುದಿಲ್ಲ.  ಫೋನಿನ ನೆರವಿನಿಂದ ಅದರ ಒಂದೆರಡು ಚಿತ್ರಗಳನ್ನು ತೆಗೆದಿಟ್ಟುಕೊಂಡರೆ, ಅದರ ಗಾತ್ರ ಹಾಗೂ ಆಕಾರದ ಮೇಲೆ ಅಂದಾಜು ಕ್ಯಾಲೊರಿಗಳನ್ನು ನಿರ್ಧರಿಸಲು ಪ್ರಯತ್ನಿಸಬಲ್ಲದು.  ಫೋನ್ ಬಳಕೆದಾರ ತನ್ನ ಆದ್ಯತೆಗಳನ್ನು ದಾಖಲಿಸಿಟ್ಟುಕೊಂಡಲ್ಲಿ, ‘ಸಾಕಿನ್ನು ಕೆಲಸ, ಇದೀಗ ನಿದ್ದೆ ಮಾಡುವ ಸಮಯ’, ‘ಇಷ್ಟು ಹೊತ್ತು ಹಸಿದಿರಬಾರದು, ಒಂದು ಲೋಟ ಹಣ್ಣಿನ ರಸವನ್ನಾದರೂ ಸೇವಿಸು’, ‘ತಿಂದದ್ದು ಹೆಚ್ಚಾಯಿತು, ಒಂದಷ್ಟು ವ್ಯಾಯಾಮವಿರಲಿ’... ಮುಂತಾದ ಸಂದೇಶಗಳನ್ನು, ನವಿರಾದ ಎಚ್ಚರಿಕೆಗಳನ್ನು ನೀಡಲು ಈ ಫೋನ್ ಸಮರ್ಥ.&lt;br /&gt; ಈ ಫೋನಿನ ಗಿರಾಕಿಗಳು ಎಂಥವರಿರಬಹುದು? ಎಂಬುದರ ಬಗ್ಗೆ ಕಂಪನಿ ಒಂದಷ್ಟು ಕಲ್ಪನೆಗಳನ್ನಿಟ್ಟುಕೊಂಡಿದೆ.  ಇದನ್ನು ಇಷ್ಟಪಡುವವರು ಒಂದೊ ಬೊಜ್ಜು ಹೊತ್ತ ಮಧ್ಯವಯಸ್ಕ ಬ್ಯುಸಿನೆಸ್‍ಮನ್ ಅಥವಾ ಡಯಟ್ ಬಗ್ಗೆಯೇ ಸದಾ ಚಿಂತಿಸುವ ಹದಿಹರೆಯದ ಹುಡುಗಿ.  ಮೊದಲನೆಯ ಗುಂಪಿನವರಿಗೆ ಇದು ಅತ್ಯಗತ್ಯವಾದರೆ ಎರಡನೆಯ ಗುಂಪಿನವರಿಗೆ ಇದು ಶೋಕಿಯ ಸಾಧನ.  ಮೊಬೈಲ್ ಫೋನ್‍ಗಳಲ್ಲಿ ವಿನೂತನ ಸೌಕರ್ಯಗಳನ್ನು ಕಲ್ಪಿಸುವ ದಿಸೆಯಲ್ಲಿ ಜಪಾನ್ ಸದಾ ಮುಂದು.  ಸುಂಕದ ಕಟ್ಟೆಗಳಲ್ಲಿ ಮೊಬೈಲ್ ಫೋನ್ ಅಲುಗಾಟದ ಮೂಲಕವೇ ಹಣ ರವಾನಿಸುವ ವ್ಯವಸ್ಥೆ ತಂದ ಕೀರ್ತಿ ಜಪಾನ್ ದೇಶದ್ದು.  ಸಿನಿಮಾ ಟಿಕೆಟ್‍ಗಳಿಂದ ಹಿಡಿದು, ಅಂಗಡಿಯಲ್ಲಿನ ದಿನಸಿ ಖರೀದಿಗೂ ಇದೇ ವ್ಯವಸ್ಥೆಯನ್ನು ಯಶಸ್ವಿಯಾಗಿ ಆ ದೇಶದಲ್ಲಿ ಜಾರಿಗೆ ತರಲಾಗಿದೆ.  ಜತೆಗೆ ಆಲ್ಕೋಹಾಲ್ ಸೇವನೆಯ ಬಗ್ಗೆ ಖಚಿತ ಪಡಿಸಿಕೊಳ್ಳಲು ಮೊಬೈಲ್ ಫೋನ್‍ಗೆ ಜೋಡಿಸಿದ ಉಸಿರಿನ ವಿಶ್ಲೇಷಕವನ್ನು ಮೊದಲು ಜಾರಿಗೆ ತಂದದ್ದು ಜಪಾನ್.  ಚೋದ್ಯದ ವಿಷಯವೆಂದರೆ ಈ ಎಲ್ಲ ಸೌಕರ್ಯಗಳನ್ನು ಮೊಬೈಲ್ ಫೋನ್ ಮೂಲಕ ಜಾರಿಗೆ ತರಲು ಅಮೆರಿಕ ಇನ್ನೂ ತಿಣಕಾಡುತ್ತಿದೆ.&lt;br /&gt; ಇದೀಗ ಮಾರುಕಟ್ಟೆಗೆ ಬರಲಿರುವ ‘ವೆಲ್‍ನೆಸ್ ನ್ಯಾವಿಗೇಟರ್’ ಎಂಬ ಹೆಸರಿನ ಈ ವಿಶ್ಲೇಷಕದಲ್ಲಿ ದುರ್ಗಂಧವನ್ನು ಒಂದರಿಂದ ಹತ್ತರವರೆಗಿನ ಅಳತೆಗೋಲಿನಲ್ಲಿ ಮಾಪನ ಮಾಡಲಾಗುತ್ತದೆ.  ಈ ಸಂಖ್ಯೆ ಐದನ್ನು ದಾಟಿದೆಯೆಂದರೆ ಉಸಿರಿನಲ್ಲಿ ದುರ್ಗಂಧದ ಪ್ರಮಾಣ ಹೆಚ್ಚಿದೆ, ಮಿಂಟ್ ಅಥವಾ ಚ್ಯೂಯಿಂಗ್ ಗಮ್ ಬಾಯಿಗೆಸೆದುಕೊಳ್ಳುವ ಅಥವಾ ಮೌತ್‍ವಾಷ್‍ನಿಂದ ಗಂಟಲು ಗಳಗಳ ಮಾಡಿಕೊಳ್ಳುವ ಮುನ್ನ ವೈದ್ಯರನ್ನೊಮ್ಮೆ ಭೇಟಿ ಮಾಡಬೇಕು.  ಆರೋಗ್ಯದ ವಿಷಯದಲ್ಲಿ ವಿಪರೀತ ಕಾಳಜಿ ವಹಿಸುವುದು ಎಷ್ಟು ಕೆಟ್ಟದೊ ಅನಾದಾರವೂ ಅಷ್ಟೇ ಕೆಟ್ಟದು.  ಉಸಿರು ವಿಶ್ಲೇಷಕ ಅತ್ಯಂತ ನಿಖರವಾದ ಫಲಿತಾಂಶಗಳನ್ನು ನೀಡದೆಯೆ ಇರಬಹುದು.  ಆದರೆ ಒಂದು ಬಗೆಯ ಮುನ್ನೆಚ್ಚರಿಕೆಯ ಗಂಟೆಯನ್ನು ಅದು ಬಾರಿಸಬಲ್ಲದು ಎನ್ನುತ್ತಾರೆ ಮೊಬೈಲ್ ಫೋನ್ ಕಂಪನಿಯ ವಕ್ತಾರರು.  ಜತೆಗೆ ದೈಹಿಕ ಸ್ವಾಸ್ಥ್ಯವನ್ನು ಸುಸ್ಥಿಯಲ್ಲಿಡಲು ಯಾವ ಬಗೆಯ ಗುರಿಮಟ್ಟಗಳನ್ನು ಇಟ್ಟುಕೊಳ್ಳಬೇಕು, ಈ ನಿಟ್ಟಿನಲ್ಲಿ ನಾವು ಸಾಧಿಸಿರುವುದು ಎಷ್ಟು ಎಂಬುದನ್ನು ಆಗಿಂದಾಗ್ಗೆ ತಿಳಿದುಕೊಳ್ಳುತ್ತಿರಬಹುದು. &lt;br /&gt; ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಸದಾ ಮುಂದಿರಬೇಕೆಂಬ ಹಂಬಲದಿಂದ ತಯಾರಕರು ಇಂಥ ‘ಗಿಮಿಕ್’ಗಳನ್ನು ಮಾಡುತ್ತಿರುತ್ತಾರೆ.  ಬಳಸುತ್ತಿರುವ ಒಂದು ಫೋನನ್ನು ಒಗೆದು ಮತ್ತೊಂದನ್ನು ಖರೀದಿಸಲು ಬಲವತ್ತರವಾದ ಕಾರಣಗಳು ಬೇಕು.  ಮಿತ್ಸುಬಿಷಿ ಕಂಪನಿ ಮಾಡುತ್ತಿರುವುದು ಇಂಥದೇ ಒಂದು ಮಾರಾಟದ ಗಿಮಿಕ್ ಎಂದೇ ಸದ್ಯಕ್ಕೆ ಭಾವಿಸಬಹುದಾದರೂ, ಕೆಲವೊಂದು ಸೌಕರ್ಯಗಳು ವಿನೂತನವೆಂಬುದರಲ್ಲಿ ಎರಡು ಮಾತಿಲ್ಲ.  ಸಾಮಾನ್ಯ ಜನರೊಂದಿಗೆ ಪೊಲೀಸ್ ಸಿಬ್ಬಂದಿ, ವೈದ್ಯಕೀಯ ಸಹಾಯಕರು, ಹಾಸಿಗೆ ಹಿಡಿದವರು ಸಕಲ ಸೇವೆ ನೀಡುವ ಇಂಥ ಮೊಬೈಲ್ ಫೋನ್‍ಗಳನ್ನು ಇಟ್ಟುಕೊಳ್ಳುವುದು ಉತ್ತಮ.  ತಮ್ಮೊಬ್ಬರ ಆರೋಗ್ಯ ಮಾಹಿತಿಯಷ್ಟೇ ಅಲ್ಲ, ಬಂಧು ಮಿತ್ರರಿಗೆ ಸಂಬಂಧಿಸಿದ ಮಾಹಿತಿಗಳನ್ನು ಮೊಬೈಲ್ ಫೋನಿನಲ್ಲಿ ದಾಖಲಿಸಿಟ್ಟುಕೊಳ್ಳಬಹುದು.  ಒಬ್ಬರಿಂದೊಬ್ಬರು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. &lt;br /&gt; ಕಂಪ್ಯೂಟರ್ ಸೇರಿದಂತೆ ತಂತ್ರಾಂಶ (ಸಾಫ್ಟ್‍ವೇರ್)ಗಳನ್ನು ಬಳಸುವ ಉಳಿದೆಲ್ಲ ಎಲೆಕ್ಟ್ರಾನಿಕ್ ಸಾಧನಗಳಿಗೂ ‘ವೈರಸ್’ಗಳ ಬಾಧೆ ತಪ್ಪಿದ್ದಲ್ಲ.  ಈ ಭೀತಿ ವಿನೂತನ ಮೊಬೈಲ್ ಫೋನ್‍ಗಳನ್ನೂ ಕಾಡದೆ ಬಿಡದು.  ಇಂಥ ಸಂದರ್ಭಗಳಲ್ಲಿ ದಾಖಲಾದ ಮಾಹಿತಿ ತಪ್ಪಾಗಿ ತೋರಿದರೆ, ಅನಗತ್ಯ ಭೀತಿ ಉಂಟಾಗುವುದು ಸಹಜ.  ಸುರಕ್ಷಾ ವ್ಯವಸ್ಥೆ ಎಷ್ಟೇ ಪ್ರಬಲವಾಗಿರಲಿ, ವೈರಸ್ ಸೋಂಕಿನಿಂದ ಬಿಡುಗಡೆಯೆಂಬುದಿಲ್ಲ.  ಜತೆಗೆ ವೈರಸ್‍ನಿಂದಾಗಿ ನೀವು ಗೌಪ್ಯವೆಂದು ಕಾಪಾಡಿಕೊಂಡಿದ್ದ ಆರೋಗ್ಯ ಮಾಹಿತಿ ಮತ್ತೊಂದು ಫೋನಿಗೆ ರವಾನೆಯಾಗಿಬಿಡಬಹುದು.  ಈ ಬಗೆಯ ಸಮಸ್ಯೆಗಳನ್ನು ನಿವಾರಿಸುವತ್ತ ಮಿತ್ಸುಬಿಷಿ ಕೆಲಸ ಮಾಡುತ್ತಿದೆ. &lt;br /&gt; ವಿನೂತನ ಮೊಬೈಲ್ ಫೋನ್‍ನ ಬಗ್ಗೆ ಟೀಕೆಗಳದೆಂಥದೇ ಇರಲಿ, ಸದಾ ನಮ್ಮೊಂದಿಗೆ ಕೊಂಡೊಯ್ಯಬಹುದಾದ ಏಕೈಕ ಎಲೆಕ್ಟ್ರಾನಿಕ್ ಸಾಧನ ಇದೊಂದೇ.  ಹೀಗಾಗಿ ಯಾವುದೇ ಸರ್ವವ್ಯಾಪಿ ವ್ಯವಸ್ಥೆಯೊಂದನ್ನು ಜಾರಿಗೆ ತರಬೇಕೆಂದಿದ್ದರೆ, ಮೊಬೈಲ್ ಫೋನ್ ಅತ್ಯಂತ ಸೂಕ್ತ ಮಾಧ್ಯಮ.  ಜಠರ ಅಥವಾ ಪಿತ್ತಕೋಶ ಸರಿಯಾಗಿದೆಯೊ ಇಲ್ಲ ಕರುಳಿನ ಕಾರ್ಯದಲ್ಲಿ ವ್ಯತ್ಯಯವಾಗಿದೆಯೊ ಎಂಬುದನ್ನು ಸಣ್ಣ ಪುಟ್ಟ ಸಾಧನಗಳ ಮೂಲಕ ಸಾಮಾನ್ಯ ಜನರು ತಪಾಸಣೆ ಮಾಡಿಕೊಳ್ಳಬೇಕಿಲ್ಲ.  ಆದರೆ ಸದಾ ನೆಗಡಿ ಅಥವಾ ಗಂಟಲು ಕೆರೆತವಿದ್ದು ಅದರಿಂದಾಗಿ ಬಾಯಿ ದುರ್ವಾಸನೆ ಬೀರುತ್ತಿದ್ದೂ ಸ್ವತಃ ಮನವರಿಕೆ ಮಾಡಿಕೊಳ್ಳಲಾಗದ ಸಂದರ್ಭಗಳಲ್ಲಿ ಇಂಥ ಮೊಬೈಲ್ ಫೋನ್ ಅಗತ್ಯವಾಗುತ್ತದೆ.  ಹೆಂಡತಿ ಅಥವಾ ಪ್ರಿಯತಮೆ ನಿಮ್ಮ ಬಾಯಿಯಿಂದ ಗಬ್ಬುನಾತ ಹೊರಬರುತ್ತಿದೆ ಎಂದು ಆಕ್ಷೇಪವೆತ್ತುವ ಮುನ್ನವೇ ವೈದ್ಯರ ಮುಂದೆ ನಿಮ್ಮ ಬಾಯಿ ಬಿಡಬಹುದು.  ಅವರಿಗೆ ಕಾಣಿಸಿಕೊಳ್ಳಬಲ್ಲ ಬ್ರಹ್ಮಾಂಡ ಅದ್ಯಾವುದೇ ಇದ್ದರೂ ಚಿಂತಿಸಬೇಕಿಲ್ಲ.  ಮೂಗು ಮುಚ್ಚಿಕೊಂಡಾದರೂ ಒಂದಷ್ಟು ಔಷಧ ಸೇವನೆಗೆ ಸಲಹೆ ನೀಡಬೇಕಾದ ಕರ್ಮ ಅವರದು!       &lt;br /&gt;&lt;strong&gt;&lt;em&gt;(ಕೃಪೆ: ವಿಜಯ ಕರ್ನಾಟಕ; 15-10-2007)&lt;/em&gt;&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/752423363868781697-6826202173230272890?l=netnota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://netnota.blogspot.com/feeds/6826202173230272890/comments/default' title='Post Comments'/><link rel='replies' type='text/html' href='http://www.blogger.com/comment.g?blogID=752423363868781697&amp;postID=6826202173230272890' title='1 Comments'/><link rel='edit' type='application/atom+xml' href='http://www.blogger.com/feeds/752423363868781697/posts/default/6826202173230272890'/><link rel='self' type='application/atom+xml' href='http://www.blogger.com/feeds/752423363868781697/posts/default/6826202173230272890'/><link rel='alternate' type='text/html' href='http://netnota.blogspot.com/2007/10/blog-post_2209.html' title='ಈ ಫೋನ್ ಮುಂದೆ ಬಾಯಿಬಿಟ್ಟರೆ ಬಣ್ಣಗೇಡು!'/><author><name>HNS</name><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_WOq6aPUeAO4/SdR5qYZ87xI/AAAAAAAAAWg/cXIYJSqE8Z4/S220/sudhi1.jpg'/></author><thr:total>1</thr:total></entry><entry><id>tag:blogger.com,1999:blog-752423363868781697.post-2860349100560917363</id><published>2007-10-22T21:56:00.000+05:30</published><updated>2007-10-22T21:57:14.270+05:30</updated><title type='text'>ನೀರಿಗೂ ಅಂಟು - ಚ್ಯೂಯಿಂಗ್ ಗಮ್‍ನ ಹೊಸ ನೆಂಟು</title><content type='html'>ಸದ್ಯಕ್ಕೆ ಎಲ್ಲೆಡೆ ಒಂದೇ ಮಾತು.  ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರದ ನಡುವಿನ ನಂಟು ಹರಿದುಹೋಗಿದೆ.  ವಿಭಿನ್ನ ಧ್ಯೇಯ, ತತ್ವ, ಆದರ್ಶ ಹಾಗೂ ನಾಯಕತ್ವದ ಎರಡು ಪಕ್ಷಗಳ ನಡುವಿನ ನಂಟು ಉಳಿಯಬೇಕಿದ್ದಿದ್ದರೆ, ಅವೆರಡನ್ನೂ ಬೆಸೆಯುವ ಅಂಟು ಶಕ್ತಿಶಾಲಿಯಾಗಿರಬೇಕಿತ್ತು.  ಆದರೆ ತತ್ವಾದರ್ಶಗಳಿಗೇ ಅಂಟಿಕೊಂಡಿದ್ದರೆ ರಾಜಕೀಯ ಪಕ್ಷಗಳಿಗೆ ಅಧಿಕಾರದ ಕುರ್ಚಿಯ ನಂಟು ಎಂದಿಗೂ ಸಿಗುವುದಿಲ್ಲ.  ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಹೊರತಾಗಿ ಮತ್ಯಾವುದೇ ಸಾಮಾನ್ಯ ಅಂಶಗಳಿಲ್ಲದ ಪಕ್ಷಗಳು ಅಧಿಕಾರಕ್ಕೆ ಅಂಟಿಕೊಳ್ಳುವುದು, ನಂತರ ಪರಸ್ಪರ ದೂರಾಗುವುದು-ದೂರುವುದು ಭಾರತಕ್ಕೆ ಹೊಸತೇನಲ್ಲ.  ಇಲ್ಲಿ ರಾಜಕೀಯ ಪಕ್ಷಗಳಿಗೆ ಜನಾದೇಶವೆಂಬುದು ಕೇವಲ ಅಗಿದಗಿದು ಉಗಿದೆಸೆಯಬಲ್ಲ ಚ್ಯೂಯಿಂಗ್ ಗಮ್.  ಚ್ಯೂಯಿಂಗ್ ಅಗೆದವರಿಗೆ ಅಂಟು ಎಂದಿಗೂ ಮೆತ್ತಿಕೊಳ್ಳದ ಕಾರಣ ಸಮಸ್ಯೆಯಿಲ್ಲ! &lt;br /&gt; ನಮಗೆ ಸಮಸ್ಯೆಗಳು ಚ್ಯೂಯಿಂಗ್ ಗಮ್‍ನಂತೆ ಕಾಡಿದರೆ ಅನೇಕ ಪ್ರಜ್ಞಾವಂತ ರಾಷ್ಟ್ರಗಳಿಗೆ ಚ್ಯೂಯಿಂಗ್ ಗಮ್ ನಿರ್ವಹಣೆಯೇ ಸಮಸ್ಯೆಯಾಗಿಬಿಟ್ಟಿದೆ.  ಅತಿ ಹೆಚ್ಚಿನ ಜನಸಂಖ್ಯೆಯ ಸರ್ವಸ್ವತಂತ್ರ ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ಭಾರತದಲ್ಲಿ ‘ಉಗಿಯುವುದು’ ಆಜನ್ಮ ಸಿದ್ಧ ಹಕ್ಕು.  ಯಾರನ್ನು, ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಉಗಿದು ಉಪ್ಪು ಹಾಕಲು ನಮಗೆ ಸ್ವಾತಂತ್ರ್ಯವಿದೆ.  ಏನಿಲ್ಲದಿದ್ದರೂ ಎಂಜಲು ಅಥವಾ ಬಾಯ್ದಂಬುಲ ಇಲ್ಲವೆ ಚ್ಯೂಯಿಂಗ್ ಗಮ್ ಅನ್ನು ಎಲ್ಲೆಂದರಲ್ಲಿ ಉಗಿಯಲು ನಮಗೆ ಯಾವ ಎಗ್ಗೂ ಇಲ್ಲ.  ಆದರೆ ಎಲ್ಲೆಂದರೆಲ್ಲಿ ಚ್ಯೂಯಿಂಗ್ ಗಮ್ ಉಗಿಯುವ ವಿಷಯದಲ್ಲಿ ಪಾಶ್ಚಾತ್ಯ ದೇಶಗಳಲ್ಲಿನ ನಾಗರೀಕರೂ ಸಹಾ ನಮ್ಮೊಂದಿಗೆ ಸ್ಫರ್ಧೆಯಲ್ಲಿದ್ದಾರೆ.  ಬ್ರಿಟನ್ನಿನ ಪಕ್ಕದ ಪುಟ್ಟ ರಾಷ್ಟ್ರ ಐರ್‌ಲೆಂಡ್ ಗೊತ್ತಲ್ಲ?  ಈ ವರ್ಷದ ಜುಲೈ ತಿಂಗಳಲ್ಲಿ ಅಲ್ಲಿನ ಸರಕಾರದ ಪರಿಸರ ಇಲಾಖೆಯು ತಂತ್ರಜ್ಞಾನ ಅಭಿವೃದ್ಧಿಗಾಗಿ ಸ್ಫರ್ಧೆಯೊಂದನ್ನು ಘೋಷಿಸಿತ್ತು.  ‘ಅಂಟಿಕೊಳ್ಳದ ಚ್ಯೂಯಿಂಗ್ ಗಮ್’ ಅನ್ನು ರೂಪಿಸುವ ಯಾವುದೇ ಕಾಲೇಜು ಅಥವಾ ವಿಶ್ವವಿದ್ಯಾಲಯ ಒಂದು ದಶಲಕ್ಷ ಬ್ರಿಟನ್ ಪೌಂಡ್ (ಅಂದರೆ ಸುಮಾರು ಎಂಟು ಕೋಟಿ ರೂಪಾಯಿಗಳು) ಬಹುಮಾನವನ್ನು ಗೆಲ್ಲಬಹುದೆಂಬ ಆಮಿಷವನ್ನು ಪರಿಸರ ಖಾತೆಯ ಮಂತ್ರಿ ಒಡ್ಡಿದ್ದರು.  ಅಷ್ಟೇ ಅಲ್ಲ, ‘ಚ್ಯೂಯಿಂಗ್ ಗಮ್ ತ್ಯಾಜ್ಯ’ ನಿವಾರಣೆಗೆ ಸೂಕ್ತ ಪರಿಹಾರ ಕಂಡುಹಿಡಿಯಬಲ್ಲ ಖಾಸಗಿ ಉದ್ದಿಮೆಗೆ ಎರಡು ದಶಲಕ್ಷ ಬ್ರಿಟನ್ ಪೌಂಡ್ ಬಹುಮಾನವನ್ನು ಸಹಾ ಅವರು ಘೋಷಿಸಿದ್ದರು.  ಈ ವಿಷಯ ಓದಿದ ತಕ್ಷಣ ಐರ್‌ಲೆಂಡಿನಲ್ಲಿ ಮಾತ್ರ ಚ್ಯೂಯಿಂಗ್ ಗಮ್ ಜಗಿಯುವವರು ಹೆಚ್ಚಿದ್ದಾರೆಂದು ಭಾವಿಸಬೇಕಿಲ್ಲ.  ಚಟಕ್ಕಾಗಿ ಚ್ಯೂಯಿಂಗ್ ಗಮ್ ಅಗಿಯುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ.  ಎಷ್ಟೆಂದರೆ ಜಗತ್ತಿನಾದ್ಯಂತ ಪ್ರತಿ ವರ್ಷ ಉತ್ಪಾದನೆಯಾಗುವ ಚ್ಯೂಯಿಂಗ್ ಗಮ್‍ನ ಪ್ರಮಾಣ ಆರು ಲಕ್ಷ ಟನ್‍ಗಳು.  ತಮ್ಮ ನಾಲಿಗೆ ಹಲ್ಲುಗಳಿಗೆ ಅಂಟಿಸಿಕೊಳ್ಳದೆಯೆ ‘ಚಟಕ್ಕೆಂದೊ’ ಅಥವಾ ‘ಹಲ್ಲು ದವಡೆಗಳಿಗೆ ವ್ಯಾಯಾಮಕ್ಕೆಂದೊ’ ಅಥವಾ ‘ತಮ್ಮ ದಂತಪಂಕ್ತಿಗಳನ್ನು ಫಳಫಳನೆ ಹೊಳೆಯುವಂತೆ ಮಾಡಲೆಂದೊ’ ಜನ ಹೆಚ್ಚು ಹೆಚ್ಚಾಗಿ ಚ್ಯೂಯಿಂಗ್ ಗಮ್ ಅಗೆಯುತ್ತಿದ್ದಾರೆ.  ಬ್ರಿಟನ್ನಿನ ವೆಸ್ಟ್‍ಮಿನ್‍ಸ್ಟರ್ ನಗರಪಾಲಿಕೆಯೊಂದೇ ವರ್ಷವೊಂದಕ್ಕೆ ತೊಂಬತ್ತೈದು ಸಹಸ್ರ ಪೌಂಡ್ (ಸುಮಾರು ಎಪ್ಪತ್ತಾರು ಲಕ್ಷ ರೂಪಾಯಿಗಳು) ಹಣವನ್ನು ಚ್ಯೂಯಿಂಗ್ ಗಮ್ ತ್ಯಾಜ್ಯ ವಿಲೇವಾರಿಗೆಂದೇ ವ್ಯಯ ಮಾಡುತ್ತಿದೆ.  ಕಸ ಎಸೆಯುವುದಿರಲಿ ಸಾರ್ವಜನಿಕವಾಗಿ ಉಗಿಯಲೂ ಸ್ವಾತಂತ್ರ್ಯವಿರದ ದೇಶವಾದ ಸಿಂಗಾಪುರದ ಹೊರತಾಗಿ ಬಹುತೇಕ ಮುಂದುವರಿದ ದೇಶಗಳಲ್ಲಿ ಚ್ಯೂಯಿಂಗ್ ಗಮ್‍ನದು ಅತಿ ದೊಡ್ಡ ಸಮಸ್ಯೆ.  ಆರೋಗ್ಯಕ್ಕೆ ಹಾನಿಕರವೆಂಬ ನೆಪದಲ್ಲಿ ನಿಷೇಧಾಜ್ಞೆ ಹೊರಡಿಸುವಂತಿಲ್ಲ.  ಎಷ್ಟೇ ಬುದ್ಧಿವಾದ ಹೇಳಿದರೂ, ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟರೂ ಸಾಮಾನ್ಯ ಜನರಷ್ಟೇ ಅಲ್ಲ, ಸೆಲೆಬ್ರಿಟಿಗಳು, ಸಮಾಜದ ಗಣ್ಯರು ಚ್ಯೂಯಿಂಗ್ ಗಮ್ ಚಟಕ್ಕೆ ಅಂಟಿಕೊಂಡುಬಿಟ್ಟಿದ್ದಾರೆ. &lt;br /&gt; ಚ್ಯೂಯಿಂಗ್ ಗಮ್ ಅನ್ನು ತಯಾರಿಸಲು ಮೊದಲು ಬಳಕೆಯಾಗುತ್ತಿದ್ದ ಸಾಮಗ್ರಿಯ ಹೆಸರು ’ಚಿಕಲ್’.  ಬಹುಶಃ ನಿಮ್ಮ ನೆನಪಿನಲ್ಲಿರಬಹುದು, ನಮ್ಮ ದೇಶಕ್ಕೆ ಮೊದಲು ಬಂದ ಚ್ಯೂಯಿಂಗ್ ಗಮ್‍ನ ಹೆಸರು ‘ಚಿಕಲೆಟ್ಸ್’ (ಅಂದರೆ ಪುಟಾಣಿ ಚಿಕಲ್‍ಗಳು) ಎಂದಾಗಿತ್ತು.  ಪ್ರತಿಶತ ಹದಿನೈದು ಭಾಗ ರಬ್ಬರ್ ಹಾಗೂ ಪ್ರತಿಶತ ಮೂವತ್ತೆಂಟು ಭಾಗ ಅಂಟು ಸೇರಿಕೊಂಡಿದ್ದ ಈ ’ಚಿಕಲ್’ನ ರಾಸಾಯನಿಕ ಹೆಸರು ‘ಪಾಲಿಟೆರ್‌ಪೀನ್’.  ಆದರೆ ಇಂದಿನ ’ಗಮ್’ಗಳನ್ನು ಕೃತಕ ಲ್ಯಾಟೆಕ್ಸ್‍ಗಳಿಂದ (ರಬ್ಬರ್) ರೂಪಿಸಲಾಗುತ್ತಿದೆ.  ಎಲ್ಲ ಹವಾಮಾನಗಳಲ್ಲೂ ತಮ್ಮ ಗುಣ ವೈಶಿಷ್ಟ್ಯಗಳನ್ನು ಕೃತಕ ಲ್ಯಾಟೆಕ್ಸ್‍ಗಳು ಬಹುಕಾಲ ಉಳಿಸಿಕೊಳ್ಳಬಲ್ಲವು.  ಅಂಟಿಕೊಳ್ಳುವ ಗುಣ ಹೆಚ್ಚಿರುವುದರ ಜತೆಗೆ ರಾಸಾಯನಿಕಗಳ ಧಾಳಿಗೆ ಕರಗಿಹೋಗದ ಗುಣ ಇದಕ್ಕಿದೆ.  ಈ ಲ್ಯಾಟೆಕ್ಸ್‍ಗೆ ಮೆದುಕಾರಕಗಳು, ಸ್ವಾದಕಾರಕಗಳು, ಸುವಾಸನಾವಸ್ತುಗಳು ಹಾಗೂ ಸಿಹಿಯನ್ನು ಬೆರೆಸಿ ಚ್ಯೂಯಿಂಗ್ ಗಮ್ ಅನ್ನು ಸಿದ್ಧಗೊಳಿಸಲಾಗುತ್ತದೆ.  ಚ್ಯೂಯಿಂಗ್ ಗಮ್ ಎಂಥ ಸಮಸ್ಯೆಗಳನ್ನು ತಂದೊಡ್ಡಬಹುದು ಎಂಬುದನ್ನು ಬ್ರಿಟನ್ನಿನ ಅತಿ ದೊಡ್ಡ ಚ್ಯೂಯಿಂಗ್ ತಯಾರಿಕಾ ಕಂಪನಿ ‘ರಿವಾಲಿಮರ್’ನ ಮುಖ್ಯಸ್ಥರಾದ ರೋಜರ್ ಪೆಟ್‍ಮಾನ್ ಅವರ ಬಾಯಿಂದಲೇ ಕೇಳಬೇಕು.  ಜಗಿದ ನಂತರ ಉಗಿಯುವ ಚ್ಯೂಯಿಂಗ್ ಗಮ್‍ನ ತುಣಕುಗಳ ಬಹುಪಾಲು ಆಶ್ರಯ ಪಡೆಯುವುದು ರಸ್ತೆ ಬದಿ ಹಾಗೂ ಪಾದಚಾರಿಗಳ ಹಾದಿಯಲ್ಲಿ.  ಇಂಥ ಅಂಟಿನುಂಡೆಗಳನ್ನು ಸಂಗ್ರಹಿಸಲು ಬೇರೆ ಯಾವುದೇ ಮಾರ್ಗಗಳಿಲ್ಲ.  ಲಂಡನ್ ನಗರದಲ್ಲಿನ ಸಂಚಾರ ವ್ಯವಸ್ಥೆಗೆ ಮೆಟ್ರೊ (ಅಂಡರ್‌ಗ್ರೌಂಡ್) ರೈಲಿನ ಕೊಡುಗೆ ಅತಿ ದೊಡ್ಡದು.  ಮೆಟ್ರೋ ರೈಲಿನ ಬೋಗಿಗಳು ಹಾಗೂ ರೈಲು ನಿಲ್ದಾಣಗಳಲ್ಲಿ ಚ್ಯೂಯಿಂಗ್ ಗಮ್‍ನ ಹಾವಳಿ ಹೆಚ್ಚಾಗುತ್ತಿದೆ.  ಈ ‘ಅಂಟು ಕಸ’ವನ್ನು ತೆಗೆಯಲೆಂದೇ ರೈಲು ಕಂಪನಿ ವರ್ಷವೊಂದಕ್ಕೆ ಖರ್ಚು ಮಾಡುತ್ತಿರುವ ಹಣ ಎರಡು ದಶಲಕ್ಷ ಪೌಂಡ್‍ಗಳು (ಅಂದರೆ ಹದಿನಾರು ಕೋಟಿ ರೂಪಾಯಿಗಳು).  ಸಿಂಗಾಪುರದಂತೆ ಚ್ಯೂಯಿಂಗ್ ಜಗಿಯುವುದನ್ನು ನಿಷೇಧ ಮಾಡಲು ಸಾಧ್ಯವಾಗದ ಕಾರಣ ಬ್ರಿಟನ್ ಹಾಗೂ ಐರ್‌ಲೆಂಡ್ ದೇಶಗಳು ‘ಅಂಟದ’ ಚ್ಯೂಯಿಂಗ್ ಗಮ್ ತಯಾರಿಕೆ ಸಾಧ್ಯವೆ? ಎಂದು ಪರಿಶೀಲಿಸುತ್ತಿವೆ.&lt;br /&gt; ನಾಲಿಗೆ, ಹಲ್ಲುಗಳಿಗೆ ಅಂಟದ ಚ್ಯೂಯಿಂಗ್ ಗಮ್ ಕೈ, ಕಾಲಿಗೆ, ರಸ್ತೆ ಬದೆಗೆ, ಕುರ್ಚಿಗೆ ಹೀಗೆ ಎಲ್ಲೆಂದರಲ್ಲಿಗೆ ಅಂಟಿಕೊಳ್ಳುವುದು ಹೇಗೆ? ಮತ್ತು ಏಕೆ? ಎಂಬುದು ನಮ್ಮನ್ನು ಕಾಡುವ ಪ್ರಶ್ನೆಗಳು.  ಪೆಟ್ರೋಲಿಯಂ ವಸ್ತುಗಳಿಂದ ಕೃತಕವಾಗಿ ರೂಪಿಸಿದ ಪಾಲಿಮರ್‌ಗಳು, ಸ್ವಾಭಾವಿಕವಾಗಿ ಲಭ್ಯವಿರುವ ರಬ್ಬರ್, ಅಂಟುಗಳು ಹಾಗೂ ಮೇಣಗಳ ಮಿಶ್ರಣವಾದ ಚ್ಯೂಯಿಂಗ್ ಗಮ್ ಸ್ವಭಾವತಃ ‘ಜಲದ್ವೇಷಿ’ ಅಂದರೆ ನೀರಿಗೆ ಅಂಟಿಕೊಳ್ಳದ ಗುಣ ಹೊಂದಿರುತ್ತದೆ.  ಬಾಯಿಯಲ್ಲಿ ಸದಾ ಜೊಲ್ಲಿನ ರಸವಿರುವುದರಿಂದ ಚ್ಯೂಯಿಂಗ್ ಗಮ್ ನಾಲಿಗೆ ಹಾಗೂ ಹಲ್ಲುಗಳಿಗೆ ಅಂಟಿಕೊಳ್ಳುವುದಿಲ್ಲ.  ನೀರನ್ನು ಕಂಡರೆ ಚ್ಯೂಯಿಂಗ್ ಗಮ್‍ಗೆ ಆಗದಿದ್ದರೂ ಎಣ್ಣೆಯ ಬಗ್ಗೆ ಅಪಾರ ಪ್ರೇಮ.  ಎಣ್ಣೆಯ ಪಸೆಯಿದ್ದಲ್ಲಿ ತಕ್ಷಣವೇ ಅಂಟಿಕೊಳ್ಳುವ ಗುಣ ಇದರದ್ದು.  ನಮ್ಮ ಮೈ, ಕೈ, ಕಾಲು ಸೇರಿದಂತೆ ರಸ್ತೆ ಬದಿ, ರೈಲಿನ ಸರಳು, ಕುರ್ಚಿ .... ಹೀಗೆ ಎಲ್ಲ ಸ್ಥಳಗಳಲ್ಲೂ ಎಣ್ಣೆ, ಗ್ರೀಸ್ ಮುಂತಾದ ತೈಲಾಧಾರಿತ ಲೇಪನಗಳಿದ್ದೇ ಇರುತ್ತವೆ.  ಹೀಗಾಗಿ ಬಾಯಿಂದ ಹೊರಬಿದ್ದ ಚ್ಯೂಯಿಂಗ್ ಗಮ್‍ನ ತುಣಕಿಗೆ ಅಂಟಿಕೊಳ್ಳಲು ಒಂದಲ್ಲಾ ಒಂದು ಅವಕಾಶ ಸಿಕ್ಕೇ ಸಿಗುತ್ತದೆ.  ಹಾಗಿದ್ದರೆ ಇದಕ್ಕೇನು ಉಪಾಯ?  ಅಂಟಿಕೊಳ್ಳುವ ಗುಣ ಕಡಿಮೆಯಾಗಿಸುವ ಹಾಗೂ ಮಣ್ಣಿನೊಂದಿಗೆ ಬೆರೆತು ಕೊಳೆಯಬಲ್ಲ ಗುಣವನ್ನು ಚ್ಯೂಯಿಂಗ್ ಗಮ್‍ಗೆ ಅಂಟಿಸಿದರೆ ಸಮಸ್ಯೆ ಪರಿಹಾರವಾದಂತೆ.  ಆದರೆ ಈ ಗುಣ ಲಕ್ಷಣಗಳ ಬದಲಾವಣೆಗಳನ್ನು ಮಾಡ ಹೊರಟರೆ ಚ್ಯೂಯಿಂಗ್ ಗಮ್‍ನ ರಾಸಾಯನಿಕ ಬಂಧವನ್ನೇ ಬದಲಾಯಿಸಬೇಕು.  ಇಲ್ಲಿ ರುಚಿಯನ್ನು ಹಿಡಿದಿಟ್ಟುಕೊಳ್ಳುವ, ಎಷ್ಟು ಹೊತ್ತಾದರೂ ಅಗೆಯಬಲ್ಲ, ಬಿಕರಿಯಾಗುವ ಮುನ್ನ ಹಾಗೂ ಹೆಚ್ಚು ಕಾಲ ಸುರಕ್ಷವಾಗಿರಬಲ್ಲ ಗುಣಗಳನ್ನು ಉಳಿಸಿಕೊಳ್ಳುವುದು ಸಹಾ ಮುಖ್ಯವಾಗುತ್ತದೆ.  ಮೂರು ವರ್ಷಗಳ ಹಿಂದೆ ಅಮೆರಿಕದ ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ಕೃತಕ ಪಾಲಿಮರ್‌ಗಳ ಬದಲು ಮುಸುಕಿನ ಜೋಳದ ಪ್ರೊಟೀನ್ ಅನ್ನು ಬಳಸುವ ಬಗ್ಗೆ ಪ್ರಯೋಗಗಳು ನಡೆದಿದ್ದವು.  ಪಾಲಿಮರ್‌ಗಳು ಮಣ್ಣಿನಲ್ಲಿ ಕೊಳೆಯುವುದಿಲ್ಲ, ಆದರೆ ಮುಸುಕಿನ ಜೋಳದ ಪ್ರೊಟೀನ್ ದೇಹದಲ್ಲೇ ಜೀರ್ಣವಾಗುತ್ತವೆ, ಇಲ್ಲ ಮಣ್ಣಿನೊಂಡಿಗೆ ಬೆರೆತು ಕರಗಿ ಹೋಗುತ್ತವೆ.  ಈ ಸಂಶೋಧನೆಗೆ ಹೆಚ್ಚಿನ ಪ್ರಚಾರ ಸಿಗಲಿಲ್ಲ, ಕೆಲಸ ಮತ್ತೆ ಮುಂದುವರಿಯಲಿಲ್ಲ.  ಚ್ಯೂಯಿಂಗ್ ಗಮ್ ತಯಾರಿಕೆಯಲ್ಲಿ ಜಗದ್ವಿಖ್ಯಾತ ಕಂಪನಿಯಾದ ‘ರಿಗ್ಲೆ’ ಪರಿಸರ ಸ್ನೇಹಿ ಚ್ಯೂಯಿಂಗ್ ಗಮ್ ಅನ್ನು ರೂಪಿಸುತ್ತಿರುವ ಸುದ್ದಿ ಹೊರಬಂದಿದೆ.  ಇಲಿನಾಯ್ಸ್ ವಿಶ್ವವಿದ್ಯಾಲಯದ ಸಂಶೋಧನೆಗೆ ಇದು ಬಹಳ ಹತ್ತಿರದ್ದು ಎನ್ನಲಾಗಿದೆ.  ಒಂದು ಕೋಟಿ ಅಮೆರಿಕನ್ ಡಾಲರ್ ಹಣ (ಸುಮಾರು ನಲವತ್ತು ಕೋಟಿ ರೂಪಾಯಿಗಳು) ಹೂಡಿಕೆಯೊಂದಿಗೆ ಪ್ರಯೋಗಗಳು ಗೌಪ್ಯವಾಗಿ ಮುಂದೆ ಸಾಗಿವೆ.&lt;br /&gt; ಬಾಯಲ್ಲಿದ್ದಾಗ ಜಲದ್ವೇಷಿಯಾಗಿದ್ದು ಉಗಿದೆಸೆದ ನಂತರ ಜಲಪ್ರೇಮಿಯಾಗಿಬಿಡುವ ಹಾಗೆ ಚ್ಯೂಯಿಂಗ್ ಗಮ್ ಅನ್ನು ಮಾಡಿದರೆ ತೊಂದರೆ ಕಡಿಮೆಯಾಗುತ್ತದೆ.  ಅಂದರೆ ಹೊರಗೆ ಬಿದ್ದ ಚ್ಯೂಯಿಂಗ್ ಗಮ್ ನೀರಿದ್ದ ಸ್ಥಳಕ್ಕೆ ಮಾತ್ರ ಮೆತ್ತಿಕೊಳ್ಳಬೇಕು.  ನೀರಿಗೆ ಮೆತ್ತಿಕೊಳ್ಳುವುದೆಂದರೆ ತೈಲದಂಶವನ್ನು ತೊಡೆದು ನೀರಿನೊಂದಿಗೆ ಹೊರಬರಬೇಕು.  ಅದು ಬಿದ್ದ ಸ್ಥಳದಲ್ಲಿ ನೀರು ಹುಯ್ದರೆ ಕಿತ್ತು ಬರಬೇಕು.  ಉಗಿಯುವವರನ್ನು ನಿಯಂತ್ರಿಸಲಂತೂ ಆಗುವುದಿಲ್ಲ, ಕನಿಷ್ಠ ಚ್ಯೂಯಿಂಗ್ ಗಮ್ ಬಿದ್ದೆಡೆ ನೀರಿನ ಮೂಲಕ ಶುದ್ಧಗೊಳಿಸಲು ಸಾಧ್ಯವಾಗಬೇಕು.  ಹೀಗೆ ಆಲೋಚಿಸಿರುವ ರಿವಾಲಿಮರ್ ಕಂಪನಿಯು ಹೊಸ ಮಿಶ್ರಣವೊಂದನ್ನು ಚ್ಯೂಯಿಂಗ್ ಗಮ್ ತಯಾರಿಕೆಗೆಂದು ರೂಪಿಸಿದೆ.  ವಸ್ತುವೊಂದಕ್ಕೆ ಅಂಟಿಕೊಂಡ ಕ್ಷಣವೇ ಒಳಗಿನಿಂದ ದ್ರವ ಸ್ರವಿಸಲು ಆರಂಭಿಸಿ ಅಂಟನ್ನು ಬೇರ್ಪಡಿಸಲು ಆರಂಭಿಸುತ್ತದೆ.  ನೀರು ಹೊಯ್ದ ಕೂಡಲೇ ಉಳಿದ ಕಸದೊಡನೆ ಕೊಚ್ಚಿ ಹೋಗುತ್ತದೆ.  ಮೊದಲ ಹಂತದ ಪರೀಕ್ಷೆಗಳಲ್ಲಿ ನೆಲಕ್ಕೆ ಬಿದ್ದ ಇಪ್ಪತ್ನಾಲ್ಕು ಗಂಟೆಗಳ ನಂತರವೂ ನೀರಿನೊಂದಿಗೆ ಶುದ್ಧಿಗೊಳಿಸಲು ಸಾಧ್ಯವಾಗಿತ್ತು.  ಎಂಟು ವಾರಗಳ ಹಿಂದೆ ಅಂಟಿಕೊಂಡಿದ್ದ ಚ್ಯೂಯಿಂಗ್ ಗಮ್‍ನ ತುಣಕುಗಳನ್ನೂ ಸಹಾ ಕೇವಲ ನೀರಿನ ಸಿಂಪರಣೆಯಿಂದ ತೆಗೆಯಲು ಸಾಧ್ಯವಾಗಿದೆ.&lt;br /&gt; ಹಾಗಿದ್ದರೆ ಚ್ಯೂಯಿಂಗ್ ಅಗಿಯುವವರಿಗೆ ರಾಸಾಯನಿಕ ಬದಲಾವಣೆಗಳಿಂದ ರುಚಿ ಕೆಟ್ಟು ಹೋಗಿರಬಹುದೆ? ಈ ಪ್ರಶ್ನೆಗೂ ರಿವಾಲಿಮರ್ ಕಂಪನಿ ಉತ್ತರ ಕಂಡು ಕೊಂಡಿದೆ.  ತನ್ನ ಮೂಲ ವಸ್ತುವಿನಲ್ಲಾಗಿರುವ ಬದಲಾವಣೆಗಳನ್ನು ತಿಳಿಸದೆಯೆ ಸಾಮಾನ್ಯ ಚ್ಯೂಯಿಂಗ್ ಗಮ್‍ನೊಂದಿಗೆ ಹೊಸ ವಸ್ತುವಿನಿಂದ ರೂಪಿಸಿದ ಚ್ಯೂಯಿಂಗ್ ಗಮ್ ಅನ್ನು ಬೆರೆಸಿ ಮಾರುಕಟ್ಟೆ ಸಂಶೋಧನೆಗಳನ್ನು ಕಂಪನಿ ಕೈಗೊಂಡಿತ್ತು.  ಬಹುತೇಕ ಬಳಕೆದಾರರಿಗೆ ಎರಡೂ ಬಗೆಯ ಚ್ಯೂಯಿಂಗ್ ಗಮ್‍ಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿರಲಿಲ್ಲ.  ಕೆಲವೊಂದು ಸೂಕ್ಷ್ಮಮತಿಗಳು ಮಾತ್ರ ಹೊಸ ಚ್ಯೂಯಿಂಗ್ ಗಮ್ ಹೆಚ್ಚು ಮಿದುವಾಗಿತ್ತು ಎಂದು ನವಿರಾಗಿ ಆಕ್ಷೇಪಿಸಿದ್ದಾರೆ.  ಒಳಗಿನ ಜಲಪ್ರೇಮಿ ರಾಸಾಯನಿಕವು ಬಾಯಿಯ ಜೊಲ್ಲಿನೊಂದಿಗೆ ಬೆರೆತಾಗ, ಚ್ಯೂಯಿಂಗ್ ಗಮ್ ಹಿಂದಿಗಿಂತಲೂ ಮಿದುವಾಗಿ ಭಾಸವಾಗಿರಬಹುದು.  ‘ರಿವಾಲಿಮರ್’ ಕಂಪನಿಯ ಉತ್ಪನ್ನವು ಇದೀಗ ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣಾ ಪ್ರಾಧಿಕಾರದ ಒಪ್ಪಿಗೆಗೆ ಕಾಯುತ್ತಿದೆ.  ಮೂರು ವಿಶಿಷ್ಟ ಸ್ವಾದಗಳೊಂದಿಗೆ ಹೊಸ ಸಾಮಗ್ರಿಯ ಚ್ಯೂಯಿಂಗ್ ಗಮ್ ಅನ್ನು ಬಿಡುಗಡೆ ಮಾಡಲು ರಿವಾಲಿಮರ್ ಸಿದ್ಧವಾಗಿದೆ.   &lt;br /&gt;&lt;strong&gt;&lt;em&gt;(ಕೃಪೆ: ವಿಜಯ ಕರ್ನಾಟಕ; 08-10-2007)&lt;/em&gt;&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/752423363868781697-2860349100560917363?l=netnota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://netnota.blogspot.com/feeds/2860349100560917363/comments/default' title='Post Comments'/><link rel='replies' type='text/html' href='http://www.blogger.com/comment.g?blogID=752423363868781697&amp;postID=2860349100560917363' title='0 Comments'/><link rel='edit' type='application/atom+xml' href='http://www.blogger.com/feeds/752423363868781697/posts/default/2860349100560917363'/><link rel='self' type='application/atom+xml' href='http://www.blogger.com/feeds/752423363868781697/posts/default/2860349100560917363'/><link rel='alternate' type='text/html' href='http://netnota.blogspot.com/2007/10/blog-post_6091.html' title='ನೀರಿಗೂ ಅಂಟು - ಚ್ಯೂಯಿಂಗ್ ಗಮ್‍ನ ಹೊಸ ನೆಂಟು'/><author><name>HNS</name><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_WOq6aPUeAO4/SdR5qYZ87xI/AAAAAAAAAWg/cXIYJSqE8Z4/S220/sudhi1.jpg'/></author><thr:total>0</thr:total></entry><entry><id>tag:blogger.com,1999:blog-752423363868781697.post-5278298595588325111</id><published>2007-10-22T21:54:00.000+05:30</published><updated>2007-10-22T21:55:37.515+05:30</updated><title type='text'>ನಮಗೆ ಅಗತ್ಯವಿರುವುದು ಉತ್ತಮ ಸಮಾಜ ನಿರ್ಮಿಸುವ ಎಂಜಿನೀರ್‌ಗಳು</title><content type='html'>&lt;strong&gt;&lt;span style="font-size:180%;"&gt;ಕಾ&lt;/span&gt;&lt;/strong&gt;ರು ಅಪಘಾತದಲ್ಲಿ ಪ್ರತಿಭಾವಂತ ಎಂಜಿನೀರ್ ಒಬ್ಬರ ಸಾವಿನ ಬಗ್ಗೆ ನಿನ್ನೆಯ ಪತ್ರಿಕೆಯಲ್ಲಿನ ಸುದ್ದಿ ಓದಿರುತ್ತೀರಿ.  ಅಪಘಾತ ಆದದ್ದು ಹೇಗೆ? ಎಂಬ ಪ್ರಶ್ನೆಗೆ ಪತ್ರಿಕೆಯ ಸುದ್ದಿಯಲ್ಲೇ ಉತ್ತರವಿದೆ.  ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಆ ಕಾರಿನ ಚಕ್ರ ಪಂಕ್ಚರ್ ಆಯಿತು.  ಕಾರಿನ ರಭಸದ ಆ ಓಟದಲ್ಲಿ ಗಾಳಿಯಿಲ್ಲದ ಒಂದು ಚಕ್ರ ಗಾಳಿ ತುಂಬಿದ ಮತ್ತೊಂದು ಚಕ್ರದೊಡನೆ ಸಮತೋಲ ಕಳೆದುಕೊಂಡಿತು.  ಈ ಅಸಮತೋಲನದಿಂದ ಚಕ್ರಗಳೆರಡನ್ನು ಹಿಡಿದಿಟ್ಟಿದ್ದ ಸರಳು ತುಂಡಾಯಿತು.  ಸ್ಥಿರತೆ ಕಳೆದುಕೊಂಡ ಕಾರು ಬುಡಮೇಲಾಯಿತು.  ಈ ಸಂದರ್ಭದಲ್ಲಿ ಕಾರು ಚಲನೆ ಮಾಡುತ್ತಿದ್ದ ಹುಡುಗನ ಎದೆಗೆ ಸ್ಟೀರಿಂಗ್ ಚಕ್ರ ಬಡಿದು ಸಾವುಂಟಾಯಿತು.  ಉಳಿದ ಸಹ ಪಯಣಿಗರಿಗೆ ತೀವ್ರವಾದ ಗಾಯಗಳಾಗಿವೆ.  ಇಂಥ ಅಪಘಾತಗಳ ವರದಿಯನ್ನೋದಿದ ಸಾರ್ವಜನಿಕರಲ್ಲಿ ಹಲವಾರು ಪ್ರಶ್ನೆಗಳೇಳುತ್ತವೆ.  ಅಪಘಾತ ತಪ್ಪಿಸುವಂಥ ಸುರಕ್ಷ ವ್ಯವಸ್ಥೆಗಳು ಕಾರಿನಲ್ಲಿರಲಿಲ್ಲವೆ?  ಟೈರು-ಟ್ಯೂಬುಗಳಿಂದ ಹಿಡಿದು ಸ್ಟೀರಿಂಗ್ ಚಕ್ರದ ತನಕ ಎಲ್ಲ ಎಂಜಿನೀರಿಂಗ್ ವಸ್ತುಗಳು ದೋಷಮುಕ್ತವಾಗಿದ್ದವೆ?  ರಸ್ತೆ ಅಸಮರ್ಪಕವಾಗಿ ನಿರ್ಮಾಣವಾಗಿತ್ತೆ?  ರಸ್ತೆಯಲ್ಲಿ ಮುನ್ನೆಚ್ಚರಿಕಾ ಸಂಕೇತಗಳು ಕಾಣುವಂತಿದ್ದವೆ?  ಉಳಿದ ರಸ್ತೆ ಬಳಕೆದಾರರು ಯಾವ ತಪ್ಪೆಸಗಿರಲಿಲ್ಲವೆ?  ದೀಪ ಹಾಗೂ ಬೆಳಕಿನ ವ್ಯವಸ್ಥೆಯಲ್ಲಿ ಯಾವುದೇ ಕೊರತೆಯಿರಲಿಲ್ಲವೆ? .... ಈ ಎಲ್ಲ ಕ್ಷೇತ್ರಗಳ ಎಂಜಿನೀರ್‌ಗಳು ಸರಿಯಾಗಿ ಕೆಲಸ ಮಾಡಿದ್ದರೆ?  ಅವರು ಸರಿಯಾಗಿ ಕೆಲಸ ಮಾಡುತ್ತವೆಂದು ಪ್ರಮಾಣೀಕರಿಸಿದ್ದ ವ್ಯವಸ್ಥೆಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದವೆ?  ಹಾಗಿದ್ದಲ್ಲಿ ಯಾವ ಅನಿರೀಕ್ಷಿತ ಸಂದರ್ಭಗಳು ಅಪಘಾತಕ್ಕೆಡೆ ಮಾಡಿಕೊಟ್ಟವು?  ಮುಂದಿನ ಬಾರಿ ಇಂಥ ಪ್ರಮಾದಗಳು ಮರುಕಳಿಸದಂತೆ ನೋಡಿಕೊಳ್ಳಲಾದೀತೆ?  ಇಂಥ ಪ್ರಶ್ನೆಗಳು ಕೇವಲ ರಸ್ತೆ ಅಪಘಾತಗಳಾದಾಗ ಮಾತ್ರ ಏಳುವುದಿಲ್ಲ.  ಇತ್ತೀಚೆಗೆ ಗಗನಕ್ಕೇರಿದ ಕೆಲ ಹೊತ್ತಿನಲ್ಲಿಯೇ ಪುಟ್ಟ ವಿಮಾನವೊಂದು ಧರೆಗುರುಳಿದಾಗಲೂ ಈ ಬಗೆಯ ಪ್ರಶ್ನೆಗಳೆದ್ದಿದ್ದವು. &lt;br /&gt;  ಹಾಗಿದ್ದರೆ ಬದಲಿ ಚಿಂತನೆಗಳಿಗೆ ಅವಕಾಶವೇ ಇಲ್ಲವೆ?  ಎಂಜಿನೀರಿಂಗ್ ಕಾಲೇಜುಗಳು ಕೇವಲ ಯಂತ್ರಮಾನವ (ರೋಬಾಟ್) ಗಳನ್ನು ಉತ್ಪಾದಿಸುವ ಕಾರ್ಖಾನೆಗಳೆ?  ಹೀಗಾಗಬಾರದು,  ‘ನಮ್ಮೆಲ್ಲರನ್ನು ನಾಗರಿಕರಂತೆ ಸುಖವಾಗಿಡಬಲ್ಲ ಆದರೆ ಲೆಕ್ಕಾಚಾರ ಹಾಕುವ ಯಂತ್ರಗಳಲ್ಲದ’ ಎಂಜಿನೀರ್‌ಗಳನ್ನು ಸೃಷ್ಟಿಸಬೇಕು - ಎಂಬ ಚಿಂತನೆಗೆ ಚಾಲನೆ ದೊರೆತಿದೆ.  ಅಮೆರಿಕದ ಮೆಸಾಶ್ಯುಸೆಟ್ಸ್ ರಾಜ್ಯದ ನೀಧಾಮ್ ಪಟ್ಟಣದಲ್ಲೊಂದು ಕಾಲೇಜು ಆರಂಭವಾಗಿದೆ.  ಫ್ರಾಂಕ್ಲಿನ್ ಓಲಿನ್ ಎಂಜಿನೀರಿಂಗ್ ಕಾಲೇಜ್ ಹೆಸರಿನ ಈ ವಿದ್ಯಾಸಂಸ್ಥೆ ಸ್ಥಾಪನೆಯಾದ (2002) ಕೇವಲ ಐದು ವರ್ಷಗಳಲ್ಲಿ ಜಗತ್ತಿನೆಲ್ಲೆಡೆ ತನ್ನ ಛಾಪು ಮೂಡಿಸಿದೆ.  ಮದ್ದು-ಗುಂಡುಗಳನ್ನು ತಯಾರಿಸುತ್ತಿದ್ದ ಫ್ರಾಂಕ್ಲಿನ್ ಓಲಿನ್‍ಗೆ ಶಿಕ್ಷಣ ಕ್ಷೇತ್ರದಲ್ಲಿ ತೀರಾ ಒಲವಿತ್ತು.  ಆತ ನಿಧನವಾಗುವ ಹೊತ್ತಿಗೆ (1951) ಅಪಾರ ಆಸ್ತಿಯನ್ನಷ್ಟೇ ಅಲ್ಲ, ಬಹು ದೊಡ್ಡ ಕನಸುಗಳನ್ನೂ ಬಿಟ್ಟು ಹೋಗಿದ್ದ.  ಅವನ ಹೆಸರಿನಲ್ಲಿ ಪ್ರತಿಷ್ಠಾನವೊಂದನ್ನು ಸ್ಥಾಪಿಸಿದ ಬಂಧು-ಮಿತ್ರರು ಎಂಜಿನೀರಿಂಗ್ ಕ್ಷೇತ್ರದಲ್ಲಿನ ಹೆಚ್ಚಿನ ಸಂಶೋಧನೆಗಳಿಗೆ ನೆರವು ನೀಡಲಾರಂಭಿಸಿದರು.  ಕ್ರಿ.ಶ.1993ರ ಹೊತ್ತಿಗೆ ಪ್ರತಿಷ್ಠಾನದ ನೇತೃತ್ವ ವಹಿಸಿಕೊಂಡಿದ್ದ ಲಾರೆನ್ಸ್ ಮಿಲಾಸ್ ಹಾಗೂ ಇತರೆ ಸದಸ್ಯರಿಗೆ ಓಲಿನ್ ಹೊತ್ತಿದ್ದ ಕನಸುಗಳು ಸಾಕಾರವಾಗುತ್ತಿಲ್ಲ.  ಪ್ರತಿಷ್ಠಾನದ ಕೊಡುಗೆಯಿಂದ ಕೇವಲ ಸಾಮಾನ್ಯ ಎಂಜಿನೀರ್‌ಗಳನ್ನು ಉತ್ಪಾದಿಸುವ ಬೃಹತ್ ಕಟ್ಟಡಗಳನ್ನು, ಪ್ರಯೋಗಶಾಲೆ ಉಪಕರಣಗಳನ್ನಷ್ಟೇ ನಿರ್ಮಿಸಲಾಗುತ್ತಿದೆ ಎಂಬ ಚಿಂತೆ ಕಾಡತೊಡಗಿತು.  ತಾವು ಇದುವರೆಗೂ ಮಾಡುತ್ತಿರುವ ಕಾರ್ಯವನ್ನು ಯಾವುದೇ ಶ್ರೀಮಂತ ಉದ್ಯಮಿ ಅಥವಾ ಪ್ರತಿಷ್ಠಾನ ಕೈಗೊಳ್ಳಬಹುದು.  ತಮ್ಮ ಕೆಲಸದಲ್ಲಿ ಯಾವುದೇ ವೈಶಿಷ್ಟ್ಯವಿಲ್ಲವೆಂದು ಮನವರಿಕೆಯಾಯಿತು.  ಜನಪ್ರಿಯತೆಯ ಅಲೆಯಲ್ಲಿ ಸೃಜನಶೀಲತೆ ಕೊಚ್ಚಿಕೊಂಡು ಹೋಗುತ್ತಿದೆಯೆಂಬ ಭೀತಿ ಅವರಲ್ಲಿ ಮೂಡತೊಡಗಿತು. &lt;br /&gt; ಈ ಸಂದರ್ಭದಲ್ಲಿ ಅಮೆರಿಕ ಸರಕಾರದ ಧನ ಸಹಾಯದಿಂದ ಕಾರ್ಯನಿರ್ವಹಿಸುವ ‘ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ’ದೊಂದಿಗೆ ಲಾರೆನ್ಸ್ ಮಿಲಾಸ್ ಮತ್ತು ಸಂಗಡಿಗರು ಚರ್ಚೆ ಮಾಡಿದರು.  ಕುತೂಹಲದಿಂದಲೇ ಅನ್ವೇಷಣೆ ನಡೆಸಬಲ್ಲ ಯುವ ಜನರನ್ನು ಪ್ರೋತ್ಸಾಹಿಸಲು ಇವೆರಡೂ ಪ್ರತಿಷ್ಠಾನಗಳು ಯೋಜನೆಗಳನ್ನು ಹಮ್ಮಿಕೊಂಡವು.  ಯಾವ ಕಾಲೇಜುಗಳಲ್ಲಿ ಹೊಸ ಸಂಶೋಧನೆಗಳಿಗೆ, ಹೊಸ ಚಿಂತನೆಗಳಿಗೆ ಅವಕಾಶಗಳಿವೆಯೋ ಅಂಥವುಗಳಿಗೆ ಹೆಚ್ಚಿನ ಧನಸಹಾಯ ನೀಡಲಾರಂಭಿಸಿದವು.  ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾರಂಭಿಸಿದಾಗ ಕೆಲವು ಸ್ವಾರಸ್ಯಕರ ಅಂಶಗಳು ಹೊರಬಂದವು.  ಎಂಜಿನೀರಿಂಗ್ ಕಾಲೇಜುಗಳ ಪಠ್ಯಕ್ರಮ ಅಲ್ಲಿ ಲಭ್ಯವಿರುವ ಬೋಧಕರ ವಿಷಯ ಪಾಂಡಿತ್ಯದ ಆಧಾರದ ಮೇಲೆ ನಿರ್ಮಾಣವಾಗುತ್ತಿತ್ತು.  ಆ ಪಠ್ಯಕ್ರಮ ಕೇವಲ ಶಿಕ್ಷಕರಿಗೆ ಬೋಧನೆ ಮಾಡಲು ನೆರವಾಗುತ್ತಿದ್ದವೇ ಹೊರತು ವಿದ್ಯಾರ್ಥಿಗಳು ಕಲಿಯಲು ಅನುಕೂಲಕರವಾಗಿರಲಿಲ್ಲ.  ಇತ್ತ ವಿದ್ಯಾರ್ಥಿಗಳು ಒಂದೇ ವಿಷಯದ ಬಗ್ಗೆ ಪದವಿಯೋತ್ತರ ವ್ಯಾಸಂಗ ನಡೆಸಲು ಇಚ್ಛಿಸುತ್ತಿದ್ದರೆ.  ಆದರೆ ಒಂದಕ್ಕೊಂದು ಪೂರಕವಾದ ವಿಷಯಗಳ ಬಗ್ಗೆ ಅಧ್ಯಯನ ನಡೆಸಲು ಆಸಕ್ತರಿರಲಿಲ್ಲ.  ಇನ್ನು ಕಾಲೇಜುಗಳೋ ಪದವಿಗೆ ಸಂಭಂಧಿಸಿದ ಬೋಧನೆಯ ಬಗ್ಗೆ ಕೇಂದ್ರೀಕರಿಸುವ ಬದಲು ಸಂಶೋಧನೆಗೆ ಒತ್ತು ನೀಡುತ್ತಿದ್ದವು.  ಕಾರಣ, ಸಂಶೋಧನಾ ಯೋಜನೆಗಳಲ್ಲಿ ಹೆಚ್ಚಿನ ಹಣ ಸಿಗುತ್ತಿದ್ದವು.  ಅಂದರೆ ಒಟ್ಟಿನಲ್ಲಿ ವಿದ್ಯಾರ್ಥಿಗಳಿಗಿಂತಲು ಮುಖ್ಯವಾದದ್ದು ಕಾಲೇಜಿನ ಬೋಧಕರು ಹಾಗೂ ಅವರ ಜೀವನೋಪಾಯ. &lt;br /&gt; ಹೀಗೆ ಓಲಿನ್ ಪ್ರತಿಷ್ಠಾನಕ್ಕೆ ನಿರಾಸೆಯ ಕಾರ್ಮೋಡ ಕವಿಯಲಾರಂಭಿಸಿತು.  ಆದರೆ ಲಾರೆನ್ಸ್ ಮಿಲಾಸ್ ಮತ್ತವನ ಸಹಚರರಿಗೆ ಏನಾದರೂ ಒಂದು ಹೊಸ ಬಗೆಯ ಕಾರ್ಯಚಟುವಟಿಕೆಯನ್ನು ಹಮ್ಮಿಕೊಳ್ಳಬೇಕೆಂಬ ತುಡಿತವಿತ್ತು.  ನಾಲ್ಕು ನೂರು ದಶಲಕ್ಷ ಅಮೆರಿಕನ್ ಡಾಲರ್ (ಸುಮಾರು ಒಂದು ಸಾವಿರದ ಆರು ನೂರು ಕೋಟಿ ರೂಪಾಯಿಗಳು) ಗಳ ಹಣ ಹೂಡಿಕೆಯೊಂದಿಗೆ ಹೊಸ ಎಂಜಿನೀರಿಂಗ್ ಕಾಲೇಜನ್ನು ಪ್ರತಿಷ್ಠಾನ ಆರಂಭಿಸಿತು.  ಈ ಹಿಂದೆ ಪ್ರತಿಷ್ಠಿತ ಸದರ್ನ್ ಕ್ಯಾಲಿಫೋರ್ನಿಯಾ ಹಾಗೂ ಅಯೋವಾ‍ ವಿಶ್ವವಿದ್ಯಾಲಯಗಳಲ್ಲಿ ಬೋಧಿಸಿದ್ದ ಹೊಸ ಬಗೆಯ ಚಿಂತಕ ಪ್ರಾಧ್ಯಾಪಕ ರಿಚರ್ಡ್ ಮಿಲ್ಲರ್ ಮುಖ್ಯಸ್ಥರಾಗಿ ನೇಮಕಗೊಂಡರು.  ಅಮೆರಿಕದಲ್ಲಿ ಪದವಿ ಶಿಕ್ಷಣ ಅತ್ಯಂತ ದುಬಾರಿ.  ಇಂಥ ವಿಶಿಷ್ಟ ಕಾಲೇಜಿಗೆ ಆಸಕ್ತ ವಿದ್ಯಾರ್ಥಿಗಳನ್ನು ಸೆಳೆಯಲು ಏನಾದರೊಂದು ಹೊಸ ಪ್ರಲೋಭನೆ ನೀಡಬೇಕಿತ್ತು.  ಲಾರೆನ್ಸ್ ಮಿಲಾಸ್ ನಿರ್ಧರಿಸಿದ್ದೇನೆಂದರೆ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಿಂದ ವಿನಾಯತಿ ನೀಡುವುದು.  ತಮ್ಮೊಂದಿಗೆ ಸಹಭಾಗಿಯಾಗಿ ಎಂದು ಕರೆಕೊಟ್ಟ ಮೊದಲ ವರ್ಷದಲ್ಲಿಯೇ ಆರು ನೂರು ಉತ್ಸಾಹಿ ವಿದ್ಯಾರ್ಥಿಗಳಿಂದ ಅರ್ಜಿಗಳು ಬಂದವು.  ಅವರಲ್ಲಿ ಪ್ರವೇಶಕ್ಕೆ ಆಯ್ಕೆಯಾದವರು ಮೂವತ್ತು ಮಂದಿ.  ‘ಯೋಜನೆ ಆಧರಿತ ಕಲಿಕೆ’ ಎಂಬ ತತ್ವದಡಿಯಲ್ಲಿ ವಿದ್ಯಾರ್ಥಿಗಳು ತಮ್ಮ ಚಟುವಟಿಕೆಗಳನ್ನು ಆರಂಭಿಸಿದರು.  ಮೊದಲ ಯೋಜನೆ ‘ಗಾಲ್ಫ್ ಚೆಂಡುಗಳನ್ನು ತೂರಬಲ್ಲ ಫಿರಂಗಿ’ ನಿರ್ಮಾಣ.  ಭೌತ ವಿಜ್ಞಾನ, ಸಾಮಗ್ರಿ ವಿಜ್ಞಾನ, ಗಣಿತ ಸೂತ್ರಗಳನ್ನು ಆಧರಿಸಿದ ಮಾದರಿ ರಚನೆ ಮುಂತಾದ ವಿಷಯಗಳಲ್ಲಿನ ಪರಿಣತ ಬೋಧಕರೊಂದಿಗೆ ವಿದ್ಯಾರ್ಥಿಗಳು ಚರ್ಚೆ ನಡೆಸಲಾರಂಭಿಸಿದರು.  ಹೀಗೇಕೆ, ಹಾಗೂ ಮಾಡಬಹುದಲ್ಲವೆ, ಇದೇ ಸೂಕ್ತ, ಈ ಒಂದು ಬದಲಾವಣೆ ನಿರೀಕ್ಷೆಗೂ ಮೀರಿದ ಫಲಿತಾಂಶ ತರಲಿದೆ, ಇದರ ಕಾರ್ಯಕ್ಷಮತೆ ಅಪ್ರತಿಮವಾದದ್ದು ..... ವಿದ್ಯಾರ್ಥಿ ವೃಂದ ಹಾಗೂ ಬೋಧಕ ತಂಡದ ನಡುವಿನ ಕ್ರಿಯಾಶೀಲ ಜಟಾಪಟಿಯ ನಡುವೆ ಯಂತ್ರವೊಂದು ಸಿದ್ಧವಾಯಿತು.  ಮುನ್ನೂರು ಗಜಕ್ಕೂ ಹೆಚ್ಚಿನ ದೂರಕ್ಕೆ ಗಾಲ್ಫ್ ಚೆಂಡುಗಳನ್ನು ನಿಯಮಕ್ಕನುಸಾರವಾಗಿ ತೂರಬಲ್ಲ ಫಿರಂಗಿ ತನ್ನ ಚಾಕಚಕ್ಯತೆಯನ್ನು ಪ್ರದರ್ಶಿಸಿತು. &lt;br /&gt; ಸಮಾಜಕ್ಕೆ ಹೆಚ್ಚು ಪ್ರಯೋಜನಕಾರಿಯಾಗಬಲ್ಲ ಉತ್ತಮ ಎಂಜಿನೀರ್‌ಗಳನ್ನು ರೂಪಿಸುವಲ್ಲಿ ಓಲಿನ್ ಕಾಲೇಜು ಇಂದು ಹೆಸರುವಾಸಿ.  ನಿರ್ದಿಷ್ಟ ವಿಭಾಗಗಳು, ಇಂತಿಷ್ಟೇ ಸಂಬಳ ಹಾಗೂ ಅವಧಿಯ ಶಿಕ್ಷಕರು, ಕಟ್ಟುನಿಟ್ಟಿನ ಪಠ್ಯಕ್ರಮ - ಇವ್ಯಾವುವೂ ಇಲ್ಲದ ಈ ಸರ್ವಸ್ವತಂತ್ರ ಎಂಜಿನೀರಿಂಗ್ ಕಾಲೇಜಿಗೆ ಒಳ್ಳೆಯ ಹೆಸರಿದೆ.  ಜಗನ್ಮಾನ್ಯ ಪ್ರಿನ್ಸ್‍ಟನ್ ವಿಶ್ವವಿದ್ಯಾಲಯದಿಂದ ಹಿಡಿದು ಪ್ರತಿಷ್ಠಿತ ವಾರಪತ್ರಿಕೆ ನ್ಯೂಸ್‍ವೀಕ್‍ನ ತನಕ ಓಲಿನ್ ಕಾಲೇಜಿನ ಸಾಧನೆ ಪ್ರಶಂಸೆಗೊಳಗಾಗಿದೆ.  ಸದ್ಯಕ್ಕೆ ವಿದ್ಯಾರ್ಥಿವೇತನದೊಂದಿಗೆ ದಕ್ಷಿಣ ಕೊರಿಯಾದಲ್ಲಿ ಉನ್ನತ ಅಧ್ಯನ ನಡೆಸುತ್ತಿರುವ ಇಲ್ಲಿನ ಹಳೆಯ ವಿದ್ಯಾರ್ಥಿ ಆಲಿಸನ್ ಲೀ ಪ್ರಕಾರ ‘ನಾನೇನಾದರೂ ಮಾಡಬಲ್ಲೆ ಎಂಬ ಛಲ ನನಗೆ ಮೂಡಿದ್ದು ಓಲಿನ್ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ’.  ಆಕೆ ಈಗಾಗಲೇ ಗೋಡೆಯನ್ನು ಹತ್ತಬಲ್ಲ ರೋಬಾಟ್ (ಯಂತ್ರಮಾನವ) ನಿರ್ಮಾಣದಲ್ಲಿ ಯಶಸ್ವಿಯಾಗಿದ್ದಾಳೆ.  ‘ಯಾವ ಸಮಸ್ಯೆ ಅತ್ಯಂತ ಕ್ಲಿಷ್ಟವೆಂದು ಪರಿಗಣಿತವಾಗಿದೆಯೊ ಅದನ್ನು ಸುಲಭವಾಗಿ ಅರ್ಥ ಮಾಡಿಕೊಂಡು ಬಿಡಿಸಲು ಓಲಿನ್ ಕಾಲೇಜನ್ನು ಪ್ರವೇಶಿಸಬೇಕು’ - ಹೀಗೆನ್ನುವವಳು ಮತ್ತೊಬ್ಬ ವಿದ್ಯಾರ್ಥಿನಿ ಮೀನಾಕ್ಷಿ ವೆಂಬುಸುಬ್ರಮಣಿಯನ್.  ಉಷ್ಣ ವಿಜ್ಞಾನದಲ್ಲಿನ ಎಂಜಿನೀರಿಂಗ್ ಕೌತುಕಗಳನ್ನು ಅಭ್ಯಸಿಸುವುದರ ಜತೆಗೆ ಅದರ ಚಂಚಲತೆಯ ಮೂಲಗಳನ್ನು ಅರಿಯುವುದರಲ್ಲಿ ಆಕೆಗೆ ಆಸಕ್ತಿ.  ಇತ್ತ ಡಯಾನಾ ಡ್ಯಾಬಿಗೆ ಕೊಳಲು, ಪಿಯಾನೊ ಮುಂತಾದ ಸಂಗೀತ ವಾದ್ಯಗಳಲ್ಲಿ ಪರಿಣತಿಯಿದೆ.  ಎಂಜಿನೀರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದಿದ್ದಾಳೆ.  ಸಂಗೀತದೊಂದಿಗೆ ಏನಾದರೂ ಹೊಸ ವಿಷಯದಲ್ಲಿ ಸಾಧನೆ ಮಾಡಬೇಕೆಂಬ ಒಲವಿನಿಂದ ಓಲಿನ್ ಕಾಲೇಜನ್ನಾಕೆ ಸೇರಿದ್ದಾಳೆ.  ಪ್ರಸ್ತುತ ಬುರುಗುಗಳ ನಡುವೆ ಸೇತುವೆಗಳ ನಿರ್ಮಾಣ ಸಾಧ್ಯವೆಂತು ಎಂಬ ಚಿಂತನೆಯಲ್ಲಿದ್ದಾಳೆ.  ವಿದ್ಯುನ್ಮಾನ ಕ್ಷೇತ್ರಕ್ಕೆ ಬಹೂಪಯೋಗಿಯಾಗಬಲ್ಲ ಎಂಜಿನೀರಿಂಗ್ ವಿಷಯವಿದು.  ಈ ಕಾಲೇಜಿನಲ್ಲಿ ಪ್ರತಿಶತ ನಲವತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರಿರುವುದೊಂದು ವಿಶೇಷ.&lt;br /&gt; ‘ಉತ್ತಮ ಸಮಾಜಕ್ಕಾಗಿ’ ಎಂಬುದು ಕೇವಲ ಟೀವಿ ಚಾನೆಲ್ ಒಂದರ ಘೋಷವಾಕ್ಯವಷ್ಟೇ ಅಲ್ಲ, ಇತ್ತೀಚಿನ ಸ್ಥಳೀಯ ಸಂಸ್ಥೆಗಳಿಗಾಗಿ ನಡೆದ ಚುನಾವಣೆಯ ಅಭ್ಯರ್ಥಿಯೊಬ್ಬರ ಪ್ರಚಾರ ಸಾಲೂ ಆಗಿತ್ತು.  ಓಲಿನ್ ಕಾಲೇಜಿನ ಅಘೋಷಿತ ನಿಲುಮೆ - ‘ಉತ್ತಮ ಸಮಾಜಕ್ಕಾಗಿ ಅಗತ್ಯವಿರುವ ಎಂಜಿನೀರ್‌ಗಳನ್ನು ರೂಪಿಸುವುದು’! ಇದರರ್ಥ ಬಹುಶಃ ಮತ್ತಷ್ಟು ವಿಶ್ವೇಶ್ವರಯ್ಯನವರನ್ನು ದೇಶ ನಿರ್ಮಾಣಕ್ಕೆಂದು ರೂಪಿಸುವುದು, ಅಲ್ಲವೆ?     &lt;br /&gt;&lt;strong&gt;&lt;em&gt;(ಕೃಪೆ: ವಿಜಯ ಕರ್ನಾಟಕ; 01-10-2007)&lt;/em&gt;&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/752423363868781697-5278298595588325111?l=netnota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://netnota.blogspot.com/feeds/5278298595588325111/comments/default' title='Post Comments'/><link rel='replies' type='text/html' href='http://www.blogger.com/comment.g?blogID=752423363868781697&amp;postID=5278298595588325111' title='0 Comments'/><link rel='edit' type='application/atom+xml' href='http://www.blogger.com/feeds/752423363868781697/posts/default/5278298595588325111'/><link rel='self' type='application/atom+xml' href='http://www.blogger.com/feeds/752423363868781697/posts/default/5278298595588325111'/><link rel='alternate' type='text/html' href='http://netnota.blogspot.com/2007/10/blog-post_22.html' title='ನಮಗೆ ಅಗತ್ಯವಿರುವುದು ಉತ್ತಮ ಸಮಾಜ ನಿರ್ಮಿಸುವ ಎಂಜಿನೀರ್‌ಗಳು'/><author><name>HNS</name><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_WOq6aPUeAO4/SdR5qYZ87xI/AAAAAAAAAWg/cXIYJSqE8Z4/S220/sudhi1.jpg'/></author><thr:total>0</thr:total></entry><entry><id>tag:blogger.com,1999:blog-752423363868781697.post-6505431765314071033</id><published>2007-10-22T21:49:00.000+05:30</published><updated>2007-10-22T21:53:31.170+05:30</updated><title type='text'>ಭೀತಿ ಹೊಡೆದಟ್ಟುವ ತಂತ್ರ - ವಿಕಿರಣ ಪತ್ತೆ ಯಂತ್ರ</title><content type='html'>&lt;span style="font-size:180%;"&gt;&lt;strong&gt;ಬ&lt;/strong&gt;&lt;/span&gt;ಹುಶಃ ‘ಪರಮಾಣು ಶಕ್ತಿ’ ಎಂಬ ಪದಪುಂಜಕ್ಕೆ ಪರ್ಯಾಯವೆಂದರೆ ‘ಅಗಣಿತ ವಿವಾದ’.  ಪರಮಾಣುಗಳಲ್ಲಿ ಅಡಗಿರುವ ಅಗಣಿತ ಶಕ್ತಿಯನ್ನು ವಿದ್ಯುತ್ ಉತ್ಪಾದಿಸಲು ಅಥವಾ ಬಾಂಬೊಂದನ್ನು ಪ್ರಬಲವಾಗಿ ಸಿಡಿಸಲು ಬಳಸಿಕೊಳ್ಳಬಹುದು ಎಂದು ಜಗತ್ತು ಕಂಡುಕೊಂಡ ದಿನದಿಂದಲೂ ವಿವಾದ ತಪ್ಪಿದ್ದಲ್ಲ.  ಈ ನಿಟ್ಟಿನಲ್ಲಿ ಒಂದು ಸಮಾಧಾನಕರ ವಿಷಯವೆಂದರೆ ಪರಮಾಣು ಶಕ್ತಿ ತಂತ್ರಜ್ಞಾನದ ಜತೆ ಜತೆಗೇ ಅದು ತರಬಹುದಾದ ಅಪಾಯಗಳ ಬಗ್ಗೆ ತಿಳಿವಳಿಕೆಯೂ ಬೆಳೆಯುತ್ತಾ ಬಂದಿದೆ.  ಇದರ ಒಟ್ಟಾರೆ ಪರಿಣಾಮ ಸುರಕ್ಷತಾ ಎಂಜಿನೀರಿಂಗ್ ಕ್ಷೇತ್ರದ ಅತ್ಯುನ್ನತ ಪ್ರಗತಿ.  ಪರಿಸರದ ಬಗ್ಗೆ ಹೆಚ್ಚು ಕಾಳಜಿಯಿರುವವರು ‘ಬೈಜಿಕ ವಿದ್ಯುದಾಗಾರ’ದಿಂದ (ಅಂದರೆ ಪರಮಾಣು ಶಕ್ತಿಯನ್ನು ಬಳಸಿಕೊಳ್ಳುವ ವಿದ್ಯುತ್ ಉತ್ಪಾದನಾ ಕೇಂದ್ರ) ಹೊರಹೊಮ್ಮಬಹುದಾದ ಪರಮಾಣು ವಿಕಿರಣದ ಬಗ್ಗೆ ಚಿಂತಿಸುತ್ತಾರೆ.  ನೈಸರ್ಗಿಕ ಅವಘಢಗಳಿಗೆ ಅಥವಾ ಕಿಡಿಗೇಡಿಗಳ ಧಾಳಿಗೆ ಇಂಥ ಕೇಂದ್ರಗಳು ತುತ್ತಾದರೆ ಸಾರ್ವಜನಿಕರು ವರ್ಷಗಟ್ಟಲೆ ಅಥವಾ ತಲೆಮಾರುಗಟ್ಟಲೆ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂಬುದು ಅವರ ವಾದದ ಹುರುಳು.  ಆದರೆ ಇಂದು ನಮಗೆ ಕರಗತವಾಗಿರುವ ಸುರಕ್ಷಾ ಎಂಜಿನೀರಿಂಗ್ ಎಂಥ ಅಪಾಯಗಳನ್ನು ಮೊದಲೇ ಗುರುತಿಸಿ ಅವನ್ನು ನಿವಾರಿಸಿಕೊಳ್ಳಬಲ್ಲದು ಎಂಬ ಆತ್ಮವಿಶ್ವಾಸ ಪರಮಾಣು ವಿಜ್ಞಾನ ಕ್ಷೇತ್ರದ ತಂತ್ರಜ್ಞರದು.  ಸದಾ ವಿಕಿರಣ ಸೂಸುತ್ತಲೇ ಉಳಿಯಬಲ್ಲ ಇಂಧನದ ವ್ಯರ್ಥಭಾಗದ ವಿಲೇವಾರಿಯ ಬಗ್ಗೆಯೂ ಆತಂಕಗಳಿವೆ.  ಸುರಕ್ಷಿತವಾಗಿ ಅವುಗಳನ್ನು ನೆಲದಾಳದಲ್ಲಿ ಹುಗಿಯುವ, ಕಿಡಿಗೇಡಿಗಳ ಕೈಗೆ ಅವು ಸಿಗದಂತೆ ಮುಚ್ಚಿಡುವ ವ್ಯವಸ್ಥೆಯೂ ಅಭಿವೃದ್ಧಿಗೊಂಡಿವೆ.  ತುರ್ತು ಸಂದರ್ಭಗಳಲ್ಲಿ ಇವುಗಳೆಲ್ಲವೂ ಕಾರ್ಯನಿರ್ವಹಿಸದಿದ್ದರೆ? ಎಂಬ ಪ್ರಶ್ನೆಗೆ ತಂತ್ರಜ್ಞರ ಬಳಿ ಉತ್ತರವಿದೆ.  ವಿದ್ಯುತ್ ಉತ್ಪಾದನಾ ಕೇಂದ್ರದ ಆವರಣದಲ್ಲಿ ಸದಾ ಕಾಲ ಪರೀಕ್ಷೆಗಳನ್ನು ನಡೆಸಲಾಗುತ್ತಿರುತ್ತದೆ.  ಪರಿಸರದಲ್ಲಿ ಪರಮಾಣು ವಿಕಿರಣ ಒಂದು ನಿರ್ದಿಷ್ಟ ಮಟ್ಟವನ್ನು ದಾಟಿದೊಡನೆಯೆ ಎಚ್ಚರಿಕೆ ನೀಡಬಲ್ಲ ಹಾಗೂ ಅದನ್ನು ಸುರಕ್ಷಿತವಾಗಿ ತಡೆಹಿಡಿಯುವ ವ್ಯವಸ್ಥೆಗಳನ್ನು ಅಳವಡಿಸಲಾಗಿರುತ್ತದೆ.  ಆದರೆ ಯಾವುದೇ ಒಂದು ಪ್ರದೇಶದಲ್ಲಿ ಭಯೋತ್ಪಾದಕರ ಧಾಳಿ ನಡೆದಿದ್ದು ಅವರು ಪರಮಾಣು ವಿಕಿರಣ ಸೂಸುವ ಕಡ್ಡಿಗಳನ್ನೊ, ಮತ್ತೊಂದನ್ನೊ ತೂರಿಬಿಟ್ಟಿದ್ದರೆ?  ದೊಡ್ಡ ದೊಡ್ಡ ಗಾತ್ರದ ಪರೀಕ್ಷಾ ಯಂತ್ರಗಳನ್ನು ಅಲ್ಲೆಲ್ಲಾ ಕೊಂಡೊಯ್ದು ತಪಾಸಣೆ ನಡೆಸಲಾಗುವುದಿಲ್ಲ.  ನಡೆಸಲು ಸಾಧ್ಯವಾದರೂ ಕಾಲ ಮಿಂಚಿ ಹೋಗಿರುತ್ತದೆ.  ಹಾಗಿದ್ದಲ್ಲಿ ಎಲ್ಲೆಂದರಲ್ಲಿ ಕೊಂಡೊಯ್ಯಬಹುದಾದ ‘ಪೋರ್ಟಬಲ್’ ಪರಮಾಣು ವಿಕಿರಣ ಪತ್ತೆ ಸಾಧನವೊಂದನ್ನು ಅಭಿವೃದ್ಧಿ ಪಡಿಸಲಾಗುವುದಿಲ್ಲವೆ? ಎಂಬುದು ನಿಮ್ಮ ಪ್ರಶ್ನೆ. &lt;br /&gt; ಪ್ರಕೃತಿಯಲ್ಲಿ ಲಭ್ಯವಿರುವ ಎಲ್ಲ ಸಾಮಗ್ರಿಗಳ ಮೂಲ ರೂಪ ‘ಪರಮಾಣು’ ಎಂಬುದು ನಿಮಗೆ ಗೊತ್ತು.  ‘ಪರಮಾಣುಗಳು’ ಒಂದನ್ನೊಂದು ಬೆಸೆದುಕೊಂಡರೆ ‘ಅಣು’ ಸೃಷ್ಟಿಯಾಗುತ್ತದೆ.  ಅಣುವೊಂದರ ಸ್ಥಿರತೆಗೆ ಅದನ್ನು ರೂಪಿಸಿದ ಪರಮಾಣುಗಳ ನಡುವಣ ಬಂಧನ ಶಕ್ತಿ ಕಾರಣ.  ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನೀರಿನ ಅಣುವೊಂದನ್ನು ರೂಪಿಸಲು ಜಲಜನಕದ ಎರಡು ಪರಮಾಣುಗಳು ಹಾಗೂ ಆಮ್ಲಜನಕದ ಒಂದು ಪರಮಾಣು ಜತೆಗೂಡಿ ಬಾಂಧವ್ಯ ಹೊಂದಿರಬೇಕು.  ಇದೇ ರೀತಿ ಲೋಹ, ಪ್ಲಾಸ್ಟಿಕ್, ಕೂದಲು, ಬಟ್ಟೆ, ಎಲೆ, ಗಾಜು .. ಹೀಗೆ ನಮ್ಮ ಸುತ್ತಮುತ್ತಲ ಎಲ್ಲ ಸಾಮಗ್ರಿಗಳೂ ಪ್ರಕೃತಿಯಲ್ಲಿ ಮೂಲಭೂತವಾಗಿ ಲಭ್ಯವಿರುವ, ವಿವಿಧ ಸಂಖ್ಯೆಯಲ್ಲಿ ಜೋಡಣೆಯಾದ, ಒಂದೊಂದರ ನಡುವೆಯೂ ಬಂಧನವಿರುವ ವಿವಿಧ ಪರಮಾಣುಗಳ ಸಮೂಹ.  ಪ್ರತಿಯೊಂದು ಪರಮಾಣುವೂ ಮೂರು ಬಗೆಯ ಮೂಲಕಣಗಳನ್ನು ಹೊಂದಿರುವುದು ನಿಮಗೆ ಗೊತ್ತು.  ಮಧ್ಯ ಕೇಂದ್ರ ಸ್ಥಾನದಲ್ಲಿ ಪ್ರೊಟಾನ್ ಹಾಗೂ ನ್ಯೂಟ್ರಾನ್ ಇದ್ದರೆ ಹೊರಗಣ ಕಕ್ಷೆಗಳಲ್ಲಿ ಎಲೆಕ್ಟ್ರಾನ್‍ಗಳಿರುವುದನ್ನು ನೀವು ಶಾಲಾ ಪಠ್ಯಪುಸ್ತಕಗಳಲ್ಲಿ ಓದಿ ತಿಳಿದಿರುತ್ತೀರಿ.  ಪ್ರೋಟಾನ್ ಕಣಗಳು ಧನ (ಅಂದರೆ ಪಾಸಿಟಿವ್) ವಿದ್ಯುತ್ ಆವೇಶದಿಂದಿದ್ದರೆ ಎಲೆಕ್ಟ್ರಾನ್ ಕಣಗಳು ಋಣ (ಅಂದರೆ ನೆಗಟಿವ್) ವಿದ್ಯುತ್ ಆವೇಶದಲ್ಲಿರುತ್ತವೆ.  ಪರಮಾಣುವೊಂದರಲ್ಲಿ ಪ್ರೋಟಾನ್ ಮೂಲಕಣಗಳ ಸಂಖ್ಯೆಯಷ್ಟೇ ಎಲೆಕ್ಟ್ರಾನ್‍ಗಳೂ ಇರುತ್ತವೆ.  ಕೇಂದ್ರದಲ್ಲಿರುವ ನ್ಯೂಟ್ರಾನ್ ಕಣಕ್ಕೆ ಯಾವುದೇ ವಿದ್ಯುದಾವೇಶವಿರುವುದಿಲ್ಲ.  ಈ ಎಲ್ಲ ಕಣಗಳು ವಿವಿಧ ಅನುಪಾತದಲ್ಲಿ ಸೇರ್ಪಡೆಯಿಂದ ಪರಮಾಣುವೊಂದಕ್ಕೆ ನಿರ್ದಿಷ್ಟ ಗುಣಲಕ್ಷಣಗಳು ಪ್ರಾಪ್ತವಾಗುತ್ತವೆ.  ಉದಾಹರಣೆಗೆ ಪರಮಾಣುವೊಂದರ ಕೇಂದ್ರ ಅಥವಾ ಬೀಜದಲ್ಲಿ 13 ಪ್ರೋಟಾನ್‍ಗಳಿದ್ದು ಜತೆಗೆ 14 ನ್ಯೂಟ್ರಾನ್‍ಗಳಿದ್ದಲ್ಲಿ, ನಿವ್ವಳ ವಿದ್ಯುದಾವೇಶ ಸೊನ್ನೆಯಾಗಲು 13 ಎಲೆಕ್ಟ್ರಾನ್‍ಗಳು ಅಲ್ಲಿರಬೇಕು. ಈ ಸಂಖ್ಯೆಯಲ್ಲಿ ಮೂಲಕಣಗಳು ಇರುವ ಪರಮಾಣು ಅಲ್ಯುಮಿನಿಯಂ ಎನಿಸಿಕೊಳ್ಳುತ್ತದೆ.  ಇಂಥ ಲಕ್ಷ, ಕೋಟಿಗಟ್ಟಲೆ ಇಂಥ ಅಲ್ಯುಮಿನಿಯಂ ಪರಮಾಣುಗಳನ್ನು ಸೇರಿಸಿ ಅಲ್ಯುಮಿನಿಯಂ ಡಬ್ಬಿಗಳು, ತೆಳು ಹಾಳೆಗಳು, ಎಂಜಿನೀರಿಂಗ್ ವಸ್ತುಗಳನ್ನು ರೂಪಿಸಬಹುದು.  ನೂರಾರು ವರ್ಷಗಳ ಕಾಲ ಅಲ್ಯುಮಿನಿಯಂ ಬದಲಾಗದ ಸ್ಥಿತಿಯಲ್ಲಿರುವ ಕಾರಣ, ಈ ಮೂಲವಸ್ತುವನ್ನು ಸ್ಥಿರ ಎಂದು ಪರಿಗಣಿಸಬಹುದು. &lt;br /&gt; ಒಂದೇ ಸಂಖ್ಯೆಯ ಪ್ರೋಟಾನ್‍ಗಳಿದ್ದು (ಅಂದರೆ ಅಷ್ಟೇ ಸಂಖ್ಯೆಯ ಎಲೆಕ್ಟ್ರಾನ್‍ಗಳಿರುತ್ತವೆ) ಬೇರೆ ಬೇರೆ ಸಂಖ್ಯೆಯ ನ್ಯೂಟ್ರಾನ್‍ಗಳಿರುವ ಸಾಧ್ಯತೆಗಳಿರುತ್ತವೆ.  ಉದಾಹರಣೆಗೆ ತಲಾ 29 ಪ್ರೋಟಾನ್ ಹಾಗೂ ಎಲೆಕ್ಟ್ರಾನ್‍ಗಳಿರುವ ತಾಮ್ರಕ್ಕೆ ಎರಡು ವಿಭಿನ್ನ ಸಂಖ್ಯೆಯ ನ್ಯೂಟ್ರಾನ್‍ಗಳಿರುತ್ತವೆ.  ಒಂದರಲ್ಲಿ 34 ನ್ಯೂಟ್ರಾನ್‍ಗಳಿದ್ದರೆ ಮತ್ತೊಂದು ಬಗೆಯಲ್ಲಿ 36 ನ್ಯೂಟ್ರಾನ್‍ಗಳಿರುತ್ತವೆ.  ಇವನ್ನು ತಾಮ್ರದ ಸಮಸ್ಥಾನಿ (ಐಸೋಟೋಪ್) ಎಂದು ಗುರುತಿಸಲಾಗುತ್ತದೆ.  ಪ್ರೋಟಾನ್-ಎಲೆಕ್ಟ್ರಾನ್ ಸಂಖ್ಯೆಗಳಲ್ಲಿ ಏರುಪೇರಿರದ ಕಾರಣ ವಿದ್ಯುದಾವೇಶಗಳಲ್ಲಿ ವ್ಯತ್ಯಾಸವಿರದು, ಜತೆಗೆ ರಾಸಾಯನಿಕ ಗುಣಗಳು ಒಂದೇ ಇರುವುದು ಸಮಸ್ಥಾನಿಗಳ ವೈಶಿಷ್ಟ್ಯ.  ಹಾಗೆಂದ ಮಾತ್ರಕ್ಕೆ ಎಲ್ಲ ಮೂಲಧಾತುಗಳ ಸಮಸ್ಥಾನಿಗಳೂ ಸ್ಥಿರವಾಗಿರಬಹುದೆಂದಲ್ಲ.  ಕೆಲವೊಂದು ಮೂಲಧಾತುಗಳ ಸಮಸ್ಥಾನಿಗಳು ‘ವಿಕಿರಣ’ ಸೂಸುತ್ತಾ ತಮ್ಮ ಆಯಸ್ಸನ್ನು ಕರಗಿಸಿಕೊಳ್ಳುತ್ತವೆ.  ಸ್ಥಿರ ರೂಪವನ್ನು ಪಡೆಯುವ ತನಕ ಈ ಪ್ರಕ್ರಿಯೆ ಲಕ್ಷಾಂತರ ವರ್ಷಗಳ ತನಕ ಮುಂದುವರಿಯುತ್ತದೆ.  ಕೆಲವೊಂದು ಮೂಲವಸ್ತುಗಳ ಸಮಸ್ಥಾನಿಗಳು ಸ್ವಾಭಾವಿಕವಾಗಿಯೇ ವಿಕಿರಣ ಸೂಸುವ ಗುಣಲಕ್ಷಣಗಳನ್ನು ಹೊಂದಿರುತ್ತವೆ.  ಸ್ವಾಭಾವಿಕವಾಗಿ ಲಭ್ಯವಿರುವ ಅತ್ಯಂತ ತೂಕದ ವಿಕಿರಣ ವಸ್ತು ಯುರೇನಿಯಂ.  ಅಂತೆಯೇ ಬೈಜಿಕ ಅಂದರೆ ಪರಮಾಣು ಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ಪ್ರಕ್ರಿಯೆಗೆ ಯುರೇನಿಯಂ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ.  ಸ್ವಾಭಾವಿಕವಾಗಿ ಲಭ್ಯವಿರುವ ವಿಕಿರಣಪೂರಕ ಮೂಲವಸ್ತುಗಳೂ ಸೇರಿದಂತೆ ಯಾವುದೇ ಇಂಥ ಗುಣವಿರುವ ಸಮಸ್ಥಾನಿಗಳು ಅಪಾಯಕಾರಿ.  ಇಂಥ ವಿಕಿರಣ್ಗಳಲ್ಲಿ ವಿಭಿನ್ನ ಬಗೆಯ ಕಿರಣಗಳಿರುತ್ತವೆ.  ಅವು ಪರಮಾಣುವೊಂದನ್ನು ತಾಗಿದೊಡನೆಯೆ ಅದರ ಹೊರ ಕಕ್ಷೆಯಲ್ಲಿರುವ ಎಲೆಕ್ಟ್ರಾನ್‍ಗಳನ್ನು ಕಿತ್ತೊಗೆಯುತ್ತವೆ.  ಎಲೆಕ್ಟ್ರಾನ್‍ಗಳ ನಷ್ಟ ಅನೇಕ ಜೈವಿಕ ದುಷ್ಪರಿಣಾಮಗಳನ್ನು ತರಬಲ್ಲವು.  ಉದಾಹರಣೆಗೆ ಜೀವಕೋಶವೊಂದರ ಸಾವಿನಿಂದ ಹಿಡಿದು, ಜೀವಿಗಳೆಲ್ಲದರ ಗುಣಾವಗುಣಗಳಿಗೆ ಕಾರಣವಾದ ಜೀನ್‍ನ (ಗುಣಾಣು) ವಿನ್ಯಾಸ ಹಾಗೂ ಕಾರ್ಯಾಚರಣೆಯಲ್ಲಿ ಬದಲಾವಣೆಗಳಾಗುವ ಸಂಭವವಿರುತ್ತವೆ.  ಇದರಿಂದಾಗಿ ಅನೇಕ ಆನುವಂಶಿಕ ಕಾಯಿಲೆಗಳು ವಂಶದಿಂದ ವಂಶಕ್ಕೆ ಮುಂದುವರಿಯಬಹುದು.  ಈ ಬಗೆಯ ಪ್ರಬಲ ಭೀತಿಯೇ ಪರಮಾಣುವಿಗೆ ಸಂಭವಿಸಿದ ಯಾವುದೇ ಪ್ರಯೋಗಗಳು, ವಿದ್ಯುತ್ ಉತ್ಪಾದನಾ ಕೇಂದ್ರಗಳು, ಬಾಂಬ್‍ಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ.  ಕಳೆದ ಐದು ದಶಕಗಳಲ್ಲಿ ಈ ಬಗ್ಗೆ ಸಾಕಷ್ಟು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರ ಪ್ರಗತಿ ಕಂಡಿರುವುದರಿಂದ ನಮ್ಮ ಭಯವನ್ನೂ ಮಿತಿಯಲ್ಲಿಟ್ಟುಕೊಳ್ಳಬಹುದು.&lt;br /&gt; ತಮ್ಮ ಪ್ರಯೋಗಗಳು ಸುರಕ್ಷ ಎಂದು ಬಿಂಬಿಸುವುದಷ್ಟೇ ಅಲ್ಲ, ಯಾವುದೇ ಸಮಯದಲ್ಲಿ ತಂತ್ರಜ್ಞಾನವನ್ನು ಅಲ್ಪ ಮಟ್ಟಿಗೆ ತಿಳಿದವರೂ ಅಪಾಯವಿಲ್ಲ ಎಂದು ಸಾಬೀತು ಮಾಡಿ ತೋರಿಸುವಂಥ ತಂತ್ರಜ್ಞಾನಗಳು ಸೃಷ್ಟಿಯಾಗಬೇಕು.  ಯಾವುದೇ ಪರಿಸರದಲ್ಲಿ ವಿಕಿರಣ ಹೆಚ್ಚಿದೆಯೆ ಎಂದು ಪರೀಕ್ಷಿಸಬಲ್ಲ ಕೈಯ್ಯಲ್ಲಿ ಹಿಡಿದು ಸಾಗಿಸಬಹುದಾದ ಯಂತ್ರವೊಂದನ್ನು ಅಮೆರಿಕದಲ್ಲಿ ರೂಪಿಸಲಾಗಿದೆ.  ಅಲ್ಲಿನ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದ ಧನಸಹಾಯದಿಂದ ವೇಕ್ ಫಾರೆಸ್ಟ್ ವಿಶ್ವವಿದ್ಯಾಲಯದಲ್ಲಿ ಟಂಗ್‍ಸ್ಟನ್ ಸುರುಳಿಯನ್ನು ಬಳಸಿಕೊಂಡು ಪರಮಾಣು ವಿಕಿರಣವನ್ನು ಅಳೆಯಬಲ್ಲ ಸಾಧನವನ್ನು ವಿನ್ಯಾಸಗೊಳಿಸಲಾಗಿದೆ.  ಹೆಚ್ಚೂ-ಕಮ್ಮಿ ನಮ್ಮ ಕಾರುಗಳಲ್ಲಿ ಬಳಸುವಂಥ ಬ್ಯಾಟರಿಯೊಂದರ ನೆರವಿದ್ದರೆ ಸಾಕು, ವಿಕಿರಣ ತಾಗಿರುವ ದ್ರವದ ಹನಿಗಳನ್ನು ಇದು ವಿಶ್ಲೇಷಿಸಬಲ್ಲದು.  ಇಲ್ಲಿ ಗಣನೆಗೆ ಬರುವುದು ಯಾವ ಲೋಹದ ವಿಕಿರಣ ಪರಿಸರದಲ್ಲಿದೆಯೆ ಎಂಬುದು.&lt;br /&gt; ಪ್ರತಿಯೊಂದು ಲೋಹವೂ ನಿರ್ದಿಷ್ಟ ತಾಪಮಾನವನ್ನು ದಾಟಿದ ನಂತರ ನಿರ್ದಿಷ್ಟ ಬಣ್ಣದ ಪ್ರಭೆಯನ್ನು ಹೊರಸೂಸುತ್ತದೆ.  ಇದನ್ನು ಆ ಲೋಹದ ವರ್ಣ ಸಹಿ ಎಂದು ವಿಜ್ಞಾನಿಗಳು ಅರ್ಥೈಸಿಕೊಂಡಿದ್ದಾರೆ.  ತಪಾಸಣೆಗೊಳಗಾದ ಯಾವುದೇ ಮಾದರಿಯನ್ನು ಮೊದಲು ಒಣಗಿಸಿ ಆನಂತರ ಸುಮಾರು 1650 ಡಿಗ್ರಿ ಸೆಂಟಿಗ್ರೇಡ್ ತಾಪಮಾನಕ್ಕೆ ಅದನ್ನು ಕಾಯಿಸಿದಾಗ ನಿರ್ದಿಷ್ಟ ಬಣ್ಣದ ಮಿಂಚು ಸುಳಿಯುತ್ತದೆ.  ಅದನ್ನು ಸೂಕ್ತ ಸಂವೇದಿಯ ಮೂಲಕ ಗ್ರಹಿಸಿ, ಆ ಬೆಳಕಿನಲೆಯ ಉದ್ದ, ಅಗಲ, ಎತ್ತರಗಳ ಆಧಾರದ ಮೇಲೆ ಮೂಲವಸ್ತುವೊಂದರ ಯಾವ ಸಮಸ್ಥಾನಿ ವಿಕಿರಣಕ್ಕೆ ಕಾರಣವಾಗಿತ್ತೆಂದು ಕೆಲನಿಮಿಷಗಳಲ್ಲಿಯೇ ತಿಳಿದುಕೊಳ್ಳಬಹುದು.  ಇದುವರೆಗೂ ದೊಡ್ಡ ದೊಡ್ಡ ಪ್ರಯೋಗಶಾಲೆಗಳಲ್ಲಿ, ಹೆಚ್ಚಿನ ಪ್ರಮಾಣದ ಮಾದರಿಗಳನ್ನು ದಿನಗಟ್ಟಲೆ ನಡೆಸುವ ಪ್ರಕ್ರಿಯೆಗಳ ಮೂಲಕವಷ್ಟೇ ತಿಳಿಯಬಹುದಾಗಿದ್ದ ಮಾಹಿತಿ, ಕೇವಲ ಕೈಯ್ಯಲ್ಲಿ ಹಿಡಿದು ಕೊಂಡೊಯ್ಯಬಹುದಾದ ಸಾಧನದಿಂದ ಅತ್ಯಲ್ಪ ಮಾದರಿಯ ವಿಶ್ಲೇಷಣೆಯೊಂದಿಗೆ ಕೆಲ ನಿಮಿಷದಲ್ಲಿಯೇ ಅರಿಯಬಹುದು.  ಜತೆಗೆ ಈ ಸಾಧನವನ್ನು ಬಳಸಲು ಪರಿಣತ ತಜ್ಞರು ಬೇಕಾಗಿಲ್ಲ.  ವಿಕಿರಣ ಸೂಸುವ ವಸ್ತು ಹತ್ತಿರದಲ್ಲಿದೆಯೆಂದು ಪತ್ತೆಯಾದೊಡನೆಯೆ, ಕೊಲೆ ನಡೆದ ಸ್ಥಳಕ್ಕೆ ನಾಯಿಗಳನ್ನು ಕೊಂಡೊಯ್ಯುವಂತೆ ಈ ವಿಕಿರಣ ಪತ್ತೆ ಸಾಧನವನ್ನು ಪೊಲೀಸರು ಕೊಂಡೊಯ್ಯಬಹುದು. &lt;br /&gt; ಭಯೋತ್ಪಾದಕರು ಕೇವಲ ಭೌತಿಕ ವಸ್ತುಗಳು ಹಾಗೂ ಜೀವಿಅಗಳ ವಿನಾಶವನ್ನಷ್ಟೇ ಬಯಸುವುದಿಲ್ಲ.  ವ್ಯವಸ್ಥೆಯ ಬಗೆಗಿನ ನಂಬಿಕೆಯನ್ನೇ ನಿರ್ನಾಮ ಮಾಡಲು ಯತ್ನಿಸುತ್ತಾರೆ.  ಇದರಿಂದಾಗುವ ಹಾನಿಯ ಪರಿಣಾಮ ಅತ್ಯಂತ ಹೆಚ್ಚಿನದು.  ವಿಕಿರಣ ಸೂಸುವ ವಸ್ತುವೊಂದು ಕಳುವಾಗಿದೆಯೆಂಬ ಗಾಳಿಸುದ್ದಿಯೇ ಸಹಸ್ರ ಸಂಖ್ಯೆಯಲ್ಲಿ ಜನರನ್ನು ಬೆದರಿಸಬಲ್ಲದು.  ಅಲ್ಲಿದೆ, ಇಲ್ಲಿ ಸಿಕ್ಕಿದೆ, ಮತ್ತಷ್ಟು ಕಳುವಾಗಿವೆ, ಈಗಾಗಲೇ ಒಂದಷ್ಟು ಜನರಿಗೆ ತೊಂದರೆಯಾಗಿದೆ ... ಮುಂತಾದ ಸುದ್ದಿಗಳಿಗೆ ರೆಕ್ಕೆ-ಪುಕ್ಕಗಳು ಹಚ್ಚಿಕೊಂಡು ಸಾಂಪ್ರದಾಯಿಕ ಮಾಧ್ಯಮಗಳೊಂದಿಗೆ ಇಂಟರ್‌ನೆಟ್, ಮೊಬೈಲ್ ಫೋನ್ ಮುಂತಾದ ಸಾಧನಗಳ ಮೂಲಕ ಅಲ್ಪಕಾಲದಲ್ಲಿಯೇ ಭೀತಿಯ ಕಾರ್ಮೋಡ ಕವಿಯಬಹುದು.  ಇಂಥ ಭೀತಿಯನ್ನು ತೊಡೆಯುವುದರ ಜತೆಗೆ ಸುರಕ್ಷಾ ವ್ಯವಸ್ಥೆಯ ಬಗ್ಗೆ ಸಾಮಾನ್ಯ ಜನರಿಗೆ ಮರು-ಆಶ್ವಾಸನೆ ನೀಡಲು, ವಿಕಿರಣ ಪತ್ತೆ ಸಾಧನ ನೆರವಾಗಲಿದೆ.&lt;br /&gt; ದೂಳು, ಮಣ್ಣು, ನೀರು, ಬೆಳೆ ಹೀಗೆ ಯಾವುದೇ ವಸ್ತುವಿನ ಮಾದರಿಗಳನ್ನೂ ಈ ಸಾಧನದ ಮೂಲಕ ತಪಾಸಣೆಗೊಳಿಸಬಹುದು.  ಈ ಹಿಂದೆ ರಕ್ತದ ಮಾದರಿಗಳಲ್ಲಿ ಸೀಸದ ಕುರುಹುಗಳಿವೆಯೆ ಎಂದು ಪರೀಕ್ಷಿಸಬಲ್ಲ ಸುಲಭ ಸಾಧನವನ್ನು ನಿರ್ಮಿಸಿದ್ದ ವಿಜ್ಞಾನಿಗಳ ತಂಡವೇ ವಿನೂತನ ವಿಕಿರಣ ಪತ್ತೆ ಸಾಧನವನ್ನೂ ರೂಪಿಸಿದೆ.  ಪ್ರಯೋಗಶಾಲೆಯ ಹಂತದಲ್ಲಿ ಸಾಧನ ಯಶಸ್ವಿಯಾಗಿ ವಿಕಿರಣ ಸೋರಿಕೆಯನ್ನು ಪತ್ತೆ ಮಾಡಿದೆ.  ಹೆಚ್ಚಿನ ಮಟ್ಟದ ಪರಿಶೀಲನೆಗೆ ವಿಜ್ಞಾನಿಗಳು ಸಜ್ಜಾಗಿದ್ದಾರೆ.  ಆಯಕಟ್ಟಿನ ಜಾಗಗಳಲ್ಲಿ ಹೊಗೆಯ ಜಾಡನ್ನು ಹಿಡಿದು ಬೆಂಕಿಯನ್ನು ಗುರುತಿಸುವ ಸಾಧನಗಳನ್ನು ಅಳವಡಿಸುವುದು ನಿಮಗೆ ಗೊತ್ತು.  ಇದೇ ರೀತಿ ವಿಕಿರಣ ಸೋರಿಕೆಯನ್ನು ಪತ್ತೆ ಮಾಡಲು ಇಂಥ ಅಳವಡಿಕೆಗಳನ್ನು ಉಪಯೋಗಿಸಬಹುದೇನೊ?        &lt;br /&gt;&lt;strong&gt;&lt;em&gt;(ಕೃಪೆ: ವಿಜಯ ಕರ್ನಾಟಕ 24-09-2007)&lt;/em&gt;&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/752423363868781697-6505431765314071033?l=netnota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://netnota.blogspot.com/feeds/6505431765314071033/comments/default' title='Post Comments'/><link rel='replies' type='text/html' href='http://www.blogger.com/comment.g?blogID=752423363868781697&amp;postID=6505431765314071033' title='0 Comments'/><link rel='edit' type='application/atom+xml' href='http://www.blogger.com/feeds/752423363868781697/posts/default/6505431765314071033'/><link rel='self' type='application/atom+xml' href='http://www.blogger.com/feeds/752423363868781697/posts/default/6505431765314071033'/><link rel='alternate' type='text/html' href='http://netnota.blogspot.com/2007/10/blog-post.html' title='ಭೀತಿ ಹೊಡೆದಟ್ಟುವ ತಂತ್ರ - ವಿಕಿರಣ ಪತ್ತೆ ಯಂತ್ರ'/><author><name>HNS</name><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_WOq6aPUeAO4/SdR5qYZ87xI/AAAAAAAAAWg/cXIYJSqE8Z4/S220/sudhi1.jpg'/></author><thr:total>0</thr:total></entry><entry><id>tag:blogger.com,1999:blog-752423363868781697.post-1604151440194153420</id><published>2007-09-17T07:25:00.000+05:30</published><updated>2007-09-17T07:29:08.717+05:30</updated><title type='text'>‘ಜೋಕೆ ... ಜಾಲದ ಬಲೆಗೆ ಬಿದ್ದಾಗಲೇ ಅರಿವೆ ನೀ ಸಂಚು’</title><content type='html'>&lt;span style="font-size:180%;"&gt;&lt;strong&gt;ಇಂ&lt;/strong&gt;&lt;/span&gt;ದು ಜಗತ್ತಿನ ಯಾವುದೇ ಮೂಲೆಯಲ್ಲಿ ಭಯೋತ್ಪಾತ ಕೃತ್ಯ ನಡೆದರೂ ನಾವೀಗ ನಡುಗಬೇಕಾದ ಪರಿಸ್ಥಿತಿಯಿದೆ.  ಸಮೂಹ ಮಾಧ್ಯಮದ ಅತ್ಯದ್ಭುತ ಪ್ರಗತಿಯಿಂದ ಆಯಾ ಕ್ಷಣದಿಂದಲೇ ರೆಕ್ಕೆಪುಕ್ಕಗಳನ್ನು ಹಚ್ಚಿಕೊಂಡ ಸುದ್ದಿ ಜಗತ್ತಿನಾದ್ಯಂತ ಹರಡಿ ಆತಂಕಕ್ಕೆಡೆ ಮಾಡಿಕೊಡುತ್ತದೆ.  ಹತ್ತಾರು ಜನರನ್ನು ಕೊಲ್ಲುವುದಕ್ಕಿಂತಲೂ ಅಂಥ ಸುದ್ದಿಯೊಂದನ್ನು ಲಕ್ಷಾಂತರ ಜನರಿಗೆ ಮುಟ್ಟಿಸುವುದು ಭಯೋತ್ಪಾದಕರ ಮುಖ್ಯ ಉದ್ದೇಶವಾಗುತ್ತಿದೆ.  ಉಪಗ್ರಹ ಸಂಪರ್ಕ ಜಾಲದ ನೆರವಿನ ಟೀವಿಯಂಥ ಪ್ರಬಲ ಸಮೂಹ ಮಾಧ್ಯಮ ತನ್ನ ವ್ಯಾಪ್ತಿ ಹೆಚ್ಚಿಸಿಕೊಂಡಂತೆ ಸಾಮಾನ್ಯ ಜನರನ್ನು ಕಂಗಾಲು ಮಾಡುವುದು ಭಯೋತ್ಪಾದಕರಿಗೆ ಸುಲಭವಾಗುತ್ತಿದೆ.  ಈ ನಿಟ್ಟಿನಲ್ಲಿ ಅವರು ಜಯ ಸಾಧಿಸಿದರೂ, ಸಾಂಪ್ರದಾಯಿಕ ಸಂಪರ್ಕ ಸಾಧನಗಳ ಮೂಲಕ ತಮ್ಮ ಜಾಲವನ್ನು ವಿಸ್ತರಿಸಿಕೊಳ್ಳುವ ಅಥವಾ ಮಾಹಿತಿ ವಿನಿಮಯ ಮಾಡಿಕೊಳ್ಳುವ ಕೆಲಸ ಕಷ್ಟವಾಗುತ್ತಿದೆ.  ಎಲ್ಲ ದೇಶಗಳ ಬೇಹುಗಾರಿಕಾ ಸಂಸ್ಥೆಗಳು, ಆಂತರಿಕ ಸುರಕ್ಷಾ ಏಜೆನ್ಸಿಗಳು, ಮಿಲಿಟರಿ ಭಯೋತ್ಪಾದಕರ ಸಂಪರ್ಕ ಜಾಲವನ್ನು ಬೇಧಿಸುವುದರ ಜತೆಗೆ ತಮ್ಮ ಸಂಪರ್ಕ ಜಾಲದಲ್ಲಿ ವಿನಿಮಯವಾಗುವ ಮಾಹಿತಿ ಅವರಿಗೆ ಲಭ್ಯವಾಗದಂತೆ ನೋಡಿಕೊಳ್ಳುತ್ತಿವೆ.  ಆದರೆ ಇವೆರಡು ಬಣಗಳ ನಡುವಣ ಮೇಲಾಟ 20-20 ಕ್ರಿಕೆಟ್ ಪಂದ್ಯಗಳಿಗಿಂತಲೂ ರೋಮಾಂಚಕ.  ನಿತ್ಯ ಸಮರವೆಂದೇ ಪರಿಗಣಿಸಬಹುದಾದ ಹೋರಾಟವಿದು.&lt;br /&gt;&lt;br /&gt; ಇಂಟರ್‌ನೆಟ್ ನಿಮಗೆ ಗೊತ್ತು.  ಅಮೆರಿಕ ಹಾಗೂ ರಶಿಯ ದೇಶಗಳ ನಡುವಣ ಬಾಹ್ಯಾಂತರಿಕ್ಷ ಪೈಪೋಟಿಯಲ್ಲಿ (ಸ್ಪುಟ್ನಿಕ್ Vs. ಅಪೋಲೊ) ಕೆಲ ಕಾಲ ರಶಿಯ ದೇಶ ಮೇಲುಗೈ ಸಾಧಿಸಿತ್ತು.  ಈ ಸಂದರ್ಭದಲ್ಲಿ ಬಾಹ್ಯಾಂತರಿಕ್ಷದಿಂದ ರಶಿಯ ನಡೆಸಬಹುದಾದ ಸಂಭವನೀಯ ಧಾಳಿಯಿಂದ ತನ್ನ ದೇಶದ ಮಿಲಿಟರಿ ಮಾಹಿತಿಗಳ ರಕ್ಷೆ ಹಾಗೂ ಸುರಕ್ಷ ವಿನಿಮಯಕ್ಕೆಂದು ಅಮೆರಿಕ ಸ್ಥಾಪಿಸಿಕೊಂಡ ಸಂಪರ್ಕ ಜಾಲ ‘ಅರ್ಪಾ - ಅಡ್ವಾನ್ಸ್‍ಡ್ ರಿಸರ್ಚ್ ಪ್ರಾಜೆಚ್ಟ್ ಏಜೆನ್ಸಿ’ನೆಟ್ (ಕ್ರಿ.ಶ.1969).  ಮಿಲಿಟರಿ ದರ್ಪದೊಂದಿಗೆ ಈ ‘ಅರ್ಪಾನೆಟ್’ ಮಿಳಿತಗೊಂಡು ‘ಡರ್ಪಾ - ಡಿಫೆನ್ಸ್ ಅರ್ಪಾ’ನೆಟ್ ಎಂದು ಬದಲಾಯಿತು.  ಮಿಲಿಟರಿ ಸಂಶೋಧನೆಗಳಿಗೆ ನೆರವು ನೀಡುತ್ತಿದ್ದ ಅಮೆರಿಕದ ವಿಶ್ವವಿದ್ಯಾಲಯಗಳು ಒಂದಕ್ಕೊಂದು ಜೋಡಣೆಯಾದವು.  ಮಿಲಿಟರಿ ಪ್ರಯೋಗಶಾಲೆಗಳೊಂದಿಗೆ ನಾಗರಿಕರಿಗೆ ಅಗತ್ಯವಾದ ವಿಜ್ಞಾನ ಸಂಶೋಧನೆಗಳನ್ನು ನಡೆಸುತ್ತಿದ್ದ ಸರ್ಕಾರಿ ಸಂಸ್ಥೆಗಳು ಈ ಸಂಪರ್ಕ ಜಾಲಕ್ಕೆ ಸೇರ್ಪಡೆಯಾದವು.  ರಶಿಯ ಹಾಗೂ ಅಮೆರಿಕಗಳ ನಡುವಣ ‘ಶೀತಲ ಸಮರ’ ಕೊನೆಗೊಳ್ಳುತ್ತಾ ಬಂದಂತೆ ಈ ಸುರಕ್ಷ ಸಂಪರ್ಕ ಜಾಲ ‘ಮುಕ್ತ’ಗೊಂಡಿತು.  ಕೇವಲ ಅಮೆರಿಕ ಬೆಂಬಲಿತ ದೇಶಗಳಲ್ಲಿ ಚಾಲನೆಯಲ್ಲಿದ್ದ ಈ ಸರ್ವ ಸ್ವತಂತ್ರ ಹಾಗೂ ಮುಕ್ತ ವಿನಿಮಯದ ಸಂಪರ್ಕ ಜಾಲ ಉಳಿದೆಲ್ಲ ದೇಶಗಳಿಗೆ ವಿಸ್ತರಿಸಲಾರಂಭಿಸಿತು.  ಕಾಲ ಕಳೆದಂತೆ ಈ ವಿಸ್ಮಯ ಸಂಪರ್ಕ ಜಾಲದ ವ್ಯಾಪ್ತಿ ನಿರೀಕ್ಷೆಗೂ ಮೀರಿ ವಿಸ್ತೃತಗೊಂಡಿತು.  ಇಂಟರ್‌ನೆಟ್ ಎಂಬ ಮಾಯಾಜಾಲ ಸಂಪರ್ಕ ಕ್ಷೇತ್ರದ ಮಹೇಂದ್ರ ಜಾಲದ ಸ್ಥಾನ ಪಡೆಯಿತು.  ಅತ್ಯಂತ ಅಗ್ಗದ ಕ್ಷಿಪ್ರ ಸಂಪರ್ಕ ಜಾಲವೆಂದು ಹೆಸರಾಯಿತು. &lt;br /&gt;&lt;br /&gt; ವಿಧ್ಯ್ವಂಸಕ ಕೃತ್ಯಗಳಿಗೆ ಮುಂಚೂಣಿ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದರಲ್ಲಿ ಭಯೋತ್ಪಾದಕರು ಸದಾ ಮುಂದು.  ಇಂಟರ್‌ನೆಟ್‍ನಂಥ ಶಕ್ತಿಶಾಲಿ ಸಂಪರ್ಕ ಮಾಧ್ಯಮ ಎಲ್ಲರಿಗೂ ಸುಲಭವಾಗಿ ಲಭ್ಯವಾದಂತೆ ಭಯೋತ್ಪಾದಕರಿಗೆ ತಮ್ಮ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲು ಸುಲಭವಾಯಿತು.  ಇಂಟರ್‌ನೆಟ್ ಮೂಲಕ ದೂರ ಸಂಪರ್ಕ ಅಗ್ಗವಷ್ಟೇ ಅಲ್ಲ ಸುರಕ್ಷ ಎಂದು ಮನವರಿಕೆಯಾದ ಮೇಲೆ ಅವರದನ್ನು ಹೆಚ್ಚು ಹೆಚ್ಚಾಗಿ ಬಳಸಲಾರಂಭಿಸಿದರು.  ತಮ್ಮದೇ ಆದ ಇಂಟರ್‌ನೆಟ್ ತಾಣದ ಮೂಲಕ ಮಾಹಿತಿಯ ಮಹಾಪೂರ ಹರಿಸುವುದರ ಜತೆಗೆ, ಪ್ರತ್ಯೇಕ ಇ-ಮೇಲ್ ಜಾಲದಲ್ಲಿ ಮಾಹಿತಿ ವಿನಿಯಮ ಮಾಡಿಕೊಳ್ಳಲಾರಂಭಿಸಿದರು.  ಸಾರ್ವಜನಿಕ ಚರ್ಚೆಗಳಿಗೋಸ್ಕರ ‘ಬ್ಲಾಗ್ - (ವೆ)ಬ್+ಲಾಗ್’ ಎಂಬ ಮುಕ್ತ ವೇದಿಕೆಗಳನ್ನು ಸೃಷ್ಟಿಸತೊಡಗಿದರು.  ತಮ್ಮ ಸಿದ್ಧಾಂತಗಳ ಪ್ರಸರಣೆಗೆ ಇಂಟರ್‌ನೆಟ್ ಹರಟೆಕಟ್ಟೆಗಳನ್ನು ಬಳಸತೊಡಗಿದರು.  ಯಾವುದೇ ನಿರ್ಬಂಧಗಳಿಲ್ಲದ ಇಂಟರ್‌ನೆಟ್ ಭಯೋತ್ಪಾದಕರುಗಳಿಗೆ ಅತ್ಯಗತ್ಯ ಸಂಪರ್ಕ ಜಾಲವಾಯಿತು.  ಸಮಸ್ಯೆ ಹುಟ್ಟಿಕೊಂಡಿರುವುದೇ ಇಲ್ಲಿ.  ಯಾವ ಸಮಯದಲ್ಲಿ, ಯಾವ ಭಾಷೆಯಲ್ಲಿ, ಯಾವ ನೆಲೆಯಿಂದ, ಎಂಥ ಪ್ರಚೋದಕ ಸಾಮಗ್ರಿಯನ್ನು ತುಂಬುತ್ತಿದ್ದಾರೆ?  ಅಂಥ ಸಾಮಗ್ರಿಗಳು ಜಗತ್ತಿನ ಯಾವ ಯಾವ ಬಳಕೆದಾರರ ಕಣ್ನೋಟವನ್ನು ತುಂಬುತ್ತಿವೆ?  ಅವುಗಳ ಒಟ್ಟಾರೆ ಪರಿಣಾಮವೆಂಥದು?  ಅವುಗಳ ಪ್ರಸರಣೆಯನ್ನು ನಿಗ್ರಹಿಸುವುದು ಹೇಗೆ?  ಎಲ್ಲ ಜವಾಬ್ದಾರಿಯುತ ದೇಶಗಳ ಮುಂದಿರುವ ಪ್ರಶ್ನೆಗಳು.  ಆತಂಕ ಹುಟ್ಟಿಸಿರುವ ವಿಷಯವೆಂದರೆ ಇಂಟರ್‌ನೆಟ್ ಅನ್ನೇ ಒಂದು ಬೃಹತ್ ಮಳಿಗೆಯಾಗಿಸಿಕೊಂಡು ತಮ್ಮ ಸಿದ್ಧಾಂತಗಳ ಪ್ರಚಾರ, ಅಮಾಯಕರುಗಳ ನೇಮಕ, ಹಾಗೂ ಧಾಳಿಗಳ ಆಯೋಜನೆಗಳನ್ನು ಈ ಭಯೋತ್ಪಾದಕರು ಮಾಡುತ್ತಿರುವುದು. &lt;br /&gt;&lt;br /&gt; ಇಂಟರ್‌ನೆಟ್‍ನ ತವರೂರಾದ ಅಮೆರಿಕದಲ್ಲಿ ಈ ಬಗ್ಗೆ ಹೆಚ್ಚಿನ ಮಟ್ಟದ ಜಾಗೃತಿ ಉಂಟಾಗಿದೆ.  ಪ್ರಚಾರಕ್ಕೆ ಸಿಲುಕದ ಅದೆಷ್ಟೋ ಮುಂಚೂಣಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಭಯೋತ್ಪಾತ ನಿಗ್ರಹಕ್ಕೆ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.  ಅಮೆರಿಕದ ಮರುಭೂಮಿ ಪ್ರದೇಶ ಅರಿಝೋನ ರಾಜ್ಯ.  ಅಲ್ಲಿನ ಒಂದು ಜಿಲ್ಲೆ ಟ್ಯುಸನ್.  ಇಲ್ಲಿ ಅರಿಝೋನ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ‘ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ’ದ ಧನ ಸಹಾಯ ಹಾಗೂ ಸರ್ಕಾರದ ಬೇಹುಗಾರಿಕಾ ಏಜೆನ್ಸಿಗಳಲ್ಲಿ ಲಭ್ಯವಿರುವ ತಂತ್ರಜ್ಞಾನದ ನೆರವಿನಿಂದ ಇಂಟರ್‌ನೆಟ್ ಮೂಲಕ ನಡೆಯುತ್ತಿರುವ ಭಯೋತ್ಪಾತ ಪ್ರಸರಣೆಯನ್ನು ತಡೆಗಟ್ಟಲು ಶ್ರಮಿಸುತ್ತಿದ್ದಾರೆ.  ‘ಡಾರ್ಕ್ ವೆಬ್ - ಕರಾಳ ಜಾಲ’ ಎಂಬ ಹೆಸರಿನ ಈ ಯೋಜನೆಯಲ್ಲಿ ಇಂಟರ್‌ನೆಟ್ ಮೂಲಕ ಹರಿದಾಡುವ ಭಯೋತ್ಪಾತಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವ ಹಾಗೂ ವಿಶ್ಲೇಷಿಸುವ ಕಾರ್ಯ ಭರದಿಂದ ಸಾಗಿದೆ.  ‘ಆಲ್ ಖೈದಾ’ ಸೇರಿದಂತೆ ಗುರುತರ ಭಯೋತ್ಪಾದನಾ ಸಂಘಟನೆಗಳಿಗೆ ಸಂಬಂಧಿಸಿದ ಸುಮಾರು ಐದು ಸಹಸ್ರ ಇಂಟರ್‌ನೆಟ್ ತಾಣಗಳು ‘ಕರಾಳ ಜಾಲ’ದ ಹದ್ದಿನ ಕಣ್ಣಿನ ತಪಾಸಣೆಗೆ ಒಳಗಾಗಿವೆ.  ಇರಾಕ್, ಪಾಕಿಸ್ತಾನಗಳಷ್ಟೇ ಅಲ್ಲ, ಯುರೋಪ್ ದೇಶಗಳಲ್ಲಿಯೂ ಗೌಪ್ಯವಾಗಿ ಹರಡಿಕೊಂಡಿರುವ ನೂರಾರು ಸಂಘಟನೆಗಳು ಇಂಟರ್‌ನೆಟ್‍ನಲ್ಲಿ ಪ್ರಸರಿಸುತ್ತಿರುವ ಹಲವು ಭಾಷೆಗಳ, ಸಂಕೇತೀಕರಿಸಿದ ಸಾಮಗ್ರಿಗಳು ‘ಕರಾಳ’ ಹಸ್ತದ ವ್ಯಾಪ್ತಿಗೆ ಸಿಲುಕಿವೆ.&lt;br /&gt;&lt;br /&gt; ‘ಕರಾಳ ಜಾಲ’ ಯೋಜನೆಯಲ್ಲಿ ಸಂಪರ್ಕ ಜಾಲಕ್ಕೆ ಸಂಬಂಧಿಸಿದ ಹಲವಾರು ಮುಂಚೂಣಿ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ.  ಅವುಗಳಲ್ಲಿ ಪ್ರಮುಖವಾದವುಗಳೆಂದರೆ ‘ವೆಬ್ ಸ್ಪೈಡರಿಂಗ್’ ಅಂದರೆ ಮಿಕವೊಂದನ್ನು ಸಿಲುಕಿಸಲು ಆಯಕಟ್ಟಿನ ಸ್ಥಾನದಲ್ಲಿ ಬಲೆ ಹೆಣೆಯುವ ಹಂಚಿಕೆ.  ಹಾಗೆಯೇ ‘ಕೊಂಡಿ’, ‘ಸಾಮಗ್ರಿ’ ಹಾಗೂ ‘ಒಡೆತನ’ದ ವಿಶ್ಲೇಷಣಾ ತಂತ್ರಜ್ಞಾನ.  ಭಯೋತ್ಪಾತಕ್ಕೆ ಸಂಬಂಧಿಸಿದ ತಾಣ ಪತ್ತೆಯಾದೊಡನೆ ಅವು ಯಾವ ಯಾವ ತಾಣಗಳಿಗೆ ಕೊಂಡಿಯನ್ನು ಕೊಟ್ಟಿವೆ?  ಆ ಸಾಮಗ್ರಿಗಳಲ್ಲಿ ಗೌಪ್ಯವಾಗಿ ಅಡಗಿರುವ ಸಂದೇಶಗಳು ಎಂಥವು?  ಯಾರ ಪ್ರಚೋದನೆಯ ಮೇಲೆ ಇಂಥ ಮಾಹಿತಿ ಹರಿದಾಡುತ್ತಿವೆ? ಎಂಬುದನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ.  ಹಲವು ಗಾತ್ರದ, ಹಲವು ಭಾಷೆಗಳ, ಹಲವು ಸ್ವರೂಪದ ಅಗಾಧ ಮಾಹಿತಿ ಭಂಡಾರವನ್ನು ವಿಶ್ಲೇಷಿಸಲು ಹೆಚ್ಚಿನ ಸಾಮರ್ಥ್ಯದ ಕಂಪ್ಯೂಟರ್ ಸ್ಮರಣಕೋಶಗಳು ಬೇಕು.  ಜತೆಗೆ ಮಾಹಿತಿ ವಿಶ್ಲೇಷಣೆಯ ವೇಗವನ್ನು ಹೆಚ್ಚಿಸಲು ಶಕ್ತಿಶಾಲಿ ಸಂಸ್ಕಾರಕಗಳು ಅವಶ್ಯ.  ವಿವಿಧ ಭಾಷೆ, ಸಂಕೇತಗಳ ಗೂಡಾರ್ಥವನ್ನು ಒಡೆಯಲು ತನ್ನದೇ ಆದ ಬುದ್ಧಿಮತ್ತೆಯುಳ್ಳ ಅಂದರೆ ತನ್ನ ಸ್ಮರಣಕೋಶದೊಳಗಿನ ಮಾಹಿತಿಯೊಂದಿಗೆ ತಾಳೆ ನೋಡಿ ಇಂಥದೇ ಇರಬಹುದು ಎಂದು ಚಹರೆಯನ್ನು ಗ್ರಹಿಸಬಲ್ಲ ಯಂತ್ರಾಂಶ/ತಂತ್ರಾಂಶವೂ ಅಗತ್ಯ.  ‘ಕರಾಳ ಜಾಲ’ ಹೊರತಂದಿರುವ ಮತ್ತೊಂದು ಸೌಲಭ್ಯವೆಂದರೆ ‘ರೈಟ್‍ಪ್ರಿಂಟ್ - ಬರಹ ಮುದ್ರಣ’.  ಒಂದು ಆಕ್ಷೇಪಾರ್ಹ ವಿಷಯ ಇಂಟರ್‌ನೆಟ್‍ನಲ್ಲಿ ಪ್ರಕಟವಾಗಿದೆಯೆಂದು ಭಾವಿಸಿ.  ಅದರ ಕರ್ತೃ ಯಾರೆಂದು ಪತ್ತೆಯಾಗಿಲ್ಲ.  ಆ ಬರಹವನ್ನು ಗುರುತು ಮತ್ತು ಮನನ ಮಾಡಿಕೊಳ್ಳುವ ಸಲಕರಣೆಯು, ಇಂಟರ್‌ನೆಟ್ ಜಾಲಾಡಲು ಹೊರಡುತ್ತದೆ.  ಅದೇ ಶೈಲಿಯ ಬರಹಗಳು ಎಲ್ಲೆಲ್ಲಿ ಪ್ರಕಟವಾಗಿವೆ ಎಂಬುದನ್ನು ಪತ್ತೆ ಮಾಡುತ್ತದೆ.  ಅವುಗಳ ಕರ್ತೃ ಯಾರಿರಬಹುದೆಂದು ಹುಡುಕುತ್ತದೆ.  ಇಂಥ ಕೆಲಸ ಮಾಡುವವರು ಎಲ್ಲೋ ಒಂದೆಡೆ ತಮ್ಮ ಜಾಡನ್ನು ಬಿಟ್ಟಿರುತ್ತಾರೆ ಎಂಬ ಅಂದಾಜಿನ ಮೇಲೆ ಈ ಪತ್ತೇದಾರಿ ನಿಂತಿದೆ.  ಅಕಸ್ಮಾತ್ ಆತ/ಆಕೆ ಯಾರೆಂದು ಗೊತ್ತಾಗದಿದ್ದರೂ ಸರಿ.  ಅದೇ ಶೈಲಿಯ ಬರಹಗಳು ಹೊಸತಾಗಿ ಇಂಟರ್‌ನೆಟ್‍ನಲ್ಲಿ ಎಲ್ಲೇ ಪ್ರಕಟವಾಗಲಿ, ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯೊಂದನ್ನು ಅಳವಡಿಸಿಕೊಳ್ಳಬಹುದು. &lt;br /&gt;&lt;br /&gt; ಇಂಟರ್‌ನೆಟ್‍ನಲ್ಲಿ ಜೇಡರ ಬಲೆಯನ್ನು ಹರಡುವುದು ಮಳೆ ಸುರಿವ ಕಾಡಿನಲ್ಲಿ ಹಕ್ಕಿಗೆ ಬಲೆ ಬೀಸುವಷ್ಟೇ ವ್ಯರ್ಥದ ಕೆಲಸ.  ಒಮ್ಮೊಮ್ಮೆ ಬಲೆ ಬೀಸಿರುವುದು ಪತ್ತೆಯಾಗಿ ತಮ್ಮ ಜಾಡು ಮತ್ತು ಚಹರೆಯನ್ನು ಬದಲಿಸಿಕೊಳ್ಳುತ್ತಲೇ ಇರುತ್ತಾರೆ ಭಯೋತ್ಪಾದಕರು.  ಅಷ್ಟಲ್ಲದೆಯೆ ತಮ್ಮ ಪಹರೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಾರೆ.  ಅವರ ಚಾಣಕ್ಷತನ ಒಮ್ಮೊಮ್ಮೆ ಹೇಗಿರುತ್ತೆದೆಂದರೆ, ತಾವು ಬಲೆಗೆ ಬಿದ್ದಿದ್ದೇವೆಂದು ತೋರಿಸಿಕೊಳ್ಳುತ್ತಲೇ ಧಾಳಿ ಆರಂಭಿಸತೊಡಗುತ್ತಾರೆ.  ಅವರ ಸಾಮಗ್ರಿಗಳನ್ನೆಲ್ಲವನ್ನೂ ಬೇಹುಗಾರರು ತಮ್ಮ ಕಂಪ್ಯೂಟರಿಗೆ ಇಳಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದೊಡನೆಯೆ ಅಂಥ ಸಾಮಗ್ರಿಗಳಿಗೆ ವೈರಸ್‌ಗಳನ್ನು ಸೇರಿಸಹೊರಡುತ್ತಾರೆ.  ಯಾವ ಯಾವ ವೆಬ್‍ತಾಣದಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆಂದು ಅರಿವಾದೊಡನೆಯೆ ಆ ತಾಣಕ್ಕೆ ಧಾಂಗುಡಿಯಿಡಲು ಶುರು ಹಚ್ಚಿಕೊಳ್ಳುತ್ತಾರೆ.  ಇದು ಹೆಚ್ಚೂ-ಕಮ್ಮಿ ಬೆಕ್ಕು-ಇಲಿಗಳ ಚೆಲ್ಲಾಟದಂತೆ ಮುಂದುವರಿಯುತ್ತದೆ.  ಪಾತ್ರ ಒಮ್ಮೊಮ್ಮೆ ಬದಲಾಗುತ್ತದೆ.  ಒಬ್ಬರಿಗೆ ಚೆಲ್ಲಾಟವಾದರೆ ಮತ್ತೊಬ್ಬರಿಗೆ ಪ್ರಾಣಸಂಕಟ. &lt;br /&gt;&lt;br /&gt; ಭಯೋತ್ಪಾತ ವಿರುದ್ಧದ ಜಾಗತಿಕ ಧಾಳಿ ನಿರಂತರ.  ಇಂಥದೊಂದು ವ್ಯವಸ್ಥೆಯನ್ನು ಆರಂಭಿಸಿದ ನಂತರ ಯೋಜನೆ ಯಶಸ್ಸಿನ ಹಾದಿಯಲ್ಲಿ ಸಾಗಿದೆ.  ಉದಾಹರಣೆಗೆ ವೆಬ್‍ತಾಣವೊಂದರಲ್ಲಿ ‘ಉತ್ತಮಪಡಿಸಿದ ಸ್ಫೋಟಕ ಸಾಧನಗಳು - ಐ.ಇ.ಡಿ.’ಗಳನ್ನು ತಯಾರಿಸುವುದು ಹೇಗೆ? ಎಂಬುದನ್ನು ಸವಿವರವಾಗಿ ತಿಳಿಸಲಾಗಿದೆಯೆಂದು ಭಾವಿಸಿ.  ಇದರಲ್ಲಿ ಸ್ಫೋಟಕ ಸಾಧನವನ್ನು ತಯಾರಿಸಲು ಬೇಕಾದ ಸಾಮಗ್ರಿಗಳು ಯಾವುವು? ಅವು ಸಿಗುವ ಮಳಿಗೆಗಳು ಯಾವುವು? ಅದನ್ನು ತಯಾರಿಸುವುದು ಹೇಗೆ? ಮತ್ತೊಬ್ಬರಿಗೆ ತಿಳಿಯದಂತೆ ಅದನ್ನು ಸಾಗಿಸುವುದು ಯಾವ ರೀತಿ? ಸ್ಫೋಟಗೊಳಿಸುವ ಬಗೆ ಎಂಥದು? ಆನಂತರ ತೆಗೆದುಕೊಳ್ಳಬಹುದಾದ ಎಚ್ಚರಿಕೆಗಳು ಯಾವುವು? ಎಂಬ ವಿಷಯಗಳನ್ನು ಸಚಿತ್ರವಾಗಿ ತಿಳಿಸುವುದರ ಜತೆಗೆ ಪೂರಕವಾದ ವೀಡಿಯೋ ತುಣಕುಗಳನ್ನು ಸೇರಿಸಿದ್ದಾರೆಂದುಕೊಳ್ಳಿ.  ಮೊದಲಿಗೆ ಈ ತಾಣಕ್ಕೆ ಭೇಟಿ ಕೊಡುವವರ ಜಾಡು ಹಿಡಿಯುವವರ ಗುರುತು ಪತ್ತೆ ಮಾಡಬೇಕು.  ಅವರು ಭೇಟಿ ನೀಡುವ ಇನ್ನಿತರ ತಾಣಗಳು, ಸಂಪರ್ಕ ಹೊಂದುವ ಇತರ ವ್ಯಕ್ತಿಗಳು, ಅವರ ಸಂಪರ್ಕ ಜಾಲ ಹೀಗೆ ಪತ್ತೆ ಮಾಡುತ್ತಾ ಹೋಗಿ, ಒಂದು ದತ್ತಾಂಶ ಸಂಚಯವನ್ನು ರೂಪಿಸಿಕೊಳ್ಳಬಹುದು.  ಇನ್ನು ತಾಣದಲ್ಲಿ ವಿವರಿಸಿರುವಂತೆ ಸಾಮಗ್ರಿ ಬಿಕರಿ ಮಾಡುವ ಮಳಿಗೆಗಳ ಸುತ್ತ ಪಹರೆ ಹಾಕಬಹುದು.  ಅದರಲ್ಲಿ ತೋರಿಸಿರುವಂತೆ ಸಾಧನಗಳು ಪತ್ತೆಯಾದಲ್ಲಿ ಅದನ್ನು ನಿಷ್ಕ್ರಿಯಗೊಳಿಸಬಹುದು.  ಇಂಥ ಯೋಜನೆಗಳನ್ನು ಈ ವಿಧಾನದ ಮೂಲಕ ಕರಾಳ ಜಾಲದ ಅಡಿಯಲ್ಲಿ ಹೊಸಕಿ ಹಾಕಲಾಗಿದೆ.&lt;br /&gt;&lt;br /&gt; ಭಯೋತ್ಪಾತ ಜಾಗತಿಕ ಸಮಸ್ಯೆ.  ಸಾರ್ವಜನಿಕರ ನೆರವಿಲ್ಲದೆಯೆ ಯಾವುದೇ ಆಡಳಿತ ಈ ಸಮಸ್ಯೆಯನ್ನು ಏಕಪಕ್ಷೀಯವಾಗಿ ನಿವಾರಿಸಲಾಗುವುದಿಲ್ಲ.  ಯಾವುದೇ ಅನಪೇಕ್ಷಣೀಯ ಸಾಮಗ್ರಿ ಅಥವಾ ಆಕ್ಷೇಪಾರ್ಹ ಬರಹ ಇಂಟರ್‌ನೆಟ್‍ನಲ್ಲಿ ಕಣ್ಣಿಗೆ ಬಿದ್ದರೆ ಸಮೀಪದ ‘ಸೈಬರ್ ಪೊಲೀಸ್ ಠಾಣೆ’ಗಳಿಗೆ ಮಾಹಿತಿ ನೀಡಬೇಕಾದ ಕರ್ತವ್ಯ ಎಲ್ಲ ಪ್ರಜ್ಞಾವಂತ ನಾಗರಿಕರದು.  ‘ಕರಾಳ ಜಾಲ’ ಯೋಜನೆಗೆ ಯಶ ಸಿಗಲಿ, ನೈಜ ಲೋಕದಲ್ಲಿ ಭಯೋತ್ಪಾತ ಹೆಚ್ಚಿಸುವ ಸೈಬರ್ ಲೋಕದ ಎಲ್ಲ ಪ್ರಯತ್ನಗಳೂ ನಿಷ್ಫಲವಾಗಲಿ.  ಮಾಹಿತಿಯ ಮುಕ್ತ ಪ್ರಸರಣೆಗೆಂದೇ ಹುಟ್ಟಿ ಬಂದ ಇಂಟರ್‌ನೆಟ್‍ಗೆ ಮುಕ್ತತೆಯೇ ಕುತ್ತಾಗದಿರಲಿ.      &lt;br /&gt;&lt;br /&gt; &lt;strong&gt;&lt;em&gt;(ಕೃಪೆ : ವಿಜಯ ಕರ್ನಾಟಕ, 17-09-2007)&lt;/em&gt;&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/752423363868781697-1604151440194153420?l=netnota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://netnota.blogspot.com/feeds/1604151440194153420/comments/default' title='Post Comments'/><link rel='replies' type='text/html' href='http://www.blogger.com/comment.g?blogID=752423363868781697&amp;postID=1604151440194153420' title='0 Comments'/><link rel='edit' type='application/atom+xml' href='http://www.blogger.com/feeds/752423363868781697/posts/default/1604151440194153420'/><link rel='self' type='application/atom+xml' href='http://www.blogger.com/feeds/752423363868781697/posts/default/1604151440194153420'/><link rel='alternate' type='text/html' href='http://netnota.blogspot.com/2007/09/blog-post_17.html' title='‘ಜೋಕೆ ... ಜಾಲದ ಬಲೆಗೆ ಬಿದ್ದಾಗಲೇ ಅರಿವೆ ನೀ ಸಂಚು’'/><author><name>HNS</name><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_WOq6aPUeAO4/SdR5qYZ87xI/AAAAAAAAAWg/cXIYJSqE8Z4/S220/sudhi1.jpg'/></author><thr:total>0</thr:total></entry><entry><id>tag:blogger.com,1999:blog-752423363868781697.post-8364709319710811989</id><published>2007-09-10T07:19:00.000+05:30</published><updated>2007-09-10T07:22:36.121+05:30</updated><title type='text'>‘ರೊಬಾಟ್’ ಮಿಡತೆಯ ರೆಕ್ಕೆಯಲ್ಲಿ ನಮ್ಮ ಹೃದಯ ಸ್ನಾಯು?</title><content type='html'>&lt;span style="font-size:180%;"&gt;&lt;strong&gt;ನ&lt;/strong&gt;&lt;/span&gt;ಮ್ಮ ದೇಹದಲ್ಲಿ ಅತಿ ಹೆಚ್ಚು ಕೆಲಸ ಮಾಡುವ ಸ್ನಾಯುಗಳು ಯಾವುವು ಎಂಬ ಪ್ರಶ್ನೆಗೆ ಹೃದಯದಲ್ಲಿ ಹುದುಗಿರುವ ಸ್ನಾಯುಗಳೆಂದು ನಿಸ್ಸಂಶಯವಾಗಿ ಹೇಳಬಹುದು.  ಕಾರಣ, ಹಗಲೂ ರಾತ್ರಿ ಹೃದಯವೆಂಬ ಪಂಪು ನಿರಂತರವಾಗಿ ಕೆಲಸ ಮಾಡಬೇಕು.  ಈ ಕಾರ್ಯಕ್ಕೆ ಸ್ನಾಯುಗಳೆಲ್ಲವೂ ಪ್ರತಿಸ್ಪಂದಿಸಬೇಕು. ಒಂದೊಂದು ಹೃದಯ ಮಿಡಿತಕ್ಕೂ ಮೇಳೈಸುವಂತೆ ಸ್ನಾಯುಗಳು ಸಂಕುಚಿತವಾಗಬೇಕು/ವಿಕಸನವಾಗಬೇಕು.  ಇದು ಸಾಧ್ಯವಾಗುವುದು ಹೇಗೆಂದರೆ ಹೃದಯ ಸ್ನಾಯುಗಳಲ್ಲಿ ಜೀವಕೋಶಗಳು ಒಂದು ನಿರ್ದಿಷ್ಟ ಮಾದರಿಯಲ್ಲಿ ಜೋಡಣೆಯಾಗಿರುತ್ತವೆ.  ಈ ಜೋಡಣೆ ಕೇವಲ ಯಾಂತ್ರಿಕ ಜೋಡಣೆಯಷ್ಟೇ ಅಲ್ಲ, ವಿದ್ಯುತ್ ಸಂಕೇತಗಳ ಸುಗಮ ಹರಿದಾಟಕ್ಕೂ ಅನುವು ಮಾಡಿಕೊಡುತ್ತದೆ.  ಅಂದರೆ ನಮ್ಮ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಹುದುಗಿರುವ ಸೂಕ್ಷ್ಮಾತಿ ಸೂಕ್ಷ್ಮ ಅಳತೆಯ ‘ಎಲೆಕ್ಟ್ರಾನಿಕ್ ಸರ್ಕ್ಯೂಟ್ - ವಿದ್ಯುನ್ಮಾನ ಮಂಡಲ’ದಂತೆ ಈ ಜೀವಕೋಶ ಮಂಡಲ ಕೆಲಸ ಮಾಡುತ್ತಿರುತ್ತದೆ.  ಕಾರ್ಯ ನಿರ್ವಹಿಸುತ್ತಿರುವ ಸ್ನಾಯುಗಳಿಗೆ ಬೇಕಾದ ಶಕ್ತಿ ಸಂಚಯನಕ್ಕೆ ಅಗತ್ಯವಾದ ಗ್ಲುಕೋಸ್ ಅಂಶ ಸತತವಾಗಿ ಪೂರೈಕೆಯಾಗುವಂತೆ ನೋಡಿಕೊಳ್ಳುತ್ತಿರುತ್ತದೆ.  ಇಂಥ ಅತ್ಯದ್ಭುತ ಕಾರ್ಯಪಟುತ್ವವಿರುವ ಸಾಮಗ್ರಿಯನ್ನು ಕೃತಕವಾಗಿ ತಯಾರಿಸುವಂತಿದ್ದರೆ ಎಷ್ಟೆಲ್ಲಾ ಅನುಕೂಲಗಳಿರುತ್ತಿದ್ದವು.  ಹೃದಯಾಘಾತವಾದಾಗ ಆ ಭಾಗದಲ್ಲಿ ನಿಶ್ಚೇತನಗೊಂಡ ಸ್ನಾಯುಗಳಿಗೆ ಬದಲಿಯಾಗಿ ಇಂಥ ಕೃತಕ ಸ್ನಾಯುಗಳನ್ನು ಜೋಡಿಸಬಹುದಿತ್ತು.  ತೊಂದರೆಗೀಡಾದ ಸ್ನಾಯುಗಳನ್ನು ಕತ್ತರಿಸಿ ಆ ಭಾಗದಲ್ಲಿ ಕೃತಕ ಸ್ನಾಯುಗಳನ್ನು ಅಳವಡಿಸಬಹುದಿತ್ತು.  ಥೇಟ್ ನಮ್ಮ ಮನೆಯ ವಿವಿಧ ಭಾಗಗಳಿಗೆ ವಿದ್ಯುತ್ ಸಂಪರ್ಕ ನೀಡುವ ವೈರುಗಳಂತೆ, ಹಳತಾದ, ಹರಿದು ಹೋದ ತಂತಿಗಳನ್ನು ಬದಲಿಸುವಂತೆ ಅಥವಾ ಹೊಸ ಸಂಪರ್ಕ ಬೇಕೆಂದೆಡೆ ತಂತುಗಳನ್ನು ಸೇರ್ಪಡೆ ಮಾಡುವಂತೆ, ನಮ್ಮ ಹೃದಯದ ಸ್ನಾಯು ಮಂಡಲದಲ್ಲಿ ಮಾರ್ಪಾಡುಗಳನ್ನು ಮಾಡಬಹುದಿತ್ತು.&lt;br /&gt; ನಮ್ಮ ದೇಹದಲ್ಲಿ ಸೃಷ್ಟಿಯಾಗಿರುವ ಪರಿಪಕ್ವ ಎಂಜಿನೀರಿಂಗ್ ವ್ಯವಸ್ಥೆಯನ್ನು ಕೃತಕವಾಗಿ ಮರುಸೃಷ್ಟಿಸುವುದು ಅಷ್ಟು ಸುಲಭವಲ್ಲ.  ಸ್ವಲ್ಪ ಮಟ್ಟಿಗೆ ಅಂಥದೇ ಸಾಮಗ್ರಿಗಳನ್ನು ರೂಪಿಸಲು ಸಾಧ್ಯವಾದರೂ ಅದು ಕೈಗೆಟುಕದಷ್ಟು ದುಬಾರಿಯಾಗಿರುತ್ತದೆ.  ಜತೆಗೆ ಬೇಕೆಂದೆಡೆ ಕೂಡಿಸಲು ಸಾಧ್ಯವಾಗದಷ್ಟು ದೊಡ್ಡದಾಗಿರುತ್ತದೆ.  ಬೇಕಾದಂತೆ ಬಾಗಿಸಲು, ಜೋಡಿಸಲು, ಹೆಣೆಯಲು ಸಾಧ್ಯವಾಗದಂತೆ ರೂಪುಗೊಂಡಿರುತ್ತದೆ.  ನಮ್ಮದೇ ದೇಹದಿಂದ ಹೊರತೆಗೆದ ‘ಆಕರ ಕೋಶ’ ಅಥವಾ ‘ಸ್ಟೆಮ್ ಸ್ಟೆಲ್ಸ್’ಗಳಿಂದ ಸ್ನಾಯುಗಳನ್ನು ಮರು ರೂಪಿಸುವ ಸಾಧ್ಯತೆಯೇನೋ ಇದೆ.  ಅದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ.  ಎಲ್ಲ ಜನರ ‘ಆಕರ ಕೋಶಗಳನ್ನು’ ಬ್ಯಾಂಕುಗಳಲ್ಲಿ ಶೇಖರಣೆ ಇನ್ನೂ ಮಾಡಿಲ್ಲ ಹಾಗೂ ಈ ಬಗ್ಗೆ ನೀತಿ ಸಂಹಿತೆಗಳು ಇನ್ನೂ ರೂಪುಗೊಂಡಿಲ್ಲ.  ಹಾಗೆಂದ ಮಾತ್ರಕ್ಕೆ ಜೀವ ವಿಜ್ಞಾನಿಗಳು ಕೈಕಟ್ಟಿ ಕೂತಿಲ್ಲ, ನಮಗೆ ಹತ್ತಿರದ ಸಂಬಂಧಿಗಳಾದ, ಸುಲಭವಾಗಿ ಸಿಗಬಲ್ಲ ಇಲಿಗಳ ಮೇಲೆ ತಮ್ಮ ಪ್ರಯೋಗಗಳನ್ನು ಮುಂದುವರಿಸಿದ್ದಾರೆ.  ಅವುಗಳ ನಾಶದ ಬಗ್ಗೆ ಯಾರೂ ಹೆಚ್ಚಾಗಿ ಗುಲ್ಲೆಬ್ಬಿಸದ ಕಾರಣ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿದೆ.  ಈ ಬಗೆಯ ಪ್ರಯೋಗಗಳಿಂದ ಎರಡು ಬಗೆಯ ಅನುಕೂಲಗಳಿವೆ.  ಮೊದಲನೆಯದು ಇಂಥ ಸ್ನಾಯುಗಳನ್ನು ಸೃಷ್ಟಿಸುವ ಕಲೆಯನ್ನು ಕರಗತ ಮಾಡಿಕೊಳ್ಳುವುದು, ಎರಡನೆಯದು ಇತರೆ ಕೃತಕ ವಸ್ತುಗಳೊಂದಿಗೆ ಈ ಬಗೆಯ ಸ್ನಾಯುಗಳನ್ನು ಮಿಳಿತಗೊಳಿಸಿ ಅವುಗಳನ್ನು ಕಾರ್ಯ ನಿರ್ವಹಿಸುವಂತೆ ಮಾಡುವುದು.  ಮೊದಲನೆಯ ಸೃಷ್ಟಿಕ್ರಿಯೆಯ ಅನುಕೂಲಗಳನ್ನು ಈಗಾಗಲೇ ಪ್ರಸ್ತಾಪಿಸಲಾಗಿದೆ.  ಎರಡನೆಯ ಸೃಷ್ಟಿಕ್ರಿಯೆಯಲ್ಲಿ ಯಶಸ್ವಿಯಾದರೆ ಭವಿಷ್ಯದಲ್ಲಿ ವಿನ್ಯಾಸಗೊಳಿಸಬಹುದಾದ ಸಣ್ಣ ಸಣ್ಣ ‘ರೋಬಾಟ್ - ಯಂತ್ರಮಾನವ’ಗಳಿಗೆ ಉತ್ತಮ ಕಾರ್ಯಕ್ಷಮತೆಯ ಚಲನೆಗಳನ್ನು ನೀಡಬಹುದು. &lt;br /&gt; ಅಮೆರಿಕದ ಜಗನ್ಮಾನ್ಯ ಹಾರ್ವರ್ಡ್ ವಿಶ್ವವಿದ್ಯಾಲಯ ನಿಮಗೆ ಗೊತ್ತು.  ಇಲ್ಲಿನ ಯಂತ್ರ ವಿಜ್ಞಾನ ವಿಭಾಗದ ತಜ್ಞರು ಜೀವ ವಿಜ್ಞಾನಿಗಳು ಹಾಗೂ ವೈದ್ಯರೊಡಗೂಡಿ ಮಹತ್ತರ ಪ್ರಯೋಗವೊಂದನ್ನು ಹಮ್ಮಿಕೊಂಡಿದ್ದಾರೆ.  ಇಲಿಗಳ ಆಕರ ಕೋಶಗಳಿಂದ ರೂಪಿಸಿದ ಹೃದಯ ಸ್ನಾಯುಗಳನ್ನು ಪ್ಲಾಸ್ಟಿಕ್ ಎಳೆಗಳೊಂದಿಗೆ ಮಿಳಿತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಅಷ್ಟೇ ಅಲ್ಲ, ಇಂಥ ಸಾಮಗ್ರಿಯನ್ನು ಬಳಸಿಕೊಂಡು ಪುಟ್ಟ ‘ರೊಬಾಟ್’ಗಳನ್ನು ರೂಪಿಸಿದ್ದಾರೆ.  ಇರುವೆಗಳಂತೆ ಚಲಿಸುವ, ಪುಟಾಣಿ ಮೀನಿನ ಮರಿಯಂತೆ ಈಜುವ, ಮಿಡತೆಗಳಂತೆ ನೆಗೆಯುವ ಯಂತ್ರಗಳನ್ನವರು ವಿನ್ಯಾಸಗೊಳಿಸಿದ್ದಾರೆ.  ಪ್ಲಾಸ್ಟಿಕ್ ಹಾಳೆಗಳ ಆಯಕಟ್ಟಿನ ಜಾಗಗಳಲ್ಲಿ ಕೂರಿಸಿದ ಇಲಿಗಳ ಹೃದಯ ಸ್ನಾಯುಗಳು ಬೇಕೆಂದೆಡೆ ಬಾಗಿ, ಬಳಕಿ, ತಿರುಗಿ, ಸಂಕುಚಿತಗೊಂಡು, ವಿಕಸನಗೊಳ್ಳುವ ಕಾರ್ಯಗಳನ್ನು ಪ್ಲಾಸ್ಟಿಕ್‍ನಿಂದ ಮಾಡಿಸಿವೆ.  ಈ ಸ್ನಾಯುಗಳು ಪದೇ ಪದೇ ಸಂಕುಚನ/ವಿಕಸನಗೊಳ್ಳುವ ಮೂಲಕ ಪ್ಲಾಸ್ಟಿಕ್ ಹಾಳೆ ಆಲಿಕೆಯಾಕಾರದಲ್ಲಿ ಸುತ್ತಿಕೊಳ್ಳುವ, ಬಿಚ್ಚಿಕೊಳ್ಳುವ ಕೆಲಸಗಳನ್ನು ಅತ್ಯಂತ ಕ್ಷಿಪ್ರವಾಗಿ ಮಾಡಿವೆ.  ಆಯತಾಕಾರ, ತ್ರಿಕೋನಾಕೃತಿ, ವೃತ್ತಾಕಾರದ ಪ್ಲಾಸ್ಟಿಕ್ ಹಾಳೆಗಳ ನಿರ್ದಿಷ್ಟ ಭಾಗಗಳಲ್ಲಿ ಅಳವಡಿಸಿದ ಸ್ನಾಯುಗಳಿಗೆ ಆಣತಿಗಳನ್ನು ನೀಡುವುದು ಹೇಗೆ? ಎಂಬುದು ಪ್ರಶ್ನೆ.  ದೇಹವೊಂದರಲ್ಲಿ ಅಡಗಿರುವ ಸ್ನಾಯುಗಳಿಗೆ ಆಣತಿಗಳನ್ನು ನರತಂತುಗಳು ನೀಡುತ್ತವೆ.  ಸಂಪರ್ಕ ಮಾಹಿತಿಯನ್ನು ಜೀವಕೋಶಗಳ ನಡುವಣ ಪ್ರೋಟೀನ್ ರವಾನಿಸುತ್ತವೆ.  ಶಕ್ತಿ ಸಂಚಯನವನ್ನು ಗ್ಲುಕೋಸ್ ಮಾಡುತ್ತದೆ.&lt;br /&gt; ಇವೆಲ್ಲ ಕಾರ್ಯಗಳನ್ನು ಕೃತಕವಾಗಿ ನಡೆಸುವುದು ಹೇಗೆ?  ಮೊದಲಿಗೆ ಸ್ನಾಯುವೊಂದರ ಜೀವಕೋಶಗಳು ನಿರ್ದಿಷ್ಟ ರೀತಿಯಲ್ಲಿ ಜೋಡಣೆಯಾಗಬೇಕು.  ಇದಕ್ಕಾಗಿ ವಿಜ್ಞಾನಿಗಳು ಸೂಕ್ಷ್ಮ ಅಳತೆಯಲ್ಲಿ ಪ್ರೋಟೀನ್ ಕಣಗಳನ್ನು ಸಂಸ್ಕರಿಸಿಕೊಂಡರು.  ಸ್ನಾಯು ಕೋಶಗಳ ಜತೆಗೆ ಈ ಪ್ರೋಟೀನ್ ಕಣಗಳನ್ನು ಬೆರೆಸಿ ಪ್ಲಾಸ್ಟಿಕ್ ಹಾಳೆಯ ಮೇಲೆ ಮಿಶ್ರಣ ಮಾಡಿದೊಡನೆ ತನ್ನಷ್ಟಕ್ಕೆ ತಾನೇ ಜೋಡಣೆಗೊಂಡವು.  ಕಾರ್ಯನಿರ್ವಹಿಸಬಲ್ಲ ಅಂಗಾಂಶ (ಟಿಶ್ಯೂ) ರೂಪುಗೊಳ್ಳಲಾರಂಭಿಸಿದವು.  ಮುಂದಿನದು ಜೀವಕೋಶಗಳಿಗೆ ಚೈತನ್ಯ ತುಂಬುವ ಕಾರ್ಯ.  ಇದನ್ನು ಗ್ಲುಕೋಸ್ ತುಂಬುವ ಮೂಲಕ ಸಾಧಿಸಲಾಯಿತು.  ಪೌಷ್ಟಿಕಾಂಶಗಳನ್ನು ಸತತವಾಗಿ ಪೂರೈಸುವ ಮೂಲಕ ಈ ಬಗೆಯ ಸಮ್ಮಿಶ್ರ ವಸ್ತುಗಳನ್ನು ಕೆಲ ವಾರಗಳ ಕಾರ್ಯ ನಿರ್ವಹಿಸುವಂತೆ ಮಾಡಲು ಸಾಧ್ಯವಾಗಿದೆ.  ವಿನ್ಯಾಸವನ್ನು ಮತ್ತಷ್ಟು ಉತ್ತಮಗೊಳಿಸುವುದರ ಮೂಲಕ ಜೀವಿತಾವಧಿಯನ್ನು ಹೆಚ್ಚಿಸಬಹುದೆಂಬ ನಿರೀಕ್ಷೆ ವಿಜ್ಞಾನಿಗಳದು.  ವಿಜ್ಞಾನಿಗಳ ಕಲ್ಪನೆಯಲ್ಲಿ ಎಂಥ ಸೃಷ್ಟಿಗಳಿವೆ?  ನೀರಿನಲ್ಲಿ ಜೀವಿಸುವ ಎಂಟೆಂಟು ಕೈಗಳಿರುವ, ಆ ಇಡೀ ಕೈಗಳಲ್ಲಿ ರಕ್ತ ಹೀರುವ ಗ್ರಂಥಿಗಳಿರುವ, ಎಲ್ಲೆಂದರಲ್ಲಿ ನುಸುಳಿ ಹೋಗಿ ತನ್ನ ಕಬಂಧ ಬಾಹುಗಳ ಮೂಲಕ ತನ್ನ ಆಹಾರವಾಗಬಲ್ಲ ಜೀವಿಗಳನ್ನು ಸೆರೆಹಿಡಿಯಬಲ್ಲ ಅಷ್ಟಪದಿ ಅಥವಾ ‘ಆಕ್ಟೋಪಸ್’ ನಿಮಗೆ ಗೊತ್ತಲ್ಲವೆ?  ಇಂಥ ಅಷ್ಟಪದಿಗಳ ಮಾದರಿಯಲ್ಲಿ ಪುಟಾಣಿ ರೊಬಾಟ್‍ಗಳನ್ನು ನಿರ್ಮಿಸುವ ಹಂಬಲ ಹಾರ್ವರ್ಡ್ ತಂತ್ರಜ್ಞರದು.  ಈಗಾಗಲೇ ದಕ್ಷಿಣ ಕೊರಿಯಾದಲ್ಲಿ ‘ಏಡಿ’ಯಾಕಾರದ ಪುಟಾಣಿ ಸಾಧನವೊಂದು ಹತ್ತು ದಿನಗಳ ಕಾಲ ಪ್ರಯೋಗಶಾಲೆಯಲ್ಲಿ ಸಂಚಾರ ನಡೆಸಿ ದಣಿವಾರಿಸಿಕೊಳ್ಳುತ್ತಿದೆ.  ತನ್ನ ಆಕಾರವನ್ನು ಬೇಕೆಂದಂತೆ ಬದಲಿಸಿಕೊಳ್ಳಬಲ್ಲ ರೊಬಾಟ್‍ಗಳನ್ನು ಸೃಷ್ಟಿಸುವ ತಂತ್ರಜ್ಞರ ಕನಸಿಗೆ ಈ ಯಶಸ್ಸು ಇಂಬುಕೊಡುತ್ತಿದೆ.  ಅನಪೇಕ್ಷಣೀಯ ವಾತಾವರಣದಲ್ಲಿ ಕಾರ್ಯನಿರ್ವಹಿಸಬಲ್ಲ, ಅತ್ಯಂತ ಕಡಿಮೆ ಜಾಗ ಇರುವ ಸ್ಥಳಗಳಲ್ಲಿ ನುಸುಳಿಹೋಗಬಲ್ಲ ರೊಬಾಟ್‍ಗಳು ವಿಜ್ಞಾನಿಗಳ ಕನಸಿನ ಯೋಜನೆಗಳಲ್ಲಿವೆ.  ಅನೇಕ ಮಾದರಿಗಳ ವಿನ್ಯಾಸದ ಪರಿಪೂರ್ಣತೆಯ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. &lt;br /&gt; ಹೃದಯ ಸ್ನಾಯುಗಳ ಬಗ್ಗೆ ವಿಸ್ತೃತ ಅಧ್ಯಯನಕ್ಕೆ ಬೇಕಾಗುವ ಮಾದರಿಗಳನ್ನೂ ಇಲ್ಲಿ ಸೃಷ್ಟಿಸಬಹುದು.  ಆರೋಗ್ಯವಂತ ಹಾಗೂ ದೋಷಯುಕ್ತ ಸ್ನಾಯುಗಳ ಕಾರ್ಯಾಚರಣೆಯಲ್ಲಿ ಯಾವ ಬಗೆಯ ವ್ಯತ್ಯಾಸಗಳಿರುತ್ತವೆ?  ಜೀವಕೋಶಗಳ ಜೋಡಣೆಯಲ್ಲಿ ವ್ಯತ್ಯಯಗಳಿವೆಯೆ?  ವ್ಯವಸ್ಥೆಯಲ್ಲಿನ ಯಾವ ದೋಷದಿಂದ ಸ್ನಾಯು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ?  ಎಂಥ ರಿಪೇರಿಗಳನ್ನು ನಡೆಸಿದರೆ ಸ್ನಾಯುಗಳನ್ನು ಮೊದಲಿನಂತೆ ಕಾರ್ಯನಿರ್ವಹಿಸಬಲ್ಲದು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬಹುದು.  ಇವೆಲ್ಲಕ್ಕೂ ಮಿಗಿಲಾಗಿ ಮತ್ತೊಂದು ಘನ ಉದ್ದೇಶವೊಂದಿದೆ.  ಅದು ಔಷಧವೊಂದರ ಪರಿಣಾಮವನ್ನು ಅಳೆಯುವುದು.  ಹೃದ್ರೋಗ ಚಿಕಿತ್ಸೆಗೆಂದು ನೂರಾರು ಬಗೆಯ ಔಷಧಗಳನ್ನು ಸಂಸ್ಕರಿಸುತ್ತಿರುವುದು ನಿಮಗೆ ಗೊತ್ತು.  ಇವೆಲ್ಲದರ ಕಾರ್ಯಕ್ಷಮತೆ, ಜೀವಕೋಶಗಳ ಮೇಲಿನ ಪರಿಣಾಮ, ಚಿಕಿತ್ಸೆಯ ಸಫಲತೆ ಮತ್ತಿತರ ಅಂಶಗಳನ್ನು ಅಳೆಯಲು ಸಹಸ್ರಾರು ಮಾದರಿಗಳ ಮೇಲೆ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ.  ಅಷ್ಟೊಂದು ಸಂಖ್ಯೆಯ ಮಾದರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿರುವುದಿಲ್ಲ.  ಈ ಕೊರತೆಯನ್ನು ಸದ್ಯದ ಪ್ರಕ್ರಿಯೆಯು ನೀಗಿಸಬಹುದು.  ಬೇಕೆಂದಷ್ಟು ಮಾದರಿಗಳನ್ನು ಪ್ರಯೋಗಶಾಲೆಗಳಲ್ಲಿಯೇ ಸೃಷ್ಟಿಸಿಕೊಳ್ಳಬಹುದು.  ಜತೆಗೆ ಅಧ್ಯಯನದ ಫಲಿತಾಂಶಗಳ ನಿಖರತೆಯನ್ನು ಪರಿಶೀಲಿಸಬಹುದು.&lt;br /&gt; ಇನ್ನೂ ಚಿಕ್ಕದು, ಮತ್ತಷ್ಟು ಚಿಕ್ಕದು .. ಇದು ಸದ್ಯದ ಮಂತ್ರ.  ಯಾವುದೇ ಯಂತ್ರ ಅಥವಾ ಸಾಧನವನ್ನು ಮತ್ತಷ್ಟು ಚಿಕ್ಕದಾಗಿಸುವುದರಿಂದ ಸಾಕಷ್ಟು ಅನುಕೂಲಗಳಿವೆ.  ನಮ್ಮ ದೇಹವೂ ಸೇರಿದಂತೆ ಅನೇಕಾನೇಕ ಸಣ್ಣ ಪುಟ್ಟ ಸ್ಥಳಗಳಲ್ಲಿ ತಪಾಸಣಾ ಯಂತ್ರಗಳನ್ನು ಕಳುಹಿಸಬಹುದು.  ದೇಹದ ಅನೇಕ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬಹುದು.  ಔಷಧಗಳನ್ನು ತಲುಪಿಸಬಹುದು.  ಈ ನಿಟ್ಟಿನಲ್ಲಿ ರೊಬಾಟ್ ವಿಜ್ಞಾನ ಸಾಕಷ್ಟು ಪ್ರಗತಿ ಸಾಧಿಸಿದೆ.  ಕೃತಕವಾಗಿ ರೂಪಿಸುವ ಎಷ್ಟೋ ಯಂತ್ರ ಮಾದರಿಗಳಿಗೆ ನಮ್ಮ ದೇಹದ ಅಂಗಾಂಗಳೇ ಸ್ಫೂರ್ತಿ.  ಅವುಗಳ ಮಾದರಿಯಲ್ಲಿ, ಅವು ನಿರ್ವಹಿಸುವ ಕಾರ್ಯವೈಖರಿಯನ್ನು ಅನುಕರಿಸಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾದರೆ ಸದ್ಯದ ಅನೇಕ ಸಮಸ್ಯೆಗಳು ದೂರವಾಗುತ್ತವೆ.  ಜನ್ಮದತ್ತವಾಗಿಯೇ ಹೃದಯದ ಸ್ನಾಯುಗಳಲ್ಲಿ ನ್ಯೂನತೆಗಳಿದ್ದರೆ ಅದನ್ನಿಂದು ಸರಿಪಡಿಸಬಹುದು.  ಈ ರಿಪೇರಿ ಕಾರ್ಯ ಸಾಧ್ಯವಾದಷ್ಟು ಮಟ್ಟಿಗೆ ಸ್ವಾಭಾವಿಕವಾಗಿರುವಂತೆ ಮಾಡಲು ಸ್ನಾಯುಗಳು ಅತ್ಯವಶ್ಯ. &lt;br /&gt; ಇವೆಲ್ಲಕ್ಕೂ ಮಿಗಿಲಾಗಿ ನಮ್ಮ ಹೃದಯದ ಕಾರ್ಯವೈಖರಿಯನ್ನು ಕೂಲಂಕಷವಾಗಿ ಅರ್ಥ ಮಾಡಿಕೊಳ್ಳಲು ಈ ಬಗೆಯ ಅಧ್ಯಯನಗಳು ನೆರವಾಗುತ್ತವೆ.  ಸ್ನಾಯುವೊಂದು ಬಲಹೀನವಾಗಲು ಕಾರಣಗಳೇನು?  ಅವುಗಳನ್ನು ಸ್ವಾಭಾವಿಕವಾಗಿಯೇ ಸದೃಢಗೊಳಿಸಲು ಏನೆಲ್ಲಾ ಮಾಡಬೇಕು?  ಅದಕ್ಕೆಂದು ಪೂರೈಸುವ ರಾಸಾಯನಿಕಗಳು ಅಥವಾ ಔಷಧಗಳು ದುಷ್ಪರಿಣಾಮಗಳನ್ನು ಬೀರುತ್ತವೆಯೆ? ಅಂಥ ದುಷ್ಪರಿಣಾಮಗಳನ್ನು ತಡೆಗಟ್ಟಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು? ಹೀಗೆ ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳಿಗೆ ಈ ಬಗೆಯ ಅಧ್ಯಯನದಲ್ಲಿ ಉತ್ತರಗಳನ್ನು ಕಂಡುಕೊಳ್ಳಬಹುದು.  ಹೃದಯದ ಸ್ನಾಯುಗಳೂ ಸೇರಿದಂತೆ ದೇಹದ ಅನೇಕ ಭಾಗಗಳನ್ನು ಕೃತಕವಾಗಿ ರೂಪಿಸಲು ನ್ಯಾನೊ ತಂತ್ರಜ್ಞಾನದಂಥ ಮುಂಚೂಣಿ ವಿಜ್ಞಾನ ಶಾಖೆ ನೆರವಾಗಬಲ್ಲದು.  ಅಂಥ ಮಾದರಿಗಳನ್ನು ರೂಪಿಸುವಾಗ ಮೂಲ ವಿನ್ಯಾಸವನ್ನು ಅಭ್ಯಸಿಸಲು ಸದ್ಯದ ಹಾರ್ವರ್ಡ್ ನಿರ್ಮಿತ ಸ್ನಾಯುಗಳು ನೆರವಾಗುತ್ತವೆ.  ಹೃದಯ ಹಾಗೂ ಮಿದುಳಿನ ಕಾರ್ಯಗಳನ್ನು ನೇರ್ಪಡಿಸುವ ಯಾವುದೇ ವಿಜ್ಞಾನ ಸಂಶೋಧನೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತದೆ.  ಅಂತೆಯೇ ಹಾರ್ವರ್ಡ್ ವಿವಿಯ ಸಂಶೋಧಕರುಗಳಿಗೆ ಭಾರಿ ಮೊತ್ತದ ಧನ ಸಹಾಯ ದೊರೆತಿದೆ.  ಎಲ್ಲವೂ ವಿಜ್ಞಾನಿಗಳ ಎಣಿಕೆಯಂತೆ ನಡೆದರೆ, ಹೃದಯವನ್ನು ಮತ್ತಷ್ಟು ಸದೃಢಗೊಳಿಸಬಹುದು.  ಅಂತ ಹೃದಯಗಳು ಮಿದುಳನ್ನು ಮತ್ತಷ್ಟು ಚುರುಕಾಗಿ ಹೆಚ್ಚು ಕಾಲ ಕಾರ್ಯ ನಿರ್ವಹಿಸುವಂತೆ ಮಾಡಬಹುದು.  ಸದ್ಯಕ್ಕೆ ಈ ಬಗೆಯ ಸಂಶೋಧನೆಗಳನ್ನು ಕೈಗೊಳ್ಳುತ್ತಿರುವ ವೈದ್ಯರು, ವಿಜ್ಞಾನಿಗಳು ಹಾಗೂ ತಂತ್ರಜ್ಞರ ಹೃದಯ ಮತ್ತು ಮಿದುಳುಗಳು ಹೆಚ್ಚು ಕಾಲ ಕಾರ್ಯ ನಿರ್ವಹಿಸಲಿ ಎಂದು ಹಾರೈಸೋಣ.  ಅಂಥ ಹಾರೈಕೆಗಳಿಂದ ನಮ್ಮ ಹೃದಯ ಮತ್ತಷ್ಟು ಸುರಕ್ಷವಾದೀತು.         &lt;br /&gt;&lt;br /&gt;&lt;strong&gt;&lt;em&gt;(ಕೃಪೆ: ವಿಜಯ ಕರ್ನಾಟಕ, 10-09-2007)&lt;/em&gt;&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/752423363868781697-8364709319710811989?l=netnota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://netnota.blogspot.com/feeds/8364709319710811989/comments/default' title='Post Comments'/><link rel='replies' type='text/html' href='http://www.blogger.com/comment.g?blogID=752423363868781697&amp;postID=8364709319710811989' title='2 Comments'/><link rel='edit' type='application/atom+xml' href='http://www.blogger.com/feeds/752423363868781697/posts/default/8364709319710811989'/><link rel='self' type='application/atom+xml' href='http://www.blogger.com/feeds/752423363868781697/posts/default/8364709319710811989'/><link rel='alternate' type='text/html' href='http://netnota.blogspot.com/2007/09/blog-post_10.html' title='‘ರೊಬಾಟ್’ ಮಿಡತೆಯ ರೆಕ್ಕೆಯಲ್ಲಿ ನಮ್ಮ ಹೃದಯ ಸ್ನಾಯು?'/><author><name>HNS</name><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_WOq6aPUeAO4/SdR5qYZ87xI/AAAAAAAAAWg/cXIYJSqE8Z4/S220/sudhi1.jpg'/></author><thr:total>2</thr:total></entry><entry><id>tag:blogger.com,1999:blog-752423363868781697.post-5958588057767463630</id><published>2007-09-03T08:02:00.000+05:30</published><updated>2007-09-03T08:10:25.569+05:30</updated><title type='text'>ಬ್ಯಾಟರಿ - ಇನ್ನು ಮುಂದೆ ಅರ್ಧಕ್ಕೇ ಕೈ ಕೊಡೋದಿಲ್ರಿ?</title><content type='html'>&lt;a href="http://2.bp.blogspot.com/_WOq6aPUeAO4/Rttz0keiq2I/AAAAAAAAAOk/6SA3vScRWyw/s1600-h/phone+gauge.jpg"&gt;&lt;img id="BLOGGER_PHOTO_ID_5105801949536758626" style="FLOAT: left; MARGIN: 0px 10px 10px 0px; CURSOR: hand" alt="" src="http://2.bp.blogspot.com/_WOq6aPUeAO4/Rttz0keiq2I/AAAAAAAAAOk/6SA3vScRWyw/s200/phone+gauge.jpg" border="0" /&gt;&lt;/a&gt; &lt;span style="font-size:180%;"&gt;&lt;strong&gt;ಮೊ&lt;/strong&gt;&lt;/span&gt;ಬೈಲ್ ಫೋನ್ ಬಳಕೆದಾರರು ಎದುರಿಸುವ ಅತಿ ದೊಡ್ಡ ಸಮಸ್ಯೆ ಅದಕ್ಕೆ ಶಕ್ತಿ ಪೂರೈಸುವ ಬ್ಯಾಟರಿಯದು. ಯಾವ ಸಮಯದಲ್ಲಿ ದಿಢೀರೆಂದು ಬ್ಯಾಟರಿಗಳು ಕೈಕೊಡುತ್ತದೆಂದು ಊಹಿಸಲಾಗುವುದಿಲ್ಲ. ನಮ್ಮ ಕಾರು, ಸ್ಕೂಟರುಗಳಲ್ಲಿ ಪೆಟ್ರೋಲು ಇನ್ನೆಷ್ಟು ಉಳಿದಿದೆ ಎಂಬ ಅಂದಾಜು ಮಟ್ಟವನ್ನು ಸದಾ ಕಾಲ ನೀಡುವ ವ್ಯವಸ್ಥೆ ಇರುತ್ತದೆ. ಇಂಥದೊಂದು ಸುಲಭ ವ್ಯವಸ್ಥೆಯನ್ನು ನೀವು ರೂಪಿಸಲು ಸಾಧ್ಯವಿಲ್ಲವೆ? ಎಂದು ಬ್ಯಾಟರಿ ತಂತ್ರಜ್ಞರನ್ನೊ ಅಥವಾ ವಿದ್ಯುತ್ ಎಂಜಿನೀರ್‌ಗಳನ್ನೊ ಲೇವಡಿ ಮಾಡಿ ನೋಡಿ. ವಿದ್ಯುತ್ ಆಘಾತಕ್ಕಿಂತಲೂ ಪ್ರಬಲವಾದ ‘ಶಾಕ್’ ಒಂದನ್ನು ಅವರು ನೀಡಲೆತ್ನಿಸುತ್ತಾರೆ - ತಮ್ಮ ಪ್ರವಚನದ ಮೂಲಕ. ಪದೇ, ಪದೇ ಚಾರ್ಜ್ ಮಾಡುವ ಮೂಲಕ ವಿದ್ಯುತ್ ಶಕ್ತಿಯನ್ನು ಕ್ರೋಢೀಕರಿಸಿಕೊಳ್ಳಬಲ್ಲ ಬ್ಯಾಟರಿಗಳು ದೀರ್ಘಾವಧಿ ಕಾರ್ಯನಿರ್ವಹಿಸಬೇಕಾದರೆ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕು. ಅದರಲ್ಲಿ ಸಂಗ್ರಹವಾಗಿರುವ ವಿದ್ಯುತ್ ಶಕ್ತಿಯನ್ನು ಪೂರ್ಣವಾಗಿ ಬಳಸಿದ ನಂತರವೇ ಚಾರ್ಜ್ ಮಾಡಲು ಯತ್ನಿಸಬೇಕು. ಈ ರೀತಿ ಚಾರ್ಜ್ ಮಾಡುವಾಗ ವಿದ್ಯುತ್ ಪೂರೈಕೆಯಲ್ಲಿ ಯಾವ ಅಡೆ ತಡೆಗಳು ಇರಬಾರದು. ಪೂರ್ತಿ ಚಾರ್ಜ್ ಆದ ನಂತರವೇ ವಿದ್ಯುತ್ ಸಂಪರ್ಕದಿಂದ ಹೊರತೆಗೆಯಬೇಕು. ಇತ್ಯಾದಿ. ಸಂಪೂರ್ಣವಾಗಿ ನಿಶ್ಚೇತನವಾಗುವ ತನಕ ಬ್ಯಾಟರಿಯನ್ನು ಬಳಸುವುದು ಅಸಾಧ್ಯ. ಮುಖ್ಯವಾದ ಕರೆಯೊಂದನ್ನು ಮಾಡುತ್ತಿರುವಾಗ ಮೊಬೈಲ್ ಫೋನ್ ಕೈ ಕೊಟ್ಟರೆ, ಹತ್ತಿರದಲ್ಲಿಯೇ ವಿದ್ಯುತ್ ಸಂಪರ್ಕ ಇರದಿರಬಹುದು. ಇದ್ದರೂ ಚಾರ್ಜರ್ ನಿಮ್ಮ ಸಂಗಡ ಇರದಿರಬಹುದು. ಹೀಗಾಗಿ ನಿತ್ಯ ಕೆಲಸ ಆರಂಭಿಸುವ ಮುನ್ನ, ಬ್ಯಾಟರಿಯಲ್ಲಿ ಎಷ್ಟು ವಿದ್ಯುತ್ ಇದೆ ಎಂಬುದನ್ನು ಗಮನಿಸದೆಯೆ, ಮೊಬೈಲ್ ಬಳಕೆದಾರರು ತಮ್ಮ ಬ್ಯಾಟರಿಗಳನ್ನು ಚಾರ್ಜ್ ಮಾಡಿಕೊಳ್ಳುತ್ತಾರೆ. ಇತ್ತ ನಿಯಮಬದ್ಧವಾಗಿ ಚಾರ್ಜ್ ಮಾಡಲು ಪ್ರಯತ್ನಿಸುವವರಿಗೆ ವಿದ್ಯುತ್ ಪೂರೈಕೆಯ ಕಣ್ಣು ಮುಚ್ಚಾಲೆಯ ಕಾಟ. ಒಟ್ಟಿನಲ್ಲಿ ಬ್ಯಾಟರಿ ಬಾಂಧವರ ಕಟ್ಟಳೆಗಳನ್ನು ಯಾರೂ ಪಾಲಿಸಲಾಗುವುದಿಲ್ಲ. ಬ್ಯಾಟರಿಗಳು ಒಂದೆರಡು ವರ್ಷದ ನಂತರ ನಿರುಪಯೋಗಿ ಆಗಲಿ ಬಿಡಿ. ಮತ್ತೊಂದು ಬ್ಯಾಟರಿ ಕೊಂಡರಾಯಿತು. ಆದರೆ ಕಾರು, ಸ್ಕೂಟರುಗಳಲ್ಲಿ ಇನ್ನೆಷ್ಟು ಪೆಟ್ರೋಲ್ ಉಳಿದಿದೆ ಎಂದು ತೋರಿಸುವ ಮೀಟರ್ ಒಂದನ್ನು ಬ್ಯಾಟರಿಗಳಿಗೆ ಹಾಕಿ ಕೊಟ್ಟರೆ ಸಾಕು ಎಂಬುದು ನಿಮ್ಮ ಹಾರೈಕೆ ಅಲ್ಲವೆ?&lt;br /&gt;&lt;div&gt;&lt;br /&gt;ಇದರಲ್ಲೇನು ಹೊಸತು? ನಮ್ಮ ಮೊಬೈಲ್ ಫೋನ್‌ಗಳಲ್ಲಿಯೇ ಒಂದರ ಮೇಲೊಂದು ಅಥವಾ ಒಂದರ ಪಕ್ಕದಲ್ಲೊಂದೊ ಕಡ್ಡಿಗಳ ಸಾಲಿರುತ್ತವೆ. ಅವುಗಳ ಸಂಖ್ಯೆ ಕಡಿಮೆಯಾದಂತೆಲ್ಲ ವಿದ್ಯುತ್ ಸಂಗ್ರಹ ಕಡಿಮೆಯಾಗುತ್ತಿದೆ ಎಂದು ಗೊತ್ತಾಗುತ್ತದೆ. ಇನ್ನು ಲ್ಯಾಪ್‍ಟಾಪ್ ಕಂಪ್ಯೂಟರ್‌ಗಳಲ್ಲಿ, ಅಂಗೈ ಗಣಕಗಳಲ್ಲಿ ತಮ್ಮ ಒಡಲೊಳಗಿರುವ ಬ್ಯಾಟರಿ ಇನ್ನೆಷ್ಟು ಕಾಲ ಕೆಲಸ ಮಾಡಬಲ್ಲದು ಎಂಬ ಸೂಚನೆಯೂ ಸಿಗುತ್ತದೆ. ಹಾಗಿದ್ದರೆ ಸಮಸ್ಯೆಯೇ ಇಲ್ಲ. ಆದರೆ ಈ ಎಲ್ಲ ಅಂದಾಜುಗಳೂ ಅಂದಾಜುಗಳಷ್ಟೇ ಆಗಿರುವುದೇ ಒಂದು ದೊಡ್ಡ ಸಮಸ್ಯೆ. ಉದಾಹರಣೆಗೆ ನಿಮ್ಮ ಮೊಬೈಲ್ ಫೋನಿಗೆ ಕರೆಯೊಂದು ಬಂದಿದೆ. ಮಾತನಾಡುತ್ತಿರುವಂತೆಯೇ ಬ್ಯಾಟರಿ ಶಕ್ತಿ ಕ್ಷೀಣಿಸುತ್ತಾ ಹೋಗುತ್ತದೆ. ಇನ್ನೇನು ಬ್ಯಾಟರಿ ಕೈಕೊಡುತ್ತದೆ ಎಂದು ಕರೆ ಮುಗಿಸಿ ಫೋನ್ ಬಂದ್ ಮಾಡುವಿರಿ, ಕೂಡಲೇ ತನ್ನಲ್ಲಿ ಇನ್ನೊಂದಷ್ಟು ಶಕ್ತಿಯಿದೆ ಎಂಬ ಸೂಚನೆ ಬರುತ್ತದೆ. ಇದಕ್ಕೆ ತದ್ವಿರುದ್ಧವಾಗಿ ನಿಮ್ಮ ಬ್ಯಾಟರಿಯಲ್ಲಿ ಇನ್ನೂ ಶಕ್ತಿಯಿದೆ ಎಂಬ ಸೂಚನೆ ಕಡ್ಡಿಗಳ ಮುಖಾಂತರ ಕಾಣುತ್ತೀರಿ. ಬ್ಯಾಟರಿ ಶಕ್ತಿ ಕಡಿಮೆಯಿದೆ ಎಂಬ ಎಚ್ಚರಿಕೆಯೊಂದಿಗೆ ನಿಮ್ಮ ಮೊಬೈಲ್ ಫೋನ್ ಸ್ವಯಂಚಾಲಿತವಾಗಿ ಬಂದಾಗುತ್ತದೆ. ಅಂದರೆ ಬ್ಯಾಟರಿಯಲ್ಲಿ ವಿದ್ಯುತ್ ಸಂಗ್ರಹಣೆ ಇನ್ನೆಷ್ಟಿದೆ, ಸಂಗ್ರಹವಾಗಿರುವ ಶಕ್ತಿಯನ್ನು ಇನ್ನೆಷ್ಟು ಕಾಲ ಬಳಸಬಹುದು ಎಂಬ ಅಂಶಗಳನ್ನು ನಿಖರವಾಗಿ ಕಂಡುಹಿಡಿಯಲಾಗುವುದಿಲ್ಲ. ಇದಕ್ಕೆ ಕಾರಣ ಬ್ಯಾಟರಿಯ ಶಕ್ತಿ ಸಂಗ್ರಹಣೆಯನ್ನು ಅಳೆಯುವ ಸಾಧನಗಳು ವಿದ್ಯುತ್ ಚಾಲಕ ಶಕ್ತಿ ಅಂದರೆ ವೋಲ್ಟೇಜ್‍ನ ಮಟ್ಟವನ್ನು ಮಾನಕವನ್ನಾಗಿ ಬಳಸುತ್ತವೆ. ವೊಲ್ಟೇಜ್ ಬ್ಯಾಟರಿಯ ಶಕ್ತಿ ಕ್ಷೀಣವಾದಂತೆ ಅದೇ ಅನುಪಾತದಲ್ಲಿ ಇಳಿಯುವುದಿಲ್ಲ. ಉದಾಹರಣೆಗೆ ಮೊಬೈಲ್ ಫೋನ್‍ನಲ್ಲಿ ಕರೆ ಮಾಡಿದೊಡನೆ ಸಂಕೇತಗಳು ರವಾನೆಯಾದಂತೆ ದಿಢೀರೆಂದು ವೋಲ್ಟೇಜ್ ಇಳಿದು ಬಿಡುತ್ತದೆ. ಈ ಇಳಿತವನ್ನು ವಿದ್ಯುತ್ ಶಕ್ತಿಯ ಇಳಿತ ಎಂದು ಗುರುತಿಸುವ ಸಾಮಾನ್ಯ ಅಳತೆಗೋಲು, ವಿದ್ಯುತ್ ಉಳಿತಾಯದ ತಂತ್ರಾಂಶವನ್ನು ಚಾಲನೆಗೊಳಿಸುತ್ತದೆ. ಗಾಭರಿಗೊಳ್ಳುವ ಮಟ್ಟದಲ್ಲಿ ಶಕ್ತಿ ಕ್ಷೀಣಿಸಿದೆ ಎಂದು ತಂತ್ರಾಂಶಕ್ಕೆ ಮನವರಿಕೆಯಾದರೆ, ಮೊಬೈಲ್ ಫೋನ್ ಅನ್ನು ಅದು ಬಂದ್ ಮಾಡುತ್ತದೆ. ಆದರೆ ವೋಲ್ಟೇಜ್‍ನ ಇಳಿಕೆ ಕ್ಷಣಿಕವಾಗಿದ್ದು, ಗಂಭೀರ ಮಟ್ಟದಲ್ಲಿರದಿದ್ದರೆ, ಫೋನಿನಲ್ಲಿ ಮಾತು ಮುಂದುವರಿದಂತೆ ವೋಲ್ಟೇಜ್ ತಹಬಂದಿಗೆ ಬರುತ್ತದೆ. ಬ್ಯಾಟರಿಯ ಬಳಕೆಯ ಅವಧಿಯಲ್ಲಿ ವೋಲ್ಟೇಜ್ ಯದ್ವಾ-ತದ್ವಾ ಏರಿಳಿಯುತ್ತದೆ. ಬ್ಯಾಟರಿಯ ‘ವಯಸ್ಸು’ ಏರಿದಂತೆ ವೋಲ್ಟೇಜ್ ಏರಿಳಿತಗಳೂ ಹೆಚ್ಚು-ಹೆಚ್ಚಾಗುತ್ತವೆ. ಜತೆಗೆ ಬ್ಯಾಟರಿಯ ತಾಪಮಾನವೂ ವೋಲ್ಟೇಜ್‍ನ ಮೇಲೆ ಪರಿಣಾಮ ಬೀರುತ್ತದೆ. ಇವೆಲ್ಲಕ್ಕೂ ಮಿಗಿಲಾಗಿ ಬ್ಯಾಟರಿಯ ವಿದ್ಯುತ್ ಬೇಡಿಕೆಗಳಿಗೆ ಅನುಗುಣವಾಗಿಯೂ ವೋಲ್ಟೇಜ್ ಮಟ್ಟದಲ್ಲಿ ಬದಲಾವಣೆಗಳಾಗುತ್ತವೆ. ಅಂದರೆ ಕೇವಲ ವೋಲ್ಟೇಜ್ ಒಂದನ್ನು ಗುರುತಿಸುವುದರ ಮೂಲಕ ಬ್ಯಾಟರಿಯೊಳಗೆ ಹುದುಗಿರುವ ವಿದ್ಯುತ್ ಪ್ರಮಾಣ ಎಷ್ಟರ ಮಟ್ಟಿಗಿದೆ ಎಂದು ನಿಖರವಾಗಿ ಅಳೆಯಲಾಗದು.&lt;/div&gt;&lt;div&gt;&lt;br /&gt;ಅಮೆರಿಕದ ‘ಟೆಕ್ಸಾಸ್ ಇನ್‍ಸ್ಟ್ರುಮೆಂಟ್ಸ್ - ಟಿ.ಐ.’ ಕಂಪನಿ ನಿಮಗೆ ಗೊತ್ತಿರಬಹುದು. ಬೆಂಗಳೂರಿನಲ್ಲಿ ಆರಂಭವಾದ ಮೊದಲ ವಿದೇಶಿ ಎಲೆಕ್ಟ್ರಾನಿಕ್ಸ್ ಕಂಪನಿಯದು. ನಾವೆಲ್ಲಾ ‘ಐ.ಟಿ. - ಮಾಹಿತಿ ತಂತ್ರಜ್ಞಾನ’ದ ಬಗ್ಗೆ ಹೆಚ್ಚಿನ ಅರಿವು ಮೂಡಿಸಿಕೊಳ್ಳುವ ಮುನ್ನವೇ ‘ಐ.ಟಿ.’ ಶಕೆಯನ್ನು ಬೆಂಗಳೂರಿಗೆ ತಂದ ಕೀರ್ತಿ ‘ಟಿ.ಐ.’ನದು. ಕಂಪ್ಯೂಟರ್ ಸೇರಿದಂತೆ ಎಲೆಕ್ಟ್ರಾನಿಕ್ಸ್‍ಗೆ ಸಂಬಂಧಿಸಿದ ಯಂತ್ರಾಂಶ ಹಾಗೂ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ‘ಟಿ.ಐ.’ನದು ಎತ್ತಿದ ಕೈ. ಈ ಕಂಪನಿಯು ಸದ್ಯಕ್ಕೆ ಮೊಬೈಲ್ ಫೋನ್ ಬ್ಯಾಟರಿಗಳಲ್ಲಿ ಉಳಿದಿರುವ ವಿದ್ಯುತ್ ಶಕ್ತಿಯನ್ನು ನಿಖರವಾಗಿ ಗುರುತಿಸಬಲ್ಲ ‘ಕಂಪ್ಯೂಟರ್ ಚಿಪ್’ ಒಂದನ್ನು ಅಭಿವೃದ್ಧಿಪಡಿಸಿದೆ. ಬ್ಯಾಟರಿಯಲ್ಲಿ ಹುದುಗಿರುವ ವಿದ್ಯುತ್ ಶಕ್ತಿಯನ್ನು ನಿಖರವಾಗಿ ಗುರುತಿಸಲು ಇದರಲ್ಲಿ ಕೇವಲ ವೋಲ್ಟೇಜ್ ಒಂದನ್ನು ಮಾತ್ರ ಅಳತೆ ಮಾಡುವುದಿಲ್ಲ. ಅದು ಅತಿ ಮುಖ್ಯ ವಿದ್ಯುತ್ ಗುಣ ಲಕ್ಷಣವಾದ ‘ಇಂಪಿಡೆನ್ಸ್’ ಅನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಈ ‘ಇಂಪಿಡೆನ್ಸ್’ ಅಂದರೆ ವಿದ್ಯುತ್ ಹರಿದಾಟಕ್ಕೆ ಎದುರಾಗುವ ಪ್ರತಿರೋಧದ ಅಳತೆ. ‘ಇಂಪಿಡೆನ್ಸ್’ ಬ್ಯಾಟರಿಯೊಂದರ ವಯಸ್ಸು, ತಾಪಮಾನ, ಹಾಗೂ ಬ್ಯಾಟರಿಯೊಂದಕ್ಕೆ ಎದುರಾಗುವ ವಿದ್ಯುತ್ ಬೇಡಿಕೆಗಳ ಮೇಲೆ ಅವಲಂಬಿತವಾಗಿರುತ್ತದೆ. ‘ಟಿ.ಐ.’ ಅಭಿವೃದ್ಧಿ ಪಡಿಸಿರುವ ಚಿಪ್‍ನಲ್ಲಿ ‘ಇಂಪಿಡೆನ್ಸ್’ ಅನ್ನು ಗಣನೆಗೆ ತೆಗೆದುಕೊಂಡು ‘ವಿದ್ಯುತ್ ಚಾಲಕ ಶಕ್ತಿ - ವೋಲ್ಟೇಜ್’ ಅನ್ನು ಅಳೆಯಲಾಗುತ್ತದೆ. ಹೀಗೆ ಮರು ಲೆಕ್ಕಾಚಾರ ಹಾಕಿದ ವೋಲ್ಟೇಜ್ ಮೂಲಕ ರೂಪಿಸಿದ ಅಳತೆಗೋಲು ಬ್ಯಾಟರಿಯ ಶಕ್ತಿ ಸಾಮರ್ಥ್ಯವನ್ನು ಬಹುತೇಕ ಸರಿಯಾಗಿ ನಿರ್ಧರಿಸುತ್ತದೆ.&lt;/div&gt;&lt;div&gt;&lt;br /&gt;ಹೀಗೆ ಹೊಸತಾಗಿ ನಿರ್ಮಿಸಲಾದ ಕಂಪ್ಯೂಟರ್ ಚಿಪ್ ಅನ್ನು ಮೊಬೈಲ್ ಫೋನಿನ ವಿದ್ಯುನ್ಮಾನ ಮಂಡಲಕ್ಕೆ ನೇರವಾಗಿ ಜೋಡಣೆ ಮಾಡಬಹುದು, ಇಲ್ಲವೆ ಬ್ಯಾಟರಿಗೇ ಹೊಂದಿಸಿಡಬಹುದು. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದೊಡನೆಯೆ ಅದರಲ್ಲಿ ಎಷ್ಟು ಶಕ್ತಿ ಸಂಚಯನೆಯಾಗಿದೆ ಎಂದು ಮೊದಲು ಗುರುತಿಸಿಕೊಳ್ಳುತ್ತದೆ. ಇದರ ಆಧಾರದ ಮೇಲೆ ಕಾಲಕ್ರಮೇಣ ಬ್ಯಾಟರಿಯಲ್ಲಿ ಶಕ್ತಿಯ ಬಳಕೆ ಹೇಗೆ ಸಾಗಿದೆ ಎಂದು ಗಮನಿಸುತ್ತಿರುತ್ತದೆ. ಒಮ್ಮೆಲೆ ವೋಲ್ಟೇಜ್ ಇಳಿಕೆಯಾದರೆ ಅದಕ್ಕೆ ಕಾರಣವೇನು ಎಂಬುದನ್ನು ತಕ್ಷಣವೇ ಗುರುತಿಸಿ, ತಕ್ಷಣದ ಇಳಿಕೆಯನ್ನು ಗಮನಕ್ಕೆ ತೆಗೆದುಕೊಳ್ಳದೆಯೆ ಉಳಿದ ಶಕ್ತಿಯು ಎಷ್ಟು ಕಾಲ ಬಳಕೆಗೆ ಬರಬಹುದು ಎಂದು ಲೆಕ್ಕ ಹಾಕುತ್ತದೆ. ಈ ಹಿಂದೆ ನಿರ್ಮಿಸಿದ ಯಾವುದೇ ಅಳತೆಗೋಲುಗಳು ಇಂಥ ಲೆಕ್ಕಾಚಾರಗಳನ್ನು ಹಾಕಲು ಸಾಮರ್ಥ್ಯ ಹೊಂದಿರಲಿಲ್ಲ. ‘ಮೋಟರೋಲ’ ಎಂಬ ಮೊಬೈಲ್ ಫೋನ್ ತಯಾರಿಕಾ ಕಂಪನಿಯ ಬಗ್ಗೆ ನಿಮಗೆ ತಿಳಿದಿರಬಹುದು. ಅಮೆರಿಕದ ಈ ಕಂಪನಿಯೂ ಸಹಾ ಬ್ಯಾಟರಿಯಲ್ಲಿ ಇನ್ನೆಷ್ಟು ಶಕ್ತಿ ಉಳಿದಿದೆ ಎಂದು ನಿಖರವಾಗಿ ಲೆಕ್ಕ ಹಾಕಬಲ್ಲ ಚಿಪ್ ಒಂದನ್ನು ನಿರ್ಮಿಸುತ್ತಿದೆ. ಇತ್ತ ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲಿ ಜಗನ್ಮಾನ್ಯವಾಗಿರುವ ‘ಇಂಟೆಲ್’ ಕಂಪನಿಯ ಧನ ಸಹಾಯದಿಂದ ರೂಪುಗೊಂಡಿರುವ ವಿದ್ಯುನ್ಮಾನ ಕಂಪನಿ ‘ಪವರ್ ಪ್ರಿಸೈಸ್’ ಕೂಡಾ ಬ್ಯಾಟರಿ ಶಕ್ತಿ ಎಷ್ಟಿದೆ ಎಂದು ಕಂಡು ಹಿಡಿಯಬಲ್ಲ ಚಿಪ್ ಅನ್ನು ವಿನ್ಯಾಸಗೊಳಿಸುತ್ತಿದೆ. ಒಂದು ನಿರ್ದಿಷ್ಟ ತಯಾರಿಕೆ ಹಾಗೂ ವಿನ್ಯಾಸದ ಬ್ಯಾಟರಿಯಲ್ಲಿ ವಿದ್ಯುತ್ ಹರಿದಾಟ, ಚಾಲಕ ಶಕ್ತಿಯ ಕ್ಷೀಣಿಸುವಿಕೆ ಮುಂತಾದ ಗಮನಾರ್ಹ ಗುಣಲಕ್ಷಣಗಳು ಕಾಲಕ್ರಮೇಣ ಹೇಗೆ ಬದಲಾಗುತ್ತದೆ? ಈ ಬದಲಾವಣೆಗಳು ಬ್ಯಾಟರಿಯೊಂದರ ಕಾರ್ಯಕ್ಷಮತೆಯ ಮೇಲೆ ಯಾವ ಪರಿಣಾಮಗಳನ್ನು ಬೀರುತ್ತವೆ? ಮುಂತಾದ ಅಂಶಗಳನ್ನು ನಿರ್ಧರಿಸಲು ಈ ಕಂಪನಿಗಳು ಬಹು ದೊಡ್ಡ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸುತ್ತಿವೆ. ಅವುಗಳೆಲ್ಲದರ ಫಲಿತಾಂಶಗಳನ್ನು ಕ್ರೋಢೀಕರಿಸಿ ವಿಶ್ಲೇಷಣೆ ನಡೆಸುವ ಕಾರ್ಯವೂ ಸಾಗುತ್ತಿದೆ. ಒಟ್ಟಾರೆ ಬ್ಯಾಟರಿಯೊಂದು ಕಾರ್ಯಾಚರಣೆ ನಡೆಸುವಾಗ ಅದರೊಳಗಿನ ಶಕ್ತಿ ವ್ಯಯವಾಗುವ ಬಗೆಯನ್ನು ಸಾಧ್ಯವಾದಷ್ಟೂ ನಿಖರವಾಗಿ ಗುರುತಿಸುವ, ಈ ಗುರುತಿಸುವಿಕೆಯನ್ನು ಮಾಪಕವೊಂದರ ಮೂಲಕ ಅಳೆಯುವ, ಅಳೆದ ನಂತರ ಸಾಮಾನ್ಯರೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವಂತೆ ಸೂಚನೆಗಳನ್ನು ನೀಡುವ ವ್ಯವಸ್ಥೆಯೊಂದನ್ನು ರೂಪಿಸಲಾಗುತ್ತಿದೆ. ಎಲ್ಲವೂ ಎಣಿಕೆಯಂತೆ ನಡೆದರೆ ಇನ್ನು ಎರಡು ಅಥವಾ ಮೂರು ವರ್ಷಗಳಲ್ಲಿ ನಮ್ಮ ಮೊಬೈಲ್ ಫೋನ್‍ಗಳ ಬ್ಯಾಟರಿ ತೊಂದರೆಗಳು ನಿವಾರಣೆಯಾದೀತೆಂಬ ನಿರೀಕ್ಷೆಯಿದೆ. &lt;/div&gt;&lt;div&gt;&lt;br /&gt;ಎಲ್ಲೆಂದರಲ್ಲಿ ಕೊಂಡೊಯ್ಯಬಹುದಾದ ಗಣಕ ಯಂತ್ರ, ಹತ್ತು ಹಲವಾರು ಬಗೆಯ ಸಂಪರ್ಕ ಹಾಗೂ ಮನರಂಜನಾ ಸಾಧನಗಳಿಗೆ ಬ್ಯಾಟರಿಗಳೇ ಜೀವಾಳ. ಪ್ರಸ್ತುತ ತಂತ್ರಜ್ಞಾನದಲ್ಲಿ ಅದೆಷ್ಟೇ ಪುಟ್ಟದಾದ, ಅತ್ಯುತ್ತಮ ಕಾರ್ಯಕ್ಷಮತೆಯ, ಅತ್ಯುನ್ನತ ಗುಣಮಟ್ಟದ ವಿದ್ಯುನ್ಮಾನ ಸಾಧನಗಳನ್ನು ನಿರ್ಮಿಸಬಹುದು. ಆದರೆ, ಅವುಗಳೆಲ್ಲದರ ಅಭಿವೃದ್ಧಿಗೆ ಮಿತಿಯೊಡ್ಡಿರುವುದು ಸೂಕ್ತ ಬ್ಯಾಟರಿಯ ಲಭ್ಯತೆ. ಅಂತೆಯೇ ಬ್ಯಾಟರಿ ವಿನ್ಯಾಸಗೊಳಿಸುವವರ ಹಾಗೂ ಉತ್ಪಾದಕರ ಮುಂದೆ ಬಹು ದೊಡ್ಡ ಸವಾಲು ಕಾದಿದೆ. ಬ್ಯಾಟರಿಗಳು ಅಗ್ಗವಾಗಿರಬೇಕು, ಪುಟ್ಟದಾಗಿರಬೇಕು, ಹೆಚ್ಚು ವಿದ್ಯುತ್ ಶಕ್ತಿಯನ್ನು ಶೇಖರಿಸಿಟ್ಟುಕೊಳ್ಳಬೇಕು, ಹೆಚ್ಚು ಕಾಲ ಬಾಳಿಕೆ ಬರಬೇಕು, ಕಾರ್ಯಕ್ಷಮತೆ ಉತ್ತಮವಾಗಿರಬೇಕು, ಸುಲಭವಾಗಿ ಚಾರ್ಜ್ ಮಾಡುವಂತಿರಬೇಕು ... ಹೀಗೆ ಹತ್ತು ಹಲವಾರು ಗುಣಲಕ್ಷಣಗಳ ಅಭಿವೃದ್ಧಿಯತ್ತ ಅವರೆಲ್ಲರ ಗಮನ ಹರಿದಿದೆ. ಇವುಗಳ ಜತೆಗೆ ಸೇರಿರುವ ಮತ್ತೊಂದು ಸವಾಲೆಂದರೆ ನಮ್ಮ ಕಾರು, ಸ್ಕೂಟರುಗಳಲ್ಲಿನ ಬಾಕಿ ಇಂಧನದ ಅಳತೆಯನ್ನು ತೋರಿಸುವ ಮೀಟರ್‌ನಂತೆಯೇ ಕಾರ್ಯನಿರ್ವಹಿಸಬಲ್ಲ ಅಳತೆಗೋಲೊಂದರ ಸೃಷ್ಟಿ. &lt;/div&gt;&lt;div&gt;&lt;br /&gt;ಈ ನಿಟ್ಟಿನಲ್ಲಿ ಉತ್ತಮ ಪ್ರಗತಿ ಸಾಧಿಸಿರುವ ‘ಟಿ.ಐ.’ನ ಬ್ಯಾಟರಿ ವಿದ್ಯುನ್ಮಾನ ಮಂಡಲಗಳ ವಿನ್ಯಾಸಗಾರರಾರದ ರಿಚರ್ಡ್ ಡೆಲ್‍ರೊಸ್ಸಿ ಅವರು ಹೇಳುವಂತೆ ‘ಸದ್ಯಕ್ಕೆ ಬಳಕೆಯಲ್ಲಿರುವ ಬ್ಯಾಟರಿಗಳಲ್ಲಿ ಪ್ರತಿಶತ ಮೂವತ್ತರಷ್ಟು ಶಕ್ತಿ ಉಳಿದಿರುವಾಗಲೇ ಬಹುತೇಕ ಮೊಬೈಲ್ ಫೋನ್‍ಗಳಿಗೆ ಶಕ್ತಿ ಕ್ಷೀಣವಾಗಿದೆ ಎಂಬ ತಪ್ಪು ಸಂದೇಶ ರವಾನೆಯಾಗಿ, ಕಾರ್ಯಾಚರಣೆ ನಿಂತು ಹೋಗುತ್ತಿದೆ. ಇದರಿಂದಾಗಿ ಪೂರ್ತಿ ಖಾಲಿಯಾಗದ ಬ್ಯಾಟರಿಗಳನ್ನು ಬಳಕೆದಾರರು ಚಾರ್ಜ್ ಮಾಡಲು ಹೋಗುತ್ತಿದ್ದಾರೆ. ಬ್ಯಾಟರಿಗಳ ಆಯಸ್ಸಿನ ಮೇಲೆ ಇಂಥ ಆವರ್ತನೆಯ ಕಾರ್ಯ ಚಟುವಟಿಕೆಗಳು ದುಷ್ಪರಿಣಾಮ ಬೀರುತ್ತವೆ. ಜತೆಗೆ ಮೂರನೆಯ ಒಂದು ಭಾಗದಷ್ಟು ಶಕ್ತಿ ಸದಾ ಕಾಲ ಬಳಕೆಗೆ ಲಭ್ಯವಾಗುವುದಿಲ್ಲ’ ಎನ್ನುತ್ತಾರೆ. ಶಕ್ತಿ ಬಳಕೆಯ ಸಮರ್ಥ ನಿರ್ವಹಣೆಯಿಂದ ಬ್ಯಾಟರಿಗಳ ಬಳಕೆಯನ್ನು ಕನಿಷ್ಟವೆಂದರೂ ಪ್ರತಿಶತ ಐವತ್ತರಿಂದ ನೂರರಷ್ಟು ಹೆಚ್ಚಾಗಿಸಬಹುದು. ಜತೆಗೆ ಅಳತೆಗೋಲಿನ ಗ್ರಹಿಕೆಯ ದೋಷದ ಪ್ರಮಾಣ ಪ್ರತಿಶತ ಒಂದಕ್ಕೂ ಕಡಿಮೆಯಾಗಿಸಬಹುದು. ಈ ಬಗ್ಗೆ ರಿಚರ್ಡ್ ಅವರನ್ನು ಯಾರೇ ಪ್ರಶ್ನಿಸಲಿ, ಅವರು ನೀಡುವ ಉತ್ತರ "ಇನ್ನು ಮುಂದೆ ‘ನೋ ವರಿ’ ಬ್ಯಾಟರಿಗಳು ಸೃಷ್ಟಿಯಾಗತ್ರಿ"! &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;strong&gt;&lt;em&gt;(ಕೃಪೆ: ವಿಜಯ ಕರ್ನಾಟಕ; 03-09-2007)&lt;/em&gt;&lt;/strong&gt; &lt;/div&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/752423363868781697-5958588057767463630?l=netnota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://netnota.blogspot.com/feeds/5958588057767463630/comments/default' title='Post Comments'/><link rel='replies' type='text/html' href='http://www.blogger.com/comment.g?blogID=752423363868781697&amp;postID=5958588057767463630' title='0 Comments'/><link rel='edit' type='application/atom+xml' href='http://www.blogger.com/feeds/752423363868781697/posts/default/5958588057767463630'/><link rel='self' type='application/atom+xml' href='http://www.blogger.com/feeds/752423363868781697/posts/default/5958588057767463630'/><link rel='alternate' type='text/html' href='http://netnota.blogspot.com/2007/09/blog-post.html' title='ಬ್ಯಾಟರಿ - ಇನ್ನು ಮುಂದೆ ಅರ್ಧಕ್ಕೇ ಕೈ ಕೊಡೋದಿಲ್ರಿ?'/><author><name>HNS</name><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_WOq6aPUeAO4/SdR5qYZ87xI/AAAAAAAAAWg/cXIYJSqE8Z4/S220/sudhi1.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_WOq6aPUeAO4/Rttz0keiq2I/AAAAAAAAAOk/6SA3vScRWyw/s72-c/phone+gauge.jpg' height='72' width='72'/><thr:total>0</thr:total></entry><entry><id>tag:blogger.com,1999:blog-752423363868781697.post-8889332382805319640</id><published>2007-08-27T11:00:00.000+05:30</published><updated>2007-08-27T11:10:01.368+05:30</updated><title type='text'>ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?</title><content type='html'>&lt;span style="font-size:180%;"&gt;&lt;strong&gt;‘ಶ&lt;/strong&gt;&lt;/span&gt;ಕ್ತ ರಾಷ್ಟ್ರವನ್ನಷ್ಟೇ ಮತ್ತೊಂದು ಶಕ್ತ ರಾಷ್ಟ್ರ ಗೌರವಿಸುತ್ತದೆ’. ಇದು ನಮ್ಮ ರಾಷ್ಟ್ರಪತಿಗಳಾಗಿದ್ದ ವಿಜ್ಞಾನಿ ಅಬ್ದುಲ್ ಕಲಾಮ್ ಸದಾ ಹೇಳುತ್ತಿದ್ದ ಮಾತು. ಇಲ್ಲಿ ಶಕ್ತಿ ಎಂದರೆ ಕೇವಲ ಮಿಲಿಟರಿ ಪ್ರಾಬಲ್ಯವಲ್ಲ, ದೇಶದ ಆರ್ಥಿಕ ಚೈತನ್ಯ, ವಿದ್ಯುತ್ ಶಕ್ತಿ ಉತ್ಪಾದಿಸುವ ಸಾಮರ್ಥ್ಯ, ಆಹಾರ ಸ್ವಾವಲಂಬನೆ, ಬೌದ್ಧಿಕ ಸಂಪತ್ತು ಜತೆಗೆ ಯುವ ಜನ ಸಂಪನ್ಮೂಲ ಎಲ್ಲವೂ ಸೇರಿರುತ್ತದೆ. ಅವರ ಒಂದು ಅಂದಾಜಿನಂತೆ ಕ್ರಿ.ಶ.2020ರ ಹೊತ್ತಿಗೆ ಇಡೀ ಜಗತ್ತಿನಲ್ಲಿ ಭಾರತ ಮೊದಲ ಮೂರು ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಿರುತ್ತದೆ. ಮೂರರಲ್ಲಿ ಉಳಿದ ಎರಡು ರಾಷ್ಟ್ರಗಳೆಂದರೆ ಅಮೆರಿಕ ಹಾಗೂ ಚೀನಾ. ಸ್ಥಾನ ಯಾವುದೇ ಇರಲಿ, ಕ್ರಿ.ಶ.2020ರ ಸಮಯಕ್ಕೆ ಭಾರತ ಎದುರಿಸಬಹುದಾದ ಅತಿ ದೊಡ್ಡ ಸಮಸ್ಯೆ ವಿದ್ಯುತ್ ಶಕ್ತಿಯದು. ಈ ನಿಟ್ಟಿನಲ್ಲಿ ಚೀನಾ ದೇಶಕ್ಕೂ ಹೆಚ್ಚಿನ ಮಟ್ಟದಲ್ಲಿ ವಿದ್ಯುತ್ ಅಗತ್ಯವಿರುತ್ತದೆ.&lt;br /&gt;&lt;br /&gt;&lt;div&gt;&lt;/div&gt;&lt;div&gt;ಜಾಗತಿಕವಾಗಿ ಕ್ರಿ.ಶ.2025ರ ಹೊತ್ತಿಗೆ ಇಂದಿಗಿಂತಲೂ ಒಂದೂವರೆ ಪಟ್ಟು ಹೆಚ್ಚು ವಿದ್ಯುತ್ ಬೇಕೆಂಬ ಅಂದಾಜು ವಿಶ್ವ ಸಂಸ್ಥೆಯದು. ಇನ್ನು ಮುಂದೆ ಮೊಗೆದಂತೆಲ್ಲಾ ಕಚ್ಛಾ ಪೆಟ್ರೋಲಿಯಂ ತೈಲ ಸಿಗದಿರಬಹುದು. ಸಿಕ್ಕರೂ ಪೆಟ್ರೋಲಿಯಂ ಆಧರಿತ ಇಂಧನಗಳನ್ನು ಉರಿಸುವುದರಿಂದ ಪರಿಸರಕ್ಕೆ ಭಾರಿ ಮಟ್ಟದಲ್ಲಿ ಧಕ್ಕೆಯುಂಟಾಗುತ್ತದೆ. ಜಲ ವಿದ್ಯುತ್ ಕೇಂದ್ರಗಳಿಗೆ ನೀರಿನ ಬರ, ಮುಳುಗಿಸಲು ಕಾಡುಗಳೇ ಇಲ್ಲ. ಕಲ್ಲಿದ್ದಿಲಿನ ನಿಕ್ಷೇಪವೂ ಬರಿದಾಗುತ್ತಿದೆ, ಜತೆಗೆ ಕಲ್ಲಿದ್ದಲು ವಿದ್ಯುದಾಗಾರಗಳ ವಿರುದ್ಧ ಪರಿಸರ ಪ್ರೇಮಿಗಳ ಆಕ್ರೋಶವೂ ಹೆಚ್ಚಾಗುತ್ತಿದೆ. ಇನ್ನು ಪರಮಾಣು ವಿದ್ಯುತ್ ಸ್ಥಾವರಗಳ ಬಗ್ಗೆಯಂತೂ ಮಾತನಾಡುವ ಹಾಗೇ ಇಲ್ಲ. ಅಸಾಂಪ್ರದಾಯಿಕ ಮೂಲಗಳಿಂದ ಅಂದರೆ ಗಾಳಿ, ಸಮುದ್ರದಲೆ, ಸೌರಶಾಖ ಇತ್ಯಾದಿಗಳ ನೆರವಿನಿಂದ ವಿದ್ಯುತ್ ಉತ್ಪಾದನೆ ಅಷ್ಟು ಲಾಭದಾಯಕವಾಗಿಲ್ಲ. ಸಂಸ್ಥಾಪನೆಗೇ ಅಗಾಧ ಪ್ರಮಾಣದಲ್ಲಿ ಹಣ ವೆಚ್ಚ ಮಾಡಬೇಕು. ಚಂದ್ರನಲ್ಲಿ ಇರಬಹುದಾದ ಶುದ್ಧ ಇಂಧನ ಹೀಲಿಯಂ ಅನಿಲದ ನಿಕ್ಷೇಪವನ್ನು ಭೂಮಿಗೆ ಹೊತ್ತುಕೊಂಡು ಬರುವ ದಿನ ಬಹು ದೂರವಿದೆ. ವಿದ್ಯುತ್ ಬೇಡಿಕೆ ಹಾಗೂ ಪೂರೈಕೆಯ ಕತೆ ನಿಜಕ್ಕೂ ‘ಆಘಾತ -ಶಾಕ್’ ಮುಟ್ಟಿಸುವಂಥದು. &lt;/div&gt;&lt;div&gt;&lt;br /&gt;ಹಾಗೆಂದ ಮಾತ್ರಕ್ಕೆ ನಿರಾಸೆ ಪಡಬೇಕಿಲ್ಲ. ಜಗತ್ತಿನಾದ್ಯಂತ ವಿಜ್ಞಾನಿಗಳು ವಿದ್ಯುತ್ ಉತ್ಪಾದನೆಯ ಬದಲಿ ಮೂಲಗಳನ್ನು ಅರಸುತ್ತಲೇ ಇರುತ್ತಾರೆ. ಈ ನಿಟ್ಟಿನಲ್ಲಿ ಸಂಶೋಧನೆ ನಡೆಸುವವರಿಗೆ ಸದಾ ಹಣದ ಹೊಳೆ ಹರಿಯುತ್ತದೆ. ಹೀಗೆ ಹುಟ್ಟಿದ್ದೇ ಜೈವಿಕ ಮೂಲಗಳಿಂದ ಈಥೈಲ್ ಆಲ್ಕೋಹಾಲ್ ಹಾಗೂ ಡೀಸಲ್ ಉತ್ಪಾದಿಸುವ ತಂತ್ರಜ್ಞಾನ. ಮುಸುಕಿನ ಜೋಳ ಅಥವಾ ಕಬ್ಬಿನಿಂದ ಈಥೈಲ್ ಆಲ್ಕೋಹಾಲ್ ಉತ್ಪಾದಿಸುವ, ಹೀಗೆ ಉತ್ಪಾದನೆಯಾದ ಈಥೈಲ್ ಆಲ್ಕೋಹಾಲ್ ಅನ್ನು ಪೆಟ್ರೋಲ್‍ನೊಂದಿಗೆ ಸೂಕ್ತ ಪ್ರಮಾಣದಲ್ಲಿ ಬೆರೆಸಿ ಬಳಸುವ ಪದ್ಧತಿ ಆರಂಭವಾಯಿತು. ಆಹಾರ ಬೆಳೆಗಳನ್ನು ಇಂಧನಕ್ಕಾಗಿ ಈ ರೀತಿ ದುರುಪಯೋಗ ಮಾಡುವುದು ತರವಲ್ಲ ಎಂಬ ಕೂಗೂ ಎದ್ದಿತು. ಜತೆಗೆ ಜೈವಿಕ ಇಂಧನದ ಬೆಲೆ ನೈಸರ್ಗಿಕವಾಗಿ ಸಂಸ್ಕರಿಸಿದ ಇಂಧನಕ್ಕಿಂತ ತುಟ್ಟಿ. ಇದರ ಬದಲು ಇಂಗಾಲ ಹಾಗೂ ಜಲಜನಕ ಹೇರಳವಾಗಿರುವ ಜೈವಿಕ ವಸ್ತುಗಳಿಂದ ನೇರವಾಗಿ ಪೆಟ್ರೋಲ್ ಅಥವಾ ಡೀಸಲ್ ಅನ್ನು ಉತ್ಪಾದಿಸುವ ಬಗ್ಗೆ ಯೋಚಿಸುತ್ತಿದ್ದಾಗ ವಿಜ್ಞಾನಿಗಳ ಗಮನಕ್ಕೆ ಬಂದದ್ದು ಸೂಕ್ಷ್ಮಾಣುಜೀವಿಗಳು. ಬಹುತೇಕ ಸೂಕ್ಷ್ಮಾಣುಜೀವಿಗಳು ಗ್ಲುಕೋಸ್ ಅನ್ನು ಅಣುಗಳ ರೂಪದಲ್ಲಿ ಶಕ್ತಿ ಸಂಗ್ರಹಿಸುವ ಫ್ಯಾಟಿ ಆಸಿಡ್ ಅನ್ನಾಗಿ ಮಾರ್ಪಡಿಸಬಲ್ಲದು. ಜೀವಿಗಳ ಗುಣಾವಗುಣಗಳನ್ನು ನಿರ್ಧರಿಸುವ ‘ಜೀನ್ - ಗುಣಾಣು’ ಗೊತ್ತಲ್ಲ? ಜೈವಿಕ ತಂತ್ರಜ್ಞಾನ ಅಭಿವೃದ್ಧಿಯಾದಂತೆ ಒಂದು ಜೀವಿಯ ‘ಜೀನ್’ ಅನ್ನು ಮತ್ತೊಂದು ಜೀವಿಯೊಳಗೆ ಕಸಿ ಮಾಡಿ ಕೂಡಿಸುವ ಕಲೆ ಇದೀಗ ಕರಗತವಾಗಿದೆ. ಹಾಗಿದ್ದಲ್ಲಿ ಸೂಕ್ತ ‘ಜೀನ್’ ಮಾರ್ಪಾಡುಗಳೊಂದಿಗೆ ಸೂಕ್ಷ್ಮಾಣುಜೀವಿಗಳನ್ನು ನೇರವಾಗಿ ಪೆಟ್ರೋಲ್ ಅಥವಾ ಡೀಸಲ್ ಅನ್ನು ಉತ್ಪಾದಿಸುವಂತೆ ಮಾಡಬಹುದು.&lt;/div&gt;&lt;div&gt;&lt;br /&gt;&lt;a href="http://3.bp.blogspot.com/_WOq6aPUeAO4/RtJiNEeiq0I/AAAAAAAAAOU/IIO10vj4oYo/s1600-h/David_Berry_x220.jpg"&gt;&lt;img id="BLOGGER_PHOTO_ID_5103249304443857730" style="FLOAT: left; MARGIN: 0px 10px 10px 0px; CURSOR: hand" alt="" src="http://3.bp.blogspot.com/_WOq6aPUeAO4/RtJiNEeiq0I/AAAAAAAAAOU/IIO10vj4oYo/s200/David_Berry_x220.jpg" border="0" /&gt;&lt;/a&gt;ಈ ಬಗ್ಗೆ ಸತತವಾಗಿ ಸಂಶೋಧನೆ ನಡೆಸುತ್ತಿರುವ ವಿಜ್ಞಾನಿಯ ಹೆಸರು ಡೇವಿಡ್ ಬೆರ್ರಿ. ಇವರು ಅಮೆರಿಕದ ‘ಮೆಸಾಶ್ಯುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ - ಎಂ.ಐ.ಟಿ.’ ಇಂದ ಡಾಕ್ಟರೇಟ್ ಪಡೆದವರು. ಇದಕ್ಕೂ ಮುನ್ನ ವೈದ್ಯಕೀಯ ವಿಜ್ಞಾನದಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಎಂ.ಡಿ. ಪದವಿ ಪುರಸ್ಕೃತರು. ಇದಕ್ಕೂ ಮುನ್ನ ಕೇವಲ ಏಳು ವರ್ಷಗಳಷ್ಟು ಹಿಂದೆಯಷ್ಟೇ ಎಂ.ಐ.ಟಿ.ಯಿಂದ ಪದವಿಯನ್ನು ಪಡೆದುಕೊಂಡವರು. ಇವರ ಸಂಶೋಧನಾ ಕ್ಷೇತ್ರಗಳ ವ್ಯಾಪ್ತಿ ಬಹು ದೊಡ್ಡದು. ಇಪ್ಪತ್ತೊಂದಕ್ಕೂ ಹೆಚ್ಚಿನ ಸಂಖ್ಯೆಯ ಅಂತಾರಾಷ್ಟ್ರೀಯ ಪೇಟೆಂಟ್‍ಗಳನ್ನು (ತಂತ್ರಜ್ಞಾನ ಸ್ವಾಮ್ಯ) ಹೆಗಲಿಗೇರಿಸಿಕೊಂಡಿರುವ ಬೆರ್ರಿ ಅವರ ಆಸಕ್ತಿಗಳನ್ನು ಅರಿಯಲು ಹೊರಟರೆ ಬೆರಗು ಹುಟ್ಟಿಸುತ್ತದೆ. ನಿರ್ದಿಷ್ಟ ಚಿಕಿತ್ಸೆಗಳಿಗೆಂದು ರೂಪಿಸಿದ ಔಷಧಗಳು, ತಪಾಸಣಾ ಸಾಧನಗಳು, ಹಾಗೂ ಸದ್ಯಕ್ಕೆ ಬದಲಿ ಇಂಧನ ತಯಾರಿಕಾ ವಿಧಾನಗಳು. ಪಾರ್ಶ್ವವಾಯು ಚಿಕಿತ್ಸೆಗೆ ನೆರವಾಗುವ ಮಿದುಳಿನಲ್ಲಿನ ರಕ್ತತಡೆಗೋಡೆಗಳನ್ನು ಬೇಧಿಸಬಲ್ಲ ಔಷಧಗಳನ್ನು ರೂಪಿಸಿದ್ದಾರೆ. ಇದಕ್ಕಾಗಿ ಇವರು ಜೀನ್‍ಗಳಲ್ಲಿ ಹುದುಗಿರುವ ಪ್ರೊಟೀನ್ ಅನ್ನು ಸೆರೆಹಿಡಿದು ಅಗತ್ಯಕ್ಕೆ ತಕ್ಕಂತೆ ಅದನ್ನು ಮಾರ್ಪಡಿಸಿದರು. ಪ್ರಯೋಗಶಾಲೆಯ ಪ್ರಾಣಿಗಳ ಮೇಲೆ ಅಧ್ಯಯನ ನಡೆಸಿದಾಗ, ಪಾರ್ಶ್ವವಾಯುವನ್ನು ಈ ಪ್ರೋಟೀನ್ ಕಣಗಳು ಗುಣಪಡಿಸಿದವು. ಇದು ಅವರನ್ನು ಪ್ರೋಟೀನ್‍ಗಳ ಬಗ್ಗೆಯೇ ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸಿತು. ಮುಂದೆ ಈ ಅಧ್ಯಯನ ಅವರಿಗೆ ಡಾಕ್ಟರೇಟ್ ಪದವಿಯನ್ನು ಕೊಡಿಸಿತು. ಅಮೆರಿಕದ ಜೈವಿಕ ತಂತ್ರಜ್ಞಾನ ಔಷಧ ತಯಾರಿಕಾ ಕಂಪನಿಯೊಂದು ಬೆರ್ರಿ ಅವರ ನೆರವಿನಿಂದ ಆ ವಿಶಿಷ್ಟ ಪ್ರೋಟೀನ್ ಅನ್ನು ಸಂಸ್ಕರಿಸಿ ಔಷಧಗಳನ್ನು ತಯಾರಿಸುತ್ತಿದೆ.&lt;/div&gt;&lt;div&gt;&lt;br /&gt;ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ನೂತನ ವಿಧಾನಕ್ಕೂ ಸಹಾ ಇವರದೇ ವಿಶಿಷ್ಟ ವಿನ್ಯಾಸವಿದೆ. ರಕ್ತವನ್ನು ತೆಳುವಾಗಿಸುವ ಅಣುರೂಪದ ರಾಸಾಯನಿಕ ಸಂಯುಕ್ತದ ಹೆಸರು ‘ಹೆಪಾರಿನ್’. ಸಕ್ಕರೆಯ ಅಣುಗಳಿಗೆ ಪಾಲಿಮರ್ ಅಣುಗಳನ್ನು ಜೋಡಣೆ ಮಾಡುವ ಬಗ್ಗೆ ಪ್ರಯೋಗಗಳನ್ನು ನಡೆಸುತ್ತಿದ್ದ ಬೆರ್ರಿ ಅವರಿಗೆ ಕೆಲ ತಿಂಗಳ ಸತತ ಪ್ರಯತ್ನಗಳ ನಂತರ ಯಶಸ್ಸು ದೊರೆತಿತ್ತು. ಇದರ ಹಿನ್ನೆಲೆಯಲ್ಲಿ ‘ಹೆಪಾರಿನ್’ ಅಣುಗಳಿಗೆ ಪಾಲಿಮರ್ ಅಣುಗಳನ್ನು ಜೋಡಿಸಲು ಸಾಧ್ಯವೆ? ಎಂದು ಪರಿಶೀಲಿಸತೊಡಗಿದರು. ಪಾಲಿಮರ್‌ಗಳು ಸುತ್ತುವರಿದಿರುವ ಹೆಪಾರಿನ್ ಅನ್ನು ಕ್ಯಾನ್ಸರ್ ತಗುಲಿರುವ ಜೀವಕೋಶಗಳು ಮುಗಿಬಿದ್ದು ತಮ್ಮ ಒಡಲೊಳಗೆ ಹುದುಗಿಸಿಕೊಳ್ಳುವ ಪ್ರಕ್ರಿಯೆಯನ್ನು ಅವರು ಕಂಡುಕೊಂಡರು. ಕ್ಯಾನ್ಸರ್ ಕೋಶದೊಳಗೆ ಸೇರಿದೊಡನೆಯೆ ಬೇರ್ಪಡುತ್ತಿದ್ದ ಹೆಪಾರಿನ್ ಅಣುಗಳು ಬಾಂಬ್‍ಗಳಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆ ಕೋಶಗಳನ್ನು ಕೊಲ್ಲುವುದು ಇವರ ಗಮನಕ್ಕೆ ಬಂದಿತು. ಸದ್ಯಕ್ಕೆ ಈ ತಂತ್ರಜ್ಞಾನವನ್ನು ಮತ್ತೊಂದು ಔಷಧ ತಯಾರಿಕಾ ಕಂಪನಿ ತಮ್ಮ ಸುಪರ್ದಿಗೆ ಸೇರಿಸಿಕೊಂಡಿದ್ದಾರೆ. &lt;/div&gt;&lt;div&gt;&lt;br /&gt;ಇಂಥ ಹೆಗ್ಗಳಿಕೆಯ ಬೆರ್ರಿ ಅವರೊಂದಿಗೆ ಸಂಶೋಧನೆಗಳನ್ನು ನಡೆಸಲು ಜತೆಗೂಡಿದವರು ಹಾರ್ವರ್ಡ್ ಮೆಡಿಕಲ್ ಸ್ಕೂಲಿನ ಜೀನ್ ತಜ್ಞರಾದ ಜಾರ್ಜ್ ಚರ್ಚ್ ಹಾಗೂ ಸ್ಟಾನ್‍ಫರ್ಡ್ ವಿಶ್ವವಿದ್ಯಾಲಯದ ಸಸ್ಯ ಜೀವ ವಿಜ್ಞಾನಿಗಳಾದ ಕ್ರಿಸ್ ಸೋಮರ್‌ವಿಲ್. ಇವರೆಲ್ಲರೂ ಒಗ್ಗೂಡಿ ನಿರ್ಮಿಸ ಹೊರಟಿದ್ದು ಜೀನ್ ಬದಲಾದ ಸೂಕ್ಷ್ಮಾಣುಜೀವಿಯೊಂದನ್ನು. ವರ್ಷಗಟ್ಟಲೆಯ ಸಂಶೋಧನೆಗಳ ನಂತರ ಸೂಕ್ಷ್ಮಾಣುಜೀವಿಯೊಂದನ್ನು ಅವರು ಪ್ರಯೋಗಶಾಲೆಗಳಲ್ಲಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ತ್ಯಾಜ್ಯವಸ್ತುಗಳೂ ಸೇರಿದಂತೆ ಇಂಗಾಲ ಹಾಗೂ ಜಲಜನಕ ಹೇರಳವಾಗಿರುವ ಸಸ್ಯ ಸಂಪತ್ತನ್ನು ಕಬಳಿಸಿ ಪೆಟ್ರೋಲಿಯಂನಂಥ ರಾಸಾಯನಿಕವನ್ನು ಈ ಸೂಕ್ಷ್ಮಾಣುಜೀವಿಗಳು ಕಕ್ಕಬಲ್ಲದು. ಸೂಕ್ಷ್ಮಾಣುಜೀವಿಯ ಹೆಸರು ಹಾಗೂ ಅದರ ಮೇಲೆ ನಡೆಸಿರುವ &lt;a href="http://1.bp.blogspot.com/_WOq6aPUeAO4/RtJihkeiq1I/AAAAAAAAAOc/nMoPnuq1wV0/s1600-h/fermentation_microbe_petroleum.jpg"&gt;&lt;img id="BLOGGER_PHOTO_ID_5103249656631176018" style="FLOAT: right; MARGIN: 0px 0px 10px 10px; CURSOR: hand" alt="" src="http://1.bp.blogspot.com/_WOq6aPUeAO4/RtJihkeiq1I/AAAAAAAAAOc/nMoPnuq1wV0/s200/fermentation_microbe_petroleum.jpg" border="0" /&gt;&lt;/a&gt;ಜೀನ್ ಚಿಕಿತ್ಸೆಯ ಬಗ್ಗೆ ಬೆರ್ರಿ ಮತ್ತವರ ಸಹಚರರು ಹೆಚ್ಚು ವಿವರಗಳನ್ನು ನೀಡುತ್ತಿಲ್ಲ. ಅವರ ಪ್ರಕಾರ ಬರಲಿರುವ ದಿನಗಳಲ್ಲಿ ಇಂಧನ ಕ್ಷಾಮವನ್ನು ದೂರವಾಗಿಸಬಲ್ಲ ಸೂಕ್ಷ್ಮಾಣುಜೀವಿಗಳ ತೈಲಾಗಾರವನ್ನು ಸುಲಭವಾಗಿ ಎಲ್ಲೆಡೆ ಸ್ಥಾಪಿಸಬಹುದು. ಅಷ್ಟೇ ಅಲ್ಲ, ಉತ್ಪಾದಕತೆ ಹಾಗೂ ಬೆಲೆಯಲ್ಲಿ ಇದು ಮುಸುಕಿನ ಜೋಳ ಅಥವಾ ಕಬ್ಬಿನಿಂದ ಸಂಸ್ಕರಿಸಿದ ಈಥೈಲ್ ಆಲ್ಕೋಹಾಲ್‍ಗಿಂತಲೂ ಉತ್ತಮವಾಗಿರುತ್ತದೆ. ಜತೆಗೆ ನೈಸರ್ಗಿಕವಾಗಿ ಸಂಸ್ಕರಿಸುವ ಪೆಟ್ರೋಲಿಯಂಗಿಂತಲೂ ಅಗ್ಗವಾಗಿರುತ್ತದೆ ಎಂಬ ಆಶ್ವಾಸನೆ ಬೆರ್ರಿ ಅವರದು.&lt;/div&gt;&lt;div&gt;&lt;br /&gt;ಈಗ ಎಲ್ಲೆಡೆ ಜಾಗೃತಿ ಮೂಡಿಸಿರುವ ಪೆಟ್ರೋಲಿಯಂನೊಂದಿಗೆ ಬೆರೆಸಬಹುದಾದ ಈಥೈಲ್ ಆಲ್ಕೋಹಾಲ್ ಬಗ್ಗೆ ಬೆರ್ರಿ ಅವರ ಅಭಿಪ್ರಾಯ ‘ಇಂಧನ ಸಮಸ್ಯೆಯನ್ನು ಅದು ನೀಗಿಸದು’. ಇದಕ್ಕೆ ಅವರು ಕೊಡುವ ಕಾರಣ ಈಥೈಲ್ ಆಲ್ಕೋಹಾಲ್ ಪೆಟ್ರೋಲಿಗಿಂತ ಮೂರನೆಯ ಎರಡು ಭಾಗದಷ್ಟು ಮಾತ್ರ ಶಕ್ತಿ ಸಂಚಯನ ಮಾಡುತ್ತದೆ. ಅಂದರೆ ಪೆಟ್ರೋಲಿಗಿಂತಲೂ ಮೂರನೆಯ ಒಂದು ಭಾಗದಷ್ಟು ಹೆಚ್ಚಿನ ಪ್ರಮಾಣದಲ್ಲಿ ಈಥೈಲ್ ಆಲ್ಕೋಹಾಲ್ ಬಳಸಬೇಕಾಗುತ್ತದೆ. ನೈಸರ್ಗಿಕವಾಗಿ ಕಚ್ಛಾ ತೈಲವನ್ನು ಸಂಸ್ಕರಿಸುವಾಗ ವಿವಿಧ ಹಂತಗಳಲ್ಲಿ ಸೀಮೆ‍ಎಣ್ಣೆ, ಪೆಟ್ರೋಲ್, ಡೀಸಲ್ ಮತ್ತಿತರ ಸಾಮಗ್ರಿಗಳನ್ನು ತೆಗೆಯಬಹುದು. ಇದೇ ರೀತಿ ಸೂಕ್ಷ್ಮಾಣುಜೀವಿಗಳ ಕಾರ್ಯಾಚರಣೆಯಲ್ಲಿ ಜೀನ್ ಮಾರ್ಪಾಡಿನ ಮೂಲಕ ಒಂದಷ್ಟು ಬದಲಾವಣೆಗಳನ್ನು ಮಾಡಿದರೆ ವಿವಿಧ ಉತ್ಪನ್ನಗಳನ್ನು ಅವು ಕಕ್ಕುವಂತೆ ಮಾಡಬಹುದು. ಈ ನಿಟ್ಟಿನಲ್ಲಿ ಅವರ ಕಾರ್ಯಾಚರಣೆಗಳು ಪ್ರಯೋಗಶಾಲೆಯ ಹಂತದಲ್ಲಿ ಫಲ ಕೊಟ್ಟಿವೆ. &lt;/div&gt;&lt;div&gt; &lt;/div&gt;&lt;br /&gt;&lt;div&gt;ಸಾಮಾನ್ಯವಾಗಿ ತೈಲ ಸಂಸ್ಕರಣಾ ಘಟಕಗಳು ಹೆಚ್ಚಿನ ಮಟ್ಟದಲ್ಲಿ ವಿದ್ಯುತ್ ಶಕ್ತಿಯನ್ನು ಕಬಳಿಸುತ್ತವೆ, ಜತೆಗೆ ಹೆಚ್ಚಿನ ಮಟ್ಟದಲ್ಲಿ ಪರಿಸರವನ್ನು ಮಲಿನಗೊಳಿಸುತ್ತವೆ. ಇತ್ತ ಬೆರ್ರಿ ಅವರ ಯೋಜನೆಯಲ್ಲಿ ಆಹಾರ ಬೆಳೆಗಳನ್ನು ಹೊರತುಪಡಿಸಿ ಕೇವಲ ಎತ್ತರದ ಹುಲ್ಲುಗಳು, ಮರದ ಚಕ್ಕೆ, ಕೆಲವೊಂದು ನಾರಿನ ಸಸ್ಯಗಳು, ಹೆಚ್ಚು ಉಪಯೋಗವಿಲ್ಲದ ಸಣ್ಣ ಪುಟ್ಟ ಮರಗಳನ್ನು ಮೂಲವಸ್ತುಗಳಾಗಿ ಬಳಸಲಾಗುತ್ತದೆ. ಇವುಗಳನ್ನು ಬೇಕೆಂದಷ್ಟು ಮತ್ತೆ ಮತ್ತೆ ಬೆಳೆಸಬಹುದು. ಹಾಗೆಯೇ ಜೀನ್ ಬದಲಿಸಿಕೊಂಡ ಸೂಕ್ಷ್ಮಾಣುಜೀವಿಗಳನ್ನು ಹುದುಗು ತರಿಸುವ ಪ್ರಕ್ರಿಯೆಯ ಮೂಲಕ ಸಾಕಷ್ಟು ಸಂಖ್ಯೆಯಲ್ಲಿ ಬೆಳೆಸಿಕೊಳ್ಳಬಹುದು.&lt;br /&gt;ಕೇವಲ ಇಪ್ಪತೊಂಬತ್ತು ವರ್ಷ ವಯಸ್ಸಿನ ಬೆರ್ರಿ ಅವರಿಗೆ ‘ಎಂ.ಐ.ಟಿ.’ಯ ತಂತ್ರಜ್ಞಾನ ನಿಯತಕಾಲಿಕೆ ‘ಟೆಕ್ನಾಲಜಿ ರೆವ್ಯೂ’ ‘ವರ್ಷದ ಸಂಶೋಧಕ’ನೆಂಬ ಪುರಸ್ಕಾರ ನೀಡಿ ಗೌರವಿಸಿದೆ. ಪ್ರತಿ ವರ್ಷ ಮೂವತ್ತೈದು ವರ್ಷ ವಯಸ್ಸಿನೊಳಗಿನ ವಿಜ್ಞಾನಿಗಳನ್ನು ಈ ನಿಯತಕಾಲಿಕೆ ಪುರಸ್ಕರಿಸುತ್ತದೆ. ಮುಂಚೂಣಿ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ನೆರವಾಗುವ ‘ವೆಂಚರ್ ಕ್ಯಾಪಿಟಲಿಸ್ಟ್ಸ್’ಗಳೆಂಬ ಆರ್ಥಿಕ ಪ್ರಾಯೋಜಕರುಗಳು ಬೆರ್ರಿ ಅವರನ್ನು ಮುಗಿಬಿದ್ದಿದ್ದಾರೆ. ಅಂಥ ಸಂಸ್ಥೆಯೊಂದರ ನೆರವಿನಿಂದ ಬೆರ್ರಿ ತಂತ್ರಜ್ಞಾನ ಒಕ್ಕೂಟವೊಂದನ್ನು ರೂಪಿಸಿಕೊಂಡಿದ್ದಾರೆ. ಸಹ ಸಂಶೋಧಕರುಗಳ ನೆರವಿನಿಂದ ಜೈವಿಕ ಪೆಟ್ರೋಲ್ ಅನ್ನು ರೂಪಿಸುವಲ್ಲಿ ವಿಶೇಷ ಆಸಕ್ತಿ ವಹಿಸಿದ್ದಾರೆ. ಎಲ್ಲವೂ ಬೆರ್ರಿ ಅವರ ಎಣಿಕೆಯಂತೆ ನಡೆದರೆ ಜಗತ್ತಿನಲ್ಲಿ ವಿದ್ಯುತ್ ಕ್ಷಾಮ ಇರುವುದಿಲ್ಲ. ಭಾರತದಲ್ಲೂ ವಿದ್ಯುತ್ ಸುಭಿಕ್ಷ ಉಂಟಾಗಿ ಕಲಾಂ ಅವರ ಕ್ರಿ.ಶ.2020ರ ಕನಸು ನನಸಾದೀತು. ಅಂದರೆ ಭಾರತ ಜಗತ್ತಿನ ಮೂರು ಬಲಿಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಒಂದು ಸ್ಥಾನ (ಮನಸ್ಸು ಮಾಡಿದರೆ ಒಂದನೆಯ ಸ್ಥಾನ) ವನ್ನು ಖಂಡಿತವಾಗಿಯೂ ಪಡೆಯಬಹುದು. &lt;/div&gt;&lt;div&gt;&lt;/div&gt;&lt;br /&gt;&lt;div&gt;&lt;strong&gt;&lt;em&gt;(ಕೃಪೆ: ವಿಜಯ ಕರ್ನಾಟಕ, 27-08-2007)&lt;/em&gt;&lt;/strong&gt; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/752423363868781697-8889332382805319640?l=netnota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://netnota.blogspot.com/feeds/8889332382805319640/comments/default' title='Post Comments'/><link rel='replies' type='text/html' href='http://www.blogger.com/comment.g?blogID=752423363868781697&amp;postID=8889332382805319640' title='0 Comments'/><link rel='edit' type='application/atom+xml' href='http://www.blogger.com/feeds/752423363868781697/posts/default/8889332382805319640'/><link rel='self' type='application/atom+xml' href='http://www.blogger.com/feeds/752423363868781697/posts/default/8889332382805319640'/><link rel='alternate' type='text/html' href='http://netnota.blogspot.com/2007/08/blog-post_27.html' title='ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?'/><author><name>HNS</name><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_WOq6aPUeAO4/SdR5qYZ87xI/AAAAAAAAAWg/cXIYJSqE8Z4/S220/sudhi1.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_WOq6aPUeAO4/RtJiNEeiq0I/AAAAAAAAAOU/IIO10vj4oYo/s72-c/David_Berry_x220.jpg' height='72' width='72'/><thr:total>0</thr:total></entry><entry><id>tag:blogger.com,1999:blog-752423363868781697.post-3511838198564247343</id><published>2007-08-20T19:54:00.000+05:30</published><updated>2007-08-20T20:02:03.658+05:30</updated><title type='text'>ಮಾಹಿತಿ ತಂತ್ರಜ್ಞಾನ ಜನಸಾಮಾನ್ಯರನ್ನು ನಿಜಕ್ಕೂ ಮುಟ್ಟೀತೆ?</title><content type='html'>&lt;strong&gt;&lt;span style="font-size:180%;"&gt;` ನೀ&lt;/span&gt;&lt;/strong&gt;ವು ಮೊಬೈಲ್ ಫೋನ್‍ನಲ್ಲಿ ಮಾತನಾಡುತ್ತಿದ್ರಿ. ನಾಲ್ಕು ಸಾಲು ದಾಟಿ ಬರುವ ಬದಲು ಫೋನ್ ಮಾಡಿದೆ. ಸ್ವಿಚ್ ಆಫ್ ಎಂಬ ಸಂದೇಶ ಬರ್ತಿತ್ತು. ನಮ್ಮಂಥವರ ಕರೆ ಬಂದೊಡನೆ ಸ್ವಯಂಚಾಲಿತವಾಗಿ ಇಂಥ ಸಂದೇಶಗಳು ಬರುವಂತೆ ಮಾಡಿದ್ದೀರಾ?’ - ಪುಸ್ತಕ ಬಿಡುಗಡೆಯ ಸಮಾರಂಭವೊಂದರಲ್ಲಿ ಕಂಡ ಪತ್ರಕರ್ತ ಗೆಳೆಯ ಶ್ಯಾಮ್ ಅವರನ್ನು ಪ್ರಶ್ನಿಸಿದೆ. ಮಾತಿನಲ್ಲೇ ಮೋಡಿ ಮಾಡುವ ಶ್ಯಾಮ್ ಮಾತುಗಾರ ಗೆಳೆಯರನ್ನು ಎಂದಿಗೂ ‘ಅವಾಯ್ಡ್’ ಮಾಡುವವರಲ್ಲ. ‘ಅವರಿಗಿಂತ ಮಾತು ಬಲ್ಲವರಿಲ್ಲ, ಈ ಊರಿನಲ್ಲಿ’ ಎಂದರೆ ಉತ್ಪ್ರೇಕ್ಷೆಯಿಲ್ಲ. ‘ರಜೆ ದಿನಗಳಂದು ಖಾಸಗಿ ಗೆಳೆಯರೊಂದಿಗೆ ಮಾತನಾಡಲು ಮತ್ತೊಂದು ಮೊಬೈಲ್ ಫೋನ್ ಕೊಂಡಿದ್ದೇನೆ. ಅಧಿಕೃತ ಮೊಬೈಲ್ ಸಂಖ್ಯೆಯನ್ನು ಭಾನುವಾರಗಳಂದು ಮನೆಯಲ್ಲಿಯೇ ಇಟ್ಟು ಸ್ವಿಚ್ ಆಫ್ ಮಾಡಿರುತ್ತೇನೆ’ ಎಂದರು. ಹಿಂದೆ ವಿಶ್ವೇಶ್ವರಯ್ಯನವರು ಕಚೇರಿ ಕೆಲಸಕ್ಕೆ, ಮನೆ ಕೆಲಸಕ್ಕೆ ಎಂದು ಪ್ರತ್ಯೇಕವಾದ ಪೆನ್‍ಗಳನ್ನು ಜೇಬಿನಲ್ಲಿಡುತ್ತಿದ್ದರು ಎಂಬುದು ದಂತಕತೆ. ಸದ್ಯಕ್ಕೆ ಕಚೇರಿ, ಮನೆ, ಖಾಸಗಿ ... ಹೀಗೆ ಮೂರು-ನಾಲ್ಕು ಮೊಬೈಲ್ ಫೋನ್‍ಗಳನ್ನು ಒಟ್ಟೊಟ್ಟಿಗೆ ಇಟ್ಟುಕೊಳ್ಳುವವರಿದ್ದಾರೆ. ಬಹು ದೊಡ್ಡ ಉದ್ದಿಮೆದಾರರಿಂದ ಅತಿ ಸಣ್ಣ ವ್ಯಾಪಾರಿಗಳ ವರೆಗೆ ಮೊಬೈಲ್ ಫೋನ್ ಅತ್ಯಗತ್ಯ ಸಂಪರ್ಕ ಸಾಧನ. ರಜೆ ಕಳೆಯಲೆಂದು ಸ್ವಂತ ಊರು ಕೇರಳಕ್ಕೆ ಹೋಗಿದ್ದ ಸಹೋದ್ಯೋಗಿಯೊಬ್ಬರು ಮೊನ್ನೆ ಹೇಳುತ್ತಿದ್ದರು. ‘ನಮ್ಮೂರಿನ ಬೆಸ್ತರು ಮೀನು ಹಿಡಿದ ನಂತರ ಹೊರಟ ಸ್ಥಳಕ್ಕೇ ಹಿಂದಿರುಗುವುದಿಲ್ಲ. ಯಾವ ಯಾವ ಮೀನುಗಟ್ಟೆಗಳಲ್ಲಿ ಎಂಥ ಜಾತಿಯ ಮೀನುಗಳು ಬಿಕರಿಗೆ ಬಂದಿವೆ? ಎಂಬ ವಿಷಯವನ್ನು ಮೊಬೈಲ್ ಫೋನಿನ ಮೂಲಕ ತಿಳಿದುಕೊಂಡು, ತಾವು ಹಿಡಿದ ಮೀನಿನ ಜಾತಿಗೆ ಎಲ್ಲಿ ಮಾರುಕಟ್ಟೆಯಿದೆಯೋ ಅಲ್ಲಿಗೇ ನೇರ ಹೊರಡುತ್ತಾರೆ. ಹಿಂದೆ ನಮ್ಮಪ್ಪನ ಕಾಲದಲ್ಲಿ ಅದೊಂದು ಲಾಟರಿಯಂತೆ ನಡೆಯುತ್ತಿತ್ತು. ಅದೃಷ್ಟ ಇಲ್ಲದಿದ್ದರೆ ಒಂದೇ ಮೀನುಗಟ್ಟೆಯಲ್ಲಿ ಒಂದೇ ಜಾತಿಯ ಮೀನುಗಳು ಹೇರಳವಾಗಿ ತುಂಬಿಕೊಂಡು, ಬೆಲೆ ಕುಸಿಯುತ್ತಿತ್ತು. ಮೊಬೈಲ್ ಫೋನ್‍ಗಳ ದೆಸೆಯಿಂದ ಈಗ ಬೆಸ್ತರು, ಮಾರುಕಟ್ಟೆ ದಲ್ಲಾಳಿಗಳಿಗೆ ಮೀನಿನ ಸರಿಯಾದ ಬೆಲೆಯನ್ನು ನಿರ್ಧರಿಸಲು ಸಾಧ್ಯವಾಗಿದೆ. ಇವರೆಲ್ಲರೊಂದಿಗೆ ಗಿರಾಕಿಗಳಿಗೂ ಅನುಕೂಲವಾಗಿದೆ’ ಎಂದರು. ಇದು ಮೊಬೈಲ್ ಫೋನ್‍ನಿಂದಾಗಿರುವ ಲಾಭ. ಇಂಟರ್‌ನೆಟ್ ಎಂಬ ಸಂಪರ್ಕ ಜಾಲದಿಂದಾಗಿ ಇಡೀ ಜಗತ್ತು ಒಂದು ಹಳ್ಳಿಯಂತಾಗಿದೆ. ಆ ಸಂಪರ್ಕ ಜಾಲಕ್ಕೆ ಮೊಬೈಲ್ ಫೋನ್‍ಗಳನ್ನು ಮೇಳೈಸಿದರೆ ನಮ್ಮ ಇಡೀ ವಿಶ್ವೇ ಒಂದು ವಸುಧೈವ ಕುಟುಂಬವಾದೀತು. ಒಂದು ಅಂದಾಜಿನಂತೆ ನಮ್ಮ ದೇಶದಲ್ಲಿರುವ ಮೊಬೈಲ್ ಫೋನ್ ಗ್ರಾಹಕರ ಸಂಖ್ಯೆ ಹದಿನೆಂಟೂವರೆ ಕೋಟಿ.&lt;br /&gt;&lt;br /&gt;&lt;div&gt;&lt;div&gt;‘ಮಾಹಿತಿ ತಂತ್ರಜ್ಞಾನ’ ಅಥವಾ ‘ಐ.ಟಿ.’ ಎಂದೊಡನೆ ನಮ್ಮ ನೆನಪಿಗೆ ಬರುವುದು ಬಿಲಿಯಗಟ್ಟಲೆ ಡಾಲರ್ ವಾರ್ಷಿಕ ಆದಾಯ ತರುವ ದೊಡ್ಡ ದೊಡ್ಡ ಕಂಪನಿಗಳು. ಆ ಕಂಪನಿಗಳು ಸೃಷ್ಟಿಸುವ ಕೈತುಂಬಾ ಪಗಾರ ತರುವ ಲಕ್ಷಗಟ್ಟಲೆ ಉದ್ಯೋಗಗಳು. ಮಾಹಿತಿ ತಂತ್ರಜ್ಞಾನ ಕ್ರಾಂತಿಯೆಂದರೆ ಕೇವಲ ಎಕರೆಗಟ್ಟಲೆ ವಿಸ್ತೀರ್ಣದ ಕಂಪನಿಗಳಲ್ಲ. ಅಥವಾ ಹೊರಗುತ್ತಿಗೆಯ ಮೂಲಕ ಆ ಕಂಪನಿಗಳು ಇಡೀ ಜಗತ್ತಿನಿಂದ ಸಂಪಾದಿಸಿಕೊಂಡ ಬ್ಯುಸಿನೆಸ್‍ಗಳಲ್ಲ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಹಿಡುವಳಿದಾರರಿರುವ ದೇಶ ನಮ್ಮದು. ಸಾಧಾರಣ ಮಟ್ಟದ ವಿದ್ಯೆ ಪಡೆದ ಲಕ್ಷಾಂತರ ಶ್ರಮಜೀವಿಗಳಿರುವ ದೇಶ ನಮ್ಮದು. ಇಂಥವರೆಲ್ಲರ ಜೀವನ ಮಟ್ಟ ಸುಧಾರಿಸುವ ತಂತ್ರಜ್ಞಾನಗಳ ಅಭಿವೃದ್ಧಿಯೇ ನಿಜವಾದ ಮಾಹಿತಿ ತಂತ್ರಜ್ಞಾನ ಕ್ರಾಂತಿ. ಭಾರತದಲ್ಲಿಯೇ ಕುಳಿತು ಸಾಮಾನ್ಯ ಅಮೆರಿಕನ್ನರ ಜೀವನ ಮಟ್ಟ ಸುಧಾರಿಸಲು ಬೆವರು ಸುರಿಸುವ ಸಹಸ್ರಾರು ತಂತ್ರಜ್ಞರಿರುವಂತೆ, ಅಮೆರಿಕದಲ್ಲಿಯೇ ಕುಳಿತು ಸಾಮಾನ್ಯ ಭಾರತೀಯರ ಜೀವನ ಮಟ್ಟ ಸುಧಾರಿಸಲು ಶ್ರಮ ಪಡುತ್ತಿರುವ ಬೆರಳೆಣಿಕೆಯಷ್ಟು ತಂತ್ರಜ್ಞರಿದ್ದಾರೆ. ಇಂಥ &lt;a href="http://2.bp.blogspot.com/_WOq6aPUeAO4/Rsmk7EeiqyI/AAAAAAAAAOE/htdUL4NueMU/s1600-h/parikh_tapan.jpg"&gt;&lt;img id="BLOGGER_PHOTO_ID_5100789387694877474" style="FLOAT: right; MARGIN: 0px 0px 10px 10px; CURSOR: hand" alt="" src="http://2.bp.blogspot.com/_WOq6aPUeAO4/Rsmk7EeiqyI/AAAAAAAAAOE/htdUL4NueMU/s200/parikh_tapan.jpg" border="0" /&gt;&lt;/a&gt;ಶ್ರಮಜೀವಿಯೊಬ್ಬರ ಹೆಸರು ತಪನ್ ಪಾರೀಖ್. ಅಮೆರಿಕದ ವಾಷಿಂಗ್‍ಟನ್ ವಿಶ್ವವಿದ್ಯಾಲಯದಲ್ಲಿನ ಕಂಪ್ಯೂಟರ್ ವಿಜ್ಞಾನ ವಿಭಾಗಗದಲ್ಲಿ ಡಾಕ್ಟರೇಟ್ ಪದವಿಗೆ ಅಧ್ಯಯನ ನಡೆಸುತ್ತಿರುವುದರ ಜತೆಗೆ ತನ್ನದೇ ಆದ ‘ಏಕ್‍ಗಾಂವ್ ಟೆಕ್ನಾಲಜೀಸ್’ ಕಂಪನಿಯ ಒಡೆಯನೀತ. ಅಭಿವೃದ್ಧಶೀಲ ರಾಷ್ಟ್ರಗಳಲ್ಲಿ ಸಣ್ಣ-ಪುಟ್ಟ ವಹಿವಾಟು ನಡೆಸುವವರಿಗೆ ಅನುಕೂಲವಾಗುವ ಮಾಹಿತಿ ತಂತ್ರಜ್ಞಾನ ಉತ್ಪನ್ನಗಳನ್ನು ಸಿದ್ಧಪಡಿಸುವ ಕಂಪನಿಯಿದು. ಕಂಪ್ಯೂಟರ್‌ಗಳನ್ನು ಖರೀದಿಸಲಾಗದಿದ್ದರೂ ಸಣ್ಣ-ಪುಟ್ಟ ಉದ್ದಿಮೆದಾರರು ಮೊಬೈಲ್ ಫೋನ್‍ಗಳನ್ನು ಖಂಡಿತವಾಗಿಯೂ ಬಳಸುತ್ತಿರುತ್ತಾರೆ. ಈ ಮೊಬೈಲ್ ಫೋನ್ ಸಂಪರ್ಕದ ಮೂಲಕವೇ ತಮ್ಮ ಬ್ಯುಸಿನೆಸ್ ಅನ್ನು ತ್ವರಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸಿಕೊಂಡು ಹೋಗಲು ಪಾರೀಖ್ ಅನುವು ಮಾಡಿಕೊಡುತ್ತಿದ್ದಾರೆ. ಜತೆಗೆ ಅಭಿವೃದ್ಧ ರಾಷ್ಟ್ರಗಳ ದೊಡ್ಡ ದೊಡ್ಡ ಕಂಪನಿಗಳೊಂದಿಗೆ ವಹಿವಾಟು ನಡೆಸಬಲ್ಲ ಸಾಮರ್ಥ್ಯವನ್ನೂ ಅವರ ತಂತ್ರಾಂಶ ಅಂದರೆ ಸಾಫ್ಟ್‍ವೇರ್ ನೀಡುತ್ತಿದೆ. &lt;/div&gt;&lt;br /&gt;&lt;div&gt;ಅಭಿವೃದ್ಧಶೀಲ ರಾಷ್ಟ್ರಗಳಲ್ಲಿ ಮೊಬೈಲ್ ಫೋನ್‍ಗಳ ವ್ಯಾಪಕ ಬಳಕೆಯನ್ನು ಗಮನಿಸಿದ್ದ ಪಾರೀಖ್, ಅವುಗಳಿಗೇ ಪಕ್ಕಾದ ತಂತ್ರಾಂಶವನ್ನು ರೂಪಿಸುವತ್ತ ಗಮನ ಹರಿಸಿದರು. ಹೀಗೆ ಅವರು ಸೃಷ್ಟಿಸಿದ ಮೊದಲ ತಂತ್ರಾಂಶದ ಹೆಸರು ‘ಕ್ಯಾಮ್’ - ಈ ಹೆಸರು ಏಕೆಂದರೆ ಕ್ಯಾಮೆರ ಸಹಿತವಾದ ಮೊಬೈಲ್ ಫೋನ್‍ಗಳನ್ನು ಬಳಸಿಕೊಳ್ಳುವ ಮಧ್ಯವರ್ತಿ ತಂತ್ರಾಂಶವಿದು. ಈ ಮಧ್ಯವರ್ತಿ ಸಲಕರಣೆಯ ಕರ್ತವ್ಯವೇನೆಂದರೆ ಮೊಬೈಲ್ ಫೋನನ್ನು ಕೇವಲ ಚಿತ್ರ, ಅಂಕೆ-ಅಂಶ, ದತ್ತಾಂಶ ಸೆರೆಹಿಡಿವ ಕ್ಯಾಮೆರ ಮಾತ್ರವಾಗಿ ಬಳಸದೆಯೆ ದಾಖಲೆಗಳನ್ನು ಚಿತ್ರೀಕರಿಸಿಕೊಳ್ಳಬಲ್ಲ ಸ್ಕ್ಯಾನರ್ ಆಗಿ ಮಾರ್ಪಡಿಸುತ್ತದೆ. ಅಲ್ಲದೆ ದತ್ತಾಂಶಗಳನ್ನು ಸಂಸ್ಕರಣೆ ಮಾಡುತ್ತದೆ. ಹಾಗೂ ಧ್ವನಿ ಮತ್ತು ಚಲನಚಿತ್ರ ತುಣುಕುಗಳನ್ನು ತನ್ನೊಡಲೊಳಗೆ ಸೇರಿಸಿಕೊಳ್ಳುತ್ತದೆ. ಅಂದರೆ ನಿಮ್ಮ ಕಂಪ್ಯೂಟರ್ ಮಾಡಬಲ್ಲ ಬಹುತೇಕ ಕೆಲಸಗಳನ್ನು ಮಧ್ಯವರ್ತಿ ಸಲಕರಣೆಯ ನೆರವಿನಿಂದ ಮೊಬೈಲ್ ಫೋನೇ ಮಾಡುತ್ತದೆ. ನಿಮಗೆ ‘ಮೈಕ್ರೊಫೈನಾನ್ಸ್’ ಗೊತ್ತಿರಬೇಕು. ತಮ್ಮ ಅದೆಷ್ಟೋ ಅಗತ್ಯಗಳನ್ನು ಪೂರೈಸಿಕೊಳ್ಳಲು ಹಳ್ಳಿಗಳಲ್ಲಿನ ಜನ ಒಂದು ಸಾವಿರ ರೂಪಾಯಿಗಿಂತಲೂ ಕಡಿಮೆ ಮೊತ್ತದ ಸಾಲವನ್ನು ಹಣಕಾಸು ಸಂಸ್ಥೆಗಳಿಂದ ಪಡೆಯುತ್ತಾರೆ. ಇಂಥ ಮೈಕ್ರೊಫೈನಾನ್ಸ್ ಯೋಜನೆಗಳನ್ನು ಜಾರಿಗೊಳಿಸುವಾಗ ಸಾಕಷ್ಟು ಸಂಖ್ಯೆಯಲ್ಲಿ ದಾಖಲೆ ಪತ್ರಗಳನ್ನು ನಿರ್ವಹಣೆ ಮಾಡಬೇಕಾಗುತ್ತದೆ. ದೊಡ್ಡ ಹಣಕಾಸು ಸಂಸ್ಥೆಗಳಿಗೆ ಇಂಥ ವಹಿವಾಟುಗಳು ಲಾಭದಾಯಕವಲ್ಲ. ಇದರ ಬದಲು ಹಳ್ಳಿಯ ಒಂದಷ್ಟು ಜನರು ಒಗ್ಗೂಡಿ ಸಹಕಾರ ಒಕ್ಕೂಟವನ್ನು ಸ್ಥಾಪಿಸಿಕೊಳ್ಳಬಹುದು. ಸದಸ್ಯರ ಮೂಲಕ ಸಂಗ್ರಹಿಸಿದ ಠೇವಣಿಗಳನ್ನು ಅಗತ್ಯ ಬಿದ್ದವರಿಗೆ ಅಲ್ಪಾವಧಿಯ ಸಾಲದಂತೆ ನೀಡಬಹುದು. ಇಂಥ ಸ್ವಸಹಾಯ ಸಮೂಹಗಳು ದೊಡ್ಡದಾಗಿ ಬೆಳೆದಂತೆ ಬ್ಯಾಂಕುಗಳು ಅಥವಾ ಸಹಕಾರ ಸಂಸ್ಥೆಗಳ ಮೂಲಕ ದೊಡ್ಡ ಮೊತ್ತದ, ದೀರ್ಘಾವಧಿಯ ಸಾಲಗಳನ್ನು ಪಡೆಯಬಹುದು. ಇಂಥ ಹಣವನ್ನು ಸದಸ್ಯರಿಗೆ ಸಾಲ ನೀಡಲು ಬಳಸಬಹುದು.&lt;/div&gt;&lt;br /&gt;&lt;div&gt;&lt;br /&gt;&lt;a href="http://1.bp.blogspot.com/_WOq6aPUeAO4/Rsmlf0eiqzI/AAAAAAAAAOM/u8exJxQujng/s1600-h/tapan_parikh.jpg"&gt;&lt;img id="BLOGGER_PHOTO_ID_5100790019055070002" style="FLOAT: left; MARGIN: 0px 10px 10px 0px; CURSOR: hand" alt="" src="http://1.bp.blogspot.com/_WOq6aPUeAO4/Rsmlf0eiqzI/AAAAAAAAAOM/u8exJxQujng/s200/tapan_parikh.jpg" border="0" /&gt;&lt;/a&gt;ಗ್ರಾಮೀಣ ಮಟ್ಟದಲ್ಲಿ, ಬಹುತೇಕವಾಗಿ ಮಹಿಳೆಯರು ಇಂಥ ಸ್ವಸಹಾಯ ಒಕ್ಕೂಟವನ್ನು ಸ್ಥಾಪಿಸಿಕೊಂಡರೆ, ಇವರನ್ನು ಅತ್ಯಾಧುನಿಕ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗೆ ಒಗ್ಗಿಸುವುದು ಹೇಗೆ? ಇದು ಪಾರೀಖ್ ಅವರ ಮುಂದಿದ್ದ ಪ್ರಶ್ನೆ. ತಮ್ಮ ಕ್ಯಾಮ್ ಸಲಕರಣೆಯ ಮೂಲಕ ಕ್ಯಾಮೆರ ಫೋನ್ ಸೆರೆಹಿಡಿದ ಮಾಹಿತಿಯನ್ನು ಆಗಿಂದಾಗಲೇ ಬ್ಯಾಂಕಿಗೆ ತಲುಪಿಸಬೇಕು. ಇದಕ್ಕಾಗಿ ಅವರು ಮೊರೆಹೊಕ್ಕಿದ್ದು ಇಂಟರ್‌ನೆಟ್ ತಂತ್ರಜ್ಞಾನ. ಇಂಟರ್‌ನೆಟ್ ಎಂದೊಡನೆಯೆ ನಮ್ಮ ಕಲ್ಪನೆಗೆ ಬರುವುದು ಇಂಗ್ಲಿಷ್ ಹಾಗೂ ಹಳ್ಳಿಯ ಹೆಣ್ಣು ಮಕ್ಕಳಿಗೆ ಅರ್ಥವಾಗದ ಕಂಪ್ಯೂಟರ್ ಸಂಜ್ಞೆಗಳು. ಈ ಸಮಸ್ಯೆಯನ್ನು ಮೊದಲೇ ಮನಗಂಡಿದ್ದ ಪಾರೀಖ್ ಅಲ್ಪಮಟ್ಟದ ವಿದ್ಯಾಭ್ಯಾಸ ಇರುವವರೂ ಸುಲಭವಾಗಿ ಉಪಯೋಗಿಸಬಲ್ಲಂತೆ ತಮ್ಮ ವ್ಯವಸ್ಥೆಯನ್ನು ರೂಪಿಸಹೊರಟರು. ಸಾಧ್ಯವಿರುವೆಡೆಯೆಲ್ಲ ‘ಐಕಾನ್’ ಅಥವಾ ‘ಸಂಜ್ಞೆ ಗುರುತು’ಗಳನ್ನು ಬಳಸಿದರು. ಅನಿವಾರ್ಯವಿಲ್ಲದೆಡೆ ದೇಶೀ ಭಾಷೆಯ ಅಕ್ಷರಗಳಿರುವ ಗುಂಡಿಗಳನ್ನೇ ಅಳವಡಿಸಿದರು. ಭಾರತದಂಥ ದೇಶದಲ್ಲಿ ಕಾಗದದ ಮೇಲಿನ ದಾಖಲೆಗಳೇ ನಂಬಿಕಾರ್ಹ. ಅದಕ್ಕೆಂದು ಪಾರೀಖ್ ಜಾರಿಗೆ ತಂದದ್ದು ಬಾರ್‌ಕೋಡ್ ಅಂದರೆ ವಿವಿಧ ಗಾತ್ರದ ಗೆರೆಗಳ ಸಂಕೇತವನ್ನು ಓದುವ ವ್ಯವಸ್ಥೆ. ಪ್ರತಿಯೊಂದು ಅರ್ಜಿ ನಮೂನೆಯ ಕೊನೆಯಲ್ಲಿ ಇಂಥ ಸಂಕೇತವನ್ನು ಮೊದಲೇ ಮುದ್ರಿಸಿದ್ದರೆ, ಕೇವಲ ಸಂಕೇತವನ್ನು ಮೊಬೈಲ್ ಫೋನ್ ಸೆರೆಹಿಡಿದು ಯಾವ ದಾಖಲೆ ಸಂಗ್ರಾಹಕನ ಕಡತದಲ್ಲಿದೆಯೆಂದು ಧನ ಸಹಾಯ ಮಾಡುವ ಬ್ಯಾಂಕಿಗೆ ತಿಳಿಸಬಹುದು. ಜತೆಗೆ ಇಡೀ ಅರ್ಜಿ ನಮೂನೆ, ದಾಖಲೆ ಪತ್ರಗಳು ಮತ್ತಿತರ ಅಡಕಗಳನ್ನು ಫೋನಿನ ಮೂಲಕ ಸ್ಕ್ಯಾನ್ ಮಾಡಿ ಕೂಡಲೇ ಬ್ಯಾಂಕಿನ ಕಂಪ್ಯೂಟರ್‌ಗೆ ರವಾನಿಸಬಹುದು. ಅಂದರೆ ಪುಟ್ಟ ಗ್ರಾಮ ಹಾಗೂ ದೊಡ್ಡ ಪಟ್ಟಣಗಳ ನಡುವೆ ಸಂಪರ್ಕ ಸೇತುವಾಗಿ ಈ ಮೊಬೈಲ್ ಫೋನ್ ಕೆಲಸ ಮಾಡಬಲ್ಲದು ಎಂದರ್ಥ. ನಿಜವಾದ ಅರ್ಥದಲ್ಲಿ ಅತ್ಯಾಧುನಿಕ ತಂತ್ರಜ್ಞಾನವೊಂದು ಜನ ಸಾಮಾನ್ಯರನ್ನು ಮುಟ್ಟಿದೆಯೆಂದೂ ಅರ್ಥ. &lt;/div&gt;&lt;div&gt;&lt;br /&gt;ಸದ್ಯಕ್ಕೆ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಲಗಳಿಗೆ ನಿರ್ದಿಷ್ಟ ಬಡ್ಡಿ ದರಗಳಿವೆ. ಯಾವುದೇ ಒಂದು ಹಳ್ಳಿಯ ಜನರು ನಿಯತ್ತಾಗಿ ಕಾಲಾವಧಿಗೆ ಮುನ್ನವೇ ಸಾಲ ತೀರಿಸಿದರೆ ವಿಶೇಷವಾದ ಪ್ರೋತ್ಸಾಹ ಧನವನ್ನು ನೀಡಲಾಗುವುದಿಲ್ಲ. ಅಥವಾ ಯಾವುದೇ ಒಂದು ಉತ್ಸಾಹಿ ಸ್ವಸಹಾಯ ಒಕ್ಕೂಟವು ಅತ್ಯುತ್ತಮ ಕಾರ್ಯಕ್ಷಮತೆಯಿಂದ ನಿರ್ವಹಣೆ ಮಾಡಿ ಬ್ಯಾಂಕಿಗೆ ಲಾಭ ತಂದುಕೊಟ್ಟಿದ್ದರೆ, ಅದನ್ನು ಗುರುತಿಸಿ ಪ್ರೋತ್ಸಾಹ ಧನ ನೀಡಲು ಸಾಧ್ಯವಿಲ್ಲ. ಅಂದರೆ ಉತ್ತಮ ಕಾರ್ಯಕ್ಕೆ ವಿಶೇಷವಾದ ಬೆಲೆಯಿರುವುದಿಲ್ಲ. ಅಂಥದೊಂದು ವಿಶೇಷ ಕಾರ್ಯ ನಡೆದಿದೆಯೆಂಬುದೇ ಎಷ್ಟೋ ಬಾರಿ ಗೊತ್ತಾಗುವುದಿಲ್ಲ. ಕಾರಣ, ಅಗತ್ಯ ದಾಖಲೆ, ಅಂಕೆ-ಅಂಶಗಳನ್ನು ಕಾಲದಿಂದ ಕಾಲಕ್ಕೆ ಬ್ಯಾಂಕ್ ಪಡೆದಿರುವುದಿಲ್ಲ. ಅಕಸ್ಮಾತ್ ಅಂಥ ದಾಖಲೆಗಳು ಲಭ್ಯವಿದ್ದರೂ ಅವುಗಳನ್ನು ವಿಶ್ಲೇಷಣೆ ಮಾಡಿ ಸಾಧಕರ ಪಟ್ಟಿ ತಯಾರಿಸುವ ವ್ಯವಧಾನವಿರುವುದಿಲ್ಲ. ಪಾರೀಖ್ ಅವರ ತಂತ್ರಾಂಶ ಸಲಕರಣೆಯಲ್ಲಿ ಈ ಎಲ್ಲ ನ್ಯೂನತೆಗಳನ್ನೂ ಹೋಗಲಾಡಿಸಲಾಗಿದೆ. ನಿರ್ದಿಷ್ಟ ಕಾಲಾವಧಿಯಲ್ಲಿ ಬ್ಯಾಂಕ್ ನೀಡಿದ ಧನ ಸಹಾಯವೆಷ್ಟು? ಅದರಲ್ಲಿ ಸದ್ವಿನಿಯೋಗವಾದ ಮೊತ್ತವೆಷ್ಟು? ಎಷ್ಟರ ಮಟ್ಟಿಗೆ ವಸೂಲಾತಿ ನಡೆದಿದೆ? ವಿಳಂಬವಾಗಿದ್ದಲ್ಲಿ, ಕಾರಣಗಳೇನು? ಇದನ್ನು ತಡೆಯಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು? ... ಹೀಗೆ ಹತ್ತಾರು ಬಗೆಯ ಬ್ಯಾಂಕಿಂಗ್ ಲೆಕ್ಕಾಚಾರಗಳನ್ನು ಸರಳವಾಗಿ ಗಣನೆ ಮಾಡಬಹುದು. &lt;/div&gt;&lt;br /&gt;&lt;div&gt;ಪಾರೀಖ್ ಅವರ ತಂತ್ರಾಂಶವು ತಮಿಳುನಾಡಿನ ಮಧುರೈ ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿನ ರೈತ ಸಮುದಾಯದಿಂದ ಪ್ರಮಾಣೀಕರಣಗೊಂಡಿದೆ. ಅಷ್ಟೇ ಅಲ್ಲ, ಮಧ್ಯ ಅಮೆರಿಕದ ಪುಟ್ಟ ರಾಷ್ಟ್ರ ಗ್ವಾಟೆಮಾಲದ ಕಾಫಿ ಬೆಳೆಗಾರರ ಅರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸಿದೆ. ಈ ಕಾರ್ಯಗಳಿಗೆಂದೇ ರೂಪುಗೊಂಡ ಮಾಹಿತಿ ನಿರ್ವಹಣಾ ವ್ಯವಸ್ಥೆಯ ಹೆಸರು ‘ಮಹಾ ಕಲಶಂ’. ಪಾರೀಖ್ ಅವರ ಮೇರು ಸದೃಶ ಕಾರ್ಯಕ್ಕೆ ಸಾಕ್ಷಿಯಂತಿರುವ ಈ ವ್ಯವಸ್ಥೆಗೆ ಅಮೆರಿಕದ ಪ್ರತಿಷ್ಠಿತ ತಂತ್ರಜ್ಞಾನ ವಿದ್ಯಾಲಯ ‘ಮೆಸಾಶ್ಯುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ - ಎಂ.ಐ.ಟಿ’ಯು ಹೊರಡಿಸುವ ನಿಯತಕಾಲಿಕ ‘ಟೆಕ್ನಾಲಜಿ ರೆವ್ಯೂ’ವಿನ ವಾರ್ಷಿಕ ಪುರಸ್ಕಾರ ದಕ್ಕಿದೆ. ಮೂವತ್ತೈದು ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ತಂತ್ರಜ್ಞಾನ ಸಂಶೋಧಕರುಗಳಿಗೆಂದೇ ಮೀಸಲಿಟ್ಟ ಈ ಪ್ರತಿಷ್ಠಿತ ಪುರಸ್ಕಾರಗಳ ಪಟ್ಟಿಯಲ್ಲಿ ಪಾರೀಖ್ ಅವರ ಸಾಧನೆ ಗಣನೀಯವಾಗಿ ದಾಖಲಾಗಿದೆ. ‘ಇದೊಂದು ಮಾನವೀಯ ಸಾಧನೆ’ ಎಂದು ನಿಯತಕಾಲಿಕದ ಸಂಪಾದಕ ಮಂಡಳಿ ಕೊಂಡಾಡಿದೆ. ತಂತ್ರಜ್ಞಾನ ಅದರಲ್ಲೂ ಮಾಹಿತಿ ತಂತ್ರಜ್ಞಾನ ಉಳ್ಳವರು ಮತ್ತು ಉಳ್ಳದವರ ನಡುವೆ ದೊಡ್ಡ ಕಂದಕ ನಿರ್ಮಿಸುತ್ತಿದೆ. ಇಂಥ ಕಂದಕ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ ಎಂಬುದು ಸಾಮಾನ್ಯ ಆಪಾದನೆ. ಪಾರೀಖ್ ಇಂಥ ಕಂದಕವನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬೇಕು, ಅಂಥ ಕಾರ್ಯ ಮಾಹಿತಿ ತಂತ್ರಜ್ಞಾನದಿಂದಲೇ ಸಾಧ್ಯವಾಗಬೇಕು ಎಂದು ಬಲವಾಗಿ ನಂಬಿದವರು. ತಮ್ಮ ಕನಸಿನ ಮೊದಲ ಮಾದರಿಯನ್ನವರು ಆಗಲೇ ಯಶಸ್ವಿಗೊಳಿಸಿದ್ದಾರೆ. ಪಾರೀಖರಂತವರು ಅದೇಶ್ಟೋ ಮಂದಿ ಅಮೆರಿಕಕ್ಕೆ ಹೋಗಿದ್ದಾರೆ, ಅಲ್ಲಿಯೇ ಹುಟ್ಟಿ ಬೆಳೆದು ಗಣನೀಯ ಸಾಧನೆಗಳನ್ನು ಮಾಡಿದ್ದಾರೆ. ಆದರೆ ಜನ ಸಾಮಾನ್ಯರಿಗೆ ಅದರಲ್ಲೂ ಭಾರತದಂಥ ಅಭಿವೃದ್ಧಶೀಲ ರಾಷ್ಟ್ರಗಳ ಬಡಮಂದಿಗೆ ನೆರವಾಗುವಂತೆ ತಂತ್ರಜ್ಞಾನಗಳನ್ನು ಬಳಸಿಕೊಂಡವರು ಕಡಿಮೆ. ಇದಕ್ಕೆ ಅಪವಾದವೆಂಬಂತೆ ಪಾರೀಖ್ ಪ್ರಶಂಸಾರ್ಹ ಸಾಧನೆ ಮಾಡಿದ್ದಾರೆ. ಭಾರತದಲ್ಲೊ, ಅಮೆರಿಕದಲ್ಲೊ ಮತ್ತಷ್ಟು ಪಾರೀಖರು ಹುಟ್ಟಿಬರಲಿ ಎಂದು ಹಾರೈಸೋಣ.&lt;/div&gt;&lt;div&gt;&lt;/div&gt;&lt;br /&gt;&lt;br /&gt;&lt;div&gt;&lt;strong&gt;&lt;em&gt;(ಕೃಪೆ: ‘ವಿಜಯ ಕರ್ನಾಟಕ’, 20-08-2007)&lt;/em&gt;&lt;/strong&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/752423363868781697-3511838198564247343?l=netnota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://netnota.blogspot.com/feeds/3511838198564247343/comments/default' title='Post Comments'/><link rel='replies' type='text/html' href='http://www.blogger.com/comment.g?blogID=752423363868781697&amp;postID=3511838198564247343' title='0 Comments'/><link rel='edit' type='application/atom+xml' href='http://www.blogger.com/feeds/752423363868781697/posts/default/3511838198564247343'/><link rel='self' type='application/atom+xml' href='http://www.blogger.com/feeds/752423363868781697/posts/default/3511838198564247343'/><link rel='alternate' type='text/html' href='http://netnota.blogspot.com/2007/08/blog-post_20.html' title='ಮಾಹಿತಿ ತಂತ್ರಜ್ಞಾನ ಜನಸಾಮಾನ್ಯರನ್ನು ನಿಜಕ್ಕೂ ಮುಟ್ಟೀತೆ?'/><author><name>HNS</name><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_WOq6aPUeAO4/SdR5qYZ87xI/AAAAAAAAAWg/cXIYJSqE8Z4/S220/sudhi1.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_WOq6aPUeAO4/Rsmk7EeiqyI/AAAAAAAAAOE/htdUL4NueMU/s72-c/parikh_tapan.jpg' height='72' width='72'/><thr:total>0</thr:total></entry><entry><id>tag:blogger.com,1999:blog-752423363868781697.post-2723252385778316232</id><published>2007-08-14T06:37:00.000+05:30</published><updated>2007-08-14T06:43:18.035+05:30</updated><title type='text'>ಯಕೃತ್ತಿನ ಜೀವಕೋಶಗಳಿಗೆ ಇನ್ನಿಲ್ಲ ವಿನಾಶ, ಕುತ್ತು!</title><content type='html'>&lt;img id="BLOGGER_PHOTO_ID_5098357307459972642" style="FLOAT: right; MARGIN: 0px 0px 10px 10px; CURSOR: hand" alt="" src="http://4.bp.blogspot.com/_WOq6aPUeAO4/RsEA9XkrLiI/AAAAAAAAAN0/3uoNt6q2n08/s200/Liver.jpg" border="0" /&gt;&lt;span style="font-size:180%;"&gt;&lt;strong&gt;ನ&lt;/strong&gt;&lt;/span&gt;ಮ್ಮ ದೇಹಕ್ಕೆ ಯಾವುದೇ ಒಂದು ಮದ್ದು ಒಗ್ಗುತ್ತದೆಯೆ? ಎಂಬ ಪರಿಶೀಲನೆ ನಡೆಸುವಾಗ ಅದು ‘ಲಿವರ್’ ಅಥವಾ ‘ಯಕೃತ್ತು’ವಿನ ಮೇಲೆ ಯಾವ ಬಗೆಯ ಪರಿಣಾಮಗಳನ್ನು ಬೀರುತ್ತದೆ ಎಂದು ತಿಳಿಯುವುದು ಅವಶ್ಯ. ಹೀಗಾಗಿ ಆವಿಷ್ಕಾರವಾದ ಹೊಸ ಮದ್ದಿನ ಮೊದಲ ಮಾದರಿಗಳನ್ನು ಯಕೃತ್ತಿನ ಮೇಲೆ ಪ್ರಯೋಗಿಸಿ ಅಡ್ಡ ಪರಿಣಾಮಗಳ ಬಗ್ಗೆ ದೀರ್ಘ ಕಾಲ ಅಧ್ಯನಗಳನ್ನು ನಡೆಸಲಾಗುತ್ತದೆ. ಏಕೆಂದರೆ, ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯಲ್ಲಿ ‘ಯಕೃತ್ತಿನ ಪಾತ್ರ ಬಹು ದೊಡ್ಡದು. ಪಿತ್ತರಸ ಸ್ರವಿಸುವ ಈ ನಾಳಿಯ ಗ್ರಂಥಿಯು ಜಠರದ ಬಲಭಾಗದಲ್ಲಿರುತ್ತದೆ. ನಾವು ಸೇವಿಸುವ ಆಹಾರದಲ್ಲಿನ ಕೊಬ್ಬನ್ನು ಇದು ಕರಗಿಸುತ್ತದೆ. ಗ್ಲುಕೋಸ್ ಅನ್ನು ಸಂಗ್ರಹಿಸಬಹುದಾದ ಶಕ್ತಿರೂಪವಾದ ಗ್ಲೈಕೋಜೆನ್ ಆಗಿ ಪರಿವರ್ತಿಸುತ್ತದೆ. ಪ್ರೋಟಿನ್‍ಗಳ ಆಧಾರ ಸ್ತಂಭಗಳಾದ ಅಮೈನೊ ಆಮ್ಲವನ್ನು ಇದು ರೂಪಿಸುತ್ತದೆ. ಮೂತ್ರಕ್ಕೆ ಸೇರುವ ವ್ಯರ್ಥ ಸಾಮಗ್ರಿ ಯೂರಿಯ ಅನ್ನು ಇದೇ ಉತ್ಪಾದಿಸುತ್ತದೆ. ದೇಹಕ್ಕೆ ಅಗತ್ಯವಾದ ಕೆಲವೊಂದು ರಕ್ತ ಪ್ರೋಟಿನ್‍ಗಳನ್ನು ಹಾಗೂ ಕಿಣ್ವಗಳನ್ನು ಇದು ಉತ್ಪಾದಿಸುತ್ತದೆ. ದೇಹವಿಡೀ ಪರಿಚಲಿಸುವ ರಕ್ತ ಯಕೃತ್ತಿನ ವ್ಯಾಪ್ತಿಯಡಿಯಲ್ಲಿ ಬಂದಾಗ ಜೀವಾಣು ವಿಷಗಳ ಇರುವಿಕೆಯ ಬಗ್ಗೆ ಅದು ತಪಾಸಣೆ ನಡೆಸುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ಅಂಥ ವಿಷಗಳನ್ನು ನಿವಾರಿಸುತ್ತದೆ. ಅಂದರೆ ನಮ್ಮ ಯಕೃತ್ತು ಸರಿಯಾಗಿ ಕೆಲಸ ಮಾಡುತ್ತಿದ್ದರೆ ದೇಹದ ಸ್ವಾಸ್ಥ್ಯವೂ ಚೆನ್ನಾಗಿದೆಯೆಂದು ಅರ್ಥ.&lt;br /&gt;&lt;div&gt;&lt;br /&gt;ಮನುಷ್ಯ ದೇಹದ ಯಕೃತ್ತು ಒಂದು ವಿಸ್ಮಯಗಳ ಆಗರ. ತನ್ನೊಳಗೆ ಬಂದ ರಾಸಾಯನಿಕ ಸಂಯುಕ್ತಗಳನ್ನು ಮತ್ತೊಂದು ರಾಸಾಯನಿಕ ಸಂಯುಕ್ತವಾಗಿ ಇದು ಪರಿವರ್ತಿಸುತ್ತದೆ. ಆದರೆ ಪ್ರಯೋಗಶಾಲೆಯಲ್ಲಿ ನೀವು ಸಂಸ್ಕರಿಸಿದ ರಾಸಾಯನಿಕ ಸಂಯುಕ್ತವನ್ನು ಮತ್ತೊಂದು ಯಾವ ರೂಪದ ರಾಸಾಯನಿಕ ಸಂಯುಕ್ತವಾಗಿ ಇದು ಪರಿವರ್ತಿಸಬಲ್ಲದು ಎಂದು ಲೆಕ್ಕ ಹಾಕಲಾಗುವುದಿಲ್ಲ. ಅಷ್ಟರ ಮಟ್ಟಿಗೆ ಅದೊಂದು ಗೌಪ್ಯ ಕಾರ್ಯಾಗಾರ. ಎಷ್ಟೋ ಬಾರಿ ಔಷಧದ ರಾಸಾಯನಿಕವು ವಿಷವಸ್ತುವಾಗಿರುವುದಿಲ್ಲ, ಆದರೆ ಯಕೃತ್ತಿನ ಕಾರ್ಯಾಚರಣೆಯಿಂದ ವಿಷವಸ್ತುವಾಗಿ ಬದಲಾಗುವ ಸಾಧ್ಯತೆಯಿರುತ್ತದೆ. ಕಂಪ್ಯೂಟರ್ ಮಾದರಿಗಳೂ ಸೇರಿದಂತೆ ಸದ್ಯಕ್ಕೆ ಲಭ್ಯವಿರುವ ಯಾವುದೇ ತಂತ್ರಜ್ಞಾನಗಳು ಯಕೃತ್ತಿನ ಕಾರ್ಯಾಚರಣೆಯನ್ನು ನಿಖರವಾಗಿ ತಿಳಿಪಡಿಸಲು ಸಾಧ್ಯವಿಲ್ಲ. ಅಂದರೆ ಮದ್ದೊಂದರ ಕಾರ್ಯಕ್ಷಮತೆಯನ್ನು ಪರಿಪೂರ್ಣವಾಗಿ ಅಳೆಯಲು ಯಕೃತ್ತಿನ ಮೇಲೆ ಪ್ರಯೋಗ ನಡೆಸಬೇಕು. ಮನುಷ್ಯನಿಗೆ ಹತ್ತಿರದ ಸ್ತನಿಗಳ ಮೇಲೆ (ಅವುಗಳ ಯಕೃತ್ತಿನ ಮೇಲೆ) ಪ್ರಯೋಗಗಳನ್ನು ಹಮ್ಮಿಕೊಳ್ಳಬಹುದಲ್ಲವೆ? ಎಂಬುದು ಪ್ರಶ್ನೆ. ಪ್ರತಿಯೊಂದು ಜೀವಿಯ ಯಕೃತ್ತಿನ ಸಂಯೋಜನೆ ಹಾಗೂ ಕಾರ್ಯಾಚರಣೆಗಳು ವಿಭಿನ್ನವಾಗಿರುವ ಕಾರಣ, ತುಲನಾತ್ಮಕ ಪ್ರಯೋಗ ಫಲಿತಾಂಶಗಳು ನಿಖರವಾಗಿರಲು ಸಾಧ್ಯವಿಲ್ಲ. &lt;/div&gt;&lt;br /&gt;&lt;div&gt;&lt;br /&gt;ಯಕೃತ್ತನ್ನು ಕಾಡುವ ಮಾರಣಾಂತಕ ಕಾಯಿಲೆಗಳೆಂದರೆ ‘ಮಲೇರಿಯ’ ಹಾಗೂ ‘ಹೆಪಟೈಟಿಸ್-ಸಿ’. ಇವುಗಳ ನಿವಾರಣೆಗೆ ಅತ್ಯಂತ ಸುರಕ್ಷವಾದ, ಅಗ್ಗದ ದರದಲ್ಲಿ ಲಭ್ಯವಾಗುವ, ಅಡ್ಡ ಪರಿಣಾಮಗಳು ಕಡಿಮೆ ಇರುವ, ಸುಲಭ ಮಾರ್ಗದಲ್ಲಿ ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಬಲ್ಲ ಔಷಧಗಳನ್ನು ಸಂಯೋಜಿಸಲಾಗುತ್ತಿದೆ. ಹೊಸ ಮದ್ದುಗಳು ಆವಿಷ್ಕಾರವಾದ ಸಂದರ್ಭಗಳಲ್ಲಿ, ಮನುಷ್ಯನ ಯಕೃತ್ತಿನ ಮೇಲೆ ನೇರವಾಗಿ ಪ್ರಯೋಗಗಳನ್ನು ನಡೆಸಲು ಸಾಧ್ಯವಾಗದ ಕಾರಣ, ಯಕೃತ್ತಿನಿಂದ ಹೊರತೆಗೆದ ಜೀವಕೋಶಗಳ ಮೇಲೆ ವಿಸ್ತೃತ ಅಧ್ಯಯನಗಳನ್ನು ಕೈಗೊಳ್ಳಲಾಗುತ್ತದೆ. ಹೀಗಾಗಿ ಜಗತ್ತಿನಾದ್ಯಂತ ಯಕೃತ್ತಿನ ಜೀವಕೋಶಗಳಿಗೆ ಬೇಡಿಕೆ ಅತ್ಯಂತ ಹೆಚ್ಚಿನದು. ಒಂದು ಅಂದಾಜಿನಂತೆ ಈ ಮಾರುಕಟ್ಟೆಯ ಮೌಲ್ಯ ವಾರ್ಷಿಕ ಎರಡು ಶತ ಕೋಟಿ ಅಮೆರಿಕನ್ ಡಾಲರ್‌ಗಳು (ಅಂದರೆ ಸರಿ ಸುಮಾರು ಎಂಟು ಸಹಸ್ರ ಕೋಟಿ ರೂಪಾಯಿಗಳು). ಆದರೆ ದುಡ್ಡು ಚೆಲ್ಲುತ್ತೇನೆಂದರೂ ಯಕೃತ್ತಿನ ಜೀವಕೋಶಗಳು ಅಷ್ಟು ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಈ ಹಿಂದೆ ತಿಳಿಸಿದಂತೆ ಯಕೃತ್ತು ಮನುಷ್ಯ ದೇಹದ ಅತಿ ಮುಖ್ಯ ಅಂಗ. ಇಂದಿನ ಬದಲಿ ಜೋಡಣೆ ಯುಗದಲ್ಲಿ ಯಕೃತ್ತನ್ನು ‘ಆಕರ ಕೋಶ’ ಅಂದರೆ ‘ಸ್ಟೆಮ್ ಸೆಲ್ಸ್’ಗಳ ನೆರವಿನಿಂದ ಪ್ರತ್ಯೇಕವಾಗಿ ಬೆಳೆಸಿ ಶಸ್ತ್ರಕ್ರಿಯೆಯ ಮೂಲಕ ಪುನರ್ಜೋಡಣೆ ಮಾಡಬಹುದು. ಹೀಗೆ ಯಕೃತ್ತನ್ನು ನಿರ್ಮಿಸುವಾಗ ಹೆಚ್ಚುವರಿಯಾದ ಅಥವಾ ಪರಿಪೂರ್ಣವಾಗಿ ಬೆಳೆಯದ ಅಥವಾ ನಿರುಪಯೋಗಿಯೆನಿಸಿದ ಜೀವಕೋಶಗಳು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತವೆ. ಗುಣ ಮಟ್ಟ ಕಡಿಮೆಯಿರುವ ಅಂಥ ಜೀವಕೋಶಗಳನ್ನು ಔಷಧ ಕಂಪನಿಗಳು ಕೊಂಡು ತಮ್ಮ ಪ್ರಯೋಗಗಳಿಗೆ ಬಳಸಿಕೊಳ್ಳುತ್ತವೆ. ಇವುಗಳ ಜೀವಿತಾವಧಿ ತೀರಾ ಕಡಿಮೆಯಿರುವುದರಿಂದ ಲಭ್ಯವಿರುವ ಸಮಯದಲ್ಲಿಯೇ ಪ್ರಯೋಗಗಳನ್ನು ಹಮ್ಮಿಕೊಳ್ಳಬೇಕು. ಅಂದರೆ ಬೇಕೆಂದಾಗಲೆಲ್ಲಾ ಯಕೃತ್ತಿನ ಜೀವಕೋಶಗಳು ಸಿಗುವುದಿಲ್ಲ ಎಂದರ್ಥ. &lt;/div&gt;&lt;br /&gt;&lt;div&gt;&lt;br /&gt;ಈ ಬಗ್ಗೆ ಚಿಂತಿಸುತ್ತಿದ್ದ ಜೀವ ವಿಜ್ಞಾನಿಗಳು ಹಾಗೂ ಜೈವಿಕ ತಂತ್ರಜ್ಞರು ಕಳೆದ ಹತ್ತು ವರ್ಷಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದಾರೆ. ಜೀವಿಯೊಂದರ ಗುಣಾವಗುಣಗಳನ್ನು ನಿರ್ಧರಿಸುವ ‘ಜೀನ್’ ಅಥವಾ ‘ಗುಣಾಣು’ ಹಾಗೂ ‘ವರ್ಣತಂತು’ ಅಥವಾ ‘ಕ್ರೋಮೋಸೋಮ್’ಗಳ ರಚನೆ ಹಾಗೂ ಅವುಗಳ ರಾಸಾಯನಿಕ ಸಂಯೋಜನೆಗಳ ಬಗ್ಗೆ ಆರಂಭವಾದ ಮಹತ್ವದ ಯೋಜನೆಯ ಹೆಸರು ‘ಜೀನೋಮ್’. ‘ಜೀನ್’ಗಳು ರೂಪುಗೊಳ್ಳಲು ಎಂಥ ನೀಲಿನಕ್ಷೆ ಆಧಾರವಾಗಿದೆಯೆಂಬ ವಿಷಯ ಮನದಟ್ಟಾದಂತೆ ಒಂದು ಜೀವಿಯ ಜೀನ್ ಅನ್ನು ಮತ್ತೊಂದು ಜೀವಿಗೆ ಜೋಡಿಸುವ ಕಸಿ ವಿಜ್ಞಾನ ಪ್ರಗತಿ ಸಾಧಿಸಿತು. ಈ ಸಂದರ್ಭದಲ್ಲಿ ಜೀವ ವಿಜ್ಞಾನಿಗಳು ಇಲಿಗಳ ದೇಹದಲ್ಲಿ ಮನುಷ್ಯನ ಯಕೃತ್ತಿನ ಜೀವಕೋಶಗಳನ್ನು ಬೆಳೆಸಲು ಸಾಧ್ಯವೆ? ಎಂಬ ಪರಿಶೀಲನೆ ನಡೆಸಿದರು. ಮೂರು ವರ್ಷಗಳ ಹಿಂದೆ ಮಾನವ ಯಕೃತ್ತಿನ ಜೀವಕೋಶಗಳನ್ನು ಇಲಿಯ ದೇಹದಲ್ಲಿ ಸಂಸ್ಕರಿಸಲು ಸಾಧ್ಯವೂ ಆಯಿತು. ಆದರೆ ಪ್ರಯೋಗಗಳು ಅಷ್ಟೊಂದು ಯಶಸ್ಸನ್ನು ತರಲಿಲ್ಲ. ಜೀನ್ ಮಾರ್ಪಡಿಸಿಕೊಂಡ ಇಲಿಗಳನ್ನು ಸಾಕುವುದು ಅಷ್ಟು ಸುಲಭವಾಗಿರಲಿಲ್ಲ. ಇಲಿಗಳ ದೇಹದಲ್ಲಿ ಮಾನವ ಯಕೃತ್ತಿನ ಜೀವಕೋಶಗಳನ್ನು (ಜೀನ್ ಕಸಿಯ ಮೂಲಕ) ಸೇರ್ಪಡೆ ಮಾಡಲು ಲಭ್ಯವಿರುವ ಕಾಲಾವಧಿಯೂ ತೀರಾ ಅಲ್ಪವಾಗಿರುತ್ತಿದ್ದವು. ಬಹುತೇಕ ಬಾರಿ ಇಲಿಯ ಯಕೃತ್ತು ಮಾನವ ಯಕೃತ್ತಿನ ಜೀವಕೋಶಗಳನ್ನು ಒಪ್ಪಿಕೊಳ್ಳದೆಯೆ ತಿರಸ್ಕರಿಸುತ್ತಿದ್ದವು. ಜತೆಗೆ ಇಲಿಗಳಿಗೆ ಅದೇಷ್ಟೇ ರೋಗನಿರೋಧಕ ಚಿಕಿತ್ಸೆ ನೀಡಿದ್ದರೂ, ಬಹುಬೇಗ ಕಾಯಿಲೆಗಳಿಗೆ ತುತ್ತಾಗುತ್ತಿದ್ದವು. &lt;/div&gt;&lt;br /&gt;&lt;div&gt;&lt;br /&gt;ಇವೆಲ್ಲ ಕೊರತೆಗಳ ನಿವಾರಣೆಗೆ ಜಗತ್ತಿನ ಹಲವಾರು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಸಂಶೋಧನೆಗಳನ್ನು ಹಮ್ಮಿಕೊಂಡಿದ್ದವು. ಇವುಗಳಲ್ಲಿ ಅಮೆರಿಕದ ಓರೆಗಾನ್‍ನಲ್ಲಿನ ‘ಸ್ವಾಸ್ಥ್ಯ ಹಾಗೂ ವಿಜ್ಞಾನ ವಿಶ್ವವಿದ್ಯಾಲಯ’ ಗಣನೀಯ ಪ್ರಗತಿ ಸಾಧಿಸಿದೆ. ಜೈವಿಕ ತಂತ್ರಜ್ಞಾನ ವಿಷಯಗಳಿಗೆಂದೇ ಪ್ರತ್ಯೇಕವಾದ ನಿಯತಕಾಲಿಕ ಆರಂಭಿಸಿರುವ ಪ್ರತಿಷ್ಠಿತ ವಿಜ್ಞಾನ ಪತ್ರಿಕೆ ‘ನೇಚರ್’ನ ಇತ್ತೀಚಿನ ಸಂಚಿಕೆಯಲ್ಲಿ ವರದಿಯಾಗಿರುವಂತೆ ಇನ್ನು ಮುಂದೆ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯಾಗಲಿದೆ. ಮನುಷ್ಯ ದೇಹದ ಯಕೃತ್ತಿನ ಜೀವಕೋಶಗಳನ್ನು ಇಲಿಗಳ ದೇಹದಲ್ಲಿಯೇ ಇನ್ನು ಮುಂದೆ ಉತ್ಪಾದಿಸಬಹುದು. ಅದು ಎಷ್ಟರ ಮಟ್ಟಿಗೆಂದರೆ ಇಲಿಗಳ ಹಿಂಡೊಂದನ್ನು ಸಾಕುವುದರ ಮೂಲಕ ಮನುಷ್ಯ ದೇಹದ ಯಕೃತ್ತಿನ ಜೀವಕೋಶಗಳನ್ನು ಉತ್ಪಾದಿಸುವ ಕಾರ್ಖಾನೆಯೊಂದನ್ನೇ ಆರ್‍ಅಂಭಿಸಬಹುದು. ವಿಶ್ವವಿದ್ಯಾಲಯ ಹೊರಡಿಸಿರುವ ಪ್ರಕಟಣೆಯ ಪ್ರಕಾರ ಇನ್ನು ಮುಂದೆ ಯಾವುದೇ ಹೊಸ ಮದ್ದಿನ ಪರಿಣಾಮ ಅಡ್ಡ ಪರಿಣಾಮಗಳನ್ನು ನಿರ್ಧರಿಸಲು ಇಲಿಗಳ ಯಕೃತ್ತು ವೇದಿಕೆಯಾಗಲಿದೆ. ಅಂದರೆ ಇಲಿಗಳ ದೇಹದಿಂದ ಉತ್ಪತ್ತಿಯಾದ ಮನುಷ್ಯ ಯಕೃತ್ತಿನ ಜೀವಕೋಶಗಳ ಮೇಲಿನ ಪರೀಕ್ಷೆಗಳೇ ಮಾನದಂಡವಾಗಲಿವೆ. ಯಕೃತ್ತಿನ ಸಂಸ್ಕರಣೆಯ ನಂತರ ಯಾವ ರಾಸಾಯನಿಕ ಸಂಯುಕ್ತವು ವಿಷವಸ್ತುವಾಗಿ ಬದಲಾಗಲಿದೆ ಎಂದೂ ಸಹ ತಿಳಿದುಕೊಳ್ಳಬಹುದು. ಈ ಒಂದು ವಿನೂತನ ಯೋಜನೆಯ ನೇತೃತ್ವ ವಹಿಸಿದ್ದವರು ಓರೆಗಾನ್ ವಿವಿಯಲ್ಲಿ ಜೀನೆಟಿಕ್ಸ್‍ಗೆ ಸಂಬಂಧಿಸಿದ ಅಣು ಹಾಗೂ ವೈದ್ಯಕೀಯ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ ಮಾರ್ಕಸ್ ಗ್ರೊಂಪ್. ಅವರ ಅಭಿಪ್ರಾಯದಂತೆ ಜೀನ್ ಚಿಕಿತ್ಸೆ, ಆಕರ ಕೋಶ ಅಭಿವೃದ್ಧಿ ಹಾಗೂ ಯಕೃತ್ತಿಗೆ ಸಂಬಂಧಿಸಿದ ಮಾರಣಾಂತಕ ಕಾಯಿಲೆಗಳ ನಿವಾರಣೆಯಲ್ಲಿ ಈ ಜೀವಕೋಶಗಳು ಮಹತ್ತರ ಪಾತ್ರ ವಹಿಸಲಿವೆ. &lt;/div&gt;&lt;br /&gt;&lt;div&gt;&lt;br /&gt;ಈ ಯೋಜನೆಯ ಕಾರ್ಯನಿರ್ವಹಣೆಯಲ್ಲೊಂದು ವೈಶಿಷ್ಟ್ಯವಿದೆ. ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆಗಳ ಫಲಿತಾಂಶ ಜನಸಾಮಾನ್ಯರನ್ನು ತಲುಪುವುದು ನಿಧಾನವಾಗುತ್ತದೆ. ಕಾರಣ, ಸಂಶೋಧನೆಯಲ್ಲಿ ಕಂಡ ಹೊಳಹುಗಳನ್ನು ಕಾರ್ಯರೂಪಕ್ಕಿಳಿಸುವ ಉದ್ದಿಮೆಗಳಿಗೂ ವಿದ್ಯಾಲಯಗಳಿಗೂ ಅಷ್ಟೊಂದು ಹೊಂದಾಣಿಕೆಯಿರುವುದಿಲ್ಲ. ಇದ್ದಕ್ಕೆ ಅಪವಾದವೆಂಬಂತೆ ಓರೆಗಾನ್ ವಿಶ್ವವಿದ್ಯಾಲಯ ಗ್ರೊಂಪ್ ಅವರ ಹೆಸರಿನಲ್ಲಿ ‘ಹಕ್ಕು ಸ್ವಾಮ್ಯ’ ಅಥವಾ ‘ಪೇಟೆಂಟ್’ಗಾಗಿ ಅರ್ಜಿಯನ್ನು ಈಗಾಗಲೇ ಸಲ್ಲಿಸಿದೆ. ಜತೆಗೆ ‘ಯೆಕ್ಯುರಿಸ್’ ಎಂಬ ಔಷಧ ಸಂಸ್ಥೆಯೊಂದಿಗೆ ಸಹಭಾಗಿತ್ವದ ಒಪ್ಪಂದಕ್ಕೆ ಸಹಿ ಮಾಡಿದೆ. ಇಂಥ ಹೆಗ್ಗಳಿಕೆ ಓರೆಗಾನ್ ವಿಶ್ವವಿದ್ಯಾಲಯಕ್ಕೆ ಹೊಸತೇನಲ್ಲ. ಅಲ್ಲಿ ತಂತ್ರಜ್ಞಾನ ಹಾಗೂ ಸಂಶೋಧನಾ &lt;a href="http://2.bp.blogspot.com/_WOq6aPUeAO4/RsEBT3krLjI/AAAAAAAAAN8/oTgDBdzZ9fc/s1600-h/Arundeep+Pradhan.jpg"&gt;&lt;img id="BLOGGER_PHOTO_ID_5098357694007029298" style="FLOAT: left; MARGIN: 0px 10px 10px 0px; CURSOR: hand" alt="" src="http://2.bp.blogspot.com/_WOq6aPUeAO4/RsEBT3krLjI/AAAAAAAAAN8/oTgDBdzZ9fc/s200/Arundeep+Pradhan.jpg" border="0" /&gt;&lt;/a&gt;ಸಹಭಾಗಿತ್ವಕ್ಕೆಂದೇ ಒಂದು ಪ್ರತ್ಯೇಕ ಕೇಂದ್ರವಿದೆ. ಅದರ ನಿರ್ದೇಶಕರಾದ ಅರುಣದೀಪ್ ಪ್ರಧಾನ್ ಅವರ ಮೇರೆ ಮೀರಿದ ಉತ್ಸಾಹದಿಂದ ಓರೆಗಾನ್ ವಿಶ್ವವಿದ್ಯಾಲಯದ ಸಂಶೋಧನೆಗಳಿಗೆ ಜಾಗತಿಕ ಮನ್ನಣೆ ಸಿಕ್ಕಿವೆ, ಜತೆಗೆ ಸಂಶೋಧನೆಗಳ ಫಲಿತಾಂಶ ಹೆಚ್ಚು ಜನರನ್ನು ಮುಟ್ಟಿವೆ. ಔಷಧ ಅಭಿವೃದ್ಧಿಯಲ್ಲಿ ಇದುವರೆಗೂ ಇದ್ದ ಅಡೆತಡೆಗಳನ್ನು ಸದ್ಯದ ಸಂಶೋಧನೆ ನಿವಾರಿಸಲಿದೆ ಎಂಬ ಆತ್ಮವಿಶ್ವಾಸ ಪ್ರಧಾನ್ ಅವರದು. ಮನುಷ್ಯ ದೇಹದ ಯಕೃತ್ತಿನ ಜೀವಕೋಶಗಳನ್ನು ಜೋಡಿಸಿದೊಡನೆಯೆ ಅವುಗಳ ವಿರುದ್ಧ ಧಾಳಿ ನಡೆಸುತ್ತಿದ್ದ ಸುರಕ್ಷಾ ವ್ಯವಸ್ಥೆಯ ಕಾರ್ಯಾಚರಣೆಯನ್ನು ಗ್ರೊಂಪ್ ನೇತೃತ್ವದ ತಂಡ ಗುರುತಿಸಿದೆ. ಅಂಥ ಧಾಳಿಯನ್ನು ತಡೆಗಟ್ಟಲು ಯಾವ ಬಗೆಯ ಔಷಧವನ್ನು ಇಲಿಗಳಿಗೆ ಮೊದಲೇ ಚುಚ್ಚಿರಬೇಕು ಎಂಬುದನ್ನೂ ತಂಡ ನಿರ್ಧರಿಸಿಕೊಂಡಿದೆ. ಕೆಲವೊಂದು ಯಕೃತ್ತಿನ ಕಾಯಿಲೆಗಳು ಉಗಮವಾಗಲು ಜೀವಕೋಶಗಳಲ್ಲಿನ ಯಾವ ನ್ಯೂನತೆಗಳು ಕಾರಣ? ಅವುಗಳಿಗೆ ಸೂಕ್ತವಾದ ಜೀನ್ ಚಿಕಿತ್ಸೆಯೊಂದನ್ನು ಅಭಿವೃದ್ಧಿ ಪಡಿಸಬಹುದೆ? ಮತ್ತಿತರ ಪ್ರಶ್ನೆಗಳಿಗೂ ಓರೆಗಾನ್ ವಿಶ್ವವಿದ್ಯಾಲಯದ ವೈದ್ಯ ವಿಜ್ಞಾನಿಗಳ ತಂಡ ಉತ್ತರಗಳನ್ನು ಕಂಡುಕೊಳ್ಳುತ್ತಿವೆ. ಇಲಿಯೊಂದರ ಜೀವಿತಾವಧಿಯಲ್ಲಿ ಕನಿಷ್ಠವೆಂದರೂ ನಾಲ್ಕು ಬಾರಿ ಮನುಷ್ಯ ದೇಹದ ಯಕೃತ್ತಿನ ಜೀವಕೋಶಗಳನ್ನು ಚುಚ್ಚಬಹುದು. ಪ್ರತಿ ಬಾರಿಯೂ ಇಲಿಯೊಂದು ಎರಡು ಕೋಟಿ ಮಾನವ ಯಕೃತ್ತಿನ ಜೀವಕೋಶಗಳನ್ನು ಉತ್ಪಾದಿಸಬಲ್ಲದು. &lt;/div&gt;&lt;br /&gt;&lt;div&gt;&lt;br /&gt;ಈ ಬಗೆಯ ಮಾಹಿತಿಯನ್ನು ಸಮರ್ಪಕವಾಗಿ ಕ್ರೋಢೀಕರಿಸುವುದು ಬಹು ಕಷ್ಟದ ಕೆಲಸ. ಇದನ್ನು ಪ್ರಧಾನವಾಗಿ ಕೈಗೆತ್ತಿಕೊಂಡಿರುವ ಅರುಣದೀಪ್ ಅವರ ಕಾರ್ಯಕ್ಷೇತ್ರ ‘ತಂತ್ರಜ್ಞಾನ ವ್ಯವಸ್ಥಾಪನೆ’. ರಾಜಾಸ್ಥಾನದ ಪಿಲಾನಿಯಲ್ಲಿರುವ ಪ್ರತಿಷ್ಠಿತ ‘ಬಿರ್ಲಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಕಲ್ ಸೈನ್ಸಸ್ - ಬಿಐಟಿಎಸ್’ನಲ್ಲಿ ಎಂಜಿನೀರಿಂಗ್ ಪದವಿ ಪಡೆದಿರುವ ಪ್ರಧಾನ ಮುಂದೆ ತಮ್ಮ ವಿದ್ಯಾವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದ್ದು ಓರೆಗಾನ್ ವಿಶ್ವವಿದ್ಯಾಲಯದಲ್ಲಿ. ತಂತ್ರಜ್ಞಾನಗಳ ಅಭಿವೃದ್ಧಿಗಿಂತಲೂ ಅವುಗಳ ನಿರ್ವಹಣೆ ಹಾಗೂ ವ್ಯವಸ್ಥಾಪನೆ ಬಹು ಕಷ್ಟದ್ದೆಂದು ಆ ವೇಳೆಗೆ ಅವರಿಗೆ ಮನವರಿಕೆಯಾಗಿತ್ತು. ತಮ್ಮ ಕಾರ್ಯಕ್ಷೇತ್ರವನ್ನು ತಂತ್ರಜ್ಞಾನ ವ್ಯವಸ್ಥಾಪನೆಯತ್ತ ಹಿಗ್ಗಿಸಿಕೊಂಡ ಪ್ರಧಾನ ಸದ್ಯಕ್ಕೆ ಓರೆಗಾನ್ ವಿಶ್ವವಿದ್ಯಾಲಯಕ್ಕೆ ಲಭ್ಯವಿರುವ ಅಮೂಲ್ಯ ಆಸ್ತಿ. ಕೇವಲ ಓರೆಗಾನ್ ವಿಶ್ವವಿದ್ಯಾಲಯವಷ್ಟೇ ಅಲ್ಲ, ಜಗತ್ತಿನ ತಂತ್ರಜ್ಞಾನ ವ್ಯವಸ್ಥಾಪನಾ ಕ್ಷೇತ್ರದಲ್ಲಿ ಅವರದು ಅತಿ ದೊಡ್ಡ ಹೆಸರು. ಮನುಷ್ಯನ ದೇಹಕ್ಕೆ ಯಕೃತ್ತು ಎಷ್ಟು ಪ್ರಧಾನವೋ ಅಭಿವೃದ್ಧಿಗೊಂಡ ತಂತ್ರಜ್ಞಾನಗಳಿಗೆ ಸೂಕ್ತ ವ್ಯವಸ್ಥಾಪನೆಯೂ ಮುಖ್ಯ. ಇಂಥದೊಂದು ಬಲವಾದ ನಂಬಿಕೆಯೇ ಅರುಣದೀಪ್ ಅವರನ್ನು ಪ್ರಧಾನ ಸ್ಥಾನಕ್ಕೇರಿಸಿದೆ. ಮನುಕುಲಕ್ಕೆ ಒಳಿತು ತರುವ ಅವರ ಕಾರ್ಯಗಳಿಗೆ ಶುಭವಾಗಲಿ.&lt;br /&gt;&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;br /&gt;&lt;/div&gt;&lt;br /&gt;&lt;div&gt;&lt;strong&gt;&lt;em&gt;(ಕೃಪೆ: ವಿಜಯ ಕರ್ನಾಟಕ, 13-08-2007)&lt;/em&gt;&lt;/strong&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/752423363868781697-2723252385778316232?l=netnota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://netnota.blogspot.com/feeds/2723252385778316232/comments/default' title='Post Comments'/><link rel='replies' type='text/html' href='http://www.blogger.com/comment.g?blogID=752423363868781697&amp;postID=2723252385778316232' title='0 Comments'/><link rel='edit' type='application/atom+xml' href='http://www.blogger.com/feeds/752423363868781697/posts/default/2723252385778316232'/><link rel='self' type='application/atom+xml' href='http://www.blogger.com/feeds/752423363868781697/posts/default/2723252385778316232'/><link rel='alternate' type='text/html' href='http://netnota.blogspot.com/2007/08/blog-post_14.html' title='ಯಕೃತ್ತಿನ ಜೀವಕೋಶಗಳಿಗೆ ಇನ್ನಿಲ್ಲ ವಿನಾಶ, ಕುತ್ತು!'/><author><name>HNS</name><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_WOq6aPUeAO4/SdR5qYZ87xI/AAAAAAAAAWg/cXIYJSqE8Z4/S220/sudhi1.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_WOq6aPUeAO4/RsEA9XkrLiI/AAAAAAAAAN0/3uoNt6q2n08/s72-c/Liver.jpg' height='72' width='72'/><thr:total>0</thr:total></entry><entry><id>tag:blogger.com,1999:blog-752423363868781697.post-3790228333308901296</id><published>2007-08-06T07:05:00.000+05:30</published><updated>2007-08-06T07:18:32.506+05:30</updated><title type='text'>ನೀಗಿಸಲು ವಿದ್ಯುತ್ ಬರ, ಏರಿತು ಜನರೇಟರ್ ಮತ್ತಷ್ಟು ಎತ್ತರ!</title><content type='html'>&lt;strong&gt;&lt;span style="font-size:180%;"&gt;`R&lt;/span&gt;&lt;/strong&gt;each for the Sky!' ಉನ್ನತ ಮಟ್ಟದ ಸಾಧನೆ ಮಾಡಬೇಕೆಂದು ಹಂಬಲಿಸುವವರನ್ನು ಪ್ರೋತ್ಸಾಹಿಸುವ ನುಡಿಗಳಿವು. ವಿಮಾನ ಹಾಗೂ ಬಾಹ್ಯಾಕಾಶ ಯಾನಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಬಂದ ಮೇಲೆ, ‘ಮುಗಿಲು ಮುಟ್ಟುವ’ ಅ&lt;a href="http://2.bp.blogspot.com/_WOq6aPUeAO4/RrZ8NnkrLfI/AAAAAAAAANc/kH_MoPlt1VU/s1600-h/roddam.jpg"&gt;&lt;img id="BLOGGER_PHOTO_ID_5095396601819246066" style="FLOAT: right; MARGIN: 0px 0px 10px 10px; CURSOR: hand" alt="" src="http://2.bp.blogspot.com/_WOq6aPUeAO4/RrZ8NnkrLfI/AAAAAAAAANc/kH_MoPlt1VU/s200/roddam.jpg" border="0" /&gt;&lt;/a&gt;ಥವಾ ‘ಆಗಸದತ್ತ ಜಿಗಿಯುವ’ ಕಾರ್ಯಗಳಲ್ಲಿ ನಮಗೆ ವಿಶೇಷತೆಗಳೇನೂ ಕಾಣುತ್ತಿಲ್ಲ. &lt;a href="http://3.bp.blogspot.com/_WOq6aPUeAO4/RrZ8B3krLeI/AAAAAAAAANU/0pcYqU6-RjA/s1600-h/roddam.jpg"&gt;&lt;/a&gt;ಡಾ ರೊದ್ದಂ ನರಸಿಂಹ ನಿಮಗೆ ಗೊತ್ತಿರಬೇಕು. ‘ವಾಯು ಚಲನ ವಿಜ್ಞಾನ’ ವಿಷಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಪ್ರಾಧ್ಯಾಪಕರು. ಹಿಂದೆ ಬೆಂಗಳೂರಿನ ‘ಭಾರತೀಯ ವಿಜ್ಞಾನ ಮಂದಿರ (ಭಾವಿಮಂ)’ದ ವೈಮಾಂತರಿಕ್ಷ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದವರು. ದೇಶದ ಹೆಮ್ಮೆಯ ‘ರಾಷ್ಟ್ರೀಯ ವೈಮಾನಿಕ ಪ್ರಯೋಗಶಾಲೆಗಳ (ರಾವೈಪ್ರ)’ ನಿರ್ದೇಶಕರಾಗಿದ್ದವರು. ಇವರ ಅಧಿಕಾರಾವಧಿಯಲ್ಲಿ ‘ರಾವೈಪ್ರ’ ನಾಗರೀಕ ವಿಮಾನಗಳ ವಿನ್ಯಾಸ ಹಾಗೂ ನಿರ್ಮಾಣ ಕೈಗೆತ್ತಿಗೊಂಡಿತು. ಜತೆಗೆ ದೇಶದ ಹೆಮ್ಮೆಯ ‘ಹಗುರ ಯುದ್ಧ ವಿಮಾನ - ತೇಜಸ್’ ಇವರ ನೇತೃತ್ವದಲ್ಲಿ ಮುಗಿಲು ಮುಟ್ಟಿತು. ‘ಭಾವಿಮಂ’ ಆವರಣದಲ್ಲಿಯೇ ಇರುವ ‘ಉನ್ನತ ಅಧ್ಯಯನಗಳ ರಾಷ್ಟ್ರೀಯ ವಿದ್ಯಾಲಯ’ದ ನಿರ್ದೇಶಕತ್ವದ ನಂತರ ಸದ್ಯಕ್ಕೆ ‘ಜವಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನೆಗಳ ಕೇಂದ್ರ’ದ ಪ್ರಾಧ್ಯಾಪಕರಾಗಿದ್ದಾರೆ. ಎಂಜಿನೀರಿಂಗ್ ವಿಭಾಗದಲ್ಲಿ ಬ್ರಿಟನ್ನಿನ ರಾಯಲ್ ಸೊಸೈಟಿಯ ಫೆಲೋಶಿಪ್ ಪಡೆದಿರುವ ಹಾಗೂ ಅಮೆರಿಕದ ರಾಷ್ಟ್ರೀಯ ಎಂಜಿನೀರಿಂಗ್ ಅಕ್ಯಾಡೆಮಿಯ ಸದಸ್ಯತ್ವ ಪಡೆದಿರುವ ಕೆಲವೇ ಭಾರತೀಯರಲ್ಲಿ ರೊದ್ದಂ ಒಬ್ಬರು. ಇಂಥ ರೊದ್ದಂ ಸದಾ ಹೇಳುವ ತಮಾಷೆಯ ಮಾತೊಂದಿದೆ. ನೆಲದ ಮೇಲಿಂದ ಸಹಸ್ರಾರು ಅಡಿಗಳಷ್ಟು ಎತ್ತರದಲ್ಲಿನ ವಾತಾವರಣದ ಬಗ್ಗೆ ನಾವು ಎಷ್ಟೊಂದು ತಿಳಿದಿದ್ದೇವೆ, ಆದರೆ ನಮ್ಮ ಕಾಲಿನ ಅಡಿಯಿಂದ ಒಂದೆರಡು ಅಡಿಗಳಷ್ಟು ಮೇಲಿನವರೆಗಿನ ವಾಯು ಚಲನೆಯ ವಿಜ್ಞಾನದ ಸೂಕ್ಷ್ಮತೆಗಳನ್ನು ಇನ್ನೂ ಸರಿಯಾಗಿ ತಿಳಿದುಕೊಳ್ಳಲಾಗಿಲ್ಲ. ಅಂದರೆ ನಿಮ್ಮ ತಿಳಿವಳಿಕೆಯ ವಿಜ್ಞಾನ ನಿಯಮಗಳನ್ನು ಮೀರಿ ಗಾಳಿ ಹರಿದಾಡುತ್ತದೆ.&lt;br /&gt;ಗಾಳಿಯ ಹರಿದಾಟ ನಮಗೆಂದೂ ಸೋಜಿಗದ ವಿಷಯ. ಗಾಳಿಪಟ ಹಾರಿಬಿಟ್ಟ ದಿನಗಳನ್ನು ನೆನಪಿಸಿಕೊಳ್ಳಿ. ಹಕ್ಕಿಗಳ, ಚಿಟ್ಟೆಗಳ ಹಾರಾಟವನ್ನು ಹತ್ತಿರದಲ್ಲಿ ಕಂಡು ಬೆರಗಾದದ್ದನ್ನು ನೆನಪಿಸಿಕೊಳ್ಳಿ. ಆಗಸದಲ್ಲಿ ಸುಂಯ್ಯೆಂದು ಹಾರಿ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳು ದಿಗಿಲು ಹುಟ್ಟಿಸಿದ್ದನ್ನು ನೆನಪಿಸಿಕೊಳ್ಳಿ. ನಿಮ್ಮೂರಿನ ಎತ್ತರದ ಬೆಟ್ಟಗಳ ಮೇಲೊ ಅಥವಾ ಸಿನಿಮಾ ಹಾಡುಗಳ ವೀಡಿಯೊ ತುಣಕುಗಳಲ್ಲಿಯೊ ಕಂಡ ಗಾಳಿಗೆ ತಿರುಗುವ ದೊಡ್ಡ ದೊಡ್ಡ ಯಂತ್ರಗಳನ್ನು ನೆನಪಿಸಿಕೊಳ್ಳಿ. ಈ ಎಲ್ಲ ನೆನಪುಗಳ ಹಿಂದೆ ಗಾಳಿ ಎಂಬ ಮಾಯಾ ದ್ರವವಿದೆ. ಚಂಚಲತೆಯೆಂಬುದು ಗಾಳಿಯ ಮೂಲ ಗುಣ. ಅದು ಹರಿಯುವ ದಿಕ್ಕಿಗೆ ತಿರುಗಣಿ ಯಂತ್ರದ ಮೂತಿಯನ್ನು ಇಟ್ಟು ತಿರುಗಿಸುತ್ತಾ ಹೊರಟರೆ, ನೂಕು ಬಲ ತಿರುಗು ಬಲವಾಗಿ ಮಾರ್ಪಾಡಾಗುತ್ತದೆ. ಆ ತಿರುಗು ಬಲವನ್ನು ಆಯಸ್ಕಾಂತೀಯ ಬಲವನ್ನು ಕತ್ತರಿಸುವಂತೆ ಪ್ರಯೋಗಿಸಿದಾಗ ವಿದ್ಯುತ್ ಉತ್ಪಾದನೆಯಾಗುತ್ತದೆ. ಗಾಳಿ ಯಂತ್ರಗಳ ಕಾರ್ಯಾಚರಣೆಯ ಮೂಲ ತತ್ವ ಇದು. ರೊದ್ದಂ ಅವರ ಮಾತುಗಳು ನೆನಪಿಗೆ ಬಂದದ್ದು ಬ್ರಿಟನ್ನಿನ ಪ್ರತಿಷ್ಠಿತ ವಿಜ್ಞಾನ ಸಾಪ್ತಾಹಿಕ ‘ನ್ಯೂ ಸೈಂಟಿಸ್ಟ್’ನ ಇತ್ತೀಚಿನ ಸಂಚಿಕೆಯೊಂದನ್ನು ತಿರುವಿ ಹಾಕುತ್ತಿದ್ದಾಗ. ಬೀಸು ಗಾಳಿಯಲ್ಲಿ ಅಡಗಿರುವ ಶಕ್ತಿಯನ್ನು ಸೆಳೆದು ವಿದ್ಯುತ್ ತಯಾರಿಸುವಿಕೆಯಲ್ಲಿನ ಹೊಸ ಸಂಶೋಧನೆಗಳ ಬಗ್ಗೆ ಈ ವಾರ ಪತ್ರಿಕೆಯಲ್ಲಿ ವಿಸ್ತೃತವಾಗಿ ಪ್ರಸ್ತಾಪವಾಗಿದೆ. &lt;div&gt;&lt;div&gt;&lt;div&gt;&lt;div&gt;&lt;br /&gt;&lt;br /&gt;&lt;div&gt;&lt;br /&gt;ನೆಲದಿಂದ ಮೇಲೆ ಮೇಲೆ ಹೋದಂತೆ ಗಾಳಿಯ ಸಾಂದ್ರತೆ ಕಡಿಮೆಯಾಗುತ್ತಾ ಹೋಗುವುದು ನಿಮಗೆ ಗೊತ್ತು. ಈ ಕಾರಣದಿಂದಲೇ ಬೆಟ್ಟ, ಗುಡ್ಡ, ಪರ್ವತಗಳನ್ನು ಹತ್ತಿದಾಗ ನಮಗೆ ಉಸಿರಾಡಲು ಸಿಗುವ ಗಾಳಿಯ ಪ್ರಮಾಣ ಕಡಿಮೆಯಾಗುತ್ತದೆ. ಆಮ್ಲಜನಕದ ಕೊರತೆಯಿಂದ ದಣಿವು ಹೆಚ್ಚಾಗುತ್ತದೆ. ಆದರೆ ವಿಮಾನಗಳಿಗೆ ಗಾಳಿಯ ಅಡೆತಡೆ ಕಡಿಮೆ ಇರುವ ಆದರೆ ಇಂಧನದ ದಹನಕ್ಕೆ ಅಗತ್ಯವಿರುವಷ್ಟು ಗಾಳಿ ಇರುವ ವಾತಾವರಣ ಬೇಕು. ಹೀಗಾಗಿ ವಿಮಾನಗಳ ಹಾರಾಟಕ್ಕೆ ಪ್ರಶಸ್ತವಾಗಿರುವುದು ಭೂಮಿಯ ಮೇಲಿನ ಹತ್ತರಿಂದ ಹದಿನೈದು ಕಿಲೋಮೀಟರ್ ಎತ್ತರದ ವಾತಾವರಣ. ಭೂಮಿಯ ಮೇಲಿನ ಒಂದಷ್ಟು ಎತ್ತರದಲ್ಲಿ ಗಾಳಿಯ ಗುಣ ಲಕ್ಷಣಗಳು ತೀರಾ ಚಂಚಲ. ಈ ಕಾರಣದಿಂದ ನಾವು ವಿದ್ಯುತ್ ಉತ್ಪಾದಿಸಲೆಂದು ನೆಟ್ಟ ಗಾಳಿ ಯಂತ್ರಗಳ ಕಾರ್ಯಕ್ಷಮತೆ ತೀರಾ ಕಡಿಮೆ. ಚಂಚಲತೆ ಇಲ್ಲದ, ನಿರ್ದಿಷ್ಟ ನಿಯಮಗಳನ್ನು ಪಾಲಿಸುವ ಬೀಸು ಗಾಳಿ, ವಿದ್ಯುತ್ ಉತ್ಪಾದಿಸುವ ಯಂತ್ರಗಳಿಗೆ ಅಪೇಕ್ಷಣೀಯ. ಹಾಗೆಂದ ಮಾತ್ರಕ್ಕೆ ಭೂಮಿಯಿಂದ ನಾಲ್ಕೈದು ಕಿಲೋಮೀಟರ್ ಎತ್ತರದಲ್ಲಿ ಗಾಳಿ ಯಂತ್ರಗಳನ್ನು ಸ್ಥಾಪಿಸಲಾಗುವುದಿಲ್ಲ. ಕಾರಣ, ಆ ಎತ್ತರದಲ್ಲಿ ಗಂಟೆಗೆ ಐದು ನೂರು ಕಿಲೋಮೀಟರ್ ವೇಗದಲ್ಲಿ ಬೀಸುವ ಗಾಳಿಗೆ ಯಂತ್ರ ನೆಟ್ಟಿರುವ ಗುಡ್ಡದ ಬುಡವೇ ಅಲುಗಾಡಬಹುದು. ಅಂದರೆ, ಆ ಎತ್ತರಕ್ಕೆ ಗಾಳಿ ಯಂತ್ರಗಳನ್ನು ನೆಡಲಾಗುವುದಿಲ್ಲ. ಅಕ್ಕಿಯ ಮೇಲಿನ ಆಸೆ ಹೆಚ್ಚಿರಬೇಕು ಹಾಗೂ ನೆಂಟರ ಮೇಲಿನ ಪ್ರೀತಿ ಕಡಿಮೆ ಆಗಬಾರದು - ಇದು ಕೇವಲ ಸಾಮಾನ್ಯ ಮನುಷ್ಯನ ಆಸೆಯಷ್ಟೇ ಅಲ್ಲ, ವಿಜ್ಞಾನಿಗಳ ಹಂಬಲವೂ ಹೌದು. ಎಲ್ಲ ಬಗೆಯ ವೈಪರೀತ್ಯಗಳನ್ನು ಎದುರಿಸಿ ಅತ್ಯಂತ ಅಗ್ಗದ ದರದಲ್ಲಿ, ಸುಲಭ ಮಾರ್ಗದಲ್ಲಿ ವಿದ್ಯುತ್ ಉತ್ಪಾದನೆ ನಮ್ಮೆಲ್ಲರ ಬಹುದಿನದ ಕನಸು. &lt;/div&gt;&lt;br /&gt;&lt;div&gt;&lt;br /&gt;ಬಹು ಎತ್ತರದ ಪ್ರದೇಶಗಳಲ್ಲಿನ ವಾಯು ಬಲದ ಪ್ರತಿಶತ ಒಂದರಷ್ಟನ್ನು ವಿದ್ಯುತ್ ಉತ್ಪಾದನೆಗೆ ಬಳಸಿಕೊಂಡರೆ, ಇಡೀ ಜಗತ್ತಿನ ಒಟ್ಟಾರೆ ಶಕ್ತಿ ಬೇಡಿಕೆಯನ್ನು ಪೂರೈಸಬಹುದು. ಇಂಥದೊಂದು ಬೃಹತ್ ಅಂದಾಜನ್ನು ಕೊಟ್ಟಿರುವವರು ಡೇವಿಡ್ ಶೆಫರ್ಡ್. ಅಮೆರಿಕದ ಕ್ಯಾಲಿಫೋರ್ನಿಯದಲ್ಲಿನ ‘ಸ್ಕೈ ವಿಂಡ್‍ಪವರ್’ ಎಂಬ ಗಾಳಿ ವಿದ್ಯುತ್ ಯಂತ್ರ ತಯಾರಿಸುವ ಕಂಪನಿಯ ಅಧ್ಯಕ್ಷರಿವರು. ಪ್ರಚಂಡ ಬುದ್ಧಿವಂತರಾದ ಇವರು ದ್ವಿತೀಯ ಮಹಾಯುದ್ಧದ ಕಾಲದಲ್ಲಿ ಜಪಾನ್ ದೇಶದ ಗುಪ್ತ ಮಿಲಿಟರಿ ಸಂಕೇತಗಳನ್ನು ಅ&lt;a href="http://1.bp.blogspot.com/_WOq6aPUeAO4/RrZ84XkrLgI/AAAAAAAAANk/_yuYIpi8vSQ/s1600-h/flying+generator.jpg"&gt;&lt;img id="BLOGGER_PHOTO_ID_5095397336258653698" style="FLOAT: left; MARGIN: 0px 10px 10px 0px; CURSOR: hand" alt="" src="http://1.bp.blogspot.com/_WOq6aPUeAO4/RrZ84XkrLgI/AAAAAAAAANk/_yuYIpi8vSQ/s200/flying+generator.jpg" border="0" /&gt;&lt;/a&gt;ಮೆರಿಕ ಸರ್ಕಾರಕ್ಕೆ ಬಿಡಿಸಿಕೊಡುತ್ತಿದ್ದರು. ಮುಂದೆ ಅಮೆರಿಕ ಸರ್ಕಾರಕ್ಕೆ ಕೈಬರಹದ ಅಕ್ಷರಗಳನ್ನು ಓದಬಲ್ಲ ಯಂತ್ರಗಳನ್ನು ನಿರ್ಮಿಸಿಕೊಟ್ಟವರೂ ಇವರೇ. ಈ ಕಾರಣದಿಂದ ಅವರ ಮಾತುಗಳನ್ನು ಕೇವಲ ಗಾಳಿ ಮಾತುಗಳೆಂದು ತಳ್ಳಿ ಹಾಕದೆಯೆ ಗಂಭೀರವಾಗಿ ಆಲಿಸಬೇಕು. ಇವರ ಜತೆಗೂಡಿರುವವರು ಆಸ್ಟ್ರೇಲಿಯ ದೇಶದ ಸಿಡ್ನಿಯಲ್ಲಿನ ತಂತ್ರಜ್ಞಾನ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬ್ರಯಾನ್ ರಾಬರ್ಟ್ಸ್. ತೊಂಬತ್ತರ ದಶಕದಲ್ಲಿ ಇವರು ಬಲೂನ್‍ಗಳ ಮೇಲೆ ಗಾಳಿ ತಿರುಗಣಿ ಯಂತ್ರಗಳನ್ನು ಕೂಡಿಸಿ ಅವುಗಳನ್ನು ಎತ್ತರ ಪ್ರದೇಶಗಳಿಗೆ ಹಾರಿಬಿಟ್ಟಿದ್ದರು. ಥೇಟ್ ಗಾಳಿಪಟವನ್ನು ಹಿಡಿತದಲ್ಲಿಟ್ಟುಕೊಳ್ಳುವ ದಾರದಂತೆ, ದಪ್ಪನಾದ ವಿದ್ಯುತ್ ತಂತಿಯೊಂದು ಈ ಹೆಲಿಕಾಪ್ಟರ್ ಆಕಾರದ ಬಲೂನ್ ಅನ್ನು ಹಿಡಿದಿಟ್ಟುಕೊಳ್ಳುತ್ತಿತ್ತು. ಆ ತಂತಿಯ ಮೂಲಕ ಬಲೂನ್ ನಿರ್ದಿಷ್ಟ ಎತ್ತರಕ್ಕೆ ಹಾರಲು ವಿದ್ಯುತ್ ಪೂರೈಕೆಯಾಗುತ್ತಿತ್ತು. ಒಮ್ಮೆ, ಮೇಲೇರಿದ ಗಾಳಿ ಯಂತ್ರ ವಿದ್ಯುತ್ ಉತ್ಪಾದನೆ ಆರಂಭಿಸಿದಂತೆ, ಅದೇ ನಿಯಂತ್ರಕ ತಂತಿಯ ಮೂಲಕ ವಿದ್ಯುತ್ ಹಿಂದೆ ಹರಿದು ಬರುತ್ತಿತ್ತು. ಅತ್ಯಂತ ಜಾಣ್ಮೆಯ ವಿನ್ಯಾಸವಾದ ಈ ‘ಹೆಲಿ(ಕಾಪ್ಟರ್) (ಗಾಳಿ) ಪಟ’ಕ್ಕೆ ಬಹು ದೊಡ್ಡ ಹಿನ್ನೆಲೆಯಿದೆ. ಸುಮಾರು ಮೂರು ದಶಕಗಳ ಕಾಲ ಬ್ರಯಾನ್ ರಾಬರ್ಟ್ಸ್ ಅವರ ತಂಡ ‘ಹೆಲಿ ಪಟ’ದ ವಿವಿಧ ಮಾದರಿಗಳನ್ನು ಸತತವಾಗಿ ಪರೀಕ್ಷಿಸಿದೆ. ಈ ಸುದೀರ್ಘ ಕಾಲದ ಸಂಶೋಧನೆಯ ಫಲವೇ ಸದ್ಯಕ್ಕೆ ಅಮೆರಿಕದಲ್ಲಿ ನಿರ್ಮಾಣವಾಗುತ್ತಿರುವ ‘ಹಾರಾಡುವ ವಿದ್ಯುತ್ ಉತ್ಪಾದಕ’. ಇದರ ಮೊದಲ ಮಾದರಿಯು ಈ ವರ್ಷದ ಕೊನೆಯ ಹೊತ್ತಿಗೆ ಆಗಸಕ್ಕೇರಿ, ೨೨೦ ಕಿಲೋವ್ಯಾಟ್ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲು ಆರಂಭಿಸುತ್ತದೆ. ಮುಂದಿನ ಎರಡು ವರ್ಷಗಳಲ್ಲಿ ಅದು ಭೂಮಿಯಿಂದ ಕನಿಷ್ಠವೆಂದರೂ ನಾಲ್ಕೂವರೆ ಕಿಲೋಮೀಟರ್ ಎತ್ತರದಲ್ಲಿದ್ದು, ತನ್ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ಹಿಗ್ಗಿಸಿಕೊಂಡಿರುತ್ತದೆ. &lt;/div&gt;&lt;br /&gt;&lt;div&gt;&lt;br /&gt;ಭವಿಷ್ಯತ್ತಿನಲ್ಲಿ ನಮ್ಮ ವಿದ್ಯುತ್ ಅಗತ್ಯಕ್ಕೆ ಪೆಟ್ರೋಲಿಯಂ ಆಗಲಿ ಅಥವಾ ಪರಮಾಣು ಶಕ್ತಿಯಾಗಲೀ ಬೇಕಿಲ್ಲ. ಅವುಗಳೆಲ್ಲಕ್ಕಿಂತಲೂ ಹೆಚ್ಚಿನ ಅಗ್ಗದ ದರದಲ್ಲಿ ಗಾಳಿ ಯಂತ್ರಗಳ ಮೂಲಕ ವಿದ್ಯುತ್ ಉತ್ಪಾದಿಸಬಹುದೆಂಬ ಆತ್ಮವಿಶ್ವಾಸ ‘ಸ್ಕೈ ವಿಂಡ್‍ಪವರ್’ ಕಂಪನಿಯದು. ಮುಂದಿನ ಹತ್ತು ವರ್ಷಗಳಲ್ಲಿ ಹಾರಾಡುವ ವಿದ್ಯುತ್ ಜನಕಗಳು ಒಂಬತ್ತು ಕಿಲೋಮೀಟರ್ &lt;a href="http://2.bp.blogspot.com/_WOq6aPUeAO4/RrZ9SnkrLhI/AAAAAAAAANs/-3Me65MJZuQ/s1600-h/flying+generator2.jpg"&gt;&lt;img id="BLOGGER_PHOTO_ID_5095397787230219794" style="FLOAT: right; MARGIN: 0px 0px 10px 10px; CURSOR: hand" alt="" src="http://2.bp.blogspot.com/_WOq6aPUeAO4/RrZ9SnkrLhI/AAAAAAAAANs/-3Me65MJZuQ/s200/flying+generator2.jpg" border="0" /&gt;&lt;/a&gt;ಎತ್ತರದಲ್ಲಿ ತೇಲುತ್ತಿರುತ್ತವೆ, ನಮ್ಮ ಬರಿಗಣ್ಣಿಗೆ ಗೋಚರಿಸದೆಯೆ ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿರುತ್ತವೆ ಎಂಬ ಕನಸನ್ನು ಶೆಫರ್ಡ್-ರಾಬರ್ಟ್ಸ್ ಜೋಡಿ ಹಂಚಿಕೊಂಡಿದೆ. ಅಸಾಂಪ್ರದಾಯಿಕ ವಿದ್ಯುತ್ ಉತ್ಪಾದನೆಯ ವಿಷಯಗಳಿಗೆಂದೇ ಮೀಸಲಿರುವ ನಿಯತಕಾಲಿಕವೊಂದರಲ್ಲಿ ಪ್ರಬಂಧ ಮಂಡಿಸಿರುವ ಈ ಎಂಜಿನೀರ್‌ಗಳ ಪ್ರಕಾರ ಬರಲಿರುವ ದಿನಗಳಲ್ಲಿ ವಿದ್ಯುತ್ ಕ್ಷಾಮವೆಂಬುದು ಕೇವಲ ನಿಘಂಟಿನ ಪದವಾಗಿ ಉಳಿಯುತ್ತದೆ! ಅವರ ಹಾರೈಕೆಗಳನ್ನು ಮತ್ತಷ್ಟು ಉತ್ತೇಜಿಸಲೆಂದು ಇತ್ತ ನೆದರ್‌ಲೆಂಡ್ಸ್ ದೇಶದ ವಿಜ್ಞಾನಿಗಳು ತಮ್ಮ ಸಂಶೋಧನೆಗಳ ವಿವರಗಳನ್ನು ಜಗಜ್ಜಾಹೀರು ಮಾಡಿದ್ದಾರೆ. ಅಲ್ಲಿನ ಡೆಲ್‍ಫ್ಟ್ ತಂತ್ರಜ್ಞಾನ ವಿವಿಯ ಸಂಶೋಧಕರು ವಿಭಿನ್ನ ವಿನ್ಯಾಸವೊಂದರ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ. ವಿಮಾನದ ರೆಕ್ಕೆಗಳಂತಿರುವ ಗಾಳಿಪಟಗಳ ಸರಣಿಯನ್ನು ಮೇಲಕ್ಕೆ ತೂರಿಬಿಡುವುದು. ಒಂದೇ ತಂತಿಯಲ್ಲಿ ಬಿಗಿದ ಈ ಗಾಳಿಪಟಗಳ ತುದಿಯಲ್ಲಿರುವ ಗಾಳಿ ಯಂತ್ರಗಳು ತಿರುಗಲಾರಂಭಿಸಿ ವಿದ್ಯುತ್ ಉತ್ಪಾದಿಸುವುದು. ಅವೆಲ್ಲವೂ ಪ್ರಧಾನ ತಂತಿಯ ಮೂಲಕ ಕೆಳಗೆ ವಿದ್ಯುತ್ ಕಳುಹಿಸುವ ಯೋಜನೆಯಿದು. ‘ಲ್ಯಾಡರ್‌ಮಿಲ್’ ಎಂಬ ಹೆಸರಿನ ಈ ಯೋಜನೆಯ ಪ್ರಗತಿಯ ಬಗ್ಗೆ ಜಗತ್ತಿನೆಲ್ಲೆಡೆಯ ವಿದ್ಯುತ್ ತಂತ್ರಜ್ಞರು ಕುತೂಹಲದಿಂದ ಓದುತ್ತಿದ್ದಾರೆ.&lt;br /&gt;&lt;/div&gt;&lt;br /&gt;&lt;div&gt;ಗಾಳಿ ಯಂತ್ರಗಳ ಸ್ಥಾಪನೆಗೆ ನೆಲದ ಮೇಲೆ ಹೆಚ್ಚಿನ ಜಾಗ ಬೇಕು. ಅವುಗಳನ್ನು ತೋಟದಂತೆ ರೂಪಿಸಿದಾಗ ಮಾತ್ರ ಒಂದಷ್ಟು ಗಣನೀಯ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಬಹುದು. ಇಂಥ ತೋಟಗಳನ್ನು ಎಲ್ಲೆಂದರಲ್ಲಿ ನಿರ್ಮಿಸುವ ಹಾಗಿಲ್ಲ. ಗಾಳಿ ಹೆಚ್ಚು ಬೀಸುವ, ಎತ್ತರದ ಪ್ರದೇಶಗಳಲ್ಲಿ ಮಾತ್ರ ಸ್ಥಾಪಿಸಬಹುದು. ಹೆಚ್ಚು ಸ್ಥಾಪನಾ ವೆಚ್ಚದ ಈ ತೋಟಗಳಿಂದ ಸದ್ಯಕ್ಕೆ ಸಿಗುತ್ತಿರುವ ಇಳುವರಿ ತೀರಾ ಕಮ್ಮಿ. ಈ ಹಿನ್ನೆಲೆಯಲ್ಲಿ ಕೇವಲ ತೊಂಬತ್ತು ಪೈಸೆಗೆ ಒಂದು ಯೂನಿಟ್ (ಗಂಟೆಗೆ ತಲಾ ಒಂದು ಕಿಲೋವ್ಯಾಟ್ ಬಳಕೆ) ವಿದ್ಯುತ್ ಉತ್ಪಾದಿಸಬಹುದೆಂಬ ಹಾರಾಡುವ ಗಾಳಿಯಂತ್ರಗಳ ಲೆಕ್ಕಾಚಾರ ಆಕರ್ಷಕವೆನಿಸುತ್ತದೆ. ಆದರೆ ಅಷ್ಟೆತ್ತರದಲ್ಲಿ ವಿದ್ಯುತ್ ಜನಕವನ್ನು ಹಿಡಿದಿಡುವ ತಂತಿಗಳ ನಿರ್ವಹಣೆ ಸುಲಭವೆ ಎಂಬುದು ಪ್ರಶ್ನೆ. ಗಾಳಿಯ ವೇಗ ಹೆಚ್ಚಿದಂತೆ ಈ ತಂತಿಗಳು ರಭಸದ ಸೆಳೆತಕ್ಕೆ ಒಳಗಾಗುತ್ತವೆ. ಇವೆಲ್ಲ ಎಳೆತ-ಬಿಗಿತಗಳನ್ನು ಮೀರಿ ಅವು ಕೆಲಸ ಮಾಡಬೇಕಾಗುತ್ತದೆ. ಸದ್ಯಕ್ಕೆ ಲಭ್ಯವಿರುವ ತಂತ್ರಜ್ಞಾನದಲ್ಲಿ ಅಗತ್ಯ ಸಾಮರ್ಥ್ಯದ ತಂತಿಗಳನ್ನು ರೂಪಿಸುವುದು ಕಷ್ಟವೇನಲ್ಲ. ಆದರೆ ಎತ್ತರದಲ್ಲಿನ ಅದರ ನಿರ್ವಹಣೆಯ ಸುರಕ್ಷತೆಯ ಬಗ್ಗೆ ಮಾತ್ರ ಕೊಂಚ ಅನುಮಾನ. ಇನ್ನು, ವಿಮಾನಗಳೂ ಸೇರಿದಂತೆ ಗಾಳಿಯಲ್ಲಿ ತೇಲುವ ಯಂತ್ರಗಳೆಲ್ಲ ದಿನಗಟ್ಟಲೆ ಹಾರುತ್ತಲೇ ಇರಲಾಗುವುದಿಲ್ಲ. ಅವುಗಳಿಗೂ ಕಾಲ ಕಾಲಕ್ಕೆ ಸೂಕ್ತ ನಿರ್ವಹಣಾ ವಿರಾಮ ಬೇಕಾಗುತ್ತದೆ. ಹಾರುವ ಗಾಳಿ ಯಂತ್ರಗಳು ಈ ಎಲ್ಲ ಅಡೆತಡೆಗಳನ್ನೂ ಸುರಕ್ಷಿತವಾಗಿ ದಾಟಬೇಕು.&lt;br /&gt;&lt;/div&gt;&lt;br /&gt;&lt;br /&gt;&lt;div&gt;ಭೂಮಿಯಿಂದ ಸಹಸ್ರಾರು ಕಿಲೋಮೀಟರ್ ಎತ್ತರಕ್ಕೆ ಉಪಗ್ರಹಗಳನ್ನು ಕಳುಹಿಸಿ, ಅವುಗಳ ಯಶಸ್ವಿ ನಿರ್ವಹಣೆ ಮಾಡಲು ಇಂದು ನಮಗೆ ಸಾಧ್ಯ. ಥೇಟ್ ನಮ್ಮ ನಾಗರೀಕ ವಿಮಾನದಂತೆ ಬಾಹ್ಯಾಕಾಶಕ್ಕೆ ಶಟಲ್‍ಗಳನ್ನು ಕಳುಹಿಸುವಷ್ಟು ಸಾಮರ್ಥ್ಯವೂ ನಮಗಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಜನಕಗಳನ್ನು ಹಾರಿಬಿಡುವುದು ಮತ್ತಷ್ಟು ಸುಲಭವಾಗಬಹುದು. ಎತ್ತರ, ಇನ್ನೂ ಎತ್ತರ, ಮತ್ತಷ್ಟು ಎತ್ತರ, ಮಗದಷ್ಟು ಎತ್ತರ .... ಹೀಗೆ ಸಾಧನೆಯ ಹಾದಿಯೆಂಬುದು ಸದಾ ಎತ್ತರೆತ್ತರ. ಎತ್ತರವೊ, ಹತ್ತಿರವೊ, ವಿದ್ಯುತ್ ಕ್ಷಾಮವನ್ನು ನೀಗಿಸಬಲ್ಲ ಇಂಥ ಯಾವುದೇ ಯೋಜನೆ ಬೇಗ ಯಶಸ್ವಿಯಾಗಲಿ. &lt;/div&gt;&lt;div&gt; &lt;/div&gt;&lt;div&gt;&lt;strong&gt;&lt;em&gt;(ಕೃಪೆ : ವಿಜಯ ಕರ್ನಾಟಕ, 06-08-2007)&lt;/em&gt;&lt;/strong&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/752423363868781697-3790228333308901296?l=netnota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://netnota.blogspot.com/feeds/3790228333308901296/comments/default' title='Post Comments'/><link rel='replies' type='text/html' href='http://www.blogger.com/comment.g?blogID=752423363868781697&amp;postID=3790228333308901296' title='0 Comments'/><link rel='edit' type='application/atom+xml' href='http://www.blogger.com/feeds/752423363868781697/posts/default/3790228333308901296'/><link rel='self' type='application/atom+xml' href='http://www.blogger.com/feeds/752423363868781697/posts/default/3790228333308901296'/><link rel='alternate' type='text/html' href='http://netnota.blogspot.com/2007/08/blog-post.html' title='ನೀಗಿಸಲು ವಿದ್ಯುತ್ ಬರ, ಏರಿತು ಜನರೇಟರ್ ಮತ್ತಷ್ಟು ಎತ್ತರ!'/><author><name>HNS</name><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_WOq6aPUeAO4/SdR5qYZ87xI/AAAAAAAAAWg/cXIYJSqE8Z4/S220/sudhi1.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_WOq6aPUeAO4/RrZ8NnkrLfI/AAAAAAAAANc/kH_MoPlt1VU/s72-c/roddam.jpg' height='72' width='72'/><thr:total>0</thr:total></entry><entry><id>tag:blogger.com,1999:blog-752423363868781697.post-8758672310516095892</id><published>2007-07-30T07:29:00.000+05:30</published><updated>2007-07-30T07:31:18.390+05:30</updated><title type='text'>‘ಬಿ.ಪಿ.ಓ.’, ‘ಕೆ.ಪಿ.ಓ.’ ನಂತರದ ಹೊರಗುತ್ತಿಗೆ ಯಾವುದು?</title><content type='html'>&lt;strong&gt;&lt;span style="font-size:180%;"&gt;‘ ಬಿ&lt;/span&gt;&lt;/strong&gt;.ಪಿ.ಓ.’ ಗೊತ್ತಲ್ಲ?  ವಿದೇಶಿ ಕಂಪನಿಗಳು ತಮ್ಮ ವಹಿವಾಟಿನ ನಿತ್ಯ ಚಟುವಟಿಕೆಗಳನ್ನು ಮತ್ತೊಂದು ಕಂಪನಿಗೆ ಹೊರಗುತ್ತಿಗೆ ನೀಡುವ ಪ್ರಕ್ರಿಯೆಯಿದು.  ತಮ್ಮದೇ ತಾಣದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಿಸುವುದು ತುಟ್ಟಿಯ ಬಾಬ್ತು ಎಂದು ಮನವರಿಕೆಯಾದಾಗ ದೊಡ್ಡ ಕಂಪನಿಗಳು ಅವುಗಳನ್ನು ಅಗ್ಗದ ದರದಲ್ಲಿ ಮಾಡಿಕೊಡಬಲ್ಲ ಪುಟ್ಟ ಕಂಪನಿಗಳ ಮೊರೆಹೋಗುತ್ತವೆ.  ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಹಾಗೂ ಯೂರೋಪ್ ದೇಶಗಳಿಂದ ನಮ್ಮ ದೇಶದ ಐ.ಟಿ. ಕಂಪನಿಗಳಿಗೆ ಈ ‘ಬಿ.ಪಿ.ಓ.’ ಪ್ರಕ್ರಿಯೆಯಿಂದ ‘ಬ್ಯುಸಿನೆಸ್’ ಹೆಚ್ಚುತ್ತಿದೆ.  ಲಾಭಾಂಶ ಹೆಚ್ಚಿರುವ ಸ್ವದೇಶಿ ಕಂಪನಿಗಳೂ ಸಹಾ ಸಣ್ಣ-ಪುಟ್ಟ ಬ್ಯುಸಿನೆಸ್ ಅನ್ನು ಇದೇ ರೀತಿ ಮತ್ತೊಂದು ಸ್ವದೇಶಿ ಕಂಪನಿಗೆ ವರ್ಗಾಯಿಸುತ್ತವೆ - ವೇತನ ಉಳಿತಾಯ ದೃಷ್ಟಿಯಿಂದ.  ಇನ್ನು ಜ್ಞಾನವನ್ನು ವಹಿವಾಟು ಮಾಡುವ ಕೆ.ಪಿ.ಓ. ಕಂಪನಿಗಳು ಅಂದರೆ ಉದಾಹರಣೆಗೆ ವಿದೇಶಗಳಲ್ಲಿನ ವಿದ್ಯಾರ್ಥಿಗಳಿಗೆ ಭಾರತದಲ್ಲಿಯೇ ಇಂಟರ್‌ನೆಟ್ ಸಂಪರ್ಕವಿರುವ ಕಂಪ್ಯೂಟರ್ ಮುಂದೆ ಕುಳಿತ ಗುರುಗಳು ‘ಟ್ಯೂಶನ್’ (ಮನೆಪಾಠ) ನಡೆಸುವುದು, ನ್ಯಾಯಾಂಗ ಸಲಹೆ - ವೈದ್ಯಕೀಯ ವರದಿಗಳ ತಪಾಸಣೆ - ತಾಂತ್ರಿಕ ವಿಶ್ಲೇಷಣೆ - ತೆರಿಗೆ ಲೆಕ್ಕಾಚಾರ - ತರಬೇತಿ - ತಾಂತ್ರಿಕ ಬರಹ ಇತ್ಯಾದಿಗಳನ್ನು ವಿದೇಶಿ ಗ್ರಾಹಕರಿಗೆ ಮಾಡಿಕೊಡುವುದು ‘ಕೆ.ಪಿ.ಓ.’ ವ್ಯಾಪ್ತಿಗೆ ಬರುತ್ತವೆ.  ಬಿ.ಪಿ.ಓ. ‘ಬ್ಯುಸಿನೆಸ್’ ನಂತರ ಮುಂದೇನು? ಎಂದು ಭಾರತದಲ್ಲಿನ ಉದ್ಯೋಗಾವಕಾಶಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಮುನ್ನವೇ ಮುನ್ನುಗ್ಗಿ ಬಂದದ್ದು ಕೆ.ಪಿ.ಓ. ವಹಿವಾಟು.  ಆದರೆ ಯಾವುದೇ ‘ಬ್ಯುಸಿನೆಸ್’ ನಿರಂತರವಲ್ಲ.  ಹೀಗಾಗಿ ಸದ್ಯದ ಪ್ರಶ್ನೆ - ಕೆ.ಪಿ.ಓ. ನಂತರ ಮುಂದೇನು?&lt;br /&gt;&lt;br /&gt; ಈ ವರ್ಷದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ದ್ವೈ-ವಾರ್ಷಿಕ ವೈಮಾಂತರಿಕ್ಷ ಮೇಳ ‘ಏರೋ-ಇಂಡಿಯಾ’ ಸಂದರ್ಭದಲ್ಲಿ ಇಂಥದೊಂದು ಚರ್ಚೆಗೆ ಚಾಲನೆ ದೊರೆತಿತ್ತು.  ವಿಮಾನ ಹಾಗೂ ಬಾಹ್ಯಾಂತರಿಕ್ಷ ಎಂಜಿನೀರಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದ ‘ಬಿ.ಪಿ.ಓ.’ ಕೆಲಸಗಳು ಭಾರತಕ್ಕೆ ಹೆಚ್ಚುವರಿಯಾಗಿ ಹರಿದುಬರಲಿದೆ.  ಇಂಥ ಉದ್ಯೋಗಗಳ ವಹಿವಾಟು ಸದ್ಯದ ಐ.ಟಿ. ‘ಬ್ಯುಸಿನೆಸ್’ ಅನ್ನು ಮೀರಿಸುತ್ತದೆ ಎಂಬ ಭವಿಷ್ಯವಾಣಿ ಕಿವಿಗೆ ಬಿದ್ದಿದ್ದವು.  ಒಂದೆಡೆ ‘ಇಸ್ರೋ’ದಂಥ ಸರ್ಕಾರಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸ್ವಾವವಲಂಬಿಯಾಗಿದೆ.  ಜತೆಗೆ ವಿದೇಶಿ ಬಾಹ್ಯಾಕಾಶ ಸಂಸ್ಥೆಗಳಿಗೆ ಉಪಗ್ರಹ ಉಡ್ಡಯಣದಂಥ ಕೆಲಸಗಳನ್ನು ಮಾಡಿಕೊಡುವುದರ ಮೂಲಕ ಹಣವನ್ನೂ ಗಳಿಸುತ್ತಿದೆ.  ಭವಿಷ್ಯತ್ತಿನಲ್ಲಿ ಭಾರತ ದೇಶವು ಉಪಗ್ರಹ ಉಡ್ಡಯಣಗಳಿಗೆ ಅತ್ಯಂತ ಅಗ್ಗದ ತಾಣವಾಗುವ ನಿರೀಕ್ಷೆಯೂ ಇದೆ.  ಇನ್ನು ‘ನವರತ್ನ’ ವಿಮಾನ ಕಂಪನಿ ‘ಎಚ್.ಎ.ಎಲ್.’ ದೇಶದ ಮಿಲಿಟರಿ ಅಗತ್ಯಗಳನ್ನು ಸಮರ್ಥವಾಗಿ ಪೂರೈಸುತ್ತಿದೆ.  ಜಗತ್ತೇ ಹೆಮ್ಮೆ ಪಡುವಂಥ ವೈಮಾಂತರಿಕ್ಷ ಎಂಜಿನೀರಿಂಗ್ ಶಿಕ್ಷಣ ವಿಭಾಗ ಬೆಂಗಳೂರಿನ ‘ಐ.ಐ.ಎಸ್‍ಸಿ.’ಯಲ್ಲಿದೆ.  ಇನ್ನು ಬೆಂಗಳೂರನ್ನು ಭಾರತದ ವಿಮಾನ ಎಂಜಿನೀರಿಂಗ್ ಹಾಗೂ ಎಲೆಕ್ಟ್ರಾನಿಕ್ಸ್ ಎಂಜಿನೀರಿಂಗ್ ರಾಜಧಾನಿಯನ್ನಾಗಿ ಮಾಡಲು ಡಿ.ಆರ್.ಡಿ.ಓ. ಹತ್ತಾರು ಪ್ರಯೋಗಶಾಲೆಗಳನ್ನು ತೆರೆದಿದೆ.  ಉಳಿದಂತೆ ನಾಗರೀಕ ವಿಮಾನಗಳನ್ನು ವಿನ್ಯಾಸಗೊಳಿಸುತ್ತಿರುವ ‘ಎನ್.ಎ.ಎಲ್.’ ಪ್ರಯೋಗಶಾಲೆ, ಎಲೆಕ್ಟ್ರಾನಿಕ್ಸ್ ಬಿಡಿಭಾಗ, ಕಂಪ್ಯೂಟರ್ ವ್ಯವಸ್ಥೆಗಳ ವಿನ್ಯಾಸ ಹಾಗೂ ಉತ್ಪಾದನೆಯನ್ನು ಕೈಗೊಂಡಿರುವ ‘ಭಾರತ್ ಎಲೆಕ್ಟ್ರಾನಿಕ್ಸ್’, ಖಾಸಗಿ ವಲಯದ ‘ತನೇಜಾ ಏರೋಸ್ಪೇಸ್’ .... ಬೆಂಗಳೂರನ್ನು ಎಂಜಿನೀರಿಂಗ್ ಕ್ಷೇತ್ರದ ಬಲಾಢ್ಯ ನಗರವನ್ನಾಗಿಸಿದೆ.  ಹೀಗಾಗಿ ಹತ್ತು-ಹಲವು ಜಗನ್ಮಾನ್ಯ ಎಂಜಿನೀರಿಂಗ್ ಸಂಸ್ಥೆಗಳು ತಮ್ಮ ವಹಿವಾಟನ್ನು ಬೆಂಗಳೂರಿನಲ್ಲಿ ವಿಸ್ತರಿಸಿಕೊಂಡಿವೆ.  ಜಗತ್ತಿನ ಅತಿ ದೊಡ್ಡ ವಿಮಾನ ತಯಾರಿಕಾ ಕಂಪನಿಗಳಾದ ‘ಬೋಯಿಂಗ್’ ಹಾಗೂ ‘ಏರ್‌ಬಸ್’ ಬೆಂಗಳೂರಿನ ‘ಎಚ್.ಎ.ಎಲ್.’ ಸೇರಿದಂತೆ ಹಲವು ಕಂಪನಿಗಳೊಂದಿಗೆ ಎಂಜಿನೀರಿಂಗ್ ವಿನ್ಯಾಸ ಹಾಗೂ ಉತ್ಪಾದನಾ ವಹಿವಾಟನ್ನು ಹಂಚಿಕೊಂಡಿವೆ.  ಇನ್ನು ವಿಮಾನ ಎಂಜಿನ್‍ಗಳನ್ನು ಉತ್ಪಾದಿಸುವ ‘ಜಿ.ಇ.’, ‘ಸ್ನೆಕ್ಮಾ’, ‘ರೋಲ್ಸ್‍ರಾಯ್ಸ್’, ‘ಹನಿವೆಲ್’ ... ತಮ್ಮ ಎಂಜಿನೀರಿಂಗ್ ವಿನ್ಯಾಸ ಕೇಂದ್ರಗಳನ್ನು ಭಾರತದಲ್ಲಿ ಆರಂಭಿಸಿವೆ.  ಈ ನಿಟ್ಟಿನಲ್ಲಿ ಭಾರತೀಯ ದೈತ್ಯ ಐ.ಟಿ. ಕಂಪನಿಗಳೂ ಹಿಂದೆ ಬಿದ್ದಿಲ್ಲ.  ‘ಇನ್ಫೋಸಿಸ್’, ‘ವಿಪ್ರೋ’, ‘ಟಿ.ಸಿ.ಎಸ್.’ಗಳೂ ತಮ್ಮ ವೈಮಾಂತರಿಕ್ಷ ವಿಭಾಗಗಳ ಮೂಲಕ ವಿದೇಶಿ ‘ಬ್ಯುಸಿನೆಸ್’ ಹೆಚ್ಚಿಸಿಕೊಳ್ಳುತ್ತಿವೆ.  ಯೂರೋಪ್ ದೇಶಗಳ ವೈಮಾಂತರಿಕ್ಷ ವಹಿವಾಟಿನ ಬಹುದೊಡ್ಡ ಒಕ್ಕೂಟ ‘ಇ.ಎ.ಡಿ.ಎಸ್.’ ಸದ್ಯದಲ್ಲಿಯೇ ಬೆಂಗಳೂರನ್ನು ಕೇಂದ್ರಸ್ಥಾನವಾಗಿಸಿಕೊಳ್ಳಲಿದೆ.  ಅಂದರೆ ಬೆಂಗಳೂರು ಎಂಜಿನೀರಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ‘ಬಿ.ಪಿ.ಓ. ರಾಜಧಾನಿ’ ಆಗುವ ಆಗುವುದರಲ್ಲಿ ಸಂಶಯವೇ ಇಲ್ಲ.&lt;br /&gt;&lt;br /&gt; ಈ ಬಗೆಯ ‘ಬಿ.ಪಿ.ಓ.’ ಅನ್ನು ‘ಇ.ಪಿ.ಓ.’ ಎಂದು ಗುರುತಿಸಲಾಗಿದೆ.  ಜಗತ್ತಿನ ಮುಂಚೂಣಿ ಆಟೋಮೊಬೈಲ್ ಹಾಗೂ ಏರೋಸ್ಪೇಸ್ ಕಂಪನಿಗಳಿಗೆ ಭಾರತದ ಎಂಜಿನೀರ್‌ಗಳು ‘ಇ.ಪಿ.ಓ.’ ಕೆಲಸಗಳಾದ ಕಂಪ್ಯೂಟರ್ ನೆರವಿನ ವಿನ್ಯಾಸ (‘ಸಿ.ಎ.ಡಿ’), ಉತ್ಪಾದನೆ (‘ಸಿ.ಎ.ಎಂ.’) ಹಾಗೂ ಎಂಜಿನೀರಿಂಗ್ (‘ಸಿ.ಎ.ಇ.’) ಮುಂತಾದವುಗಳನ್ನು ಮಾಡಿಕೊಡಲಿದ್ದಾರೆ.  ‘ಇ.ಪಿ.ಓ.’ ವಹಿವಾಟು ಭಾರತದಲ್ಲಿ ಲಭ್ಯವಿರುವ ವಿನ್ಯಾಸ - ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ತಜ್ಞರುಗಳ ಭಾಗ್ಯದ ಬಾಗಿಲನ್ನು ತೆರೆಯಲಿದೆ.  ಈ ಬಗ್ಗೆ ಯಾವ ಬಗೆಯ ಜಾಗೃತಿ ಮೂಡುತ್ತಿವೆಯೆಂದರೆ ಎಂಜಿನೀರಿಂಗ್ ವಿನ್ಯಾಸದ ಬಗ್ಗೆ ಜರಗುವ ಎಲ್ಲ ಸಮ್ಮೇಳನಗಳೂ ಭರ್ತಿಯಾಗಿ ತುಂಬಿರುತ್ತವೆ.  ಜಾಗತೀಕರಣದ ಗಾಳಿ ಇದೀಗ ಭಾರತದ ಎಂಜಿನೀರಿಂಗ್ ವಿನ್ಯಾಸ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರವನ್ನು ಪುಳಕಗೊಳಿಸುತ್ತಿದೆ.  ಕಂಪ್ಯೂಟರ್ ತಂತ್ರಾಂಶಗಳ ನೆರವಿನ ಎಂಜಿನೀರಿಂಗ್ ವಿನ್ಯಾಸಗಳ ಸೂಕ್ಷ್ಮ ವಿಶ್ಲೇಷಣೆ, ಮೊದಲ ಮಾದರಿಗಳ ಕ್ಷಿಪ್ರ ಉತ್ಪಾದನೆ, ಮೂಲ ವಿನ್ಯಾಸ ಲಭ್ಯವಿಲ್ಲದ ಬಿಡಿಭಾಗಗಳನ್ನು ಮರು ರೂಪಿಸುವ ಎಂಜಿನೀರಿಂಗ್ ವಿಧಾನ, ಎಂಜಿನೀರಿಂಗ್ ಮಾದರಿಗಳ ಪರೀಕ್ಷೆ, ಕ್ಲಿಷ್ಟ ಬಿಡಿಭಾಗಗಳ ಉತ್ಪಾದನಾ ವಿಜ್ಞಾನ, ತ್ರಿ-ಗಾತ್ರ ಕಂಪ್ಯೂಟರ್ ಮಾದರಿಗಳ ರಚನೆ .... ಈ ಬಗೆಯ ಕೆಲಸ ಕಾರ್ಯಗಳು ನಮ್ಮ ದೇಶದ ಎಂಜಿನೀರಿಂಗ್ ಕಂಪನಿಗಳಿಗೆ ಬಹುದೊಡ್ಡ ವಹಿವಾಟನ್ನು ತಂದುಕೊಡುತ್ತಿದೆ.  ಇಂಥ ವಿಷಯಗಳಲ್ಲಿ ಪರಿಣತಿಯನ್ನು ಪಡೆಯಲು ನಮ್ಮ ಎಂಜಿನೀರ್‌ಗಳು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.  ಉದಾಹರಣೆಗೆ ತಂತ್ರಜ್ಞಾನದ ಹೊಸ ಆವಿಷ್ಕಾರಗಳ ಬಗೆಗಿನ ಜ್ಞಾನ, ಸ್ಫರ್ದಾತ್ಮಕ ರೀತಿಯಲ್ಲಿ ಕೆಲಸ ಮಾಡಬಲ್ಲ ಚಾಕಚಕ್ಯತೆ, ಸದಾ ಜಾಗೃತವಾಗಿರುವ ಕುಶಲತೆ, ವಿದ್ಯಾ ಸಂಸ್ಥೆಗಳೊಂದಿಗಿನ ಸಂಪರ್ಕ, ಜಾಗತಿಕವಾಗಿ ಲಭ್ಯವಿರುವ ಉತ್ಪಾದನಾ ತಂತ್ರಜ್ಞಾನ ... ಇತ್ಯಾದಿ.&lt;br /&gt;&lt;br /&gt; ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಎಂಜಿನೀರಿಂಗ್ ಕ್ಷೇತ್ರ ಮುನ್ನಡೆಯಬೇಕಾದರೆ ಮೇಲೆ ಪಟ್ಟಿ ಮಾಡಿರುವ ವಿಷಯಗಳನ್ನು ಕಂಪನಿಗಳು, ವಿದ್ಯಾಸಂಸ್ಥೆಗಳು, ಸಂಶೋಧನಾಲಯಗಳು, ಎಂಜಿನೀರ್‌ಗಳು ಮನದಟ್ಟು ಮಾಡಿಕೊಳ್ಳಬೇಕು.  ಈ ಬಗ್ಗೆ ಚಿಂತಿಸುವಾಗ ನೆನಪಿಗೆ ಬರುವ ಮೊದಲ ಹೆಸರು ‘ಟಾಟಾ ಇನ್‍ಸ್ಟಿಟ್ಯೂಟ್’ ಎಂದೇ ಹೆಸರಾದ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ (ಐ.ಐ.ಎಸ್‍ಸಿ.).  ಇಲ್ಲೊಂದು ವಿಶಿಷ್ಟವಾದ ಎಂಜಿನೀರೀಂಗ್ ಕೇಂದ್ರವಿದೆ.  ಅದರ ಹೆಸರು ‘ಎಂಜಿನೀರಿಂಗ್ ಉತ್ಪನ್ನ ವಿನ್ಯಾಸ ಹಾಗೂ ತಯಾರಿಕಾ ಕೇಂದ್ರ’.  ಈ ಕೇಂದ್ರವು ಬೆಂಗಳೂರಿನ ಖಾಸಗಿ ಎಂಜಿನೀರಿಂಗ್ ವಿನ್ಯಾಸ ಸಂಸ್ಥೆ ‘ಪ್ರೋಸಿಮ್’ನ ಜತೆಗೂಡಿ ಆಗಸ್ಟ್ ತಿಂಗಳಿನಲ್ಲಿ (9  ರಿಂದ 12) ಅಂತಾರಾಷ್ಟ್ರೀಯ ಸಮ್ಮೇಳನವೊಂದನ್ನು ಆಯೋಜಿಸಿದೆ.  ‘ಎಂಜಿನೀರಿಂಗ್, ವಿನ್ಯಾಸ, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ಜಾಗತೀಕರಣ’ ಒಡ್ಡುವ ಸವಾಲುಗಳು ಹಾಗೂ ನೀಡುವ ಅವಕಾಶಗಳ ಬಗ್ಗೆ ಇಲ್ಲಿ ಪರಿಣತರು ಚರ್ಚಿಸಲಿದ್ದಾರೆ.  ಐ.ಐ.ಎಸ್‍ಸಿ. ಆವರಣದಲ್ಲಿಯೇ ಜರಗುವ ಈ ಸಮ್ಮೇಳನವನ್ನು ಐ.ಐ.ಎಸ್‍ಸಿ. ಹಾಗೂ ಪ್ರೋಸಿಮ್‍ಗಳ ಜತೆಗೆ ‘ತಾಂತ್ರಿಕ ಶಿಕ್ಷಣದ ಭಾರತೀಯ ಸಂಸ್ಥೆ - ಐ.ಎಸ್.ಟಿ.ಇ.’, ‘ಲೋಹ ಬಿಡಿಭಾಗಗಳ ಉತ್ಪಾದಕರ ಸಂಘಟನೆ - ಎಂ.ಸಿ.ಎಂ.ಎ.’ಗಳು ಜಂಟಿಯಾಗಿ ಪ್ರಾಯೋಜಿಸುತ್ತಿವೆ.  ಅಂದ ಮೇಲೆ ಎಂಜಿನೀರಿಂಗ್‍ಗೆ ಸಂಬಂಧಿಸಿದ ಎಲ್ಲ ಪ್ರಾತಿನಿಧಿಕ ಸಂಘಟನೆಗಳೂ ಒಗ್ಗೂಡಿ ಈ ಸಮ್ಮೇಳನದಲ್ಲಿ ಚಿಂತನೆ ನಡೆಸಲಿವೆ.  ಐ.ಟಿ. ಕಂಪನಿಗಳಾದ ‘ಇನ್ಫೋಸಿಸ್’, ‘ಟಿ.ಸಿ.ಎಸ್.’, ಕಾರು ಉತ್ಪಾದಮಾ ಕಂಪನಿಗಳಾದ ‘ಜನರಲ್ ಮೋಟಾರ್ಸ್’, ‘ಮಹೀಂದ್ರ’, ‘ಟಾಟಾ ಮೋಟಾರ್ಸ್’, ‘ಡಾಲ್ಮಿಯರ್ ಕ್ರೈಸ್ಲರ್’, ‘ಫೋರ್ಡ್’ ಮುಂತಾದವುಗಳೂ ಸಹಾ ಈ ಮೇಳದಲ್ಲಿ ಭಾಗಿಯಾಗಲಿವೆ.  ಹೊಸ ತಂತ್ರಜ್ಞಾನದ ಬಗ್ಗೆ ಪ್ರದರ್ಶನವೊಂದನ್ನೂ ಇಲ್ಲಿ ಹಮ್ಮಿಕೊಳ್ಳಲಾಗಿದೆ, ಸಂಶೋಧಕರ ಪ್ರಬಂಧಗಳು ಮಂಡಣೆಯಾಗಲಿವೆ, ಬ್ಯುಸಿನೆಸ್‍ನ ಹೊಸ ಸಾಧ್ಯತೆಗಳ ಬಗ್ಗೆ ಚರ್ಚೆಯಾಗಲಿವೆ, ವಿದ್ಯಾಸಂಸ್ಥೆಗಳು ಹಾಗೂ ಉದ್ದಿಮೆಗಳ ನಡುವೆ ಹೊಸ ಒಡಂಬಡಿಕೆಗಳಾಗಲಿವೆ.  ದೇಶದ ಪ್ರತಿಷ್ಠಿತ ಎಂಜಿನೀರಿಂಗ್ ವಿದ್ಯಾಸಂಸ್ಥೆಗಳಾದ ‘ಐ.ಐ.ಟಿ.’, ‘ಎನ್.ಐ.ಟಿ.’ಗಳ ವಿದ್ಯಾರ್ಥಿಗಳು ತಮ್ಮ ಪ್ರಾಧ್ಯಾಪಕರುಗಳೊಂದಿಗೆ ಇದರಲ್ಲಿ ಸಕ್ರಿಯವಾಗಿ ಭಾಗಿಯಾಗುವ ನಿರೀಕ್ಷೆಯಿದೆ.  ಹಲವು ವಿದೇಶಿ ಎಂಜಿನೀರಿಂಗ್ ಸಂಶೋಧನಾ ಕೇಂದ್ರಗಳಿಂದಲೂ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. &lt;br /&gt;&lt;br /&gt; ಇಡೀ ಸಮ್ಮೇಳನದ ಸೂತ್ರಧಾರ ಬೆಂಗಳೂರಿನ ‘ಪ್ರೋಸಿಮ್’ ಕಂಪನಿಯ ನೇತಾರ ಡಾ ಎಸ್. ಶಾಮಸುಂದರ್.  ಎಂಜಿನೀರಿಂಗ್ ಕ್ಷೇತ್ರದಲ್ಲಿ ಬೆಂಗಳೂರಿನ ಐ.ಐ.ಎಸ್‍ಸಿ’ಯಿಂದ ಡಾಕ್ಟರೇಟ್ ಪಡೆದಿರುವ ಶಾಮಸುಂದರ್, ಲಂಡನ್ನಿನ ಇಂಪೀರಿಯಲ್ ಕಾಲೇಜು, ಅಮೆರಿಕದ ಡ್ರೆಕ್ಸೆಲ್ ವಿವಿ, ರೈಟ್ ಸ್ಟೇಟ್ ವಿವಿ, ರೈಟ್ ಪ್ಯಾಟರ್‌ಸನ್ ವಾಯುಸೇನಾ ನೆಲೆ ಮುಂತಾದ ಪ್ರತಿಷ್ಠಿತ ಕಂಪನಿಗಳಲ್ಲಿ ಅತ್ಯುತ್ತಮ ಕೆಲಸಗಳನ್ನು ಮಾಡಿದ್ದಾರೆ.  ಬಾಸ್‍ಗಳಿಂದ ಭೇಷ್ ಅನಿಸಿಕೊಂಡಿದ್ದಾರೆ.  ಉತ್ಪಾದನಾ ಎಂಜಿನೀರಿಂಗ್ ಕ್ಷೇತ್ರದಲ್ಲಿ ಹೆಸರು ಪಡೆದಿರುವ ಶಾಮ್, ‘ಜನರಲ್ ಮೋಟಾರ್ಸ್’, ‘ಫೋರ್ಡ್’, ‘ಜಿ.ಇ.’, ‘ಸೀಮನ್ಸ್’ ಮುಂತಾದ ಕಂಪನಿಗಳಿಗೆ ನೆರವು ನೀಡಿದ್ದಾರೆ.  ಭಾರತಕ್ಕೆ ಮರಳಿದ ನಂತರ ಜಾಗತಿಕ ಗುಣಮಟ್ಟದ ಎಂಜಿನೀರಿಂಗ್ ಸೌಕರ್ಯಗಳನ್ನು ನಿರ್ಮಿಸುವುದರಲ್ಲಿ ಮುಂದಾದ ಶಾಮ್, ತಮ್ಮ ಅನುಭವಗಳನ್ನು ಭಾರತದ ಸರ್ವಶ್ರೇಷ್ಠ ಎಂಜಿನೀರಿಂಗ್ ಕಂಪನಿಗಳಾದ ‘ಟಾಟಾ ಸ್ಟೀಲ್’, ‘ಟೆಲ್ಕೋ’, ಟೀವಿಎಸ್’, ‘ಭಾರತ್ ಫೋರ್ಜ್’, ‘ವೀಡಿಯಾ’, ‘ಕಲ್ಯಾಣಿ ಫೋರ್ಜ್’ ಮುಂತಾದವುಗಳೊಂದಿಗೆ ಹಂಚಿಕೊಂಡಿದ್ದಾರೆ.  ಇಲ್ಲಿ ಗಮನಾರ್ಹ ಅಂಶವೇನೆಂದರೆ ರಕ್ಷಣಾ ಉತ್ಪಾದನಾ ಕಂಪನಿಗಳಾದ ‘ಆರ್ಡ್‍ನೆನ್ಸ್ ಕಾರ್ಖಾನೆಗಳು’, ‘ಎಚ್.ಎ.ಎಲ್’, ಹಾಗೂ ಸಂಶೋಧನಾಲಯಗಳಾದ ‘ಡಿ.ಆರ್.ಡಿ.ಓ.’, ‘ಇಸ್ರೋ’ಗಳೊಂದಿಗೆ ನಿಕಟ ಸಂಬಂಧಗಳನ್ನು ಹೊಂದಿದ್ದಾರೆ.  ದೇಶ ಕಟ್ಟುವ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ.&lt;br /&gt;&lt;br /&gt; ವಿದೇಶಗಳಲ್ಲಿ ಎಂಜಿನೀರಿಂಗ್ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಯ ನಂತರ ಭಾರತಕ್ಕೆ ಹಿಂದಿರುಗಿ ಸ್ವದೇಶಿ ಕಂಪನಿಗಳ ನೆರವಿಗೆ ತೊಂಕ ಕಟ್ಟಿ ನಿಂತಿರುವ ಶಾಮ್ ಅವರನ್ನು ಅಭಿನಂದಿಸಲೇ ಬೇಕು.  ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು ಮತ್ತಷ್ಟು ಕಾರಣಗಳಿವೆ.  ತಮ್ಮೆಲ್ಲ ಕೆಲಸ ಕಾರ್ಯಗಳ ನಡುವೆಯೂ ಈ ಅಪ್ಪಟ ಕನ್ನಡಿಗ ಶಾಮ್ ಸಾಮಾಜಿಕ ಚಟುವಟಿಕೆಗಳಿಗೆ ಕೆಲ ಸಮಯ ಮೀಸಲಿಟ್ಟಿದ್ದಾರೆ.  ಭಾರತೀಯ ಸಂಸ್ಕೃತಿಯನ್ನು ಯುವಜನರಲ್ಲಿ ಬಿತ್ತಲೆಂದು ‘ಯುಗಯಾತ್ರಿ’ ಎಂಬ ಸಾಂಸ್ಕೃತಿಕ ಸಂಘಟನೆಯೊಂದನ್ನು ಆರಂಭಿಸಿದ್ದಾರೆ.  ತಮ್ಮ ಬಿಡುವಿನ ವೇಳೆಯನ್ನು ಅಭಿವೃದ್ಧಿ ಕೆಲಸಗಳಿಗೆಂದೇ ಮೀಸಲಿಟ್ಟಿರುವ ಶಾಮ್, ‘ಸಮಗ್ರ ವಿಕಾಸ’ ಎಂಬ ಕಾರ್ಯಾಚರಣಾ ವಿಶ್ವಸ್ಥ ಸಂಸ್ಥೆಯೊಂದರ ಸಹಭಾಗಿಯಾಗಿದ್ದಾರೆ.  ಸಂಸ್ಕೃತ ಭಾಷೆಯ ಬಳಕೆಯನ್ನು ಉತ್ತೇಜಿಸಲು ‘ಸಂಸ್ಕೃತ ಭಾರತಿ’ ಎಂಬ ವಿಶ್ವಸ್ಥ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ. &lt;br /&gt;&lt;br /&gt; ಎಂಜಿನೀರಿಂಗ್ ವಿನ್ಯಾಸ ಕ್ಷೇತ್ರದಲ್ಲಿ ಸಾಮಗ್ರಿಗಳನ್ನು ನಿರ್ದಿಷ್ಟ ಕೆಲಸಗಳಿಗೆ ಪದೇ ಪದೇ ಬಳಸುವುದರಿಂದ ಅವುಗಳಿಗೆ ‘ದಣಿವು’ (ಫ್ಯಾಟೀಗ್) ಆಗಿರುತ್ತದೆ.  ಈ ‘ದಣಿವು’ ಎಷ್ಟರ ಮಟ್ಟಿಗಾಗಿದೆ, ಅವುಗಳನ್ನು ಕಡಿಮೆ ಮಾಡುವುದು ಹೇಗೆ, ಒಟ್ಟಾರೆ ದಣಿವಿನಿಂದ ಸಾಮಗ್ರಿ ಇನ್ನು ಎಷ್ಟು ಕಾಲ ಕೆಲಸ ಮಾಡಬಲ್ಲದು ... ಮುಂತಾದ ಲೆಕ್ಕಾಚಾರಗಳು ಅತ್ಯಂತ ಸ್ವಾರಸ್ಯಕರವಾದದ್ದು.  ಅಷ್ಟೇ ಅಲ್ಲ, ಅವುಗಳ ವಿಶ್ಲೇಷಣೆ ಅತ್ಯಂತ ಕ್ಲಿಷ್ಟಕರವಾದದ್ದು.  ಈ ಬೌದ್ಧಿಕ ಸವಾಲಿನ ಕೆಲಸವನ್ನು ಯಾವುದೇ ‘ದಣಿವಿಲ್ಲದೆಯೆ’ ನಗುಮುಖದಿಂದ ನಿರ್ವಹಿಸುವುದರಲ್ಲಿ ಶಾಮ್ ನಿಸ್ಸೀಮರು.  ದಣಿವಿನ ನಿರ್ವಹಣೆಯನ್ನು ಎಂಜಿನೀರಿಂಗ್ ಮೂಲಕ ಕಲಿತಿರುವ ಶಾಮ್ ಅವರಿಗೆ ತಮ್ಮ ಕಚೇರಿ ಹಾಗೂ ಕಚೇರಿಯೇತರ ಕೆಲಸಗಳನ್ನು ಸುಗಮವಾಗಿ ನಡೆಸುವುದರಲ್ಲಿ ದಣಿವೆಂಬುದಿಲ್ಲ.  ‘ಇ.ಪಿ.ಓ.’ ಕ್ರಾಂತಿಯಿಂದ ದೇಶದ ಎಂಜಿನೀರ್‌ಗಳಿಗೆ ಹೆಚ್ಚು ಉದ್ಯೋಗಾವಕಾಶ ದೊರೆಯುವಂತಾಗಲಿ, ಈ ಬಗ್ಗೆ ಸ್ಫೂರ್ತಿದಾಯಕವಾಗಿ ಕಾರ್ಯ ನಿರ್ವಹಿಸುತ್ತಿರುವ ಶಾಮ್‍ಗೆ ಮತ್ತಷ್ಟು ಚೈತನ್ಯ ದೊರೆಯಲಿ ಎಂದು ಹಾರೈಸೋಣ! &lt;br /&gt;&lt;br /&gt;&lt;strong&gt;&lt;em&gt;(ಕೃಪೆ : ವಿಜಯ ಕರ್ನಾಟಕ ; 30-07-2007)&lt;/em&gt;&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/752423363868781697-8758672310516095892?l=netnota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://netnota.blogspot.com/feeds/8758672310516095892/comments/default' title='Post Comments'/><link rel='replies' type='text/html' href='http://www.blogger.com/comment.g?blogID=752423363868781697&amp;postID=8758672310516095892' title='0 Comments'/><link rel='edit' type='application/atom+xml' href='http://www.blogger.com/feeds/752423363868781697/posts/default/8758672310516095892'/><link rel='self' type='application/atom+xml' href='http://www.blogger.com/feeds/752423363868781697/posts/default/8758672310516095892'/><link rel='alternate' type='text/html' href='http://netnota.blogspot.com/2007/07/blog-post_7223.html' title='‘ಬಿ.ಪಿ.ಓ.’, ‘ಕೆ.ಪಿ.ಓ.’ ನಂತರದ ಹೊರಗುತ್ತಿಗೆ ಯಾವುದು?'/><author><name>HNS</name><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_WOq6aPUeAO4/SdR5qYZ87xI/AAAAAAAAAWg/cXIYJSqE8Z4/S220/sudhi1.jpg'/></author><thr:total>0</thr:total></entry><entry><id>tag:blogger.com,1999:blog-752423363868781697.post-7278130037892305635</id><published>2007-07-30T07:22:00.000+05:30</published><updated>2007-07-30T07:27:14.631+05:30</updated><title type='text'>ಕಲಾಮ್ ಮತ್ತೆ ಪಾಠ ಮಾಡುತ್ತಾರಂತೆ, ಕಲಿಯಲು ಸಜ್ಜಾಗೋಣ!</title><content type='html'>&lt;a href="http://1.bp.blogspot.com/_WOq6aPUeAO4/Rq1FRnkrLcI/AAAAAAAAANE/AqzsuxUcgYo/s1600-h/Kalam.jpg"&gt;&lt;img id="BLOGGER_PHOTO_ID_5092802922608799170" style="FLOAT: left; MARGIN: 0px 10px 10px 0px; CURSOR: hand" alt="" src="http://1.bp.blogspot.com/_WOq6aPUeAO4/Rq1FRnkrLcI/AAAAAAAAANE/AqzsuxUcgYo/s200/Kalam.jpg" border="0" /&gt;&lt;/a&gt;&lt;br /&gt;&lt;div&gt;&lt;div&gt;&lt;div&gt;&lt;strong&gt;&lt;span style="font-size:180%;"&gt;‘ ನೀ&lt;/span&gt;&lt;/strong&gt;ವು ಮೂಲತಃ ವಿಜ್ಞಾನಿ, ನಂತರ ರಾಷ್ಟ್ರಪತಿ ಆಗಿದ್ದೀರಿ. ಭಾರತದಂಥ ದೇಶದಲ್ಲಿ ಹೊಸ ಶಕೆಯೊಂದನ್ನು ಆರಂಭಿಸಬಹುದು ಎಂಬ ನಂಬಿಕೆ ನಿಮಗಿದೆಯೆ? ಹೌದು ಎಂದಾದರೆ, ಅದು ಹೇಗೆ’? - ಐದು ವರ್ಷಗಳ ಹಿಂದೆ ಅಬ್ದುಲ್ ಕಲಾಮ್ ಅವರಿಗೆ ಹೀಗೊಂದು ಪ್ರಶ್ನೆ ಹಾಕಿದ್ದು ಪತ್ರಕರ್ತರಲ್ಲ, ಜಸ್‍ಪ್ರೀತ್ ಎಂಬ ಶಾಲಾ ಬಾಲಕ. ‘ಭಾರತ ಒಂದು ಅಭಿವೃದ್ಧ ದೇಶವಾಗುವತ್ತ ಹಾಗೂ ಅದರ ಶತಕೋಟಿ ಜನರ ಮುಖಗಳಲ್ಲಿ ಮುಗುಳ್ನಗೆ ತರಿಸುವತ್ತ ನಾನು ಕೆಲಸ ಮಾಡುತ್ತಿದ್ದೇನೆ’. ಎಂದಿನ ಮುಗುಳ್ನಗೆಯೊಂದಿಗೆ ರಾಷ್ಟ್ರಪತಿ ಭವನದಿಂದ ಹೊರನಡೆಯುತ್ತಿರುವ ಕಲಾಮ್ ತಮ್ಮ ಅಧಿಕಾರಾವಧಿಯನ್ನು ಅರ್ಥಪೂರ್ಣವಾಗಿ ಮುಗಿಸಿದ್ದಾರೆ. ಈ ಅವಧಿಯಲ್ಲಿ ದೇಶ ಸಾಕಷ್ಟು ಅಭಿವೃದ್ಧಿಯಾಗಿದೆ ಹಾಗೂ ಶತಕೋಟಿ ಜನರ ಮುಖಗಳಲ್ಲಿ ಮುಗುಳ್ನಗೆ ಚಿಮ್ಮಿದೆ ಎಂದು ಹೇಳಿದರೆ ಅದು ಕೇವಲ ಔಪಚಾರಿಕ ವಿದಾಯದ ಮಾತಾದೀತು. ಅಬ್ದುಲ್ ಕಲಾಮ್ ಅವರನ್ನು ಏನು ಮಾಡಬಲ್ಲಿರಿ ಎಂದು ಪ್ರಶ್ನೆ ಹಾಕಿದ್ದ ಜಸ್‍ಪ್ರೀತ್ ಎಲ್ಲಿದ್ದಾನೊ, ಗೊತ್ತಿಲ್ಲ. ಬಹುಶಃ ಕಾಲೇಜು ಕಲಿಯುತ್ತಿರಬಹುದು. ಆದರೆ ಜಸ್‍ಪ್ರೀತ್‍ನಂಥ ಕೋಟ್ಯಂತರ ಮಕ್ಕಳಲ್ಲಿ ಅವರು ಕೇವಲ ಮುಗುಳ್ನಗೆಯನ್ನಷ್ಟೇ ಮೂಡಿಸಿಲ್ಲ, ಅವರೆಲ್ಲರ ಹೃದಯದಲ್ಲಿ ಆತ್ಮವಿಶ್ವಾಸ ಮೂಡಿಸಿದ್ದಾರೆ. ಅವರಲ್ಲಿ ಒಂದಷ್ಟು ಮಕ್ಕಳಲ್ಲಿಯಾದರೂ ಸ್ವದೇಶಿ ತಂತ್ರಜ್ಞಾನದ ಕಿಚ್ಚನ್ನು ಹಚ್ಚಿದ್ದಾರೆ.&lt;br /&gt;ಕಲಾಮ್ ಹೇಗಿದ್ದರು, ಏನು ಮಾಡುತ್ತಿದ್ದರು, ಅವರ ಚಿಂತನೆಗಳೇನು, ಅವರು ಕಟ್ಟಿದ್ದ ಕನಸುಗಳು ಯಾವುವು ....... ಹೀಗೊಂದಷ್ಟು ಪ್ರಶ್ನೆಗಳನ್ನು ಮುಂದೆ ಹರಡಿಕೊಂಡು ಕುಳಿತರೆ ರಾಶಿ ರಾಶಿ ಉತ್ತರಗಳನ್ನು ಗುಡ್ಡೆ ಹಾಕಿಕೊಳ್ಳಬಹುದು. ಅವುಗಳನ್ನು ವಿಶ್ಲೇಷಣೆ ಮಾಡ ಹೊರಟರೆ ಬಲಿಷ್ಟ ಭಾರತ ಕಟ್ಟಲು ಸರಳ ಸೂತ್ರಗಳು ಕೈಗೆಟುಕಬಹುದು. ಇಂಥ ದಿಕ್ಸೂಚಿಗಳು ಎಷ್ಟಿವೆಯೆಂದರೆ ಬಹುಶಃ ನಮ್ಮ ಮುಂದಿನ ರಾಷ್ಟ್ರಪತಿಗಳು ನಿವೃತ್ತರಾಗುವವರೆಗೆ ನಾವು ಕಲಾಮ್ ಅಧ್ಯಯನವನ್ನು ಮುಂದುವರಿಸಬಹುದು. ನೀವೆಂದಾದರೂ ನಮ್ಮ ದೇಶದ ರಾಷ್ಟ್ರಪತಿಗಳ ಅಧಿಕೃತ ಇಂಟರ್‌ನೆಟ್ ವೆಬ್‍ಸೈಟ್ ಅಂದರೆ ಅಂತರ್‌ಜಾಲ ತಾಣ- &lt;a href="http://www.presidentofindia.nic.in/"&gt;http://www.presidentofindia.nic.in/&lt;/a&gt; ಗೆ ಭೇಟಿ ಕೊಟ್ಟಿದ್ದರೆ ಮೇಲಿನ ಮಾತುಗಳಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ ಎಂದು ಮನವರಿಕೆಯಾದೀತು. ಅಂತರ್‌ಜಾಲ ತಾಣದಲ್ಲಿ ಮಕ್ಕಳಿಗೆಂದೇ ಪ್ರತ್ಯೇಕ ವಿಭಾಗವಿದೆ. ಅಂಕಣದ ಆರಂಭದಲ್ಲಿ ಪ್ರಸ್ತಾಪಿಸಿದಂಥದೇ 758 ಶಾಲಾ ಮಕ್ಕಳ ಪ್ರಶ್ನೆಗಳಿಗೆ ಕಲಾಮ್ ಇಲ್ಲಿ ಉತ್ತರಗಳನ್ನು ದಾಖಲಿಸಿದ್ದಾರೆ.&lt;/div&gt;&lt;br /&gt;&lt;br /&gt;&lt;br /&gt;&lt;div&gt;&lt;br /&gt;ಕಲಾಮ್ ಮೂಲತಃ ಒಬ್ಬ ಮೇಷ್ಟ್ರು, ಹೀಗಾಗಿ ತಮ್ಮ ಮುಂದೆ ಕಾಣುವವರನ್ನೆಲ್ಲಾ ಮಕ್ಕಳೆಂದೇ ಭಾವಿಸಿಬಿಡುತ್ತಾರೆ. ಭಾವಪರವಶರಾಗಿ ಪಾಠ ಹೇಳಲು ಹೊರಡುತ್ತಾರೆ - ಎಂಬ ಲಘು ಲೇವಡಿಗಳು ಅವರನ್ನು ಅಂಟಿಕೊಂಡಿದ್ದವು. ತೀರಾ ಹತ್ತಿರದಿಂದ ಕಲಾಮ್ ಅವರೊಂದಿಗೆ ಸಂಪರ್ಕವಿಟ್ಟುಕೊಂಡವರು ಇಂಥ ಆಪಾದನೆಗಳನ್ನು ಒಪ್ಪಲಾರರು. ಕಲಾಮ್ ದೇಶದ ರಕ್ಷಣಾ ಮಂತ್ರಿಗಳ ವೈಜ್ಞಾನಿಕ ಸಲಹೆಗಾರರಾದಂದಿನಿಂದಲೂ ಹತ್ತಿರದ ಅಧಿಕೃತ ಒಡನಾಟಗಳನ್ನಿಟ್ಟುಕೊಂಡಿರುವ ಪ್ರತಿಷ್ಠಿತ ಇಂಗ್ಲಿಷ್ ಸಾಪ್ತಾಹಿಕ ‘ದ ವೀಕ್’ನ ದೆಹಲಿ ಸ್ಥಾನಿಕ ಸಂಪಾದಕ ಕೆ.ಎಸ್.ಸಚ್ಚಿದಾನಂದ ಮೂರ್ತಿ (ಕನ್ನಡಿಗ ‘ಸಚ್ಚಿ’), ಅದೇ ಪತ್ರಿಕೆಯ ದೆಹಲಿ ಬ್ಯೂರೊ ಮುಖ್ಯಸ್ಥ ಹಾಗೂ ರಕ್ಷಣಾ ವಿಷಯಗಳ ತಜ್ಞ ಆರ್.ಪ್ರಸನ್ನನ್ ಇವರುಗಳನ್ನು ಮಾತನಾಡಿಸಿದರೆ ಸಾಕು, ಕಲಾಮ್ ‘ಪಾಠ’ಗಳಲ್ಲೂ ಜಿಗಿತು ಬರುವ ಹೊಸ ಹೊಳಹುಗಳನ್ನು ಪ್ರಸ್ತಾಪಿಸುತ್ತಾರೆ. ಅಷ್ಟೇಕೆ, ಕಲಾಮ್ ಅವರೊಂದಿಗೆ ಹದಿನಾಲ್ಕು ದಿನಗಳ ಕಾಲ ನಾಲ್ಕು ರಾಷ್ಟ್ರಗಳನ್ನು ಸುತ್ತಿ ಬಂದ ‘ವಿಜಯ ಕರ್ನಾಟಕ’ ಸಂಪಾದಕ ವಿಶ್ವೇಶ್ವರ ಭಟ್ ಅವರನ್ನು ಒಮ್ಮೆ ಕೇಳಿ ನೋಡಿ. ಹೊರರಾಷ್ಟ್ರಗಳಲ್ಲಿ ಕಲಾಮ್ ಅವರ ಮಾತುಗಳಿಗಿರುವ ಮೌಲ್ಯದ ಬಗ್ಗೆ ಖಂಡಿತವಾಗಿಯೂ ನೂರೆಂಟು ಮಾತುಗಳನ್ನಾಡದೇ ಬಿಡುವುದಿಲ್ಲ. ಇನ್ನು ವಿಜ್ಞಾನಿ ಸಿ.ಆರ್.ಸತ್ಯ - ತಿರುವನಂತಪುರದ ಬಾಹ್ಯಾಕಾಶ ಕೇಂದ್ರದ ರಾಕೆಟ್ ಯೋಜನೆಗಳಲ್ಲಿ ಕಲಾಮ್ ಅವರೊಟ್ಟಿಗೆ ಕೆಲಸ ಮಾಡಿದ್ದ ಎಂಜಿನೀರಿಂಗ್ ಸಾಮಗ್ರಿ ಪರಿಣತ ಹಾಗೂ ಪ್ರಸ್ತುತ ‘ಟಾಟಾ ಅಡ್ವಾನ್ಸ್‍ಡ್ ಮೆಟೀರಿಯಲ್ಸ್’ನ ಹಿರಿಯ ಉಪಾಧ್ಯಕ್ಷ - ಅವರೊಂದಿಗೆ ಮಾತು ಶುರು ಹಚ್ಚಿಕೊಂಡರೆ ಹತ್ತು ಪದಗಳಿಗೊಮ್ಮೆ ಕಲಾಮ್ ಪ್ರತ್ಯಕ್ಷರಾಗಿಬಿಡುತ್ತಾರೆ. ಹಳೆಯ ಪತ್ರಿಕೆ ಹಾಗೂ ದೂರದರ್ಶನ ಸಂಚಿಕೆಗಳನ್ನು ಒಮ್ಮೆ ತಿರುವಿ ನೋಡಿದರೆ ಕಲಾಮ್ ಅವರ ಪಟ್ಟ ಶಿಷ್ಯ ಪ್ರಹ್ಲಾದ ತಾವು ಕ್ಷಿಪಣಿ ಯೋಜನೆಗಳನ್ನು ಸುಸೂತ್ರವಾಗಿ ಮುನ್ನಡೆಸಲು ಕಲಾಮ್ ಏನೆಲ್ಲಾ ಪಾಠಗಳನ್ನು ಕಲಿಸಿದ್ದರೆಂದು ನೆನಪಿಸಿಕೊಳ್ಳುತ್ತಾರೆ. ಈ ಬಗೆಯ ನಿಷ್ಪಕ್ಷಪಾತ ವಿಮರ್ಶೆಗಳಷ್ಟೇ ಸಾಕು, ಕಲಾಮ್ ಅವರ ‘ಮೇಷ್ಟ್ರಗಿರಿ’ಯ ಸಾರ್ಥಕತೆಗೆ.&lt;/div&gt;&lt;br /&gt;&lt;br /&gt;&lt;br /&gt;&lt;div&gt;&lt;br /&gt;ಬೆಂಗಳೂರಿನ ಮಲ್ಲೇಶ್ವರದ ಕೊನೆಯಲ್ಲಿರುವ ‘ಟಾಟಾ ಇನ್‍ಸ್ಟಿಟ್ಯೂಟ್’ (ಭಾರತೀಯ ವಿಜ್ಞಾನ ಮಂದಿರ - ಐ.ಐ.ಎಸ್‍ಸಿ.) ನಿಮಗೆ ಗೊತ್ತು. ಇನ್ನೆರಡು ವರ್ಷಗಳಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳಲಿರುವ ಈ ಜಗನ್ಮಾನ್ಯ ವಿಜ್ಞಾನ ಬೋಧನಾ ಸಂಸ್ಥೆಯೊಂದಿಗೆ ಅಬ್ದುಲ್ ಕಲಾಮ್ ಅವರ ಒಡನಾಟ 1958ರಿಂದಲೂ ಇದೆ. ಈ ಐಐಎಸ್‍ಸಿಯ ಶತಮಾನೋತ್ಸವವನ್ನು ಸಾರ್ಥಕವಾಗಿ ಆಚರಿಸಲು ಹಾಗೂ ಆ ಸಂದರ್ಭದಲ್ಲಿ ಮಹತ್ತರ ಯೋಜನೆಗಳನ್ನು ಹಮ್ಮಿಕೊಳ್ಳಲು ಸದ್ಯಕ್ಕೆ ಅಮೆರಿಕದಲ್ಲಿ ನೆಲೆಸಿರುವ ಐಐಎಸ್‍ಸಿಯ ಹಿರಿಯ ವಿದ್ಯಾರ್ಥಿಗಳು ಜೂನ್ ಕೊನೆಯ ವಾರದಲ್ಲಿ ಜಾಗತಿಕ ಸಮ್ಮೇಳನವೊಂದನ್ನು ಹಮ್ಮಿಕೊಂಡಿದ್ದರು. ಈ ವಿದ್ಯಾಲಯದ ಪ್ರತಿಷ್ಠಿತ ವಿದ್ಯಾರ್ಥಿಗಳಾದ ರೊದ್ದಂ ನರಸಿಂಹ, ಆರ್.ಚಿದಂಬರಂ, ಎನ್.ಬಾಲಕೃಷ್ಣನ್, ಕೋಟಾ ಹರಿನಾರಾಯಣ, ವಾಸುದೇವ ಆತ್ರೆ, ಬಿ.ದತ್ತಗುರು, ಎ.ಆರ್.ಉಪಾಧ್ಯ, ಬಿ.ಎನ್.ರಘುನಂದನ್, ರಾಘವೇಂದ್ರ ಗದಗಕರ ಮುಂತಾದವರು ಸಮ್ಮೆಳನದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಇವರೆಲ್ಲರೂ ದೇಶದ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಮಹತ್ತರ ಕಾಣಿಕೆಯನ್ನಿತ್ತವರು. ಜತೆಗೆ ಇಡೀ ಜಗತ್ತಿಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಿಕೊಟ್ಟವರು. ಕಳೆದೊಂದು ಶತಮಾನದಲ್ಲಿ ಐ.ಐ.ಎಸ್‍ಸಿ. ಕನಿಷ್ಠವೆಂದರೂ ಮೂವತ್ತು ಸಹಸ್ರ ಪ್ರತಿಭಾನ್ವಿತ ವಿಜ್ಞಾನಿಗಳಿಗೆ ವಿದ್ಯಾರ್ಥಿ ದೆಸೆಯಲ್ಲಿ ಮಾರ್ಗದರ್ಶನ ಮಾಡಿದೆ. ಇವರಲ್ಲಿ ಐದು ಸಹಸ್ರಕ್ಕೂ ಹೆಚ್ಚಿನ ಮಂದಿ ಅಮೆರಿಕದಲ್ಲಿನ ಪ್ರತಿಷ್ಠಿತ ಕಂಪನಿಗಳ ಏಳಿಗೆಗೆ ಕಾರಣರಾಗಿದ್ದಾರೆ. ‘ಇಂಟೆಲ್’, ‘ಸ್ಟ್ರಾಂಡ್ ಲೈಫ್ ಸೈನ್ಸಸ್’, ‘ಮೆಕ್‍ಕಿನ್ಸೆ’, ‘ಗೂಗಲ್’, ‘ಐ.ಬಿ.ಎಂ.’, ‘ಎಚ್.ಪಿ.’, ‘ಇಬೇ’, ‘ಮೈಕ್ರೊಸಾಫ್ಟ್’, ‘ಯಾಹೂ’, ‘ಸ್ಯಾಪ್’, ‘ಸಿಸ್ಕೊ’, ‘ಬೋಯಿಂಗ್’, ‘ಬ್ರಿಟಿಷ್ ಏರೋಸ್ಪೇಸ್’, ‘ಡೆಲ್’, ‘ನಾಸಾ’, ‘ಸನ್’ ...... ಹೀಗೆ ಜಗನ್ಮಾನ್ಯ ಕಂಪನಿಗಳನ್ನು ಪಟ್ಟಿ ಮಾಡುತ್ತಾ ಹೋಗಿ. ಇವೆಲ್ಲವುಗಳ ಸೂತ್ರಧಾರ ಸ್ಥಾನದಲ್ಲಿ ಐ.ಐ.ಎಸ್‍ಸಿಯ ಹಿರಿಯ ವಿದ್ಯಾರ್ಥಿಗಳಿದ್ದಾರೆ. ಜತೆಗೆ ಅಮೆರಿಕದ ಮೊದಲ ಹತ್ತಿಪ್ಪತ್ತು ವಿಶ್ವವಿದ್ಯಾಲಯಗಳ ವಿಖ್ಯಾತ ಪ್ರಾಧ್ಯಾಪಕರುಗಳ ಪಟ್ಟಿಯಲ್ಲಿ ಐಐಎಸ್‍ಸಿಯಿಂದ ಪಾಠ ಕಲಿತವರು ಸ್ಥಾನ ಗಿಟ್ಟಿಸಿದ್ದಾರೆ. ಇವೆಲ್ಲ ಸಾಧನೆಗಳ ಒಂದು ಪರಾಮರ್ಶೆಗೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕೂಡಿದ್ದ ಮೇಳವನ್ನು ರಾಷ್ಟ್ರಪತಿ ಅಬ್ದುಲ್ ಕಲಾಮ್ ಉದ್ಘಾಟಿಸಿದರು, ತಮ್ಮ ದೆಹಲಿಯ ಕೋಣೆಯಲ್ಲಿಯೇ ಕುಳಿತು. ತಂತ್ರಜ್ಞಾನವನ್ನು ಆಪ್ತವಾಗಿಸಿಕೊಳ್ಳುವುದರಲ್ಲಿ ಸದಾ ಮುಂದಾದ ಕಲಾಮ್ ಅತ್ಯುತ್ತಮವಾದ ಪ್ರಾತ್ಯಕ್ಷಿಕೆಯೊಂದನ್ನು ವೀಡಿಯೊ ಸಂವಾದದ ಮೂಲಕ ನೀಡಿದ್ದರು.&lt;/div&gt;&lt;br /&gt;&lt;br /&gt;&lt;br /&gt;&lt;div&gt;&lt;br /&gt;ಈ ಉಪನ್ಯಾಸದಲ್ಲಿ ಕಲಾಮ್ ಅವರಿಗೆ ಪಾಠ ಹೇಳುವ ಕಲೆ ಸಿದ್ಧಿಸಿದ್ದು ಹೇಗೆಂದು ಪತ್ತೆಯಾಗುತ್ತದೆ. ಅರವತ್ತರ ದಶಕದಲ್ಲಿ ಐಐಎಸ್‍ಸಿಯಲ್ಲಿ ವೈಮಾನಿಕ ಎಂಜಿನೀರಿಂಗ್ ಬೋಧಿಸುತ್ತಿದ್ದವರು ಜಾಗತಿಕವಾಗಿ ಹೆಸರು ಮಾಡಿದ್ದ ಡಾಸತೀಶ್ ಧವನ್. ಬೆಂಗಳೂರಿನ ಡಿಆರ್‌ಡಿಓದಲ್ಲಿ ವೈಜ್ಞಾನಿಕ ಸಹಾಯಕರಾಗಿದ್ದ ಅಬ್ದುಲ್ ಕಲಾಮ್ ತಮ್ಮ ಎಂಜಿನೀರಿಂಗ್ ಸಮಸ್ಯೆಯೊಂದನ್ನು ಪರಿಹರಿಸಿಕೊಳ್ಳಲು ಧವನ್ ಅವರನ್ನು ಸಂಪರ್ಕಿಸುತ್ತಾರೆ. ಹಮ್ಮು-ಬಿಮ್ಮಿಲ್ಲದ ಧವನ್, ಕಲಾಮ್ ಅವರನ್ನು ಪ್ರತಿ ಶನಿವಾರ ಮಧ್ಯಾಹ್ನ ಎರಡರಿಂದ ಮೂರು ಗಂಟೆಯ ತನಕ ನಡೆಯುತ್ತಿದ್ದ ತರಗತಿಗೆ ಆಹ್ವಾನಿಸುತ್ತಾರೆ. ಈ ಒಡನಾಟ ಆರು ವಾರಗಳ ಕಾಲ ಮುಂದುವರಿಯುತ್ತದೆ. ಪ್ರತಿಯೊಂದು ತರಗತಿಯ ಆರಂಭಕ್ಕೆ ಮುನ್ನ ಹಿಂದೆ ಬೋಧಿಸಿದ ವಿಷಯಗಳು ಅರ್ಥವಾಗಿದೆಯೆ? ಎಂದು ಪ್ರಶ್ನೆಗಳ ಮೂಲಕ ಧವನ್ ತಿಳಿದುಕೊಳ್ಳುತ್ತಿದ್ದರಂತೆ. ತಮ್ಮ ಬೋಧನಾವಧಿಯ ಪ್ರತಿಯೊಂದು ನಿಮಿಷವನ್ನೂ ಹೇಗೆ ಯಶಸ್ವಿಯಾಗಿ ಬಳಸಿಕೊಳ್ಳಬೇಕೆಂಬ ಕಲೆ ಧವನ್ ಅವರಿಗೆ ಕರಗತವಾಗಿತ್ತು. ವಿದೇಶಗಳಲ್ಲಿ ಪಡೆದು ಕೊಂಡು ಬಂದಿದ್ದ ಪರಿಣತಿಯನ್ನು ಇಲ್ಲಿನ ವ್ಯವಸ್ಥೆಗೆ ಅನುಗುಣವಾಗಿ ಅವರು ಬಳಸಿಕೊಂಡರು. ಪಾಠ ಮಾಡುವುದೆಂದರೆ ಬಾಯಿಮಾತನ್ನು ಒಪ್ಪಿಸುವುದಷ್ಟೇ ಅಲ್ಲ, ವಿದ್ಯಾರ್ಥಿಯೊಬ್ಬನ ಕಲ್ಪನಾಶಕ್ತಿಯನ್ನು ಚಿಗುರಿಸುದು ಎಂದು ಧವನ್ ನಂಬಿದ್ದರು. ಚಾತುರ್ಯ ಬೆರೆತ ಜ್ಞಾನ ಕನಸುಗಳೊಂದಿಗೆ ಕಲೆತಾಗ ಎಂಜಿನೀರಿಂಗ್ ಆಪ್ತವೆನಿಸುತ್ತದೆ ಎಂದವರು ನಂಬಿದ್ದರು. ಕೇವಲ ಆರೇ ವಾರಗಳಲ್ಲಿ ಧವನ್ ಅವರಿಗಿದ್ದ ನಂಬಿಕೆಯನ್ನು ಕಲಾಮ್ ನಿಜಗೊಳಿಸಿಬಿಟ್ಟರು. ಅತ್ಯಂತ ಚಿಕ್ಕ ಹುದ್ದೆಯಲ್ಲಿದ್ದ ವಿಜ್ಞಾನಾಸಕ್ತನೊಬ್ಬನಿಗೆ ಅತ್ಯಂತ ಹಿರಿಯ ಪ್ರೊಫೆಸರ್ ಒಬ್ಬರು ತಿಳಿಯಾಗಿ ಅರ್ಥವಾಗುವಂತೆ ಪಾಠ ಮಾಡಿದ್ದು ಗಮನಾರ್ಹ ಸಂಗತಿ. ಮುಂದೆ ಆತ ದೇಶದ ಅತ್ಯುನ್ನತ ವೈಜ್ಞಾನಿಕ ಹುದ್ದೆಗೇರಲು ಧವನ್ ಅವರೊಂದಿಗಿದ್ದ ಆ ಹಿಂದಿನ ಸಾಂಗತ್ಯವೇ ಪ್ರೇರಣೆಯಾಯಿತು. ಮುಂದಿನದು ಇತಿಹಾಸ. ಕಲಾಮ್ ಅವರನ್ನು ರಾಷ್ಟ್ರಪತಿ ಹುದ್ದೆಯ ತನಕ ಕೊಂಡೊಯ್ದದ್ದು ಬೋಧಕನ ಉತ್ಸಾಹ ಹಾಗೂ ವಿದ್ಯಾರ್ಥಿಯ ಆಸಕ್ತಿ. ಹೀಗಾಗಿಯೇ ಕಲಾಮ್ ನಿಂತೆಡೆಯಲ್ಲಿಯೇ ಮೇಷ್ಟ್ರ ವೇದಿಕೆಯನ್ನೇರುತ್ತಾರೆ. ನಿಷ್ಕಳಂಕ ಬೋಧನೋತ್ಸಾಹ ಅವರನ್ನು ಆವರಿಸಿಬಿಡುತ್ತದೆ.&lt;/div&gt;&lt;br /&gt;&lt;br /&gt;&lt;br /&gt;&lt;div&gt;&lt;br /&gt;‘ವಯಸ್ಸು ಯಾವುದೇ ಇರಲಿ. ಕನಸುಗಳು ಸದಾ ನಿಮ್ಮೊಂದಿಗಿರಲಿ. ಆ ಕನಸುಗಳು ಎಂದೆಂದಿಗೂ ದೊಡ್ಡದಾಗಿರಲಿ’. ಈ ಪಾಠವನ್ನು ಕಲಾಮ್ ತಪ್ಪದೆಯೇ ಬೋಧಿಸುತ್ತಿದ್ದರು, ಮುಂದಿಗೂ ಬೋಧಿಸುತ್ತಾರೆ. ‘ಕನಸುಗಳು ಸದಾ ಚಿಂತನೆಗಳಾಗಿ ಬದಲಾಗುತ್ತವೆ, ಆ ಚಿಂತನೆಗಳು ಮುಂದಿನ ಕ್ರಿಯೆಗಳಿಗೆ ದಾರಿಯಾಗುತ್ತವೆ’ - ಇದೊಂದು ಅಪ್ಪಟ ಕಲಾಮ್ ವಾದ ಸರಣಿಯೆಂದರೆ ತಪ್ಪಾಗಲಾರದು. ತಮ್ಮ ನಂಬಿಕೆಯ ನುಡಿಗಟ್ಟನ್ನು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಅವರು ಪಾಲಿಸಿಕೊಂಡು ಬಂದಿದ್ದಾರೆ. ಕಲಾಮ್ ಅವರ ಯಶೋಗಾಥೆಗೆ ಕನಸುಗಳ ಬಗ್ಗೆ ಅವರಿಗಿರುವ ವಿಶ್ವಾಸಾರ್ಹತೆಯೇ ಕಾರಣವೆಂದರೆ ತಪ್ಪಾಗಲಾರದು. ಇಡೀ ದೇಶದ ಜನತೆಯ ಮುಂದೆ ರಾಷ್ಟ್ರಪತಿ ಸ್ಥಾನದ ಬಗ್ಗೆ ಅತ್ಯಂತ ಗೌರವಯುತವಾದ ಕಲ್ಪನೆಯೊಂದನ್ನು ಬಿತ್ತಿ ಹೋದ ಕಲಾಮ್ ಮುಂದೇನು ಮಾಡುತ್ತಾರೆ? ಎಂಬ ಪ್ರಶ್ನೆಗೆ ಉತ್ತರ ಸುಲಭ. ಎಂದಿನಂತೆ ತಮ್ಮ ಬೋಧನೆಯನ್ನು ಮುಂದುವರಿಸುತ್ತಾರೆ. ಮಕ್ಕಳೊಂದಿಗೆ ಮತ್ತಷ್ಟು ಹೆಚ್ಚು ಬೆರೆಯುತ್ತಾರೆ. ಎಂಜಿನೀರಿಂಗ್ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುತ್ತಾರೆ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಪರಿಣತರಿಗೆ ಮತ್ತಷ್ಟು ಮಾರ್ಗದರ್ಶನ ಮಾಡುತ್ತಾರೆ. ‘ಬತ್ತಿದರೊಂದು ತೆರೆವುದು ಚಿಲುಮೆ, ತುಂಬಿಯೇ ಇರುವುದು ಬಾಳ್ಮೆಯ ಒಲುಮೆ’ ಎಂಬ ಕವಿನುಡಿ ಕಲಾಮ್ ಅವರನ್ನು ಕುರಿತೇ ಬರೆದದ್ದೆಂದು ಗುಮಾನಿ ಪಡುವಷ್ಟು ರೀತಿಯಲ್ಲಿ ಸ್ಫೂರ್ತಿ ತುಂಬುತ್ತಾರೆ.&lt;/div&gt;&lt;br /&gt;&lt;br /&gt;&lt;br /&gt;&lt;div&gt;&lt;br /&gt;ವಿಜ್ಞಾನವಷ್ಟೇ ಅರಿತಿದ್ದರೆ ಸಾಲದು, ತಂತ್ರಜ್ಞಾನವೂ ಬೇಕು. ಯಂತ್ರಗಳೊಂದಿಗೆ ಮನುಷ್ಯರ ನಿರ್ವಹಣೆಯೂ ಮುಖ್ಯ ಎಂದು ಬಲವಾಗಿ ನಂಬಿದ್ದ ಕಲಾಮ್ ಅವರು ದೇಶದ ರಕ್ಷಣಾ ಸಂಶೋಧನೆಯ ಚುಕ್ಕಾಣಿ ಹಿಡಿದಿದ್ದ ಕಾಲದಲ್ಲಿ ಸ್ವದೇಶಿ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ಸಿಕ್ಕಿತು. ಒಬ್ಬಂಟಿಗಳಾಗಿದ್ದಾಗ ತಮ್ಮ ಮೇಧಾಶಕ್ತಿ ಪ್ರದರ್ಶಿಸುವ ಭಾರತೀಯರು, ಒಗ್ಗೂಡಿ ಕ್ರಿಯಾತ್ಮಕ ಕೆಲಸ ಎಂದೂ ಮಾಡುವವರಲ್ಲ, ಎಂಬ ಆಪಾದನೆಯನ್ನು ಕಲಾಮ್ ಸುಳ್ಳು ಮಾಡಿದ್ದರು. ಅಪ್ಪಟ ಭಾರತೀಯ ಕ್ಷಿಪಣಿ ಮತ್ತು ವಿಮಾನಗಳು ಜಗತ್ತನ್ನು ನಿಬ್ಬೆರಗಾಗಿಸಿದ್ದು ಇವರ ನೇತೃತ್ವದಲ್ಲಿ. ಇಂಥ ಹೆಗ್ಗಳಿಕೆಯ ಕಲಾಮ್ ಮತ್ತೆ ಕಲಿಸಲು ಬರಲಿದ್ದಾರೆ. ಅವರ ಮಾರ್ಗದರ್ಶನದಲ್ಲಿ ದೇಶ ಮತ್ತಷ್ಟು ಸಂಖ್ಯೆಯಲ್ಲಿ ಕೋಟಾ ಹರಿನಾರಾಯಣ, ರೊದ್ದಂ ನರಸಿಂಹ, ಎ.ಆರ್.ಉಪಾಧ್ಯ, ವಾಸುದೇವ ಆತ್ರೆ, ಎನ್.ಬಾಲಕೃಷ್ಣನ್, ಯು.ಆರ್.ರಾವ್, ... ಮತ್ತಿತರರನ್ನು ಪಡೆಯಲಿ. ಕಲಾಮ್ ಅವರಷ್ಟೇ ಸಮರ್ಥರಾಗಿ ದೇಶದ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರವನ್ನು ಮುನ್ನಡೆಸಲಿ. ಇದು ನಿಮ್ಮೆಲ್ಲರ ಹಾರೈಕೆಯೂ ಹೌದಲ್ಲವೆ? &lt;/div&gt;&lt;br /&gt;&lt;br /&gt;&lt;br /&gt;&lt;div&gt;&lt;/div&gt;&lt;br /&gt;&lt;br /&gt;&lt;br /&gt;&lt;div&gt;&lt;strong&gt;&lt;em&gt;(ಕೃಪೆ : ವಿಜಯ ಕರ್ನಾಟಕ, 23-07-2007)&lt;/em&gt;&lt;/strong&gt; &lt;/div&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/752423363868781697-7278130037892305635?l=netnota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://netnota.blogspot.com/feeds/7278130037892305635/comments/default' title='Post Comments'/><link rel='replies' type='text/html' href='http://www.blogger.com/comment.g?blogID=752423363868781697&amp;postID=7278130037892305635' title='1 Comments'/><link rel='edit' type='application/atom+xml' href='http://www.blogger.com/feeds/752423363868781697/posts/default/7278130037892305635'/><link rel='self' type='application/atom+xml' href='http://www.blogger.com/feeds/752423363868781697/posts/default/7278130037892305635'/><link rel='alternate' type='text/html' href='http://netnota.blogspot.com/2007/07/blog-post_30.html' title='ಕಲಾಮ್ ಮತ್ತೆ ಪಾಠ ಮಾಡುತ್ತಾರಂತೆ, ಕಲಿಯಲು ಸಜ್ಜಾಗೋಣ!'/><author><name>HNS</name><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_WOq6aPUeAO4/SdR5qYZ87xI/AAAAAAAAAWg/cXIYJSqE8Z4/S220/sudhi1.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_WOq6aPUeAO4/Rq1FRnkrLcI/AAAAAAAAANE/AqzsuxUcgYo/s72-c/Kalam.jpg' height='72' width='72'/><thr:total>1</thr:total></entry><entry><id>tag:blogger.com,1999:blog-752423363868781697.post-6668968233322015453</id><published>2007-07-16T05:26:00.000+05:30</published><updated>2007-07-16T05:34:37.458+05:30</updated><title type='text'>ವಿದೇಶಿ ಸವಾರರ ‘ಬಯಕೆ’ ಕೆರಳಿಸಿರುವ ಅಪ್ಪಟ ಸ್ವದೇಶಿ ಬೈಕು!</title><content type='html'>&lt;span style="font-weight: bold;font-size:180%;" &gt;‘ಇಂ&lt;/span&gt;ಡೋನೇಶಿಯಾದಲ್ಲಾಗುವ ಬದಲಾವಣೆಗಳು ಇಂಡಿಯಾದ ಮೇಲೆ ಪರಿಣಾಮ ಬೀರುತ್ತವೆಯೆ’? ಎಂಬ ಪ್ರಶ್ನೆ ಹಾಕಿದರೆ ‘ಅಲ್ಲಿಂದ ಎದ್ದ ಸುನಾಮಿ ಅಲೆಗಳು ನಮ್ಮ ದೇಶದ ತೀರ ಪ್ರದೇಶಗಳನ್ನು ಮುಳುಗಿಸಬಹುದು’ ಎನ್ನಬಹುದು - ನನ್ನಂಥ ಸಾಮಾನ್ಯ ಜನ.  ಇದೇ ಪ್ರಶ್ನೆಯನ್ನು ಬಿ.ಎಲ್.ಪಿ.ಸಿಂಹ ಅವರಿಗೆ ಹಾಕಿ ನೋಡಿ.  ‘ಇಂಡೋನೇಶಿಯಾದಲ್ಲಿ ಪೆಟ್ರೋಲ್ ಮೇಲಿನ ಸಬ್ಸಿಡಿ ತೆಗೆದು ಹಾಕಿದರೆ, ಇಂಡಿಯಾದ ಸ್ಕೂಟರ್‌ಗಳನ್ನು ಅಲ್ಲಿ ಹೆಚ್ಚು ಮಾರಾಟ ಮಾಡಬಹುದು’ ಎಂದು ಬಿಡುತ್ತಾರೆ.  ಇಂಡೋನೇಶಿಯಾದ ಪೆಟ್ರೋಲಿಗೂ, ಇಂಡಿಯಾದ ಸ್ಕೂಟರಿಗೂ ಎತ್ತಣಿಗೆತ್ತ ಸಂಬಂಧವಯ್ಯಾ ಎಂದು ಯೋಚಿಸುವ ಮೊದಲು, ‘ಈ ಬಿ.ಎಲ್.ಪಿ. ಸಿಂಹ ಯಾರು’? ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕು.&lt;br /&gt;&lt;br /&gt;  ಇಪ್ಪತ್ತೈದು-ಮೂವತ್ತು ವರ್ಷಗಳ ಹಿಂದೆ ಬೆಂಗಳೂರಿನಂಥ ನಗರದಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ(ಣಿ)ಗಳ ಗಮನ ಸೆಳೆಯಲು ಪ್ರದರ್ಶಿಸಬಹುದಾಗಿದ್ದ ಏಕೈಕ ವಾಹನ ‘ಯೆಝ್ದಿ ರೋಡ್‍ಕಿಂಗ್’.  ಮೈಸೂರಿನಲ್ಲಿದ್ದ ‘ಐಡಿಯಲ್ ಜಾವಾ’ ಮೋಟಾರ್‌ಬೈಕ್ ಕಂಪನಿ ಝೆಕಾಸ್ಲೊವಾಕಿಯಾ ದೇಶದ ಸಹಯೋಗದೊಂದಿಗೆ ‘ಯೆಝ್ದಿ’ ಬೈಕ್‍ಗಳನ್ನು ಉತ್ಪಾದಿಸುತ್ತಿತ್ತು.  ವಿಪರೀತ ಬೇಡಿಕೆಯಿದ್ದ ‘ರೋಡ್‍ಕಿಂಗ್’ ಮಾಡೆಲ್‍ಗೆ ಅಂದಿನ ದಿನಗಳಲ್ಲಿ ‘ವಿದೇಶಿ ವಿನಿಮಯ - ಅಮೆರಿಕನ್ ಡಾಲರ್’ ನೀಡಬೇಕಿತ್ತೆಂಬ ಗಾಳಿಸುದ್ದಿಯಿತ್ತು.  ‘ಯೆಝ್ದಿ’ ಬಿಟ್ಟರೆ ತೂಕದ ವ್ಯಕ್ತಿಗಳಿಗೆಂದೇ ತಯಾರಾಗುತ್ತಿದ್ದ ‘ರಾಯಲ್ ಎನ್‍ಫೀಲ್ಡ್’ ಬೈಕುಗಳಿದ್ದವು.  ಮಿಲಿಟರಿಯವರು ಹರಾಜು ಹಾಕುತ್ತಿದ್ದ ಹಳೆಯ ‘ಬಿ.ಎಸ್.ಎ.’ ಬೈಕುಗಳಿದ್ದವು.  ಕಡಿಮೆ ಬೆಲೆಯ ‘ರಾಜ್‍ದೂತ್’ ಎಂಬ ಅನಾಕರ್ಷಕ ಬೈಕನ್ನು ಎಸ್ಕಾರ್ಟ್ಸ್ ಕಂಪನಿ ತಯಾರು ಮಾಡುತ್ತಿತ್ತು.  ಉಳಿದಂತೆ ‘ವೆಸ್ಪಾ’ ಸಹಯೋಗದ ಬಜಾಜ್ ಸ್ಕೂಟರ್ ಶ್ರೇಣಿ (ಅದರಲ್ಲೂ ‘ಚೇತಕ್’ ಮಾಡಲ್ ಖರೀದಿಸಲು ವರ್ಷಗಟ್ಟಲೆಯ ಮುಂಗಡ ಕಾಯ್ದಿರಿಸುವಿಕೆ ಅಥವಾ ವಿದೇಶಿ ವಿನಿಮಯದ ಪಾವತಿ ಬೇಕಿತ್ತು), ‘ಲ್ಯಾಂಬ್ರೆಟಾ’ ಸಹಯೋಗದ ‘ವಿಜಯ್ ಸೂಪರ್’ ಶ್ರೇಣಿ .... ದ್ವಿಚಕ್ರ ವಾಹನಗಳ ಮಾರುಕಟ್ಟೆ ಸೀಮಿತ.  ಮೋಟರೈಸ್ಡ್ ಪೆಡಲ್ಡ್ ವಾಹನವೆಂಬ ಸೈಕಲ್‍ಗಿಂತ ಮೇಲೆ - ಮೋಟಾರ್‌ಬೈಕ್‍ಗಿಂತ ಕಡಿಮೆಯ ‘ಮೋಪೆಡ್’ಗಳು ಆಗಷ್ಟೇ ಬಳಕೆಗೆ ಬರುತ್ತಿದ್ದವು.  ‘ಸುವೇಗಾ’, ‘ಲೂನಾ’, ‘ಹೀರೋ’, ಇವುಗಳ ಜತೆಗೂಡಿದ್ದು ಬಹುತೇಕ ಭಾರತೀಯ ಬಿಡಿಭಾಗಗಳಿಂದ ಕೂಡಿದ್ದ ‘ಟೀವಿಎಸ್’ ಮೋಪೆಡ್.  ಜಾಗತೀಕರಣ ಹೆಜ್ಜೆಯ ಮೇಲೊಂದು ಹೆಜ್ಜೆಯನ್ನಿಕ್ಕುತಾ ಭಾರತವನ್ನು ಪ್ರವೇಶಿಸಿದಂತೆ ಮೋಟಾರು ವಾಹನಗಳ ತಯಾರಿಕೆಗೆ ವಿದೇಶಿ ಕಂಪನಿಗಳ ನೇರ ಹಣ ಹೂಡಿಕೆ, ತಾಂತ್ರಿಕ ಸಹಯೋಗ ಮತ್ತಿತರ ನೆರವುಗಳು ಹರಿದು ಬರತೊಡಗಿದವು.  ಭಾರತದ ರಸ್ತೆಗಳಲ್ಲಿ ವಿದೇಶಿ ಬೈಕುಗಳ ಸ್ವದೇಶಿ ಮಾದರಿಗಳು ಕಾಣಿಸಿಕೊಂಡವು.  ವಿಫುಲ ಆಯ್ಕೆ ಪಟ್ಟಿ ಗ್ರಾಹನಿಗೆ ದಕ್ಕಿತು.  ಈ ಸಮಯದಲ್ಲಿ ಮೋಪೆಡ್ ತಯಾರಿಸುತ್ತಿದ್ದ ‘ಟಿ.ವಿ.ಎಸ್.’ ಜಪಾನ್ ದೇಶದ ‘ಸುಝುಕಿ’ಯೊಂದಿಗೆ, ಸ್ಕೂಟರ್ ಕಂಪನಿ ‘ಬಜಾಜ್’ ‘ಕವಾಸಾಕಿ’ಯೊಂದಿಗೆ, ಸೈಕಲ್ ಮತ್ತು ಮೋಪೆಡ್ ತಯಾರಿಸುತ್ತಿದ್ದ ‘ಹೀರೋ’ ‘ಹೋಂಡಾ’ದೊಂದಿಗೆ, ಹಾಗೂ ‘ರಾಜದೂತ್’ ಬೈಕಿನ ‘ಎಸ್ಕಾರ್ಟ್ಸ್’ ‘ಯಮಾಹಾ’ದೊಂದಿಗೆ ಮೋಟಾರ್‌ಸೈಕಲ್‍ಗಳನ್ನು ತಯಾರಿಸಲು ಒಪ್ಪಂದಗಳನ್ನು ಮಾಡಿಕೊಂಡವು.&lt;br /&gt;&lt;br /&gt;  ಹೀಗೆ ಭಾರತೀಯ ಗ್ರಾಹಕನಿಗೆ ದಕ್ಕಿದ ಮೊದಲ ವಿದೇಶಿ ಬೈಕ್ ‘ಇಂಡ್-ಸುಝುಕಿ’.  ಬೆಂಗಳೂರಿನ ಸಮೀಪದ ಹೊಸೂರಿನಲ್ಲಿ 1980ರಿಂದ ಅಪ್ಪಟ ಭಾರತೀಯ ಮೋಪೆಡ್‍ಗಳನ್ನು ತಯಾರಿಸುತ್ತಿದ್ದ ಕಂಪನಿ, ‘ಟಿ.ವಿ.ಎಸ್. - ಸುಝುಕಿ’ ಕಾರ್ಖಾನೆಯಾಯಿತು.  ಉಳಿದೆರಡು ದೈತ್ಯ ಕಂಪನಿಗಳ ಪ್ರಬಲ ಪೈಪೋಟಿಯಲ್ಲಿಯೂ ‘ಟಿ.ವಿ.ಎಸ್.’ ತನ್ನ ಪ್ರಾಬಲ್ಯ ಉಳಿಸಿಕೊಂಡಿತು.  ಮೈಸೂರಿನಲ್ಲಿ ಕಾರ್ಖಾನೆಯ ವಿಸ್ತರಣೆ ಮಾಡಿತು.  ವಿದೇಶಿ ಬೈಕಿಗೆ ಹೆಚ್ಚು ಹೆಚ್ಚು ಭಾರತೀಯ ಬಿಡಿಭಾಗಗಳನ್ನು ತುಂಬತೊಡಗಿತು.  ಮುಂದೊಂದು ದಿನ ವಿದೇಶಿ ಸಹಯೋಗ ಅಸಹನೀಯವೆನಿಸಿದಾಗ, ‘ವಿಚ್ಛೇದನ’ ಮಾಡಿಕೊಂಡು ತನ್ನ ಸ್ವಂತ ಕಾಲ್ಬಲದಲ್ಲಿ ಅಪ್ಪಟ ಭಾರತೀಯ ಬೈಕ್‍ಗಳನ್ನು ವಿನ್ಯಾಸಗೊಳಿಸಿತು.  ‘ಟಿ.ವಿ.ಎಸ್. ಮೋಟಾರ್’ ಕಂಪನಿ ಅತ್ಯದ್ಭುತ ಪ್ರಗತಿ ಸಾಧಿಸಿತು.  ಇಲ್ಲಿ ಹೆಮ್ಮೆ ಪಡಬೇಕಾದ ಅಂಶಗಳೆಂದರೆ ಬೆಂಗಳೂರಿನ ವಿಮಾನ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರತಿಭಾನ್ವಿತ ಎಂಜಿನ್ ವಿನ್ಯಾಸಕಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡು ಸ್ವದೇಶಿ ಮೋಟಾರ್‌ಬೈಕ್ ಎಂಜಿನ್‍ಗಳನ್ನು ರೂಪಿಸಿತು.  ಅಂತಾರಾಷ್ಟ್ರೀಯ ಪೇಟೆಂಟ್‍ಗಳನ್ನು ತನ್ನದಾಗಿಸಿಕೊಂಡಿತು.  ಬೈಕ್‍ಗಳ ಬೆಲೆಯನ್ನು ತಗ್ಗಿಸುವಲ್ಲಿ ಮಹತ್ತರ ಪಾತ್ರ ವಹಿಸಿತು.  ಅತಿ ಹೆಚ್ಚಿನ ಸಂಖ್ಯೆಯ ಮಾಡೆಲ್‍ಗಳನ್ನು ರಸ್ತೆಗೆ ಬಿಟ್ಟಿತು.  ಇಂದು ‘ಟಿ.ವಿ.ಎಸ್.’ನ ಹನ್ನೊಂದು ಮಾದರಿಗಳು ಮಾರುಕಟ್ಟೆಯಲ್ಲಿವೆ.  ಇದರಲ್ಲಿ ಎರಡು ಮೋಪೆಡ್ ಮಾಡಲ್‍ಗಳು, ಒಂದು ಸ್ಕೂಟರ್ ಮಾಡಲ್ ಕೂಡಾ ಸೇರಿವೆ.  ಪ್ರತಿ ತಿಂಗಳೂ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಮೋಟಾರ್‌ಬೈಕ್‍ಗಳನ್ನು ಬಿಕರಿ ಮಾಡುತ್ತಿದೆ.  ನಮ್ಮ ದೇಶದ ಎಂಜಿನೀರ್‌ಗಳಿಗೆ ಕೆಲಸ ಕೊಡುವುದರ ಜತೆಗೆ ನಮ್ಮ ಸಣ್ಣ-ಪುಟ್ಟ ಕೈಗಾರಿಕೆಗಳಿಗೆ ಸತತವಾಗಿ ಬ್ಯುಸಿನೆಸ್ ಕೊಡುತ್ತಿದೆ.  ನಮ್ಮ ದೇಶದ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಜನತೆಗೆ ತೀರಾ ಅತ್ಯಗತ್ಯವಾದ ದ್ವಿ-ಚಕ್ರ ವಾಹನಗಳನ್ನು ನೀಡುತ್ತಿದೆ.&lt;br /&gt;&lt;br /&gt;  ಮೂರು-ನಾಲ್ಕು ವರ್ಷಗಳ ಹಿಂದೆ ಈ ‘ಟಿ.ವಿ.ಎಸ್. ಮೋಟಾರ್ ಕಂಪನಿ’ಗೆ ಹೊಸ ಹೊಳಹೊಂದು ಕಂಡಿತು.  ನೂರಿಪ್ಪತ್ತು ಕೋಟಿ ಜನಸಂಖ್ಯೆಯ ಇಂಡಿಯಾದಲ್ಲಿ ಪ್ರತಿ ವರ್ಷ ಮಾರಾಟವಾಗುವ ಬೈಕ್‍ಗಳ ಸಂಖ್ಯೆ ಎಂಬತ್ತು ಲಕ್ಷ.  ಆದರೆ ಕೇವಲ ಇಪ್ಪತ್ಮೂರು ಕೋಟಿ ಜನಸಂಖ್ಯೆಯ ಇಂಡೋನೇಶಿಯಾ ದ್ವೀಪ ಸಮೂಹದಲ್ಲಿ ಪ್ರತಿ ವರ್ಷ ಐವತ್ತು ಲಕ್ಷ ಬೈಕ್‍ಗಳು ಬಿಕರಿಯಾಗುತ್ತವೆ.  ಅಂದರೆ ತಲಾವಾರು ಜನಸಂಖ್ಯೆಯ ಆಧಾರದಲ್ಲಿ ಇಂಡಿಯಾಗಿಂತಲೂ ಮೂರೂಕಾಲು ಪಟ್ಟು ಹೆಚ್ಚಿನ ಮೋಟಾರ್‌ಬೈಕ್ ಬ್ಯುಸಿನೆಸ್ ಇಂಡೋನೇಶಿಯಾದಲ್ಲಿದೆ.  ಈ ಒಟ್ಟಾರೆ ವಹಿವಾಟಿನಲ್ಲಿ ಜಪಾನಿನ ಮೂರು ದೈತ್ಯ ಕಂಪನಿಗಳಾದ ‘ಸುಝುಕಿ’, ‘ಹೋಂಡಾ’ ಹಾಗೂ ‘ಯಮಾಹಾ’ ಕಂಪನಿಗಳ ಪಾಲು ಪ್ರತಿಶತ ತೊಂಬತ್ತೈದು.  ಈ ಹಿನ್ನೆಲೆಯಲ್ಲಿ ಭಾರತೀಯ ಕಂಪನಿಯೊಂದನ್ನು ಅಲ್ಲಿ &lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_WOq6aPUeAO4/Rpq1zrMyyZI/AAAAAAAAAMs/zl0Unfls8-o/s1600-h/IndonesianTVS.jpg"&gt;&lt;img style="margin: 0pt 0pt 10px 10px; float: right; cursor: pointer;" src="http://1.bp.blogspot.com/_WOq6aPUeAO4/Rpq1zrMyyZI/AAAAAAAAAMs/zl0Unfls8-o/s200/IndonesianTVS.jpg" alt="" id="BLOGGER_PHOTO_ID_5087578628442737042" border="0" /&gt;&lt;/a&gt; ಸ್ಥಾಪಿಸಿದರೆ ಲಾಭದಾಯಕವಲ್ಲವೆ? ಎಂದು ‘ಟಿ.ವೆ.ಎಸ್. ಮೋಟಾರ್ ಕಂಪನಿ’ ಆಲೋಚಿಸಿತು.  ನಾಲ್ಕೂವರೆ ಕೋಟಿ ಅಮೆರಿಕನ್ ಡಾಲರ್ (ಸುಮಾರು ನೂರೆಂಬತ್ತು ಕೋಟಿ ರೂಪಾಯಿಗಳು) ಆರಂಭಿಕ ಹೂಡಿಕೆಯೊಂದಿಗೆ ‘ಪಿಟಿ ಟಿ.ವಿ.ಎಸ್. ಮೋಟರ್ ಕಂಪನಿ’ ಇಂಡೋನೇಶಿಯಾದ ರಾಜಧಾನಿ ಜಕಾರ್ತಾದಿಂದ ಅರವತ್ತು ಕಿಲೋಮೀಟರ್ ದೂರದ ಕುನಿಂಗನ್ ಪಟ್ಟಣದಲ್ಲಿ ಕೆಲಸ ಶುರು ಹಚ್ಚಿಕೊಂಡಿತು.  ಆಗ ಹೊಸ ಕಂಪನಿಗೆ ಹಿರಿಯ-ಉಪಾಧ್ಯಕ್ಷರಾಗಿ ನಿಯೋಜಿತರಾದವರೇ ಬಿ.ಎಲ್.ಪಿ. ಸಿಂಹ.  ಇಡೀ ಕಾರ್ಖಾನೆಗೆ ಅತ್ಯಗತ್ಯವಾದ ಸರಕಾರಿ ಪರವಾನಗಿಗಳನ್ನು ಪಡೆದುಕೊಳ್ಳುವುದು, ಕಾರ್ಖಾನೆ ಆರಂಭಗೊಳಿಸುವುದು, ಅಗತ್ಯ ನೇಮಕಾತಿಗಳನ್ನು ಮಾಡಿಕೊಳ್ಳುವುದು, ಬ್ಯುಸಿನೆಸ್ ಪ್ಲಾನ್ ರೂಪಿಸುವುದು, ಹಿಂದೆ ತನ್ನ ಸಹಭಾಗಿಯಾಗಿದ್ದ ದೈತ್ಯ ಕಂಪನಿಯೂ ಸೇರಿದಂತೆ ಉಳಿದೆರಡು ಜಪಾನ್ ದೈತ್ಯ ಕಂಪನಿಗಳೊಂದಿಗೆ ವಿದೇಶಿ ನೆಲವೊಂದರಲ್ಲಿ ಸ್ಫರ್ಧೆಗೆ ಇಳಿಯುವುದು ಮುಂತಾದ ಮಹತ್ತರ ಹೊಣೆಗಳನ್ನು ಅವರ ಹೆಗಲಿಗೆ ವರ್ಗಾಯಿಸಲಾಗಿತ್ತು.  ಕಳೆದ ಇಪ್ಪತ್ಮೂರು ವರ್ಷಗಳಿಂದ ‘ಟಿ.ವಿ.ಎಸ್. ಮೋಟಾರ್ ಕಂಪನಿ’ಯ ಒಳ-ಹೊರಗನ್ನು ಸಂಪೂರ್ಣವಾಗಿ ಅರಿತಿರುವ ಸಿಂಹ, ತಮಗೊಪ್ಪಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರೊಂದಿಗೆ ಇಂಡೋನೇಶಿಯಾ ಕಾರ್ಯಾಚರಣೆಯ ಟಿ.ವಿ.ಎಸ್. ಕಂಪನಿಗೆ ಅಧ್ಯಕ್ಷ-ನಿರ್ದೇಶಕರಾಗಿ ನಿಯುಕ್ತರಾಗಿದ್ದಾರೆ.&lt;br /&gt;&lt;br /&gt;  ಅಪ್ಪಟ ಕನ್ನಡಿಗ ಬಿ.ಎಲ್.ಪಿ.(ಪ್ರಸನ್ನ) ಸಿಂಹ ಬೆಂಗಳೂರಿನ ಪ್ರತಿಷ್ಠಿತ ವಿಶ್ವೇಶ್ವರಯ್ಯ ಎಂಜಿನೀರಿಂಗ್ ಕಾಲೇಜಿನ (ಯೂ.ವಿ.ಸಿ.ಇ.) ಪ್ರತಿಭಾನ್ವಿತ ವಿದ್ಯಾರ್ಥಿ.  1984ರಲ್ಲಿ ಮೆಕ್ಯಾನಿಕಲ್ ಎಂಜಿನೀರಿಂಗ್ ಪದವಿ ಪಡೆದ ನಂತರ ಕೆಲಕಾಲ ಸಣ್ಣ ಉದ್ದಿಮೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಂತೆ ಕರೆ ಬಂದದ್ದು ಅಂದಿನ ‘ಟಿ.ವಿ.ಎಸ್. ಸುಝುಕಿ’ಯಿಂದ.  ಉತ್ಪಾದನಾ ವಿಭಾಗದಲ್ಲಿ ಅತ್ಯುತ್ತಮ ಕೌಶಲ ತೋರಿಸಿದ ಸಿಂಹ ಅವರನ್ನು ಉನ್ನತ ಅಧ್ಯಯನಕ್ಕಾಗಿ ಕಾರ್ಖಾನೆ ಕಳುಹಿಸಿದ್ದು ಬ್ರಿಟನ್ನಿನ ಪ್ರತಿಷ್ಠಿತ ವಾರ್ವಿಕ್ ವಿವಿಗೆ.  ಅಲ್ಲಿ ಅವರ ಸಹಪಾಠಿಯಾಗಿದ್ದವರು ಇಂದು ‘ಬಜಾಜ್ ಆಟೋ’ದ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್.  ಅತಿ ಕಿರಿ ವಯಸ್ಸಿನಲ್ಲಿ ಮಹಾ ವ್ಯವಸ್ಥಾಪಕ ಹುದ್ದೆಗೇರಿದ್ದ ಸಿಂಹ ಅವರಿಗೆ, ಟಿ.ವಿ.ಎಸ್. ಮೋಟಾರ್ ಕಂಪನಿ ಉತ್ಪನ್ನಗಳ ಗುಣಮಟ್ಟದ ಶ್ರೇಷ್ಠತೆಯನ್ನು ಕಾಪಾಡುವುದು ಆದ್ಯತೆಯ ಹೊಣೆಯಾಗಿತ್ತು.  ಸ್ವತಃ ಜಪಾನ್ ಸಹಯೋಗಿ ಕಂಪನಿಯು ಟಿ.ವಿ.ಎಸ್. ಉತ್ಪನ್ನಗಳನ್ನು ಶ್ಲಾಘಿಸುವಷ್ಟರ ಮಟ್ಟಿಗೆ ತಮ್ಮ ವಿಭಾಗವನ್ನು ಸಿಂಹ ಅವರು ಮುನ್ನಡೆಸಿದರು.  ಸ್ಫರ್ಧಾತ್ಮಕ ಬೆಲೆಯಲ್ಲಿ ಉನ್ನತ ಗುಣಮಟ್ಟದ ಉತ್ಪನ್ನವನ್ನು ರೂಪಿಸುವ ಸವಾಲನ್ನು ಸ್ವೀಕರಿಸಿದ ಸಿಂಹ ಹಿಂದಿರುಗಿ ನೋಡಲಿಲ್ಲ.  ಬಿಡಿಭಾಗ ಪೂರೈಕೆ ವ್ಯವಸ್ಥೆಯಲ್ಲಿ ಹೊಸತನವನ್ನು ಕಂಡುಕೊಂಡರು.  ತಮ್ಮ ಕಾರ್ಯವ್ಯಾಪ್ತಿಯ ವಿಭಾಗಗಳನ್ನು ಶ್ರೇಷ್ಠತೆಯತ್ತ ಮುನ್ನಡೆಸಿದರು.  ಈ ಸಂದರ್ಭದಲ್ಲಿ ಎಂಜಿನ್‍ಗಳ ಕಾರ್ಯ-ಕ್ಷಮತೆಯನ್ನು ಉತ್ತಮಪಡಿಸಲೆಂದು ಪ್ರಸಿದ್ಧ ಜರ್ಮನ್ ಕಂಪನಿಯೊಂದು ಟಿ.ವಿ.ಎಸ್.ಗೆ ಆಗಮಿಸಿತ್ತು.  ಇಲ್ಲಿನ ಉತ್ಪನ್ನವನ್ನು ಕೂಲಂಕಷವಾಗಿ ಗಮನಿಸಿದ ನಂತರ ಆ ವಿದೇಶಿ ವಿನ್ಯಾಸಕಾರರು ಉದ್ಗರಿಸಿದ್ದು ‘ಅಭಿವೃದ್ಧಿ ಪಡಿಸಲು ಕಿಂಚಿತ್ತೂ ಅವಕಾಶವಿಲ್ಲ.  ಅಷ್ಟರ ಮಟ್ಟಿಗೆ ಶ್ರೇಷ್ಠ ಉತ್ಪನ್ನ ಇಲ್ಲಿಯದು.  ಭಾರತೀಯ ತಂತ್ರಜ್ಞರು ನಿಜಕ್ಕೂ ಅದ್ಭುತ ಕೆಲಸಗಾರರು’!  ಮುಂದೆ ಮೈಸೂರಿನ ಕಾರ್ಖಾನೆಯ ಹೊಣೆಗಾರಿಕೆ ಸಿಂಹ ಅವರ ಹೆಗಲಿಗೇರಿತು.  ಯಶೋಗಾಥೆ ಆರಂಭವಾದದ್ದು ಇಲ್ಲಿಂದ.  ಅವರ ವ್ಯವಸ್ಥಾಪನಾ ಕುಶಲತೆ ಹಾಗೂ ಚುರುಕುತನವನ್ನು ಮನಗಂಡ ಕಂಪನಿಯು ಇಂಡೋನೇಶಿಯಾ ವಹಿವಾಟಿಗೆ ಸಿಂಹ ಅವರೇ ಸೂಕ್ತ ವ್ಯಕ್ತಿ ಎಂದು ನಿರ್ಧರಿಸಿತು.&lt;br /&gt;&lt;br /&gt;  ಭಾಷೆ ಹೊಸತು.  ನಡುಗಡ್ಡೆಗಳ ಸಮೂಹದ ಆ ದೇಶದಲ್ಲಿ ಹವಾಮಾನದಂತೆ ರಾಜಕೀಯದಲ್ಲೂ ಸದಾ ಅಸ್ಥಿರತೆ.  ಆದರೆ ಕಳೆದ ಎಂಟು ವರ್ಷಗಳಿಂದ ಪ್ರತಿಶತ ಇಪ್ಪತ್ತರಷ್ಟು ಪ್ರಗತಿ ಸಾಧಿಸುತ್ತಾ ಬಂದಿರುವ ಮೋಟಾರ್‌ಬೈಕ್ ಉದ್ದಿಮೆ ಪ್ರಲೋಭನೆ ಒಡ್ಡುತ್ತಾ ಬಂದಿದೆ.  ಸವಾಲುಗಳನ್ನು ಸ್ವೀಕರಿಸುವುದರಲ್ಲಿ ‘ಟಿ.ವಿ.ಎಸ್.’ ಅಥವಾ ಸಿಂಹ ಅವರಿಗೆ ಹಿಂಜರಿಕೆಯೆಂಬುದೇ ಇಲ್ಲ.  ಎಲ್ಲವೂ ಎಣಿಕೆಯಂತೆ ನಡೆಯುತ್ತಿದ್ದರೆ ಇದ್ದಕ್ಕಿದ್ದಂತೆ ಇಂಡೋನೇಶಿಯಾ ಸರಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿ ಕಿತ್ತು ಹಾಕಿಬಿಡುತ್ತದೆ.  ಪೆಟ್ರೋಲ್ ಬೆಲೆ ದುಪ್ಪಟ್ಟಿಗಿಂತಲೂ ಹೆಚ್ಚಾಗುತ್ತದೆ.  ದಿಢೀರೆಂದು ಮೋಟಾರ್‌ಬೈಕು ಮಾರುಕಟ್ಟೆ ಪ್ರತಿಶತ ಹದಿನೈದರಷ್ಟು ಕುಸಿದುಬಿಡುತ್ತದೆ.  ಸವಾಲುಗಳೆಲ್ಲವೂ ಅವಕಾಶಗಳೇ ಎಂದು ನಂಬಿಕೊಂಡ ಕಂಪನಿ, ತನ್ನ ಕಾರ್ಖಾನೆಯನ್ನು ಐವತ್ತು ಎಕರೆ ಪ್ರದೇಶದಲ್ಲಿ ನಿರ್ಮಿಸುತ್ತದೆ.  ಇದೀಗ ಮುಂದಿನ ವರ್ಷದ ಮಾರ್ಚ್ ಹೊತ್ತಿಗೆ ಅಪ್ಪಟ ಭಾರತೀಯ ಒಂದು ಲಕ್ಷ ಮೋಟಾರ್‌ಬೈಕುಗಳು  ಇಂಡೋನೇಶಿಯಾದ ರಸ್ತೆಗಳನ್ನು ತುಂಬುತ್ತವೆ.  ಪೆಟ್ರೋಲ್ ಬೆಲೆ ಏರಿದಂತೆ ಜನ ಹುಡುಕಲು ಹೊರಡುವುದು ಇಂಧನ-ಕ್ಷಮತೆ ಹೆಚ್ಚಿರುವ ವಾಹನಗಳತ್ತ.&lt;br /&gt;&lt;br /&gt;  ಸಿಂಹ ಅವರ ಮಾತಿನಲ್ಲೇ ಹೇಳುವುದಾದರೆ ಇಂಡೋನೇಶಿಯಾ ಸ್ಥಾವರದ ಎರಡನೆಯ ಹಂತ ಅತ್ಯಂತ ಪ್ರಮುಖವಾದದ್ದು.  ಹೊಸೂರಿನ ವಿನ್ಯಾಸ ಕೇಂದ್ರದಲ್ಲಿ ರೂಪುಗೊಳ್ಳುತ್ತಿರುವ ಎಂಜಿನ್‍ಗಳು ಬರಲಿರುವ ದಿನಗಳಲ್ಲಿ ಇಂಡೋನೇಶಿಯಾದಲ್ಲಿಯೇ ಅಭಿವೃದ್ಧಿಯಾಗಲಿದೆ.  ಇಂಡೋನೇಶಿಯಾದ ಸಮೀಪದ ‘ಮಲೇಶಿಯಾ’, ‘ಫಿಲಿಫೈನ್ಸ್’, ‘ಮ್ಯಾನ್‍ಮಾರ್’, ‘ಥೈಲ್ಯಾಂಡ್’, ‘ಕಾಂಬೋಡಿಯಾ’ ದೇಶಗಳಲ್ಲಿ ಭಾರತೀಯ ಉತ್ಪನ್ನವೊಂದನ್ನು ಬಿಕರಿ ಮಾಡುವ ಮಹತ್ವದ ಯೋಜನೆ ಟಿ.ವಿ.ಎಸ್. ಮುಂದಿದೆ.  ಮೂರು ತಿಂಗಳ ಹಿಂದೆ ಇಂಡೋನೇಶಿಯಾದಲ್ಲಿ ಬಿಡುಗಡೆಯಾದ ‘ನಿಯೋ’ ಎಂಬ ಸ್ಕೂಟರ್ ರೂಪದ ಮೋಟಾರ್‌ಬೈಕ್ &lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_WOq6aPUeAO4/Rpq1GLMyyYI/AAAAAAAAAMk/WJmIWfeqHZY/s1600-h/NEO.jpg"&gt;&lt;img style="margin: 0pt 10px 10px 0pt; float: left; cursor: pointer;" src="http://3.bp.blogspot.com/_WOq6aPUeAO4/Rpq1GLMyyYI/AAAAAAAAAMk/WJmIWfeqHZY/s200/NEO.jpg" alt="" id="BLOGGER_PHOTO_ID_5087577846758689154" border="0" /&gt;&lt;/a&gt;ಮಾಡೆಲ್ ಈಗಾಗಲೇ ಭರದಿಂದ ಮಾರಾಟವಾಗುತ್ತಿದೆ.  ಈ ಮೋಟಾರ್‌ಬೈಕಿನ ವಿಶೇಷತೆಯೇನೆಂದರೆ ಬೇಕಿದ್ದರೆ ಗೇರ್‌ಗಳನ್ನು ಇಚ್ಛೆಯಂತೆ ಬದಲಿಸಬಹುದು, ಇಲ್ಲವೇ ಸ್ವಯಂಚಾಲಿತವಾಗಿ ಗೇರ್ ಬದಲಾಯಿಸಿಕೊಳ್ಳುವಂತೆ ಮಾಡಬಹುದು.  ಎರಡು ಬಗೆಯ ಕ್ಲಚ್‍ಗಳನ್ನು ಒಂದೇ ವ್ಯವಸ್ಥೆಯಡಿ ರೂಪಿಸಿರುವುದರಲ್ಲಿ ಹೊಸತನವಿದೆ.  ಜತೆಗೆ ಚೋಕ್ ಬಳಸುವಿಕೆಯಲ್ಲೂ ಸವಾರನಿಗೆ ಆಯ್ಕೆಯಿದೆ.  ಬೈಕ್ ಸ್ಟಾರ್ಟ್ ಮಾಡುವಾಗ ಚೋಕ್ ಬಳಸಬೇಕೆ, ಬೇಡವೆ? ಎಂದು ಬಾಹ್ಯ ತಾಪಮಾನಕ್ಕನುಗುಣವಾಗಿ ತಿಳಿ ಹೇಳುವ ವ್ಯವಸ್ಥೆಯನ್ನೂ ಅಡಕ ಮಾಡಲಾಗಿದೆ.  ಇಂಥ ವಿನ್ಯಾಸಗಳ ಅಳವಡಿಕೆಯಿಂದ ‘ನಿಯೋ’ದ ಮೈಲೇಜ್ ತನ್ನ ಪ್ರತಿಸ್ಫರ್ಧಿ ಬೈಕ್‍ಗಳಿಗಿಂತ ಹೆಚ್ಚುವರಿಯಾಗಿರುತ್ತದೆ.  ಬರಲಿರುವ ದಿನಗಳಲ್ಲಿ ಹೆಚ್ಚುವರಿ ಮಾಡೆಲ್‍ಗಳನ್ನು ಮಾರುಕಟ್ಟೆಗೆ ತರುವ ಹಂಚಿಕೆ ಕಂಪನಿಯದು.  ಅತ್ಯಂತ ಪೈಪೋಟಿಯುಳ್ಳ ಉತ್ಪನ್ನವಾದ ಮೋಟಾರ್‌ಬೈಕ್ ಅನ್ನು ವಿದೇಶಿ ನೆಲದಲ್ಲಿ ಯಶಸ್ವಿಯಾಗಿ ಉತ್ಪಾದಿಸುವುದರ ಜತೆಗೆ, ಮಾರುಕಟ್ಟೆಯನ್ನು ಜಾಗತಿಕವಾಗಿ ವಿಸ್ತರಿಸಿಕೊಳ್ಳುತ್ತಿರುವ ಭಾರತೀಯ ಕಂಪನಿ ನಿಜಕ್ಕೂ ಅಭಿನಂದನಾರ್ಹ.  ಅದನ್ನು ಮುನ್ನಡೆಸುತ್ತಿರುವ ಅಪ್ಪಟ ಕನ್ನಡಿಗ ಬಿ.ಎಲ್.ಪಿ. ಸಿಂಹ ಮತ್ತಷ್ಟು ಅಭಿನಂದನಾರ್ಹ!  &lt;br /&gt;                         &lt;br /&gt;&lt;span style="font-weight: bold; font-style: italic;"&gt;(ಕೃಪೆ: ವಿಜಯ ಕರ್ನಾಟಕ, 16-07-2007)&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/752423363868781697-6668968233322015453?l=netnota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://netnota.blogspot.com/feeds/6668968233322015453/comments/default' title='Post Comments'/><link rel='replies' type='text/html' href='http://www.blogger.com/comment.g?blogID=752423363868781697&amp;postID=6668968233322015453' title='1 Comments'/><link rel='edit' type='application/atom+xml' href='http://www.blogger.com/feeds/752423363868781697/posts/default/6668968233322015453'/><link rel='self' type='application/atom+xml' href='http://www.blogger.com/feeds/752423363868781697/posts/default/6668968233322015453'/><link rel='alternate' type='text/html' href='http://netnota.blogspot.com/2007/07/blog-post_16.html' title='ವಿದೇಶಿ ಸವಾರರ ‘ಬಯಕೆ’ ಕೆರಳಿಸಿರುವ ಅಪ್ಪಟ ಸ್ವದೇಶಿ ಬೈಕು!'/><author><name>HNS</name><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_WOq6aPUeAO4/SdR5qYZ87xI/AAAAAAAAAWg/cXIYJSqE8Z4/S220/sudhi1.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_WOq6aPUeAO4/Rpq1zrMyyZI/AAAAAAAAAMs/zl0Unfls8-o/s72-c/IndonesianTVS.jpg' height='72' width='72'/><thr:total>1</thr:total></entry><entry><id>tag:blogger.com,1999:blog-752423363868781697.post-8051612695422987577</id><published>2007-07-09T05:54:00.000+05:30</published><updated>2007-07-09T06:02:25.569+05:30</updated><title type='text'>ವೈರಸ್ ತಿವಿತದಿಂದ ಸ್ಥಿಮಿತಗೊಂಡೀತೆ ಬ್ಯಾಕ್ಟೀರಿಯ?</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_WOq6aPUeAO4/RpGBCO8n7TI/AAAAAAAAAMM/0ICbbz8wbXE/s1600-h/Biofilm.jpg"&gt;&lt;img style="margin: 0pt 10px 10px 0pt; float: left; cursor: pointer;" src="http://3.bp.blogspot.com/_WOq6aPUeAO4/RpGBCO8n7TI/AAAAAAAAAMM/0ICbbz8wbXE/s200/Biofilm.jpg" alt="" id="BLOGGER_PHOTO_ID_5084987329650093362" border="0" /&gt;&lt;/a&gt;&lt;span style="font-weight: bold;font-size:180%;" &gt;‘ಯಾ&lt;/span&gt;ವ ನೋವು ತೀವ್ರವಾದದ್ದು’? ಎಂಬ ಪ್ರಶ್ನೆಗೆ ಥಟ್ಟೆಂದು ಉತ್ತರ ಹೇಳಲಾಗುವುದಿಲ್ಲ.  ಪ್ರಸ್ತುತ ನಿಮ್ಮನ್ನು ಕಾಡುತ್ತಿರುವ ನೋವೇ ನಿಮಗೆ ಹೆಚ್ಚೆಂದು ಭಾಸವಾಗುತ್ತದೆ, ಅದು ಸಹಜವೂ ಹೌದು.  ಶೀತ ಹೆಚ್ಚಾದಾಗ, ಹೆಚ್ಚೂ-ಕಮ್ಮಿ ರಾತ್ರಿ ಮಲಗಿದಾಗಲೇ ಕಾಡುವ ಹಲ್ಲುನೋವು ಹಾಗೂ ಕಿವಿನೋವುಗಳನ್ನು ಅತ್ಯಂತ ತೀವ್ರವಾಗಿ ಬಾಧಿಸುವ ನೋವುಗಳೆಂದು ವೈದ್ಯರು ಪರಿಗಣಿಸಿದ್ದಾರೆ.  ಇವೆರಡರ ನಡುವೆ ಕಿವಿಯ ನೋವಿಗೆ ಹೆಚ್ಚಿನ ಗಮನ ನೀಡಬೇಕೆಂಬ ಕಿವಿಮಾತನ್ನು ವೈದ್ಯರು ಆಗಾಗ್ಗೆ ಹೇಳುತ್ತಿರುತ್ತಾರೆ.  ಕಾರ್‍ಅಣ, ಹಲ್ಲುಗಳ ಸಂಖ್ಯೆ ಹೆಚ್ಚಿದೆ.  ಮುರಿದ ಹಲ್ಲುಗಳನ್ನು ರಿಪೇರಿ ಮಾಡಿಸಿಕೊಳ್ಳಬಹುದು, ಇಲ್ಲವೆ ಬೇರೆ ಕಟ್ಟಿಸಿಕೊಳ್ಳಬಹುದು.  ಹಲ್ಲಿನ ಹುಳುಕು, ಸೋಂಕುಗಳು ನೇರವಾಗಿ ಕಣ್ಣಿಗೆ ಕಾಣುವಂಥದು.  ಪರೀಕ್ಷೆಯೂ ಸುಲಭ, ಜತೆಗೆ ಚಿಕಿತ್ಸೆಯೂ ಸುಲಭ.  ಆದರೆ ಕಿವಿಯ ಮಾತೇ ಬೇರೆ.  ಅವುಗಳ ಸಂಖ್ಯೆ ಎರಡು.  ಕಿರು ದಾರಿಯ ಗುಹೆಯೊಳಗೇನಾಗಿದೆ ಎಂದು ಪರಿಶೀಲಿಸುವ ಕಾರ್ಯ ದುರ್ಗಮವಾದುದು.  ಸೋಂಕಿನಿಂದ ಕಿವಿಯ ಒಳಭಾಗಕ್ಕೆ ತೊಂದರೆಯಾದರೆ ಬದಲಿ ಜೋಡಣೆಗಳು ದುರ್ಲಭ.  ಸಹಜ ಸ್ಥಿತಿಗೆ ತರುವಂಥ ರಿಪೇರಿ ಒಮ್ಮೊಮ್ಮೆ ಸಾಧ್ಯವಾಗುವುದೇ ಇಲ್ಲ, ಭಾಗಶಃ ಸಾಧ್ಯವಾಗುವೆಡೆ ಖರ್ಚು ದುಬಾರಿ.&lt;br /&gt;&lt;br /&gt; ಶಬ್ದವನ್ನು ಗ್ರಹಿಸಿ ಮಿದುಳಿಗೆ ರವಾನಿಸುವ ಇಂದ್ರಿಯ ಕಿವಿ.  ತಪ್ಪಿತಸ್ಥರಿಗೆ ಬುದ್ಧಿ ಕಲಿಸಲು ನಾವು ಹಿಂಡುವ ‘ಕಿವಿ’ ಇಡೀ ಕಿವಿಯಲ್ಲ,&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_WOq6aPUeAO4/RpGBq-8n7UI/AAAAAAAAAMU/t7m4nAszG0c/s1600-h/Ear.jpg"&gt;&lt;img style="margin: 0pt 0pt 10px 10px; float: right; cursor: pointer;" src="http://2.bp.blogspot.com/_WOq6aPUeAO4/RpGBq-8n7UI/AAAAAAAAAMU/t7m4nAszG0c/s200/Ear.jpg" alt="" id="BLOGGER_PHOTO_ID_5084988029729762626" border="0" /&gt;&lt;/a&gt; ಕಿವಿ ವ್ಯವಸ್ಥೆಯ ಒಂದು ಭಾಗ.  ಇದೊಂದು ಹಾಲೆಯಾಕಾರದ ಚಾಚು.  ಇಲ್ಲಿಂದ ಆರಂಭವಾಗಿ ಕಿವಿ ತಮಟೆಯ (ಸದ್ದು ಅಲೆ ಅಲೆಯಾಗಿ ತಲಪುವ ತಾಣ) ತನಕ ಇರುವುದೊಂದು ಗವಿ - ಅದುವೇ ಶ್ರವಣ ನಾಳ.  ಕಿವಿ ಹಾಲೆಯಿಂದ ಕಿವಿ ತಮಟೆಯ ತನಕದ ಸ್ಥಳವನ್ನು ಹೊರಗಿವಿ ಎಂದು ಗುರುತಿಸಲಾಗಿದೆ.  ಈ ಶ್ರವಣ ನಾಳದ ಚರ್ಮದಲ್ಲಿರುವ ಗ್ರಂಥಿಗಳು ಕಿವಿಗುಗ್ಗೆ ಎಂಬ ಅಂಟನ್ನು ಉತ್ಪತ್ತಿ ಮಾಡುತ್ತದೆ.  ಶ್ರವಣ ನಾಳದಲ್ಲಿ ಧೂಳು, ಕೊಳೆ ಇತ್ಯಾದಿಗಳನ್ನು ಸೆರೆ ಹಿಡಿದು ಹೊರಗೆ ಹಾಕಲು ಕಿವಿಗುಗ್ಗೆ ಸಹಾಯ ಮಾಡುತ್ತದೆ.  ತುಂಬಿಕೊಂಡ ಈ ಗುಗ್ಗೆಯನ್ನು ಚೂಪಾದ ವಸ್ತುಗಳ ಮೂಲಕ ತೆಗೆಯುವುದು ಅಪಾಯಕಾರಿ.  ಶ್ರವಣ ನಾಳದ ಚರ್ಮ ಹರಿಯುವ ಅಥವಾ ಕಿವಿ ತಮಟೆಗೆ ಘಾಸಿಯಾಗುವ - ಆ ಮೂಲಕ ಸೋಂಕಿಗೆ ದಾರಿಯಾಗುವ ಸಂದರ್ಭಗಳುಂಟು.  ಕಿವಿ ತಮಟೆಯಿಂದ ಶ್ರವಣ ನರಗಳ ತನಕದ ಸ್ಥಳವನ್ನು ನಡುಗಿವಿ ಎಂದು ಶ್ರವಣತಜ್ಞರು ಗುರುತಿಸುತ್ತಾರೆ.  ಇನ್ನು ಮಿದುಳಿಗೆ ಶಬ್ದ ಸಂಕೇತವನ್ನು ಕಳುಹಿಸುವ ಶ್ರವಣ ನರಗಳನ್ನೊಳಗೊಂಡ ಸ್ಥಳವೇ ಒಳಗಿವಿ.&lt;br /&gt;&lt;br /&gt; ಮಕ್ಕಳನ್ನು ತೀವ್ರವಾಗಿ ಕಾಡುವ ‘ಕಿವಿ ನೋವಿನ’ ಉಗಮ ಸ್ಥಳ ನಡುಗಿವಿ.  ಇಲ್ಲಿ ಉಂಟಾದ ಸೋಂಕನ್ನು ನಿವಾರಿಸುವ ಕೆಲಸ ಅಷ್ಟು ಸುಲಭವಲ್ಲ.  ಗುಳಿಗೆಗಳ ಮೂಲಕ ಬಾಯಿಯಿಂದ ಅಥವಾ ದ್ರಾವಣದ ಮೂಲಕ ನೇರವಾಗಿ ಕಿವಿಯಿಂದ ಸ್ವೀಕರಿಸುವ ‘ಪ್ರತಿ ಜೈವಿಕ - ಆಂಟಿ ಬಯಾಟಿಕ್’ಕ್ಕೂ ಒಮ್ಮೊಮ್ಮೆ ಈ ಸೋಂಕುಕಾರಕ ಬ್ಯಾಕ್ಟೀರಿಯಗಳು ಬಗ್ಗುವುದಿಲ್ಲ.  ಇಂಥ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ತೀವ್ರ ಸೋಂಕನ್ನು ನಿವಾರಿಸಬೇಕಾಗುತ್ತದೆ.  ಕಾರಣ, ನಡುಗಿವಿಯನ್ನು ವಾಸಸ್ಥಾನವನ್ನಾಗಿ ಮಾಡಿಕೊಳ್ಳಬಲ್ಲ ಕೆಲ ಬ್ಯಾಕ್ಟೀರಿಯಗಳು ಒಂದಕ್ಕೊಂದು ತೀರಾ ಸಮೀಪದಲ್ಲಿ ಹೆಣೆದುಕೊಂಡು ಒಂದು ಬಗೆಯ ‘ಜೈವಿಕ ತೆರೆ’ಯನ್ನು ನಿರ್ಮಿಸಿಕೊಳ್ಳುತ್ತವೆ.  ಈ ಬಗೆಯ ಜೈವಿಕ ತೆರೆಗಳನ್ನು ಭೇದಿಸಲು ಸಾಮಾನ್ಯ ಪ್ರತಿ ಜೈವಿಕಗಳಿಗೆ ಸಾಧ್ಯವಾಗುವುದಿಲ್ಲ.  ನೋವಿನ ಆರಂಭದಿಂದಲೂ ಸೇವಿಸಿದ ವಿವಿಧ ಬಗೆಯ ಪ್ರತಿ ಜೈವಿಕಗಳಿಗೆ ತೆರೆ-ಮರೆಯಲ್ಲಿರುವ ಬ್ಯಾಕ್ಟೀರಿಯಗಳು ಒಗ್ಗಿಕೊಂಡು ಬಿಟ್ಟಿರುವುದರಿಂದ ಶಮನಕಾರಿ ಪರಿಣಾಮ ಇರುವುದಿಲ್ಲ.  ಶಸ್ತ್ರ ಚಿಕಿತ್ಸೆಯ ಮೂಲಕ ಜೈವಿಕ ತೆರೆಯನ್ನು ಕತ್ತರಿಸಿ, ಸ್ಥಳ ಶುದ್ಧೀಕರಣ ಮಾಡುವುದರ ಮೂಲಕ ತೀವ್ರ ಸೋಂಕನ್ನು ನಿವಾರಿಸಬಹುದು.&lt;br /&gt;&lt;br /&gt; ನಡುಗಿವಿಯಲ್ಲಿ ವಾಸಮಾಡಬಲ್ಲ ಬ್ಯಾಕ್ಟೀರಿಯಗಳಿಗೆ ನಿರ್ಜೀವ ಅಂಟಿನೊಳಗೆ ಮಿಳಿತವಾಗಿ ಗೂಡುಕಟ್ಟುವ ಸಾಮರ್ಥ್ಯವಿರುತ್ತದೆ.  ಈ ತೆರೆಯೊಳಗೆ ಸೇರಿಕೊಂಡ ಬ್ಯಾಕ್ಟೀರಿಯಗಳು ಒಮ್ಮೊಮ್ಮೆ ಯಾವ ಚಟುವಟಿಕೆಗಳನ್ನೂ ಮಾಡದೆಯೆ ನಿದ್ರಾವಸ್ಥೆಯಲ್ಲಿದ್ದುಬಿಡುತ್ತವೆ.  ಸಾಮಾನ್ಯವಾಗಿ ಪ್ರತಿಜೈವಿಕಗಳು ಬ್ಯಾಕ್ಟೀರಿಯಗಳ ಸಂತಾನೋತ್ಪತ್ತಿ ಮತ್ತಿತರ ಜೈವಿಕ ಚಟುವಟಿಕೆಗಳನ್ನು ಮೊದಲು ತಡೆಗಟ್ಟುತ್ತವೆ.  ಆದರೆ ಜಾಗೃತಾವಸ್ಥೆಯಲ್ಲಿರದ ಬ್ಯಾಕ್ಟೀರಿಯಗಳ ಮೇಲೆ ದಾಳಿ ಮಾಡಿ ನಿರ್ನಾಮ ಮಾಡುವ ಕೆಲಸ ಪ್ರತಿ ಜೈವಿಕಗಳ ಕೈಯ್ಯಿಂದಾಗುವುದಿಲ್ಲ.  ಮಕ್ಕಳಿಗೆ ಪದೇ ಪದೇ ನಡುಗಿವಿಯ ಸೋಂಕು ತಗಲಲು ನಿದ್ರಾವಸ್ಥೆಯಲ್ಲಿರುವ ಇಂಥ ಬ್ಯಾಕ್ಟೀರಿಯಗಳೇ ಕಾರಣ.  ಚಟುವಟಿಕೆಯಿಂದಿದ್ದ ಬ್ಯಾಕ್ಟೀರಿಯಗಳು ಮದ್ದಿನ ದಾಳಿಯಿಂದ ಸಾಯುತ್ತಲೇ ನೋವು ಮಾಯವಾಗುತ್ತದೆ.  ಕೆಲ ದಿನಗಳ ನಂತರ ತೆರೆಮರೆಯಲ್ಲಿದ್ದ ಬ್ಯಾಕ್ಟೀರಿಯಗಳು ಕಾರ್ಯಾರಂಭ ಮಾಡಿದಂತೆ ಕಿವಿನೋವು ಮರುಕಳಿಸುತ್ತದೆ.  ಜೈವಿಕ ತೆರೆಯಲ್ಲಡಗಿ ಕುಳಿತ ಬ್ಯಾಕ್ಟೀರಿಯಗಳ ಹಾವಳಿ ಕೇವಲ ನಡುಗಿವಿಗಷ್ಟೇ ಸೀಮಿತವಾಗಿಲ್ಲ.  ಊತದ ಮೂಲಕ ವಯಸ್ಸಾದ ಗಂಡಸರಿಗೆ ಸಾಕಷ್ಟು ತೊಂದರೆ ಕೊಡುವ ಪ್ರಾಸ್ಟೇಟ್ ಗ್ರಂಥಿಗಳು, ಹಲ್ಲು ಹಾಗೂ ವಸಡು, ಗಂಟಲೊಳಗಿನ ಟಾನ್ಸಿಲ್, ಮೂತ್ರಕೋಶ, ಶ್ವಾಸಕೋಶ ಹಾಗೂ ಮೂಳೆಗಳ ಮೇಲೂ ಬ್ಯಾಕ್ಟೀರಿಯಗಳು ಜೈವಿಕ ತೆರೆಯನ್ನು ನಿರ್ಮಿಸಿಕೊಳ್ಳುತ್ತವೆ.&lt;br /&gt;&lt;br /&gt; ಹಾಗಿದ್ದರೆ ಬ್ಯಾಕ್ಟೀರಿಯಗಳ ಜೈವಿಕ ತೆರೆಯನ್ನು ಕರಗಿಸುವ ಮದ್ದುಗಳು ಆವಿಷ್ಕಾರವಾಗಿಲ್ಲವೆ? ಎಂಬುದು ಪ್ರಶ್ನೆ.  ಕೆಲವೊಂದು ಸಮುದ್ರಕಳೆಗಳು ವಿಸರ್ಜಿಸುವ ರಾಸಾಯನಿಕಗಳಿಗೆ ಜೈವಿಕ ತೆರೆಯನ್ನು ಕತ್ತರಿಸುವ ಸಾಮರ್ಥ್ಯವಿರುವುದು ಈಗಾಗಲೇ ಪತ್ತೆಯಾಗಿದೆ.  ಆಸ್ಟ್ರೇಲಿಯಾ ದೇಶದ ಔಷಧ ಕಂಪನಿಯೊಂದು ಈ ಬಗ್ಗೆ ಸಂಶೋಧನೆಗಳನ್ನು ನಡೆಸುತ್ತಿದೆ.  ಸಸ್ಯಗಳೂ ಬ್ಯಾಕ್ಟೀರಿಯ ದಾಳಿಗೆ ತುತ್ತಾಗುತ್ತದಲ್ಲವೆ? ಅವುಗಳಿಗೂ ಜೈವಿಕ ತೆರೆಯ ಕಾಟವಿರಬಹುದಲ್ಲವೆ? ಎಂಬ ಪ್ರಶ್ನೆಗಳನ್ನು ಹಾಕಿಕೊಂಡು ಅಮೆರಿಕದ ಕಂಪನಿಯೊಂದು ಪ್ರಯೋಗಗಳನ್ನು ನಡೆಸುತ್ತಿದೆ.  ಕೆಲವೊಂದು ಸಸ್ಯಗಳಲ್ಲಿ ಜೈವಿಕ ತೆರೆ ರೂಪುಗೊಳ್ಳದೆ ಇರಲು ನೈಸರ್ಗಿಕವಾದ ರಕ್ಷಣೆಯಿರುವುದು ಗೊತ್ತಾಗಿದೆ.  ಇತ್ತ ನಮ್ಮ ದೇಹದಲ್ಲಿಯೇ ಇರುವ ಸುರಕ್ಷಾ ವ್ಯವಸ್ಥೆಯ ಭಾಗವಾದ ಬಿಳಿ ರಕ್ತ ಕಣಗಳಲ್ಲಿರುವ ಕೆಲ ರಾಸಾಯನಿಕಗಳಿಗೆ ಜೈವಿಕ ತೆರೆಯನ್ನು ಭೇದಿಸುವ ಗುಣವಿರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.&lt;br /&gt;&lt;br /&gt; ಜೈವಿಕ ತೆರೆಯಲ್ಲಡಗಿರುವ ಬ್ಯಾಕ್ಟೀರಿಯಗಳು ಏಕಾಂಗಿಯಾಗಿ ಅಡ್ಡಾಡುವ ಬ್ಯಾಕ್ಟೀರಿಯಗಳಿಗಿಂತ ಪ್ರತಿ ಜೈವಿಕಗಳಿಗೆ ಸಾವಿರ ಪಟ್ಟು ಹೆಚ್ಚು ಪ್ರತಿರೋಧ ತೋರುವುದೇ ಸದ್ಯಕ್ಕೆ ಬಗೆಹರಿಸಲಾಗದ ಸಮಸ್ಯೆ.  ಅಮೆರಿಕದ ಬಾಸ್ಟನ್ ನಗರದ ಜೈವಿಕ ತಂತ್ರಜ್ಞರು ಇದಕ್ಕೊಂದು ಪರಿಹಾರ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಸುದ್ದಿ ಕಳೆದ ವಾರ ಹೊರಬಂದಿದೆ.  ಜೈವಿಕ ತೆರೆಯಲ್ಲಿ ಅಡಗಿರುವ ಬ್ಯಾಕ್ಟೀರಿಯಗಳನ್ನು ನಾಶ ಮಾಡುವುದರ ಜತೆಗೆ ಅವುಗಳನ್ನು ಅಂಟಿಸಿರುವ ಕಾರ್ಬೊಹೈಡ್ರೇಟ್ (ಇಂಗಾಲ-ಜಲಜನಕ ಸಂಯುಕ್ತ) ಅನ್ನು ಕರಗಿಸಬಲ್ಲ ವೈರಸ್‍ಗಳನ್ನು ಅವರು ಸೃಷ್ಟಿಸಿದ್ದಾರೆ.  ಪ್ರಸ್ತುತ ಲಭ್ಯವಿರುವ ಜೈವಿಕ ತಂತ್ರಜ್ಞಾನದ ಮೂಲಕ ಅನುಕೂಲಕರ ವೈರಸ್‍ಗಳಿಗೆ ಸೂಕ್ತವಾದ ಜೀನ್ ರಿಪೇರಿ ಮಾಡಿ ಬೇಕೆಂದ ಕೆಲಸಗಳಿಗೆ ಬಳಸಿಕೊಳ್ಳಬಹುದು.  ವಿವಿಧ ಬಗೆಯ ಬ್ಯಾಕ್ಟೀರಿಯಗಳ ಜೈವಿಕ ತೆರೆಗಳನ್ನು ನಾಶ ಮಾಡಬಲ್ಲ ಪ್ರತ್ಯೇಕ ವೈರಸ್ ದಂಡನ್ನೇ ಬಾಸ್ಟನ್ ವಿವಿಯ ತಂತ್ರಜ್ಞರು ರೂಪಿಸಿದ್ದಾರೆ.  ವಿಜ್ಞಾನಿ ಜೇಮ್ಸ್ ಕಾಲಿನ್ಸ್ ವಿನ್ಯಾಸಗೊಳಿಸಿರುವ ಒಂದು ಬಗೆಯ ವೈರಸ್, ಇ-ಕೊಲಿ ಬ್ಯಾಕ್ಟೀರಿಯ ಸೃಷ್ಟಿಸಿದ ಜೈವಿಕ ತೆರೆಯನ್ನು ಪ್ರತಿಶತ ತೊಂಬತ್ತೊಂಬತ್ತರಷ್ಟು ನಾಶ ಮಾಡುವಲ್ಲಿ ಯಶಸ್ವಿಯಾಗಿದೆ.  ಈ ಕೆಲಸವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ವಿಸ್ಕನ್ಸಿನ್ ವಿವಿಯ ರಸಾಯನ ವಿಜ್ಞಾನಿ ಹೆಲೆನ್ ಬ್ಲಾಕ್‍ವೆಲ್, ‘ಇಷ್ಟು &lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_WOq6aPUeAO4/RpGB3-8n7VI/AAAAAAAAAMc/wOVvoJ_-iMY/s1600-h/Blackwell,_Helen.jpg"&gt;&lt;img style="margin: 0pt 10px 10px 0pt; float: left; cursor: pointer;" src="http://2.bp.blogspot.com/_WOq6aPUeAO4/RpGB3-8n7VI/AAAAAAAAAMc/wOVvoJ_-iMY/s200/Blackwell,_Helen.jpg" alt="" id="BLOGGER_PHOTO_ID_5084988253068062034" border="0" /&gt;&lt;/a&gt;ಪರಿಣಾಮಕಾರಿಯಾದ ಬ್ಯಾಕ್ಟೀರಿಯ ನಿರ್ಮೂಲನೆ ಮತ್ತೊಂದಿಲ್ಲ’ವೆಂದಿದ್ದಾರೆ.  ಇಲ್ಲಿ ಮೆಚ್ಚಬೇಕಾದ ಅಂಶವೆಂದರೆ ಜೈವಿಕ ತೆರೆಯ ಅಂಟನ್ನು ಕರಗಿಸುವ ಯಶಸ್ವೀ ಕ್ರಿಯೆ.  ಸಾಮಾನ್ಯವಾಗಿ ಪ್ರತಿಜೈವಿಕಗಳ ಕಾರ್ಯಾಚರಣೆಗೆ ಅಡ್ಡಿಪಡಿಸುವುದೇ ಈ ಅಂಟು.  ಜತೆಗೆ ನಿದ್ರಾವಸ್ಥೆಯಲ್ಲಿರುವ ಬ್ಯಾಕ್ಟೀರಿಯಗಳಿಗೆ ಗಾಳಿ-ನೀರಿನ ವ್ಯವಸ್ಥೆಯನ್ನೂ ಈ ಅಂಟೇ ಸಿದ್ಧಪಡಿಸಿರುತ್ತದೆ.&lt;br /&gt;&lt;br /&gt; ಪ್ರತಿಜೈವಿಕಗಳಿಗೆಲ್ಲ ಒಗ್ಗಿಕೊಳ್ಳುವ ಜೈವಿಕ ತೆರೆಗಳು ನಿರ್ಮಾಣವಾಗುತ್ತಿರುವ ಈ ದಿನಗಳಲ್ಲಿ ಬಾಸ್ಟನ್ ವಿವಿಯ ಸಂಶೋಧನೆಗಳು ಮಹತ್ತರವೆನಿಸುತ್ತದೆ.  ಬ್ಯಾಕ್ಟೀರಿಯಗಳನ್ನು ಕೊಲ್ಲಬಲ್ಲ ವೈರಸ್‍ಗಳ ಜೀನ್‍ಗಳಿಗೆ ಜೈವಿಕ ತೆರೆಯನ್ನು ಕರಗಿಸಬಲ್ಲಂಥ ಕಿಣ್ವದ ಜೀನ್ ಅನ್ನು ತಳಕು ಹಾಕಿದರೆ ‘ಸೂಪರ್ ವೈರಸ್’ ಸಿದ್ಧ.  ಇಂಥ ವೈರಸ್‍ಗಳನ್ನು ಜೈವಿಕ ತೆರೆಯೊಳಗೆ ನುಗ್ಗಿಸಿದರೆ, ಅವು ಮಾಡುವ ಮೊದಲ ಕೆಲಸ ಬ್ಯಾಕ್ಟೀರಿಯಗಳ ಒಡಲೊಳಗೆ ಠಿಕಾಣಿ ಹೂಡುವುದು.  ಜಾಗ ಕೊಟ್ಟ ಒಡೆಯನ ಒಡಲೊಳ್ಗೆ ಸಂತಾನೋತ್ಪತ್ತಿ ಮಾಡಿಕೊಂಡು ಅದನ್ನು ಉಬ್ಬರಿಸಿ ಒಡೆದುಹಾಕುವುದು.  ವೈರಸ್ ದಂಡು ಮತ್ತಷ್ಟು ಬ್ಯಾಕ್ಟೀರಿಯಗಳನ್ನು ಅರಸುವುದು.  ಈ ಸಂದರ್ಭದಲ್ಲಿ ಸ್ರವಿಸಿದ ಕಿಣ್ವವನ್ನು ಜೈವಿಕ ತೆರೆಯ ಅಂಟನ್ನು ಕರಗಿಸುವಂತೆ ಮಾಡುವುದು.  ಹೀಗೆ ಅನಾಯಾಸವಾಗಿ ಬ್ಯಾಕ್ಟೀರಿಯ ಮುಚ್ಚಟೆಯಿಂದ ಕಟ್ಟಿಕೊಂಡ ಅಂಟಿನ ತೆರೆಯನ್ನು ಸಂಪೂರ್ಣವಾಗಿ ನಾಶಮಾಡಬಹುದು.  ಜೈವಿಕ ತಂತ್ರಜ್ಞರು ಇಲ್ಲಿ ಅಗತ್ಯವಿರುವ ಎಲ್ಲ ಸುರಕ್ಷಾ ಕ್ರಮಗಳನ್ನು ಕೈಗೆತ್ತಿಕೊಂಡಿದ್ದಾರೆ.  ಬ್ಯಾಕ್ಟೀರಿಯ ವಿನಾಶ ಮಾಡುವ ವೈರಸ್‍ಗಳು ಮನುಷ್ಯನ ದೇಹಕ್ಕೆ ಯಾವುದೇ ಹಾನಿ ಮಾಡದಂಥವುಗಳೆಂದು ಖಚಿತಪಡಿಸಿಕೊಂಡಿದ್ದಾರೆ.&lt;br /&gt;&lt;br /&gt; ಇಷ್ಟೆಲ್ಲಾ ಹೆಗ್ಗಳಿಕೆಯ ವೈರಸ್ ಪಡೆಯ ನಿರ್ಮಾಣ ಹೊಸತೇನಲ್ಲ.  ಸುಂಆರು ಒಂದು ದಶಕದ ಹಿಂದೆಯೇ ರಶಿಯ ಹಾಗೂ ಕೆಲ ಯೂರೋಪ್ ದೇಶಗಳ ವಿಜ್ಞಾನಿಗಳು ಜೈವಿಕ ತೆರೆಯನ್ನು ಕತ್ತರಿಸಿ ಹಾಕುವ ವೈರಸ್ ಅನ್ನು ಸೃಷ್ಟಿಸಿದ್ದರು.  ಆದರೆ ಅಮೆರಿಕದ ಆಹಾರ ಹಾಗೂ ಔಷಧ ಪ್ರಾಧಿಕಾರದ ಅಂಗೀಕಾರ ಅವುಗಳ ಬಳಕೆಗೆ ದೊರೆತಿರಲಿಲ್ಲ.  ಅಂತೆಯೇ ಉಳಿದ ದೇಶಗಳ ಮಾನ್ಯತೆ ಅವುಗಳಿಗೆ ದೊರೆತಿರಲಿಲ್ಲ.  ಇದೀಗ ಅಮೆರಿಕದ ನಿಯಂತ್ರಣ ಸಂಸ್ಥೆಯು ವೈರಸ್ ನೆರವಿನ ಬ್ಯಾಕ್ಟೀರಿಯ ನಾಶ ಕಾರ್ಯಕ್ರಮಕ್ಕೆ ಅಂಗೀಕಾರ ನೀಡಿದೆ.  ಹಲವಾರು ಬಗೆಯ ಪ್ರತಿಜೈವಿಕಗಳಿಗೆ ಒಗ್ಗಿಹೋದ ಬ್ಯಾಕ್ಟೀರಿಯಗಳು ಅಭಿವೃದ್ಧಿಯಾಗುತ್ತಿರುವುದು ಸಮಸ್ಯೆಯ ಒಂದು ಮುಖವಾದರೆ, ಒಂದೇ ಜೈವಿಕ ತೆರೆಯಲ್ಲಿ ಹಲವು ಬಗೆಯ ಬ್ಯಾಕ್ಟೀರಿಯಗಳು ನೆಲೆ ಹೂಡುತ್ತಿರುವುದು ಮತ್ತೊಂದು ಮುಖ.  ಸದ್ಯಕ್ಕೆ ನಿರ್ದಿಷ್ಟ ಬ್ಯಾಕ್ಟೀರಿಯಗಳ ಜೈವಿಕ ತೆರೆಯನ್ನು ನಿರ್ನಾಮ ಮಾಡುವ ವೈರಸ್‍ಗಳು ಮಾತ್ರ ಸೃಷ್ಟಿಯಾಗಿವೆ.&lt;br /&gt;&lt;br /&gt; ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರಗಳ ಕಟ್ಟುನಿಟ್ಟಿನ ನಿಯಮಗಳಿಂದಾಗಿಯೇ ಹೊಸ ಆವಿಷ್ಕಾರಗಳಾಗುತ್ತಿಲ್ಲ ಎಂಬ ಆಪಾದನೆ ಬಹಳ ಹಿಂದಿನದು.  ಮನುಷ್ಯ ದೇಹದ ಮೇಲೆ ಪ್ರಯೋಗವಾಗುವ ಮೊದಲು ಯಾವುದೇ ಔಷಧ ಪ್ರಯೋಗಶಾಲೆಯಲ್ಲಿ ವಿವಿಧ ಹಂತದ ಪರೀಕ್ಷೆಗಳನ್ನು ಪಾಸು ಮಾಡಿರಲೇಬೇಕು.  ಪ್ರಾಣಿ ದಯಾ ಸಂಘಗಳು ಪ್ರಬಲವಾಗುತ್ತಿರುವ ಹಿನ್ನೆಲೆಯಲ್ಲಿ ಇಲಿಯ ಹೊರತಾಗಿ ಮೊಲ, ಮಂಗಗಳಂಥ ಮತ್ಯಾವುದೇ ಸ್ತನಿಗಳ ಮೇಲೆ ಔಷಧ ಪ್ರಯೋಗಗಳನ್ನು ನಡೆಸುವಂತಿಲ್ಲ.  ಈ ಸಮಸ್ಯೆಗೆ ಪರಿಹಾರವೆಂದರೆ ಕೈಗಾರಿಕೆಗಳಲ್ಲಿ ಬಳಕೆಯಾಗುವ ನೀರಿನಲ್ಲಿ ನೆಲೆ ಮಾಡಿದ ಬ್ಯಾಕ್ಟೀರಿಯಗಳ ಮೇಲೆ ಪ್ರಯೋಗ ನಡೆಸುವುದು.  ಕೊಳಚೆ ನೀರಿನಲ್ಲಿ ವಿಫುಲವಾಗಿ ಸೇರಿಹೋಗಿರುವ ಬ್ಯಾಕ್ಟೀರಿಯಗಳು ಹಾಗೂ ಅವುಗಳೊಡಗೂಡಿದ ಜೈವಿಕ ತೆರೆಯ ಮೇಲೆ ನಿರ್ಬಂಧವಿಲ್ಲದ ಅಧ್ಯಯನಗಳನ್ನು ಕೈಗೊಳ್ಳಬಹುದು.  ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದಲ್ಲಿನ ‘ಯೂನಿವರ್ಸಿಟಿ ಆಫ್ ಸದರ್ನ್ ಕ್ಯಾಲಿಫೋರ್ನಿಯ’ದಲ್ಲಿ ಬ್ಯಾಕ್ಟೀರಿಯಗಳ ಜೈವಿಕ ತೆರೆಯ ಅಧ್ಯಯನಕ್ಕೆಂದೇ ವಿಶೇಷ ವಿಭಾಗ ಪೀಠವಿದೆ.  ಅದರ ನಿರ್ದೇಶಕರಾದ ಬಿಲ್ ಕಾಸ್ಟೆರ್‌ಟನ್ ಹೇಳುವಂತೆ ‘ಬರಲಿರುವ ದಿನಗಳಲ್ಲಿ ಸೋಂಕಿನ ಚಿಕಿತ್ಸೆಯಲ್ಲಿ ಮಹತ್ತರ ಬದಲಾವಣೆಗಳಾಗಲಿವೆ’.  ಈ ಬದಲಾವಣೆಗಳಿಗೆ ಕಾರಣಕರ್ತರು ಹೊಸ ಔಷಧಗಳನ್ನು ಸೃಷ್ಟಿಸುತ್ತಿರುವ ವಿಜ್ಞಾನಿಗಳಲ್ಲ, ಎಲ್ಲ ಬಗೆಯ ದಾಳಿಗಳಿಗೆ ಒಗ್ಗಿಕೊಂಡು ಪ್ರತಿರೋಧ ತೋರುವ ಬ್ಯಾಕ್ಟೀರಿಯಗಳು, ಅಲ್ಲವೆ?&lt;br /&gt;&lt;br /&gt;&lt;span style="font-style: italic;"&gt;&lt;span style="font-weight: bold;"&gt;(ಕೃಪೆ: ವಿಜಯ ಕರ್ನಾಟಕ, 09-07-2007)&lt;/span&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/752423363868781697-8051612695422987577?l=netnota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://netnota.blogspot.com/feeds/8051612695422987577/comments/default' title='Post Comments'/><link rel='replies' type='text/html' href='http://www.blogger.com/comment.g?blogID=752423363868781697&amp;postID=8051612695422987577' title='29 Comments'/><link rel='edit' type='application/atom+xml' href='http://www.blogger.com/feeds/752423363868781697/posts/default/8051612695422987577'/><link rel='self' type='application/atom+xml' href='http://www.blogger.com/feeds/752423363868781697/posts/default/8051612695422987577'/><link rel='alternate' type='text/html' href='http://netnota.blogspot.com/2007/07/blog-post_09.html' title='ವೈರಸ್ ತಿವಿತದಿಂದ ಸ್ಥಿಮಿತಗೊಂಡೀತೆ ಬ್ಯಾಕ್ಟೀರಿಯ?'/><author><name>HNS</name><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_WOq6aPUeAO4/SdR5qYZ87xI/AAAAAAAAAWg/cXIYJSqE8Z4/S220/sudhi1.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_WOq6aPUeAO4/RpGBCO8n7TI/AAAAAAAAAMM/0ICbbz8wbXE/s72-c/Biofilm.jpg' height='72' width='72'/><thr:total>29</thr:total></entry><entry><id>tag:blogger.com,1999:blog-752423363868781697.post-5915063730585932432</id><published>2007-07-02T07:14:00.000+05:30</published><updated>2007-07-02T07:22:31.896+05:30</updated><title type='text'>ಬುರುಡೆಗೇರಿದ ಸರಳು; ಚುರುಕುಗೊಳಿಸೀತೆ ಮಿದುಳು?</title><content type='html'>&lt;span style="font-size:180%;"&gt;&lt;span style="font-weight: bold;"&gt;     ಇ&lt;/span&gt;&lt;/span&gt;ದು ಸಿ.ಇ.ಟಿ. ಸಮಯ.  ರ್‍ಯಾಂಕ್ ಪಟ್ಟಿಯಲ್ಲಿ ಮೊದಲ ಒಂದೆರಡು ಸಹಸ್ರ ಅಂಕೆಗಳನ್ನು ದಾಟಿದವರಿಗೆ ಇಚ್ಛೆಯ ಕೋರ್ಸ್‍ಗಳು ಸಿಕ್ಕಿರಲಾರದು.  ಸೀಟು ಗಿಟ್ಟಿಸದ ಆ ಮಕ್ಕಳಿಗಿಂತಲೂ ಅವರಪ್ಪ ಅಮ್ಮಂದಿರಿಗೆ ಬಹಳಷ್ಟು ನಿರಾಸೆಯಾಗಿರುತ್ತದೆ, ಅದು ಸಹಜ.  ಇದಕ್ಕೆ ಸಮಯ ವ್ಯರ್ಥ ಮಾಡುವ ಬದಲು ಅದನ್ನು ಮಾಡಿದ್ದಿದ್ದರೆ?  ಎಸ್ಸೆಸ್ಸೆಲ್ಸಿಯಲ್ಲಿ ಇನ್ನೊಂದು ಹತ್ತು ಮಾರ್ಕ್ ತೆಗೆದು ಈ ಕಾಲೇಜಿನ ಬದಲು ಆ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡು ಕಲಿತಿದ್ದರೆ?  ಮನೆಪಾಠವನ್ನು ಇವರ ಬದಲು ಮತ್ತೊಬ್ಬರಿಂದ ಹೇಳಿಸಿದ್ದರೆ?  ಪಕ್ಕದ್ಮನೆ ಕಮಲಮ್ಮನ ಗಂಡನ ಥರಾ ಇವರೂ ಮಗಳ ಪರೀಕ್ಷೆಯ ಸಮಯದಲ್ಲಿ ಒಂದು ತಿಂಗಳು ರಜೆ ಹಾಕಿ ಸರಿಯಾಗಿ ಓದಿಸಿದ್ದಿದ್ರೆ?  ಮುದ್ದು ಕಮ್ಮಿ ಮಾಡಿ ಓದಿನ ಬಗ್ಗೆ ಮೊದಲಿನಿಂದ್ಲೂ ಒಂದಷ್ಟು ಶಿಸ್ತು ಬೆಳೆಸಿಕೊಳ್ಳುವಂತೆ ತಾಕೀತು ಮಾಡಿದ್ದಿದ್ರೆ?  ಅಂಚೆ ಮೂಲಕ ತರಬೇತಿ ನೀಡುವ ಕೋರ್ಸಿಗೂ ನೋಂದಾಯಿಸಿಬಿಟ್ಟಿದ್ರೆ?  ಮೊಬೈಲ್ ಫೋನ್ ಕೊಡಿಸದೇ ಇದ್ದಿದ್ರೆ?  ಕೇಬಲ್ ಟೀವಿ ಕತ್ತರಿಸಿ ಹಾಕಿದ್ದಿದ್ರೆ?  ಇಂಟರ್‌ನೆಟ್ ಸಂಪರ್ಕ ತಪ್ಪಿಸಿ ಹಾಕಿದ್ದಿದ್ರೆ?  ಡೀವೀಡಿ ಪ್ಲೇಯರ್ ಮನೆಗೆ ತರದೆ ಇದ್ದಿದ್ರೆ?  ಸ್ಕೂಟಿ ಕೊಡಿಸದೆಯೆ ಇದ್ದಿದ್ರೆ?  ಪತ್ರಿಕೆ/ಮ್ಯಾಗಝಿನ್‍ಗಳನ್ನು ಒಂದಷ್ಟು ಕಾಲ ನಿಲ್ಲಿಸಿದ್ದಿದ್ರೆ?  ............. ಮಗನಿಗೊ, ಮಗಳಿಗೊ ಇನ್ನೊಂದಷ್ಟು ಮಾರ್ಕ್ಸ್ ಬಂದಿರ್ತಿತ್ತು.  ಕರ್ನಾಟಕದ ನಂಬರ್ ಒನ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಎಂಜಿನೀರಿಂಗ್ ಸೀಟು ಅವನದೊ/ಅವಳದೊ ಆಗಿರ್ತಿತ್ತು.  ಬಹುಶಃ ಇನ್ನೊಂದು ತಿಂಗಳ ಕಾಲ ಹೀಗೆ ಕನವರಿಸುವವರನ್ನು ಕಚೇರಿ/ಬಸ್ ನಿಲ್ದಾಣ/ದೇವಸ್ಥಾನ/ಕಾಲೇಜು/ಉದ್ಯಾನವನಗಳಲ್ಲಿ ಕಾಣುತ್ತಿರುತ್ತೀರಿ.  ಮತ್ತೆ ಮುಂದಿನ ವರ್ಷ ಇಂಥದೇ ಮಂದಿಯನ್ನು ಅದೇ ಸ್ಥಳಗಳಲ್ಲಿ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕಾಣುವಿರಿ.&lt;br /&gt;&lt;br /&gt;ಇದೆಲ್ಲದರ ಬದಲು ಮಕ್ಕಳ ಚುರುಕುತನವನ್ನು ಹೆಚ್ಚಿಸುವ ಮಾತ್ರೆಯೊ, ಟಾನಿಕ್ಕೊ, ಆಹಾರವೊ ಇದ್ದಿದ್ದರೆ ಚೆನ್ನಾಗಿರುತ್ತಿತ್ತಲ್ಲವೆ?  ಮರೆವನ್ನು ಮರೆಸಿ, ಒಳಗಿನ ಬುದ್ಧಿಶಕ್ತಿಯನ್ನು ಪ್ರಚೋದಿಸಿ, ಪ್ರತಿಭೆಯನ್ನು ಮೆರೆಸಬಲ್ಲ ದಿವ್ಯೌಷಧವೊಂದಕ್ಕಾಗಿ ಕಾತರಿಸುವ ಕೋಟ್ಯಂತರ ಮಂದಿ ಈ ಜಗತ್ತಿನಲ್ಲಿದ್ದಾರೆ.  ವಿಜ್ಞಾನ-ತಂತ್ರಜ್ಞಾನ ಇಷ್ಟೆಲ್ಲಾ ಮುಂದುವರಿದಿದೆ.  ಈ ಬಗ್ಗೆ ಸಂಶೋಧನೆಗಳು ನಡೆದಿಲ್ಲವೆ?  ಹೀಗೊಂದು ಪ್ರಶ್ನೆಯನ್ನು ಹಾಕಿಕೊಂಡು ತಡಕಾಡುತ್ತಿದ್ದಾಗ ಸಿಕ್ಕವರು ಪತ್ರಕರ್ತ ಡೇವಿಡ್ ಎವಿಂಗ್ ಡಂಕನ್.  &lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_WOq6aPUeAO4/RohYxfSercI/AAAAAAAAALs/VAWgUBcd2WI/s1600-h/duncan.jpg"&gt;&lt;img style="margin: 0pt 10px 10px 0pt; float: left; cursor: pointer;" src="http://2.bp.blogspot.com/_WOq6aPUeAO4/RohYxfSercI/AAAAAAAAALs/VAWgUBcd2WI/s200/duncan.jpg" alt="" id="BLOGGER_PHOTO_ID_5082409786723446210" border="0" /&gt;&lt;/a&gt;ಮನೆಯಲ್ಲಿ ನೀವು ‘ವರ್ಲ್ಡ್ ಸ್ಪೇಸ್’ ಎಂಬ ಇಪ್ಪತ್ನಾಲ್ಕು ಗಂಟೆ ಉಪಗ್ರಹ ರೇಡಿಯೊ ಸ್ಟೇಶನ್‍ಗಳ ಸಂಪರ್ಕ ತೆಗೆದುಕೊಂಡಿದ್ದರೆ ಈ ಡೇವಿಡ್ ಖಂಡಿತವಾಗಿಯೂ ಪರಿಚಿತರಾಗಿರುತ್ತಾರೆ.  ವರ್ಲ್ಡ್ ಸ್ಪೇಸ್’ನಲ್ಲಿ ‘ಎನ್.ಪಿ.ಆರ್. - ನ್ಯಾಷನಲ್ ಪಬ್ಲಿಕ್ ರೇಡಿಯೊ’ ಎಂಬ ಚಾನೆಲ್ ಬಿತ್ತರವಾಗುತ್ತದೆ.  ಅಮೆರಿಕದಲ್ಲಿ ಇದೊಂದು ಮುಕ್ತ ಹಾಗೂ ಸ್ವತಂತ್ರವಾದ ಸುದ್ದಿ ವಾಹಿನಿ.  ಎರಡೂವರೆ ಕೋಟಿಗೂ ಹೆಚ್ಚಿನ ಸಂಖ್ಯೆಯ ಕೇಳುಗರನ್ನು ಹೊಂದಿರುವ ಈ ರೇಡಿಯೊವನ್ನು ಯಾವುದೇ ಲಾಭವನ್ನು ಅಪೇಕ್ಷಿಸದ ಒಕ್ಕೂಟವೊಂದು ಮುನ್ನಡೆಸುತ್ತಿದೆ.  ಎಂಟು ನೂರಕ್ಕೂ ಹೆಚ್ಚಿನ ಸ್ವತಂತ್ರ, ವ್ಯಾಪಾರಾಪೇಕ್ಷೆಯಿಲ್ಲದ ಮರಿ ರೇಡಿಯೊ ಸ್ಟೇಷನ್‍ಗಳು ಎನ್.ಪಿ.ಆರ್. ಅನ್ನು ಜೀವಂತವಾಗಷ್ಟೇ ಅಲ್ಲ, ಜ್ವಲಂತವಾಗಿಟ್ಟಿವೆ.  ಈ ರೇಡಿಯೊದಲ್ಲಿ ನಮ್ಮ ಡೇವಿಡ್ ‘ಬಯೋಟೆಕ್ ನೇಷನ್’ ಎಂಬ ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಾಪ್ತಾಹಿಕ ಕಾರ್ಯಕ್ರಮವನ್ನು ನಿಯಮಿತವಾಗಿ ನಡೆಸಿಕೊಡುತ್ತಾರೆ.&lt;br /&gt;&lt;br /&gt;ಅಮೆರಿಕದ ಜನಪ್ರಿಯ ‘ಎ.ಬಿ.ಸಿ.’ ಹಾಗೂ ‘ಡಿಸ್ಕವರಿ’ ಟೀವಿ ಚಾನೆಲ್‍ಗಳಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿಕೊಡುವುದರ ಜತೆಗೆ ‘ನೋವಾ’ ಹಾಗೂ ‘ಸ್ಮಿತ್ಸೋನಿಯನ್ ನೆಟ್‍ವರ್ಕ್’ ಚಾನೆಲ್‍ಗಳಲ್ಲಿಯೂ ವಿಜ್ಞಾನದ ಬಗ್ಗೆ ವಿಶೇಷ ಸಂಚಿಕೆಗಳನ್ನು ರೂಪಿಸಿಕೊಡುತ್ತಾರೆ.  ಇದಲ್ಲದೆಯೆ ‘ವೈರ್‍ಡ್’, ‘ಡಿಸ್ಕವರ್’, ‘ಟೆಕ್ನಾಲಜಿ ರೆವ್ಯೂ’ ಮತ್ತಿತರ ಪ್ರತಿಷ್ಠಿತ ವಿಜ್ಞಾನ-ತಂತ್ರಜ್ಞಾನ ಪತ್ರಿಕೆಗಳ ಸಂಪಾದಕೀಯ ಸಲಹಾ ಮಂಡಲಿಯಲ್ಲಿ ಸೇವೆ ಸಲ್ಲಿಸುತ್ತಲೇ ವಿಶೇಷ ಲೇಖನಗಳನ್ನು ರೂಪಿಸಿಕೊಡುತ್ತಾರೆ.  ಪಟ್ಟಿ ಮಾಡುತ್ತಾ ಹೋದರೆ ಇವರು ಲೇಖನ ಬರೆಯದ ಜಗನ್ಮಾನ್ಯ ಪತ್ರಿಕೆಗಳೇ ಇಲ್ಲವೆನ್ನಬಹುದು.  ‘ನ್ಯಾಷನಲ್ ಜಿಯಾಗ್ರಫಿಕ್’, ‘ನ್ಯೂಯಾರ್ಕ್ ಟೈಮ್ಸ್’, ‘ವಾಷಿಂಗ್‍ಟನ್ ಪೋಸ್ಟ್’, ‘ಟೆಲಿಗ್ರಾಫ್’, ‘ಗಾರ್ಡಿಯನ್’, ‘ಹಾರ್ಪರ್ಸ್’, ‘ಫಾರ್‌ಚ್ಯೂನ್’ ...... ಇವೆಲ್ಲವುಗಳಿಗೂ ಅವರು ವೈವಿಧ್ಯಮಯ ವಿಜ್ಞಾನ ಲೇಖನಗಳನ್ನು ಬರೆದುಕೊಟ್ಟಿದ್ದಾರೆ.  ಜೀವ ವಿಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಈ ಡೇವಿಡ್ ಅವರಿಗೆ ಅದೆಷ್ಟು ಆಸಕ್ತಿಯೆಂದರೆ ಆ ಬಗ್ಗೆ ನಡೆಯುವ ಪ್ರಯೋಗಗಳಲ್ಲಿ ಒಮ್ಮೊಮ್ಮೆ ಸ್ವತಃ ಭಾಗಿಯಾಗಿಬಿಡುತ್ತಾರೆ.  ತಮ್ಮ ಅನುಭವಗಳನ್ನು ನೇರವಾಗಿ ಪತ್ರಿಕೆ, ರೇಡಿಯೊ, ಟೆಲಿವಿಷನ್ ಅಂಕಣಗಳಲ್ಲಿ ಸ್ವಾರಸ್ಯಕರವಾಗಿ ಬಿತ್ತರಿಸುತ್ತಾರೆ.  ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಬಹುದೇಶ ಸಂಚಾರಿಯಾಗಿರುವ ಡೇವಿಡ್, ಸಮಯ ಸಿಕ್ಕಾಗಲೆಲ್ಲಾ ಉತ್ತಮ ಪುಸ್ತಕಗಳನ್ನು ರಚಿಸುತ್ತಾರೆ.  ಅವರ ಪುಸ್ತಕಗಳು ಮಾರುಕಟ್ಟೆಗೆ ಬಂತೆಂದರೆ, ಲೋಕಾರ್ಪಣೆಗೆ ಮುಂಚಿತವಾಗಿ ಓದುಗರಿಂದ ಮುಂಗಡ ಕಾಯ್ದಿರಿಸುವಿಕೆ ಆರಂಭವಾಗುತ್ತದೆ.&lt;br /&gt;&lt;br /&gt;ಇತ್ತೀಚೆಗೆ ಎರಡು ಮೂರು ದಿನಗಳ ಕಾರ್ಯಕ್ರಮಕ್ಕೆಂದು ಡೇವಿಡ್ ಲಂಡನ್‍ಗೆ ಹೋಗಿದ್ದರು.  ವಾರದೊಳಗೇ ಅಮೆರಿಕದ ಕ್ಯಾಲಿಫೋರ್ನಿಯಕ್ಕೆ ಹಿಂದಿರುಗಿದ ಮೇಲೆ ಅವರಿಗೂ ಒಂದು ರೀತಿಯ ಪ್ರಯಾಣದಾಲಸ್ಯ ಕಾಡಿತ್ತು.  ಹಗಲು-ರಾತ್ರಿಯ ಗಡಿಯಾರಕ್ಕೂ ಜೈವಿಕ ಗಡಿಯಾರಕ್ಕೂ ಹೊಂದಾಣಿಕೆಯಾಗದೆಯೇ ಊಟ ಹಾಗೂ ನಿದ್ರೆಯ ಚಕ್ರ ಏರುಪೇರಾಗಿತ್ತು.  ಈ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಲು ನಿರ್ಧರಿಸಿದ ಡೇವಿಡ್, ನೇರವಾಗಿ ಮುಟ್ಟಿದ್ದು ಅಮೆರಿಕದ ಮೇರಿಲ್ಯಾಂಡ್‍ನ ‘ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ನ್ಯೂರಾಲಜಿಕಲ್ ಡಿಸ್‍ಆರ್ಡರ್ಸ್ ಆಂಡ್ ಸ್ಟ್ರೋಕ್ಸ್’ ಎಂಬ ಮಿದುಳು ಹಾಗೂ ನರ ಸಂಬಂಧಿ ಕಾಯಿಲೆಗಳು ಹಾಗೂ ಪಾರ್ಶ್ವವಾಯುವಿನ ಬಗ್ಗೆ ಸಂಶೋಧನೆಗಳನ್ನು ನಡೆಸುವ ರಾಷ್ಟ್ರೀಯ ವಿಜ್ಞಾನ ಸಂಸ್ಥೆಗೆ.  ಇಲ್ಲಿ ಮಿದುಳನ್ನು ಉತ್ತೇಜಿಸುವ ಸಾಧನವೊಂದನ್ನು ರೂಪಿಸಲಾಗುತ್ತಿದೆಯೆಂಬ ವಿಷಯ ಡೇವಿಡ್ ಅವರಿಗೆ ಗೊತ್ತಿತ್ತು.  ಆ ಸಾಧನ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆಂಬುದನ್ನು ಅರಿಯಲು ಸ್ವತಃ ಪರೀಕ್ಷೆಗೀಡಾಗಲು ಅವರು ಸಜ್ಜಾಗಿದ್ದರು.  ನರವಿಜ್ಞಾನಿ ಎರಿಕ್ ವಾಸರ್‌ಮಾನ್ ಅವರ ಕೈಗೆ ತಮ್ಮ ತಲೆಬುರುಡೆಯನ್ನೊಪ್ಪಿಸಿದರು.  ವಿದ್ಯುತ್ ಹರಿಯುವ ತಂತಿಗಳನ್ನು ಹಣೆ ಹಾಗೂ ತಲೆಬುರುಡೆಯ ವಿವಿಧ ಭಾಗಗಳ ಮೇಲೆ ಜೋಡಿಸಲು ತಮ್ಮ ಒಪ್ಪಿಗೆಯನ್ನಿತ್ತರು.&lt;br /&gt;&lt;br /&gt;ಮಿದುಳಿಗೆ ಸಂಬಂಧಿಸಿದ ತೊಂದರೆಗಳ ನಿವಾರಣೆಗೆ ಲಘು ಪ್ರಮಾಣದ ವಿದ್ಯುತ್ ಅನ್ನು ತಲೆಬುರುಡೆಗೆ ಹಾಯಿಸುವ ವಿಧಾನ ಹೊಸತಲ್ಲ.  ಸುಮಾರು ನಲವತ್ತು-ಐವತ್ತು ವರ್ಷಗಳಿಂದ ಈ ಬಗ್ಗೆ ಪ್ರಯೋಗಗಳು ಆರಂಭವಾಗಿದ್ದವು.  ಬಾಯಿಯ ಮೂಲಕ ಅಥವಾ ರಕ್ತನಾಳಗಳ ಮೂಲಕ ತೆಗೆದುಕೊಳ್ಳಬಹುದಾದ ರಾಸಾಯನಿಕ ಸಂಯುಕ್ತಗಳನ್ನೊಳಗೊಂಡ ಮದ್ದುಗಳು ಆವಿಷ್ಕಾರವಾದ ಮೇಲೆ ವಿದ್ಯುತ್ ಆಘಾತದ ಚಿಕಿತ್ಸೆ ಹೆಚ್ಚೂ-ಕಮ್ಮಿ ನಿಂತೇ ಹೋಗಿತ್ತು.  ಇದೀಗ ವಾಸರ್‌ಮಾನ್ ನೇತೃತ್ವದಲ್ಲಿ ಅಂಗೈಯಲ್ಲಿಟ್ಟುಕೊಳ್ಳಬಹುದಾದ ರೇಡಿಯೊ ಗಾತ್ರದ ‘ಗ್ಯಾಜೆಟ್’, ನಿದ್ರಾಹೀನತೆ ಅಥವಾ ಸತತ ಕೆಲಸದಿಂದ ಮಿದುಳಿನ ಬಳಲಿಕೆಯಿಂದ ನರಳುವವರನ್ನು ಚೇತನಗೊಳಿಸುತ್ತದೆ.  ಅಂದರೆ ಜಡತ್ವದಿಂದ ಮಿದುಳನ್ನು ಮುಕ್ತಗೊಳಿಸುತ್ತದೆ.  ಹಣೆಯ ಹಿಂದೆ ಇರುವ ಮಿದುಳಿನ ಭಾಗ ತರ್ಕದಿಂದ ಕೂಡಿದ ವಿವೇಚನೆ ಹಾಗೂ ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ.  ಈ ಕಾರಣದಿಂದ ವಾಸರ್‌ಮಾನ್ ಅವರು ಡೇವಿಡ್ ಅವರ ಹಣೆಗೆ ಹಚ್ಚಿದ ಎಲೆಕ್ಟ್ರೋಡ್ ತಂತಿಗಳಿಂದ ಸುಮಾರು ನಲವತ್ತು ನಿಮಿಷಗಳ ಕಾಲ ಲಘು ಪ್ರಮಾಣದ ವಿದ್ಯುತ್ ಹಾಯಿಸಿದರು.  ಈ ಸಮಯದಲ್ಲಿ ಪ್ರವಹಿಸಿದ ಎಲೆಕ್ಟ್ರಾನ್‍ಗಳು ಮಿದುಳಿನ ಮುಂಭಾಗದಲ್ಲಿ ವಿದ್ಯುತ್ ಕ್ಷೇತ್ರವನ್ನು ನಿರ್ಮಿಸಿತು.  ಇದರಿಂದಾಗಿ ಗ್ರಹಿಕೆ ಹಾಗೂ ಭಾವನೆಗಳನ್ನು ಗುರುತಿಸುವ ಕೆಲಸ ಮಾಡುವ ನರತಂತುಗಳು ಚುರುಕುಗೊಂಡವು.&lt;br /&gt;&lt;br /&gt;ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಂಡು ನಗುತ್ತಾ ಕುಳಿತ ಡೇವಿಡ್ ಅವರಿಗೆ ವಾಸರ್‌ಮಾನ್ ಅವರು ಹೇಳಿದ್ದಿಷ್ಟು.  ‘ನಿಮ್ಮನ್ನು ಮತ್ತೊಬ್ಬ ಐನ್‍ಸ್ಟೀನ್ ಮಾಡುವಂಥ ಸಾಮರ್ಥ್ಯ ನನ್ನ ತಂಡಕ್ಕಾಗಲಿ ಅಥವಾ ನನ್ನ ಗ್ಯಾಜೆಟ್‍ಗಳಿಗಾಗಲಿ ಇಲ್ಲ.  ಆದರೆ ಕೆಲವೊಂದು ಆಘಾತ ಅಥವಾ ಅಪಘಾತಗಳಿಂದ ಮಿದುಳಿಗೆ ಪೆಟ್ಟು ಮಾಡಿಕೊಂಡವರು ಮೊದಲಿನಂತೆ ಕಾರ್ಯ ನಿರ್ವಹಿಸಲು ಈ ಗ್ಯಾಜೆಟ್ ಕೊಂಚ ನೆರವು ನೀಡುತ್ತದೆ’.  ಈ ಮಾತುಗಳನ್ನು ಆಲಿಸುತ್ತಿರುವಂತೆ ಡೇವಿಡ್ ಅವರಿಗೆ ತಲೆಬುರುಡೆಯಲ್ಲಿ ಒಂದಷ್ಟು ತುರಿಕೆಯಾಗುತ್ತದೆ.  ವಿದ್ಯುತ್ ಪ್ರಮಾಣ 2.5 ಮಿಲಿ ಆಂಪೀರ್‌ಗಳಷ್ಟು (ಅಂದರೆ ನಮ್ಮ ಸಾಮಾನ್ಯ ವಿದ್ಯುತ್ ದೀಪ ಬೆಳಗಲು ಬಳಸುವ ಐದು ಆಂಪೀರ್ ಶಕ್ತಿಗಿಂತಲೂ ಎರಡು ಸಹಸ್ರ ಪಟ್ಟು ಕಡಿಮೆ) ಏರಿದೊಡನೆಯೆ ತಲೆಯೊಳಗೆ ಪುಟ್ಟ ಅಲುಗಾಟವಾಗುತ್ತದೆ.  ಒಂದೆರಡು ನಿಮಿಷಗಳ ನಂತರ ನಾಲಿಗೆಗೆ ಲೋಹ ನೆಕ್ಕಿದ ಅನುಭವವಾಗುತ್ತದೆ.  ಇದೀಗ ಥೇಟ್ ಬಿಸಿ ಹಾಗೂ ಸ್ಟ್ರಾಂಗ್ ಕಾಫಿ ಕುಡಿದವರಂತೆ ಡೇವಿಡ್ ಚೇತನಗೊಳ್ಳುತ್ತಾರೆ.  ಕಂಪ್ಯೂಟರ್ ತೆರೆಯ ಮೇಲಿನ ಬುದ್ಧಿವಂತಿಕೆಯ ಆಟಗಳನ್ನು ಸರಸರನೆ ಆಡುತ್ತಾರೆ.  ಹಣ ಗೆಲ್ಲುವ ಅಥವಾ ಸೋಲುವ ಆ ಸರಣಿ ಆಟಗಳನ್ನು ಒಂದು ನಿರ್ದಿಷ್ಟ ವಿನ್ಯಾಸದಲ್ಲಿ ರೂಪಿಸಲಾಗಿರುತ್ತದೆ.  ಅದರ ಕಲಸು-ಮೇಲೋಗರದಲ್ಲಿ ಎದ್ದು ಬರುವ ಹೊಸ ಆಟ, ಹಿಂದೆ ಆಡಿದ್ದೆ?  ಆ ಸಂದರ್ಭದಲ್ಲಿ ಯಾವ ನಿರ್ಧಾರ ಸೋಲು ಅಥವಾ ಗೆಲುವನ್ನು ತಂದುಕೊಟ್ಟಿತ್ತು?  ಹೀಗೆ ಕ್ಷಿಪ್ರ ವೇಗದಲ್ಲಿ ಇಂಥವುಗಳನ್ನು ನೆನಪಿಟ್ಟುಕೊಂಡು ಸಮಸ್ಯೆಗಳನ್ನು ಬಿಡಿಸುವ ಸವಾಲು ಅವರ ಮುಂದಿತ್ತು.  ಮಿದುಳಿಗೆ ವಿದ್ಯುತ್ ಪೂರೈಕೆಯಾಗುತ್ತಿದ್ದ ಸಮಯದಲ್ಲಿ ಗೆಲ್ಲುತ್ತಾ ಬಂದ ಡೇವಿಡ್, ಸಂಪರ್ಕ ಕಡಿದೊಡನೆಯೆ ಸೋಲುತ್ತಾ ಬಂದರು.  ವಿದ್ಯುತ್ ಸಂಪರ್ಕವಿದ್ದಾಗ ಕಷ್ಟದ ಆಟಗಳನ್ನು ಗೆಲ್ಲುತ್ತಿದ್ದವರು, ಸಂಪರ್ಕ ಇಲ್ಲದಿರುವಾಗ ಸುಲಭದ ಆಟಗಳಲ್ಲಿಯೂ ಸೋತರು.  ಮರುದಿನ ಸುಖವಾದ ನಿದ್ರೆಯ ನಂತರ ಡೇವಿಡ್ ಮತ್ತೆ ಪ್ರಯೋಗಶಾಲೆಗೆ ಹಿಂದಿರುಗುತ್ತಾರೆ.  ಆತ್ಮವಿಶ್ವಾಸದಿಂದ ಅದೇ ಆಟಗಳನ್ನು ಆಡಿ ಮತ್ತಷ್ಟು ಗೆಲುವು ಸಾಧಿಸುತ್ತಾರೆ.  ಹೀಗೆ ವಿವಿಧ ಪ್ರಮಾಣದ ವಿದ್ಯುತ್ ಅನ್ನು ವಿವಿಧ ಭಾಗಗಳಿಗೆ ಹಾಯಿಸಿಕೊಂಡು ಒಂದು ದಿವ್ಯ ಅನುಭವವೊಂದನ್ನು ಪಡೆದ ಡೇವಿಡ್ ವಿಜ್ಞಾನ ಪತ್ರಿಕೆಗಳಿಗೆ ಸುಂದರ ಭಾಷ್ಯವೊಂದನ್ನು ಬರೆದಿದ್ದಾರೆ.  ಡೇವಿಡ್ ಇಷ್ಟಕ್ಕೇ ಸುಮ್ಮನಾಗುವವರಲ್ಲ.  ನಿದ್ರಾಹೀನತೆ ಹಾಗೂ ಮಿದುಳಿಗೆ ಸಂಬಂಧಿಸಿದ ನರದೌರ್ಬಲ್ಯಗಳಿಗೆಂದು ಸೃಷ್ಟಿಯಾದ ವಿವಿಧ ಮದ್ದುಗಳನ್ನು ಸಹಾ ಸೇವಿಸಿ ನೋಡಿದ್ದಾರೆ.  ಇಂಥ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಂಡ ಸಮಯದಲ್ಲಿ ತಮಗಾದ ಅನುಭವಗಳು, ಈ ಪರೀಕ್ಷೆಗಳ ಸಾಧಕ-ಬಾಧಕಗಳ ಬಗ್ಗೆ ವಿಜ್ಞಾನ ಲೇಖನಗಳನ್ನು ಬರೆದಿದ್ದಾರೆ.&lt;br /&gt;&lt;br /&gt;ಪತ್ರಕರ್ತರಿಗಿರಬೇಕಾದ ಅಧ್ಯಯನ, ಕುತೂಹಲ, ಅನುಭವಗಳಿಗೆ ತಾವೇ ಭಾಗಿಯಾಗುವ ಧೈರ್ಯ ಜತೆಗೆ ಅತ್ಯುತ್ತಮ ಭಾಷೆ ಡೇವಿಡ್ ಅವರಲ್ಲಿ ಧಾರಾಳವಾಗಿದೆ.  ‘ಅಮೆರಿಕನ್ ಅಸೋಸಿಯೇಷನ್ ಫಾರ್ ದ ಅಡ್ವಾನ್ಸ್‍ಮೆಂಟ್ ಆಫ್ ಸೈನ್ಸಸ್’ ಎಂಬ ವಿಜ್ಞಾನದ ಔನ್ನತ್ಯಕ್ಕಾಗಿ ಇರುವ ಜಗನ್ಮಾನ್ಯ ಅಮೆರಿಕ ಸಂಘಟನೆ ಇವರಿಗೆ ಕ್ರಿ.ಶ.2003ರ ವಾರ್ಷಿಕ ಪುರಸ್ಕಾರ ನೀಡಿದೆ.  ಅತ್ಯುನ್ನತ ಮಟ್ಟದ ವಿಜ್ಞಾನ ಸಂಶೋಧಕರೊಂದಿಗೆ ಡೇವಿಡ್ ಅವರಿಗೆ ಅತ್ಯುತ್ತಮ ವಿಜ್ಞಾನ ಲೇಖಕ ಪ್ರಶಸ್ತಿಯನ್ನು ನೀಡಲಾಗಿತ್ತು.  ಮೆಸಾಶ್ಯುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ - ಎಂ.ಐ.ಟಿ. ಕ್ರಿ.ಶ.2006 ರ ಸರ್ವಶ್ರೇಷ್ಠ ವಿಜ್ಞಾನ ಲೇಖನ ಪುರಸ್ಕಾರವನ್ನು&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_WOq6aPUeAO4/RohZ3_SerfI/AAAAAAAAAME/iix9mUeHUHg/s1600-h/Masterminds.gif"&gt;&lt;img style="margin: 0pt 0pt 10px 10px; float: right; cursor: pointer;" src="http://4.bp.blogspot.com/_WOq6aPUeAO4/RohZ3_SerfI/AAAAAAAAAME/iix9mUeHUHg/s200/Masterminds.gif" alt="" id="BLOGGER_PHOTO_ID_5082410997904223730" border="0" /&gt;&lt;/a&gt; ಡೇವಿಡ್ ಅವರಿಗೆ ನೀಡಿತ್ತು.  ಅವರ ತೀರಾ ಇತ್ತೀಚಿನ ಪುಸ್ತಕ ‘ಮಾಸ್ಟರ್‌ಮೈಂಡ್ಸ್: ಜೀನಿಯಸ್, ಡಿಎನ್‍ಎ ಆಂಡ್ ದ ಕ್ವೆಸ್ಟ್ ಟು ರೀರೈಟ್ ಲೈಫ್’ಗೆ ಅತಿ ಹೆಚ್ಚಿನ ಪುರಸ್ಕಾರಗಳು ಸಂದಿವೆ.  ಇಂದಿಗೂ ಅದೊಂದು ಬೆಸ್ಟ್‍ಸೆಲ್ಲರ್ ಆಗಿದೆ.  ಅದಕ್ಕೂ ಮುನ್ನ ಅವರು &lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_WOq6aPUeAO4/RohZSvSerdI/AAAAAAAAAL0/jFH6HyARjZE/s1600-h/Calendar.gif"&gt;&lt;img style="margin: 0pt 10px 10px 0pt; float: left; cursor: pointer;" src="http://3.bp.blogspot.com/_WOq6aPUeAO4/RohZSvSerdI/AAAAAAAAAL0/jFH6HyARjZE/s200/Calendar.gif" alt="" id="BLOGGER_PHOTO_ID_5082410357954096594" border="0" /&gt;&lt;/a&gt;‘ಕ್ಯಾಲೆಂಡರ್’ ಬಗ್ಗೆ ಬರೆದ ವಿಶ್ಲೇಷಣಾತ್ಮಕ ಪುಸ್ತಕ ಹತ್ತೊಂಬತ್ತು ಭಾಷೆಗಳಲ್ಲಿ ಪ್ರಕಟವಾಗಿದ್ದು, ಹದಿಮೂರು ದೇಶಗಳಲ್ಲಿ ಅತಿ ಹೆಚ್ಚು ಮಾರಾಟಗೊಂಡ ವಿಜ್ಞಾನ ಪುಸ್ತಕವೆಂಬ ಹೆಗ್ಗಳಿಕೆ ಪಡೆದಿದೆ. &lt;br /&gt;&lt;br /&gt;ಮೊಝಾರ್ಟ್ ಸಂಗೀತ ಮೇಳ ರಚಿಸುವಷ್ಟೇ ಕಷ್ಟದ ಅಥವಾ ಸುಲಭದ ಕೆಲಸ ಭರಪೂರ ಗಣಿತ ಸಮಸ್ಯೆಗಳ ಕ್ವಾಂಟಮ್ ಮೆಕ್ಯಾನಿಕ್ಸ್ ಅರ್ಥ ಮಾಡಿಕೊಳ್ಳುವುದು.  ಹೀಗೆನ್ನುವ ಡೇವಿಡ್ ಯಾವ ಮಿದುಳು ಉತ್ತೇಜಕಗಳ ಅವಶ್ಯವಿಲ್ಲದೆಯೆ ಕ್ಲಿಷ್ಟ ಕೆಲಸಗಳನ್ನು ನಿಭಾಯಿಸುವ ಸಮರ್ಥರು.  ನಮ್ಮಂಥ ಪಾಮರರ ಮಿದುಳನ್ನು ಡೇವಿಡ್ ಅವರ ಮಟ್ಟಿಗೇರಿಸುವಂಥ ಗ್ಯಾಜೆಟ್‍ಗಳನ್ನು ವಾಸರ್‌ಮಾನ್ ಸೃಷ್ಟಿಸಲಿ ಎಂದು ಹಾರೈಸೋಣವೆ?    &lt;br /&gt;&lt;br /&gt;&lt;span style="font-style: italic;"&gt;&lt;span style="font-weight: bold;"&gt;(ಕೃಪೆ: ವಿಜಯ ಕರ್ನಾಟಕ, 02-07-2007)&lt;/span&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/752423363868781697-5915063730585932432?l=netnota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://netnota.blogspot.com/feeds/5915063730585932432/comments/default' title='Post Comments'/><link rel='replies' type='text/html' href='http://www.blogger.com/comment.g?blogID=752423363868781697&amp;postID=5915063730585932432' title='6 Comments'/><link rel='edit' type='application/atom+xml' href='http://www.blogger.com/feeds/752423363868781697/posts/default/5915063730585932432'/><link rel='self' type='application/atom+xml' href='http://www.blogger.com/feeds/752423363868781697/posts/default/5915063730585932432'/><link rel='alternate' type='text/html' href='http://netnota.blogspot.com/2007/07/blog-post.html' title='ಬುರುಡೆಗೇರಿದ ಸರಳು; ಚುರುಕುಗೊಳಿಸೀತೆ ಮಿದುಳು?'/><author><name>HNS</name><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_WOq6aPUeAO4/SdR5qYZ87xI/AAAAAAAAAWg/cXIYJSqE8Z4/S220/sudhi1.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_WOq6aPUeAO4/RohYxfSercI/AAAAAAAAALs/VAWgUBcd2WI/s72-c/duncan.jpg' height='72' width='72'/><thr:total>6</thr:total></entry><entry><id>tag:blogger.com,1999:blog-752423363868781697.post-6554711306188016783</id><published>2007-06-25T07:34:00.000+05:30</published><updated>2007-06-29T21:44:35.109+05:30</updated><title type='text'>ಮಕ್ಕಳ ಮನಸ್ಸಿನಲ್ಲೀಗ ಸುನಿತಾಳಂತೆ ಹಾರುವ ಕನಸು!</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_WOq6aPUeAO4/Rn8kg3qiU7I/AAAAAAAAAK0/x6OuKwZkU3A/s1600-h/sunita+williams.jpg"&gt;&lt;img style="margin: 0pt 10px 10px 0pt; float: left; cursor: pointer;" src="http://3.bp.blogspot.com/_WOq6aPUeAO4/Rn8kg3qiU7I/AAAAAAAAAK0/x6OuKwZkU3A/s200/sunita+williams.jpg" alt="" id="BLOGGER_PHOTO_ID_5079819051813983154" border="0" /&gt;&lt;/a&gt;&lt;span style="font-weight: bold;font-size:180%;" &gt;ಶ&lt;/span&gt;ನಿವಾರ ಮುಂಜಾನೆ ಸುನಿತಾ ವಿಲಿಯಮ್ಸ್ ಸುರಕ್ಷಿತವಾಗಿ ಧರೆಗೆ ಮರಳಿದ್ದಾರೆ - ಅಲ್ಲಿಯ ತನಕ ಕಾಡಿದ್ದ ದೊಡ್ಡದೊಂದು ಆತಂಕಕ್ಕೆ ಮಂಗಳ ಹಾಡಿದ್ದಾರೆ.  ಬಾಹ್ಯಾಂತರಿಕ್ಷದಲ್ಲಿ  ಭಾರತೀಯ ಮೂಲದ ಈ ಹೆಣ್ಣಿನ ಅಪ್ರತಿಮ ಸಾಧನೆಯನ್ನು ಜಗತ್ತಿನ ಎಲ್ಲ ಮಾಧ್ಯಮಗಳು ಇನ್ನೂ ಕೊಂಡಾಡುತ್ತಿವೆ.  ಮಾಧ್ಯಮಗಳ ಇಂಥದೊಂದು ‘ಅತಿರೇಕ-ಪ್ರಚಾರ’ದಿಂದ ಬೆಂಗಳೂರು ಬಿಡಿ, ಕರ್ನಾಟಕದ ಸಣ್ಣ ಊರಿನ ಶಾಲಾ ಮಕ್ಕಳಲ್ಲಿಯೂ ಸಹಾ ತಾನೊಬ್ಬ ಕಲ್ಪನಾ ಚಾವ್ಲಾ ಅಥವಾ ಸುನಿತಾ ವಿಲಿಯಮ್ಸ್ ಆಗಬೇಕೆಂಬ ಹಂಬಲ ಉಂಟಾಗಿದೆ.  ಸುನಿತಾ ಅವರಿಗೆ ಸಿಕ್ಕಂಥ ಅವಕಾಶಗಳು ಕೋಟಿಗೊಬ್ಬರಿಗೆ ಮಾತ್ರ ಸಿಗುವಂಥದು.  ಇರಲಿ, ಅಂತರಿಕ್ಷ ಯಾನ ಕೈಗೊಳ್ಳಲಾಗದಿದ್ದರೂ ನಮ್ಮ ಬಾಹ್ಯಾಂತರಿಕ್ಷದ ಆವರಣದಲ್ಲಿ ಏನೆಲ್ಲಾ ಸೋಜಿಗಗಳು ಜರಗುತ್ತಿವೆ?  ಅವುಗಳನ್ನು ಅರಿಯಲು ಜಗತ್ತಿನ ವೈಮಾಂತರಿಕ್ಷ ವಿಜ್ಞಾನಿಗಳು ಎಂಥ ಕಸರತ್ತುಗಳನ್ನು ನಡೆಸುತ್ತಿದ್ದಾರೆ?  ಅಂಥ ಕಸರತ್ತುಗಳಿಗೆಂದೇ ಸೃಷ್ಟಿಯಾಗುವ ಎಂಜಿನೀರಿಂಗ್ ವಿಸ್ಮಯಗಳು ಎಂಥವು?  ಒಟ್ಟಾರೆ ಈ ಎಲ್ಲ ಪರಿಶ್ರಮಗಳ ಫಲ ಜನಸಾಮಾನ್ಯರಿಗೆ ಲಭ್ಯವಾಗುವುದೆ? ... ಹೀಗೆ ಮಕ್ಕಳ ಮನಸ್ಸಿನಲ್ಲಿ ಒಂದಷ್ಟು ಪ್ರಶ್ನೆಗಳು ಏಳುವಂತಾದರೆ, ಸುನಿತಾ ವಿಲಿಯಮ್ಸ್ ಸುಖಾಗಮನದ ಬಗ್ಗೆ ಅತಿಯಾದ ಪ್ರಚಾರ ನೀಡಿದ ಇದೇ ಮಾಧ್ಯಮಗಳಿಗೆ ನಾವು ಅತಿರೇಕದ್ದೇ ಆದ ಪ್ರಶಂಸೆಗಳನ್ನು ನೀಡೋಣ.&lt;br /&gt;&lt;br /&gt;ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ನಡೆಸಿದ ಇತ್ತೀಚಿನ ಪ್ರಯೋಗಗಳ ಬಗ್ಗೆ ಕನ್ನಡದ ಮಾಧ್ಯಮಗಳೂ ಸೇರಿದಂತೆ ಜಗತ್ತಿನ ಎಲ್ಲ ಮಾಧ್ಯಮಗಳು ಅತಿರೇಕ-ಪ್ರಚಾರವನ್ನು ನೀಡಿದವು.  ಇಂಥ ಪ್ರಚಾರವನ್ನು ಆಗಿಂದಾಗಲೇ ನೇರ ಪ್ರಸಾರಗಳ ಮೂಲಕ ನೀಡಲು ಇಂದು ಸಾಧ್ಯವಾಗಿರುವುದು ಬಾಹ್ಯಾಕಾಶ ಸಂಶೋಧನೆಗಳಿಂದಲೇ.  ನಿಮ್ಮ ಕೈಯ್ಯಲ್ಲಿರುವ ಪತ್ರಿಕೆಯಾಗಲಿ, ಸ್ಥಿರ ಮತ್ತು ಮೊಬೈಲ್ ದೂರವಾಣಿಯಾಗಲಿ, ರೇಡಿಯೊ ಆಗಲಿ, ಟೆಲಿವಿಶನ್ ಆಗಲಿ, ಅಂತರ್ಜಾಲ ಸಂಪರ್ಕವಾಗಲಿ, ಅದಕ್ಕೆ ಜೋಡಿಯಾಗಿರುವ ಗಣಕಯಂತ್ರವಾಗಲಿ, ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದಾದ ಸಂಪರ್ಕ ವ್ಯವಸ್ಥೆಗಳೆಲ್ಲದರ ಸುಗಮ ಕಾರ್ಯನಿರ್ವಹಣೆಯ ಹಿನ್ನೆಲೆಯಲ್ಲಿ ಅಂತರಿಕ್ಷದಲ್ಲಿ ಸುತ್ತುತ್ತಿರುವ ಕೃತಕ ಉಪಗ್ರಹಗಳಿವೆ.  ಈ ಉಪಗ್ರಹಗಳನ್ನು ವಿನ್ಯಾಸಗೊಳಿಸುವುದರಿಂದ ಹಿಡಿದು ಅವುಗಳನ್ನು ಉಡ್ಡಯಿಸಲು ರಾಕೆಟ್ ವಾಹನಗಳನ್ನು ಸೃಷ್ಟಿಸುವ ತನಕ ಅಗತ್ಯ ವ್ಯವಸ್ಥೆ-ಸಾಮಗ್ರಿಗಳನ್ನು ಕಲೆ ಹಾಕಿದ್ದು ವಿಮಾನ ಮತ್ತು ಅಂತರಿಕ್ಷ ಕ್ಷೇತ್ರದ ಎಂಜಿನೀರ್‌ಗಳು.  ತಂತುಗಳ ಮೂಲಕವಷ್ಟೇ ಕಾರ್ಯನಿರ್ವಹಿಸುತ್ತಿದ್ದ ದೂರವಾಣಿ ಯಂತ್ರಗಳ ವ್ಯಾಪ್ತಿಯನ್ನು ನಿಸ್ತಂತು ಜಾಲಗಳ ಮೂಲಕ ವಿಸ್ತರಿಸಲು ಉಪಗ್ರಹಗಳು ನೆರವಾದವು.  ಬೆಳೆದು ನಿಂತ ದೂರವಾಣಿ ಜಾಲದ ಮೂಲಕ ಫ್ಯಾಕ್ಸ್, ಇಂಟರ್‌ನೆಟ್ ಮತ್ತಿತರ ಸೌಕರ್ಯಗಳು ಬಹುತೇಕರನ್ನು ತಲುಪಿದವು.  ಟೆಲಿವಿಶನ್ ಹಾಗೂ ರೇಡಿಯೊಗಳಂತೂ ಯಾರ ಎಣಿಕೆಗೂ ಸಿಗದಷ್ಟು ವೇಗದಲ್ಲಿ ಬೆಳೆದವು.  ಇತ್ತೀಚೆಗಂತೂ ಇಂಟರ್‌ನೆಟ್ ನೆರವಿನ ಟೀವಿ ಹಾಗೂ ರೇಡಿಯೊ ಪ್ರಸಾರ ಜಗತ್ತಿನ ಎಲ್ಲೆಗಳನ್ನು ಭೇದಿಸಿವೆ.  ಹೀಗೆ ಮಾಧ್ಯಮಗಳ ಅತಿರೇಕದ ಬೆಳವಣಿಗೆಗೆ ಸಂಪನ್ಮೂಲಗಳನ್ನು ಒದಗಿಸಿದ್ದೇ ಬಾಹ್ಯಾಂತರಿಕ್ಷ ಕ್ಷೇತ್ರ.  ಅಂದರೆ ಜನಸಾಮಾನ್ಯರನ್ನು ಮುಟ್ಟಿ-ತಟ್ಟಿ-ಬಡಿದೆಬ್ಬಿಸುವ ಎಲ್ಲ ಮಾಧ್ಯಮಗಳ ಯಶಸ್ಸಿನ ಹಿನ್ನೆಲೆಯಲ್ಲಿರುವುದು ವಿಮಾನ ಹಾಗೂ ಅಂತರಿಕ್ಷ ವಿಜ್ಞಾನ.  ಬಾಹ್ಯಾಂತರಿಕ್ಷ ಕ್ಷೇತ್ರದ ಎಲ್ಲ ಚಟುವಟಿಕೆಗಳೂ ಒಮ್ಮೆಲೆ ಸ್ಥಗಿತವಾದರೆ ನಮ್ಮೆಲ್ಲರ ನಿತ್ಯದ ಕಾರ್ಯಾಚರಣೆಗಳನ್ನು ಊಹಿಸಿಕೊಳ್ಳುವುದು ಕಷ್ಟ.&lt;br /&gt;&lt;br /&gt;ಈ ಭೂಮಿಯ ಮೇಲೇ ಇಷ್ಟೊಂದು ಬಗೆಹರಿಯದ ಸಮಸ್ಯೆಗಳಿರುವಾಗ ನಾವ್ಯಾಕೆ ಬಾಹ್ಯಾಂತರಿಕ್ಷಕ್ಕೆ ಹಾರಿ ಮತ್ತಷ್ಟು ತೊಂದರೆಗಳನ್ನು ಮೈಗೆಳೆದುಕೊಳ್ಳಬೇಕು?  ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಿ ಅಮೆರಿಕದವರೊ, ಯುರೋಪ್ ದೇಶಗಳವರೊ, ಕೊನೆಗೆ ಜಪಾನ್, ಬ್ರೆಝಿಲ್, ಚೀನಾ, ಭಾರತ ಮತ್ತಿತರ ರಾಷ್ಟ್ರಗಳು ತೆಪ್ಪಗಿದ್ದಿದ್ದರೆ ಇಂದಿನ ಆಧುನಿಕ ಶೈಲಿಯ ಜೀವನ ಮಟ್ಟ ಸಾಧಿಸಲಾಗುತ್ತಿರಲಿಲ್ಲ.  ಜತೆಗೆ ಸುರಕ್ಷೆ, ಆರ್ಥಿಕ ಪ್ರಾಬಲ್ಯ, ಒಟ್ಟಾರೆ ಉತ್ಪಾದಕತೆಯನ್ನು ಈ ಮಟ್ಟಕ್ಕೆ ಏರಿಸಿಕೊಳ್ಳಲಾಗುತ್ತಿರಲಿಲ್ಲ.  ಮೇಲಿನ ಸಾಲುಗಳಲ್ಲಿ ಬಾಹ್ಯಾಂತರಿಕ್ಷ ಯೋಜನೆಗಳ ಪ್ರತ್ಯಕ್ಷ ಫಲಗಳ ಬಗ್ಗೆ ಮಾತ್ರ ಓದಿದ್ದೀರಿ.  ಪರೋಕ್ಷ ಫಲಗಳನ್ನು ಪಟ್ಟಿ ಮಾಡುತ್ತಾ ಹೊರಟರೆ ಈ ಅಂಕಣ ಲೇಖನವು ತನ್ನ ಗಾತ್ರವನ್ನು ಮೀರಿಬಿಡಬಹುದು.  ಎಲ್ಲವನ್ನೂ ಕರಾರುವಾಕ್ಕಾಗಿ ಲೆಕ್ಕ ಹಾಕುವ ಅಮೆರಿಕದಲ್ಲಿ ಈ ಬಗ್ಗೆ ಒಂದು ಅಧ್ಯಯನವನ್ನು ನಡೆಸಲಾಗಿದೆ.  ದೇಶದ ಒಟ್ಟಾರೆ ಮುಂಗಡಪತ್ರದಲ್ಲಿ ಪ್ರತಿಶತ ಒಂದಕ್ಕೂ ಕಡಿಮೆ ಹಣವನ್ನು ಬಾಹ್ಯಾಕಾಶ ಸಂಶೋಧನೆಗಳಿಗೆ ವೆಚ್ಚ ಮಾಡಲಾಗುತ್ತದೆ.  ಪ್ರತಿ ಡಾಲರ್ ಒಟ್ಟಾರೆ ವೆಚ್ಚದಲ್ಲಿ ಬಾಹ್ಯಾಕಾಶದ ಪಾಲು ಒಂದು ಪೆನ್ನಿಗೂ ಕಡಿಮೆ (ಒಂದು ಡಾಲರ್ = ನೂರು ಪೆನ್ನಿಗಳು).  ಆದರೆ ಬಾಹ್ಯಾಕಾಶ ಸಂಶೋಧನೆಗಳಿಗೆ ಖರ್ಚು ಮಾಡುವ ಪ್ರತಿಯೊಂದು ಪೆನ್ನಿಗೂ ಸಿಗುತ್ತಿರುವ ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರತಿಫಲ ಏಳು ಪೆನ್ನಿಗಳಿಗೂ ಹೆಚ್ಚು!  ಇದರಲ್ಲಿ ಬಾಹ್ಯಾಕಾಶ ಯೋಜನೆಗಳಿಂದಾಗಿ ಹೆಚ್ಚುವರಿಯಾದ ಉದ್ಯೋಗಾವಕಾಶಗಳು ಹಾಗೂ ಆರ್ಥಿಕ ಅಭಿವೃದ್ಧಿಯಿಂದಾಗಿ ಹೆಚ್ಚಳವಾಗುವ ತೆರಿಗೆಗಳನ್ನು ಸೇರಿಸಿಕೊಳ್ಳಲಾಗಿದೆ.  ಅಮೆರಿಕದಂಥ ಅಮೆರಿಕ ದೇಶವೇ ಒಪ್ಪಿಕೊಂಡಿರುವಂತೆ ಖರ್ಚಿನ ಏಳು ಪಟ್ಟು ಆದಾಯ ತರುವ ಇಂಥ ವಹಿವಾಟು ಜಗತ್ತಿನಲ್ಲಿ ಮತ್ತೊಂದಿಲ್ಲ.&lt;br /&gt;&lt;br /&gt;ಸಣ್ಣದೊಂದು ಉದಾಹರಣೆಯನ್ನು ತೆಗೆದುಕೊಳ್ಳೋಣ.  ಅಂತರಿಕ್ಷದ ಕಣ್ಣು ಎಂದೇ ಭಾವಿಸಲಾದ ಬಾಹ್ಯಾಕಾಶದಲ್ಲಿ ತೇಲಾಡುತ್ತಿರುವ ದೂರದರ್ಶಕದ ಹೆಸರು ‘ಹಬಲ್’.  ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ತೊಂದರೆಗಳಿವೆ, ವ್ಯರ್ಥದ ಪ್ರಯೋಗವೆಂಬ ಆಪಾದನೆ ಈ ಯೋಜನೆಯ ಮೇಲಿತ್ತು.  ಆದರೂ ಭೂಮಿಯ ಮೇಲಿಂದ ತೆಗೆಯುತ್ತಿದ್ದ ಬಾಹ್ಯಾಕಾಶ ಚಿತ್ರಗಳಿಗಿಂತಲೂ ಹೆಚ್ಚು ನಿಖರವಾದ ಹಾಗೂ ಸ್ಪಷ್ಟವಾದ ಚಿತ್ರಗಳನ್ನು ‘ಹಬಲ್’ ತೆಗೆದು ಕಳುಹಿಸುತ್ತಿತ್ತು.  ‘ನಾಸಾ’ದ ಬಾಹ್ಯಾಕಾಶ ಶಟಲ್ ಪಯಣಗಳಲ್ಲಿ ಪರಿಣತ ವಿಜ್ಞಾನಿಗಳು ಖುದ್ದಾಗಿ ಈ ದೂರದರ್ಶಕದತ್ತ ತೆರಳಿ ನ್ಯೂನತೆಗಳನ್ನು ಸರಿಪಡಿಸಿದ್ದರು.  ಇದೀಗ ಹಿಂದೆಂದಿಗಿಂತಲೂ ಉತ್ತಮವಾದ ಅಂತರಿಕ್ಷ ವಿದ್ಯಮಾನಗಳ ಚಿತ್ರಣ ನಮಗೀಗ ದೊರೆಯುತ್ತಿದೆ.  ‘ಹಬಲ್’ ದೂರದರ್ಶಕ ಮತ್ತು ಅಂಥ ಅನೇಕ ದೃಶ್ಯಗ್ರಹಣ ಸಾಧನಗಳಿಗೆಂದೇ ‘ಚಾರ್ಜ್ ಕಪಲ್ಡ್ ಡಿವೈಸ್ (ಸಿ.ಸಿ.ಡಿ.)’ ಎಂಬ ಎಲೆಕ್ಟ್ರಾನಿಕ್ ಬಿಡಿಭಾಗವನ್ನು ಒಳಗೊಂಡ ಕಂಪ್ಯೂಟರ್ ಚಿಪ್ ಒಂದನ್ನು ಅಭಿವೃದ್ಧಿಪಡಿಸಲಾಗಿತ್ತು.  ಈ ಸಿ.ಸಿ.ಡಿ. ಚಿಪ್‍ಗಳಿಗೆ ವಸ್ತುವೊಂದರ ಮೇಲ್ಮೈ ಹಾಗೂ ಆಳದಲ್ಲಿನ ಅತ್ಯಂತ ಸೂಕ್ಷ್ಮ ವ್ಯತ್ಯಾಸ ಹಾಗೂ ವ್ಯತ್ಯಯಗಳನ್ನು ಗುರುತಿಸಬಲ್ಲ ಸಾಮರ್ಥ್ಯವಿದೆ.  ಇದೀಗ ‘ಸ್ತನ ಕ್ಯಾನ್ಸರ್’ ತಪಾಸಣೆಗೆಂದು ಹೊರತೆಗೆದ ಅಂಗಾಂಶಗಳ ಸೂಕ್ಷ್ಮ ಪರಿಶೀಲನೆಗೆ ಈ ಚಿಪ್ ಒಳಗೊಂಡಿರುವ ಯಂತ್ರಗಳನ್ನು ಬಳಸಲಾಗುತ್ತಿದೆ.  ಕ್ಯಾನ್ಸರ್ ತಗಲಿರುವ ಅಥವಾ ಮುಂದೆ ತಗಲಬಹುದಾದ ಅಂಗಾಂಶಗಳ ಹಾಗೂ ಆರೋಗ್ಯವಂತ ಅಂಗಾಂಶಗಳ ನಡುವಿನ ಸೂಕ್ಷ್ಮಾತಿ ಸೂಕ್ಷ್ಮ ವ್ಯತ್ಯಾಸಗಳನ್ನು ಸಿ.ಸಿ.ಡಿ. ಚಿಪ್ ಯುಕ್ತ ತಪಾಸಣಾ ಸಾಧನ ಗುರುತಿಸಬಲ್ಲದು.  ಜತೆಗೆ ಅತ್ಯುತ್ತಮ ಚಿತ್ರವೊಂದನ್ನು ತೆಗೆದುಕೊಡಬಲ್ಲದು.  ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕೆ? ಬೇಡವೆ? ಎಂದು ನಿರ್ಧರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.  ಅನಗತ್ಯ ಶಸ್ತ್ರಚಿಕಿತ್ಸೆಯ ಕಿರಿಕಿರಿಯಿಂದ ತಪ್ಪಿಸುವುದರ ಜತೆಗೆ ದುಬಾರಿ ಖರ್ಚುಗಳಿಂದ ಮುಕ್ತಿಗೊಳಿಸುತ್ತದೆ.&lt;br /&gt;&lt;br /&gt;ಕಂಪ್ಯೂಟರ್ ಕ್ಷೇತ್ರದಲ್ಲಂತೂ ಬಾಹ್ಯಾಕಾಶ ಯೋಜನೆಗಳದೇ ಸಿಂಹಪಾಲು.  ಅತ್ಯಾಧುನಿಕ ಕಂಪ್ಯೂಟರ್ ಚಿಪ್‍ಗಳು, ವಿಮಾನ ನಿಯಂತ್ರಕ ಯಂತ್ರಾಂಶ-ತಂತ್ರಾಂಶಗಳು, ಹಗುರ ತೂಕದ ಸೀ.ಡಿ.ಗಳು, ರೋಬಾಟ್‍ಗಳು, ಕೃತಕ ಬುದ್ಧಿಮತ್ತೆಯ ಯಂತ್ರಗಳು, ಲೇಸರ್ ನೆರವಿನ ತಪಾಸಣಾ ಯಂತ್ರಗಳು ಮೊದಲು ಸೃಷ್ಟಿಯಾಗಿದ್ದು ಬಾಹ್ಯಾಕಾಶ ಯೋಜನೆಗಳಿಗೆಂದೇ.  ಇನ್ನು ಮನೆಬಳಕೆಯ ಸಾಧನಗಳಾದ ಆಘಾತ ನೀಡದ ಹೆಲ್ಮೆಟ್‍ಗಳು, ಸಪಾಟಾದ ತೆರೆಯ ಟೆಲಿವಿಶನ್‍ಗಳು, ಹೆಚ್ಚು ಕಾಲ ಬಾಳಿಕೆ ಬರುವ - ಹಗುರವಾದ - ಪುಟ್ಟದಾದ - ಅಗ್ಗದ ಬ್ಯಾಟರಿಗಳು, ಶೀತಲೀಕರಣದ ಮೂಲಕ ಆಹಾರವನ್ನು ಒಣಗಿಸುವ ಸಾಧನ, ವಿಕಿರಣವನ್ನು ಎದುರಿಸಬಲ್ಲ ತಂಪು ಕನ್ನಡಕಗಳು, ಗೀಚಾಗದ ಕನ್ನಡಕ ಗಾಜುಗಳು, ಹೆಚ್ಚು ಕಾಲ ಕಾಪಾಡಬಹುದಾದ ರುಚಿಯುಳಿಸಿಕೊಂಡ ಆಹಾರಗಳು ... ಹೀಗೆ ನೂರಾರು ಬಗೆಯ ತಂತ್ರಜ್ಞಾನಗಳು ಮೊದಲು ಅಭಿವೃದ್ಧಿಯಾದದ್ದು ಬಾಹ್ಯಾಕಾಶ ಯೋಜನೆಗಳಲ್ಲಿನ ಬಳಕೆಗೆಂದು.&lt;br /&gt;&lt;br /&gt;ಬೆಂಕಿ, ವಿಕಿರಣ, ಶೀತಲ ವಾತಾವರಣ ರಕ್ಷಣೆಗೆ ಬಳಸುವ ಕವಚಗಳು, ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಯಂತ್ರಗಳು, ಶಬ್ದ ಮಾಲಿನ್ಯದಿಂದ ರಕ್ಷಿಸುವ ಸಾಧನಗಳು, ಬೆಂಕಿ ಗುರುತಿಸುವ ಸಾಧನಗಳು, ಪರಮಾಣು ವಿಕಿರಣ ಗುರುತಿಸುವ ಸಾಧನಗಳು, ಭೂಕಂಪ ಮಾಪಕಗಳು ಮೊದಲು ಬಳಕೆಗೆ ಬಂದದ್ದು ಬಾಹ್ಯಾಕಾಶ ಯೋಜನೆಗಳಲ್ಲಿ.  ಆರೋಗ್ಯ ತಪಾಸಣೆ ಹಾಗೂ ಅನಾರೋಗ್ಯ ಚಿಕಿತ್ಸೆಗಳಲ್ಲಂತೂ ಬಾಹ್ಯಾಕಾಶ ತಂತ್ರಜ್ಞಾನಗಳು ಸಾಕಷ್ಟು ಕೊಡುಗೆಗಳನ್ನು ನೀಡಿವೆ.  ಹೃದ್ರೋಗ ಚಿಕಿತ್ಸೆಗಳಲ್ಲಿ ಬಳಸುವ ಆಂಜಿಯೋಗ್ರಾಮ್, ಆಂಜಿಯೋಪ್ಲಾಸ್ಟಿ, ಕುಸಿಯುವ ನಾಳಗಳನ್ನು ಸದೃಢವಾಗಿಸುವ ‘ಸ್ಟೆಂಟ್’ಗಳು, ದೇಹದೊಳಗಣ ಚಿತ್ರವನ್ನು ವಿಕಿರಣ ರಹಿತವಾಗಿ ಪಡೆದುಕೊಳ್ಳಲು ಶಬ್ದ ತರಂಗಗಳನ್ನು ಬಳಸುವ ‘ಅಲ್ಟ್ರಾಸೌಂಡ್ ಸ್ಕ್ಯಾನಿಂಗ್’, ದೇಹದೊಳಗೆ ಕೂಡಿಸಬಹುದಾದ ಸಣ್ಣ-ಪುಟ್ಟ ಸಾಧನಗಳು, ಕೃತಕ ಉಸಿರಾಟ ಯಂತ್ರಗಳು, ಹೃದಯದ ಬಹುತೇಕ ಕೆಲಸಗಳನ್ನು ಮಾಡುವ ಯಂತ್ರಗಳು, ಮೂಳೆ ತಪಾಸಕಗಳು, ಕಣ್ಣಿನ ಪೊರೆ ತೆಗೆಯುವ ಯಂತ್ರಗಳು ... ಪಟ್ಟಿ ಬೆಳೆಯುತ್ತಾ ಹೋಗುತ್ತದೆ.  ಇನ್ನು ವಾಹನಗಳಿಗೆ ಅಗತ್ಯವಾದ ಹಗುರ ವಸ್ತುಗಳು, ಉತ್ತಮ ಇಂಧನ ಹಾಗೂ ತೈಲ, ಉನ್ನತ ಕಾರ್ಯಕ್ಷಮತೆಯ ಎಂಜಿನ್‍ಗಳು, ಅಪಘಾತ ರಕ್ಷಕ ಸಾಧನಗಳು, ಅಪಘಾತವಾದರೂ ಜೀವವನ್ನು ಉಳಿಸಲು ಪ್ರಯತ್ನಿಸುವ ವಾಹನ ಸಾಮಗ್ರಿಗಳು.. ನಮ್ಮೆಲ್ಲರ ನಿತ್ಯಬಳಕೆಗೆ ಬಂದಿವೆ.  ವಿಕಲ ಚೇತನರ ಕೃತಕ ಅಂಗಗಳು, ಊರುಗೋಲುಗಳು, ಅಗ್ಗದ ಪ್ಲಾಸ್ಟಿಕ್‍ಗಳು, ಮಿಶ್ರವಸ್ತುಗಳ ಕಟ್ಟಡ ಸಾಮಗ್ರಿಗಳು, ರಕ್ಷಣಾ ಕವಚಗಳು, ದೋಸೆಯ ಕಾವಲಿಗೆ ಹಚ್ಚುವ ಹಿಟ್ಟು ಅಂಟಿಕೊಳ್ಳದ ಲೇಪನಗಳೂ ಸೇರಿದಂತೆ ಅನೇಕ ಲೇಪನ, ಅಂಟು, ಬಣ್ಣಗಳು ಮೊದಲ ಬಾರಿಗೆ ಅಭಿವೃದ್ಧಿಯಾದದ್ದು ಬಾಹ್ಯಾಕಾಶ ಬಳಕೆಗಳಿಗೆ.&lt;br /&gt;&lt;br /&gt;ಮನುಕುಲದ ಒಳಿತಿಗಾಗಿ ನಡೆಸುವ ಅನೇಕ ಪ್ರಯೋಗಗಳಿಗೆ ಅನುವು ಮಾಡಿಕೊಡಲು ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ ಶೂನ್ಯ ಗುರುತ್ವಾಕರ್ಷಣೆಯ ನಿರ್ವಾತ ಪ್ರದೇಶದಲ್ಲಿದೆ.  ಇದರ ದುರಸ್ತಿ ಹಾಗೂ ನಿರ್ವಹಣೆಗೆಂದೇ ಆಗಿಂದಾಗ್ಗೆ ವಿಜ್ಞಾನಿಗಳ ತಂಡ ಬಾಹ್ಯಾಕಾಶ ಶಟಲ್‍ಗಳ ಮೂಲಕ ತೆರಳುತ್ತದೆ.  ಅಲ್ಲಿಯೇ ಬಹುಕಾಲ ಇರುವವರನ್ನು ಹಿಂದಕ್ಕೆ ತರಲು ಹಾಗೂ ಅವರ ಜಾಗಕ್ಕೆ ಮತ್ತಷ್ಟು ಜನರನ್ನು ರವಾನಿಸಲು ಈ ಯಾನಗಳು ನೆರವಾಗುತ್ತವೆ.  ಮೊನ್ನೆ ಧರೆಗೆ ಸುಖಾಗಮನವಾದ ‘ಅಂಟ್ಲಾಂಟಿಸ್’ನ ಗಗನಯಾನಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಹೊಸ ಸೌರಫಲಕಗಳನ್ನು ಸರಿಯಾದ ದಿಕ್ಕಿನಲ್ಲಿ ನೆಟ್ಟಿದ್ದಾರೆ.  ಮಡಚಿಹೋಗಿದ್ದ ಸೌರಫಲಕಗಳನ್ನು ಸರಿಪಡಿಸಿದ್ದಾರೆ.  ಕಂಪ್ಯೂಟರ್ ತೊಂದರೆಗಳಿಂದ ಆಮ್ಲಜನಕದ ಪೂರೈಕೆ ಕಡಿಮೆ, ಕಕ್ಷಾಪಥದ ಬದಲಾವಣೆ, ಅಸಮರ್ಪಕ ವಿದ್ಯುತ್ ಪೂರೈಕೆಗಳಿಂದ ಇನ್ನೇನು ಮುಚ್ಚೇ ಹೋಗಬಹುದಾಗಿದ್ದ ‘ರಶಿಯನ್ ಆವರಣ’ವನ್ನು ಮರುಸಜ್ಜುಗೊಳಿಸಿದ್ದಾರೆ. ಆರು ತಿಂಗಳುಗಳ ಕಾಲ ಅಲ್ಲೇ ಪ್ರಯೋಗಗಳನ್ನು ನಡೆಸುತ್ತಿದ್ದ ಸುನಿತಾ ವಿಲಿಯಮ್ಸ್ ಜಾಗಕ್ಕೆ ಕ್ಲೇ ಆಂಡರ್‌ಸನ್ ಅವರನ್ನು ಅಮೆರಿಕದ ಪ್ರತಿನಿಧಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇಳಿಸಿ ಬಂದಿದ್ದಾರೆ.&lt;br /&gt;&lt;br /&gt;ಈ ಯಶಸ್ವಿ ಸಾಹಸ ಯಾತ್ರೆಗೆ ಸಿಕ್ಕ ಅದ್ಭುತ ಮಾಧ್ಯಮ ಪ್ರಚಾರದಿಂದ ತಾವೊಬ್ಬ ‘ಸುನಿತಾ ವಿಲಿಯಮ್ಸ್’ ಆಗುವ ಕನಸು ಅನೇಕ ಶಾಲಾ ಮಕ್ಕಳಲ್ಲಿ ಉದ್ಭವಿಸಿದೆ.  ‘ನಾವು ಸದಾ ಕನಸು ಕಾಣಬೇಕು, ಆ ಕನಸುಗಳು ದೊಡ್ಡದಿರಬೇಕು’ ಎಂದು ಶಾಲಾ ಮಕ್ಕಳನ್ನು &lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_WOq6aPUeAO4/RoUvq_SeraI/AAAAAAAAALc/2O4TihTjPSk/s1600-h/Kalam.jpg"&gt;&lt;img style="margin: 0pt 10px 10px 0pt; float: left; cursor: pointer;" src="http://1.bp.blogspot.com/_WOq6aPUeAO4/RoUvq_SeraI/AAAAAAAAALc/2O4TihTjPSk/s200/Kalam.jpg" alt="" id="BLOGGER_PHOTO_ID_5081520170147425698" border="0" /&gt;&lt;/a&gt;ಪ್ರೇರೇಪಿಸುವ ಅಜ್ಜ ಅಬ್ದುಲ್ ಕಲಾಮ್ ಅವರೊಂದಿಗೆ ನಮ್ಮ ಶಾಲಾ ಮಕ್ಕಳೇನಾದರೂ ತಮ್ಮ ಇಂಥ ಕನಸುಗಳನ್ನು ಹಂಚಿಕೊಂಡರೆ ‘ಕನಸುಗಳೆಂದರೆ ಹೀಗೆಯೇ ಇರಬೇಕೆಂದು’ ಅವರು ಮಕ್ಕಳ ಬೆನ್ನು ಚಪ್ಪರಿಸಬಹುದು.  ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ಅವರುಗಳಿಗಿಂತ ನಮ್ಮ ದೇಶಕ್ಕೆ ಈಗ ಬೇಕಿರುವುದು ಮತ್ತೊಬ್ಬ ಅಬ್ದುಲ್ ಕಲಾಮ್, ಮತ್ತೊಬ್ಬ ವಿಕ್ರಮ್ ಸಾರಾಭಾಯ್, ಮತ್ತೊಬ್ಬ ಸತೀಶ್ ಧವನ್, ಮತ್ತೊಬ್ಬ ರಾಜಾರಾಮಣ್ಣ, ಮತ್ತೊಬ್ಬ ಹೋಮಿ ಭಾಭಾ, ಮತ್ತೊಬ್ಬ ರೊದ್ದಂ ನರಸಿಂಹ, ಮತ್ತೊಬ್ಬ ಸಿ.ಎನ್.ಆರ್.ರಾವ್, ಮತ್ತೊಬ್ಬ ಯು.ಆರ್.ರಾವ್, ಮತ್ತೊಬ್ಬ ಕೋಟಾ ಹರಿನಾರಾಯಣ ... ಇವರೆಲ್ಲರಿಗೂ ಮಿಗಿಲಾಗಿ ಮತ್ತೊಬ್ಬ ವಿಶ್ವೇಶ್ವರಯ್ಯ.  ನಮ್ಮ ಮಕ್ಕಳಲ್ಲೇ ಅಂಥವರು ಹುಟ್ಟಿಬರಲಿ.  ನಾವೆಲ್ಲರೂ ಅಂಥ ಕನಸುಗಳನ್ನು ಕಟ್ಟೋಣ.&lt;br /&gt;&lt;br /&gt;&lt;span style="font-style: italic;"&gt;&lt;span style="font-weight: bold;"&gt;(ಕೃಪೆ: ವಿಜಯ ಕರ್ನಾಟಕ, 25-06-2007)&lt;/span&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/752423363868781697-6554711306188016783?l=netnota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://netnota.blogspot.com/feeds/6554711306188016783/comments/default' title='Post Comments'/><link rel='replies' type='text/html' href='http://www.blogger.com/comment.g?blogID=752423363868781697&amp;postID=6554711306188016783' title='3 Comments'/><link rel='edit' type='application/atom+xml' href='http://www.blogger.com/feeds/752423363868781697/posts/default/6554711306188016783'/><link rel='self' type='application/atom+xml' href='http://www.blogger.com/feeds/752423363868781697/posts/default/6554711306188016783'/><link rel='alternate' type='text/html' href='http://netnota.blogspot.com/2007/06/blog-post_25.html' title='ಮಕ್ಕಳ ಮನಸ್ಸಿನಲ್ಲೀಗ ಸುನಿತಾಳಂತೆ ಹಾರುವ ಕನಸು!'/><author><name>HNS</name><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_WOq6aPUeAO4/SdR5qYZ87xI/AAAAAAAAAWg/cXIYJSqE8Z4/S220/sudhi1.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_WOq6aPUeAO4/Rn8kg3qiU7I/AAAAAAAAAK0/x6OuKwZkU3A/s72-c/sunita+williams.jpg' height='72' width='72'/><thr:total>3</thr:total></entry><entry><id>tag:blogger.com,1999:blog-752423363868781697.post-5480316132707806483</id><published>2007-06-18T06:40:00.000+05:30</published><updated>2007-06-29T21:47:11.487+05:30</updated><category scheme='http://www.blogger.com/atom/ns#' term='ISS'/><category scheme='http://www.blogger.com/atom/ns#' term='Receptor'/><category scheme='http://www.blogger.com/atom/ns#' term='Protein'/><category scheme='http://www.blogger.com/atom/ns#' term='Fruit Fly'/><category scheme='http://www.blogger.com/atom/ns#' term='Fly Immunity'/><category scheme='http://www.blogger.com/atom/ns#' term='Space Shuttle'/><category scheme='http://www.blogger.com/atom/ns#' term='Sharmila Bhattacharya'/><category scheme='http://www.blogger.com/atom/ns#' term='Insect Habitat'/><category scheme='http://www.blogger.com/atom/ns#' term='NASA'/><category scheme='http://www.blogger.com/atom/ns#' term='Low Gravity'/><title type='text'>ನೊಣಗಳಿಂದ ಮತ್ತಷ್ಟು ದಿನ ಬದುಕಲು ಕಲಿಯೋಣ!</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_WOq6aPUeAO4/RnXcLnqiU5I/AAAAAAAAAKk/iXH5f1MVss0/s1600-h/Fruit+Fly.jpg"&gt;&lt;img style="margin: 0pt 10px 10px 0pt; float: left; cursor: pointer;" src="http://4.bp.blogspot.com/_WOq6aPUeAO4/RnXcLnqiU5I/AAAAAAAAAKk/iXH5f1MVss0/s200/Fruit+Fly.jpg" alt="" id="BLOGGER_PHOTO_ID_5077206247114167186" border="0" /&gt;&lt;/a&gt;&lt;span style="font-weight: bold;font-size:180%;" &gt;ಇ&lt;/span&gt;ದೀಗ ಎಲ್ಲೆಡೆ ಮಾವಿನ ಹಣ್ಣಿನ ಸುಗ್ಗಿ.  ಮಾವು ಎಂದೊಡನೆ ಕೈ-ಮೈ-ಬಟ್ಟೆಗೆ ರಸ ಸೋರಿಸಿಕೊಂಡು ಇಡಿಯಾದ ಹಣ್ಣನ್ನು ತಿನ್ನುತ್ತಿದ್ದ ಬಾಲ್ಯದ ದಿನಗಳು ನೆನಪಿಗೆ ಬರುತ್ತವೆ.  ಹಳೆಯ ನೆನಪುಗಳು ಕಾಡುವುದೇ ಹೀಗೆ, ಎಷ್ಟು ಓಡಿಸಿದರೂ ಮತ್ತೆ ಮತ್ತೆ ಮಾವಿನ ಹಣ್ಣನ್ನು ಮುತ್ತುವ ನೊಣಗಳಂತೆ.  ಹಣ್ಣನ್ನು ಮುತ್ತುವ ನೊಣಗಳೆಂದರೆ ನಮಗೆ ಅಸಹ್ಯ.  ಎಲ್ಲೆಲ್ಲೆಂದಿಲೋ ಹಾರಿ ಬರುವ, ಜತೆಗೆ ಒಂದಷ್ಟು ಸೂಕ್ಷ್ಮ ರೋಗಾಣುಗಳನ್ನು ಹೊತ್ತು ತರುವ ಕೀಟಗಳನ್ನು ಹೋಗಲಾಡಿಸುವುದು ಶುಚಿಪ್ರಿಯರಿಗೆ ದೊಡ್ಡ ಸವಾಲು.  ನಾವು ಅದೆಷ್ಟೇ ಬೇಡವೆಂದರೂ ನಮ್ಮೊಂದಿಗೆ ಸಹಬಾಳ್ವೆ ನಡೆಸುವ ಈ ನೊಣಗಳಿಗೂ ನಮಗೂ ಬಹಳಷ್ಟು ಸಾಮ್ಯತೆಗಳಿವೆ.&lt;br /&gt;&lt;br /&gt;   ಈ ಮಾತು ಕೇಳಿದೊಡನೆ ಅಸಹ್ಯವಾದೀತು.  ಗುಂಡುಪಿನ್ನಿನಷ್ಟೇ ದೊಡ್ಡದಾದ ಮಿದುಳು ಹೊತ್ತ, ದಿನಕ್ಕೆ ನೂರರಂತೆ ಮೊಟ್ಟೆಗಳನ್ನಿಟ್ಟು ಸಂತಾನ ಅಭಿವೃದ್ಧಿಪಡಿಸುವ ಕೊಳಕುಮಂಡಲ ವಾಸಿಗಳಾದ ನೊಣಗಳನ್ನು ನಮ್ಮಂಥವರಿಗೆ ಹೋಲಿಸಿಕೊಳ್ಳುವುದೆ? ಛೀ... ಎಂದರೂ ಸರಿಯೇ.  ಸದ್ಯಕ್ಕೆ ನಮ್ಮ ‘ಜೀನ್’ ಅಥವಾ ಗುಣಾಣುಗಳಿಗೆ ಸಂಬಂಧಿಸಿದಂತೆ ಹೋಲಿಸಿಕೊಳ್ಳೋಣ.  ಮನುಷ್ಯನಿಗೆ ತಗಲುವ ಜೀನ್‍ಗಳಿಗೆ ಸಂಬಂಧಿಸಿದ ರೋಗಗಳಲ್ಲಿ ಪ್ರತಿಶತ 61ರಷ್ಟು ಜೀನ್‍ಗಳು ನೊಣಗಳ ದೇಹದಲ್ಲಿಯೂ ಇವೆ.  ಜತೆಗೆ ನೊಣಗಳ ಜೀನ್‍ಗಳಲ್ಲಿ ಪ್ರೋಟೀನ್ ಉತ್ಪಾದಿಸುವ ಪ್ರತಿಶತ 50ರಷ್ಟು ಜೀನ್‍ಗಳ ರಚನೆಯೂ ಮನುಷ್ಯನಿಗಿರುವಂತೆಯೇ ಇದೆ.  ಮನುಷ್ಯನ ಜೀನ್‍ಗಳಿಗೆ ಸಂಬಂಧಿಸಿದ ಸಂಶೋಧನೆಗಳು ನಡೆಯುತ್ತಿರುವ ಪ್ರಯೋಗಾಲಯಗಳಲ್ಲಿ ನೊಣಗಳ ಜೀನ್‍ಗಳ ಬಗ್ಗೆಯೂ ಅಧ್ಯಯನಗಳು ಜರಗುತ್ತವೆ.  ನೊಣಗಳಲ್ಲಿರುವ ಎಲ್ಲ ಜೀನ್‍ಗಳ ಮೋಜಣಿ ಸಂಪೂರ್ಣವಾಗಿ ಮುಗಿದಿದ್ದು ಅವುಗಳೆಲ್ಲದರ ಬ್ರಹ್ಮ ಲಿಖಿತ ವಿಜ್ಞಾನಿಗಳಿಗೆ ಮನದಟ್ಟಾಗಿದೆ.  ಆಸಕ್ತಿ ಹುಟ್ಟಿಸುವ ಮತ್ತೊಂದು ವಿಷಯವೆಂದರೆ ಅತಿಶೀಘ್ರ ಗತಿಯಲ್ಲಿ ನೊಣಗಳು ಸಂತಾನೋತ್ಪತ್ತಿ ಮಾಡುವ ಕಾರಣ, ಹಲವು ತಲೆಮಾರಿನ ಅಧ್ಯಯನವನ್ನು ಕಡಿಮೆ ಅವಧಿಯಲ್ಲಿ ನೆರವೇರಿಸಬಹುದು.  ಮನುಷ್ಯನ ಮಿದುಳಿಗೆ ಸಂಬಂಧಿಸಿದ ಮದ್ದು ಸಿಗದ ಪಾರ್ಕಿನ್‍ಸನ್ ಹಾಗೂ ಹಟಿಂಗ್‍ಟನ್ ಕಾಯಿಲೆಗಳಿಗೆ ಸಂಬಂಧಿಸಿದ ಅಧ್ಯಯನಗಳನ್ನು ನೊಣಗಳ ಜೀನ್‍ಗಳ ಮೇಲೆ ನಡೆಸಲಾಗುತ್ತಿದೆ. &lt;br /&gt;&lt;br /&gt;   ನಿಮಗೆ ಗೊತ್ತಿರುವಂತೆ ಜಗನ್ಮಾನ್ಯ ಬಾಹ್ಯಾಕಾಶ ಸಂಸ್ಥೆ ಅಮೆರಿಕದ ‘ನಾಸಾ’.  ಇದರ ಒಂದು ಕೇಂದ್ರ ‘ಆಮೆಸ್ ರಿಸರ್ಚ್ ಸೆಂಟರ್’ ಇರುವುದು ಕ್ಯಾಲಿಫೋರ್ನಿಯ ರಾಜ್ಯದಲ್ಲಿ.  ಈ ಸಂಶೋಧನಾ ಕೇಂದ್ರದಲ್ಲಿ ಜೀವ ವಿಜ್ಞಾನಕ್ಕೆ ಸಂಬಂಧಿಸಿದ ಹಲವಾರು ಪ್ರಯೋಗಗಳನ್ನು ಕೈಗೊಳ್ಳಲಾಗಿದೆ.  ಬಾಹ್ಯಾಕಾಶದಲ್ಲಿನ ಗುರುತ್ವಾಕರ್ಷಣ ಶಕ್ತಿಯ ಏರುಪೇರು ಮನುಷ್ಯ ಸೇರಿದಂತೆ ಉಳಿದ ಎಲ್ಲ ಜೀವಿಗಳ ಮೇಲೆ ಯಾವ ಬಗೆಯ ಪರಿಣಾಮಗಳನ್ನು ಬೀರುತ್ತದೆ?  ಜೀವಿಗಳ ಗುಣ, ಸ್ವಭಾವ, ಲಕ್ಷಣಗಳನ್ನು ನಿರ್ಧರಿಸುವ ‘ಜೀನ್’ ಅಥವಾ ‘ಗುಣಾಣು’ಗಳ ಕಾರ್ಯನಿರ್ವಹಣೆಯಲ್ಲಿ ಬದಲಾವಣೆಗಳಾಗುತ್ತದೆಯೆ?  ಅದರಿಂದ ಜೀವಿಗಳಲ್ಲಿ ಏನೆಲ್ಲಾ ಬದಲಾವಣೆಗಳು ಕಂಡುಬರುತ್ತವೆ? .... ಮತ್ತಿತರ ವಿಷಯಗಳ ಬಗ್ಗೆ ಗಮನಾರ್ಹ ಅಧ್ಯಯನಗಳನ್ನು ಇಲ್ಲಿ ನಡೆಸಲಾಗುತ್ತಿದೆ.  ಬಾಹ್ಯಾಕಾಶಕ್ಕೆ ಉಡ್ಡಯಿಸುವ ಎಲ್ಲ ಬಗೆಯ ವಾಹನಗಳಲ್ಲಿ ಜೀವ ವಿಜ್ಞಾನ ಪ್ರಯೋಗಗಳಿಗೆ ಸಂಬಂಧಿಸಿದ ಮಾದರಿಗಳು ರವಾನೆಯಾಗುತ್ತವೆ.  ಒಮ್ಮೊಮ್ಮೆ ಈ ಬಗೆಯ ಪ್ರಯೋಗಗಳಿಗೆಂದೇ ಪ್ರತ್ಯೇಕ ಕೋಶಗಳು ಅಥವಾ ಸಂವೇದಿಗಳನ್ನು ಬಾಹ್ಯಾಕಾಶ ಶಟಲ್‍ನೊಳಗೆ ಕಳುಹಿಸಲಾಗುತ್ತದೆ.&lt;br /&gt;&lt;br /&gt;   ‘ಜೀನ್’ಗಳು ತಾವಿರುವ ಜೀವಕೋಶಗಳಿಗೆ ಪ್ರೋಟೀನ್ ಉತ್ಪಾದಿಸುವಂತೆ ಆಣತಿ ನೀಡುತ್ತವೆ.  ಮನುಷ್ಯ ದೇಹದಲ್ಲಿ ಕನಿಷ್ಟವೆಂದರೂ ವಿವಿಧ ಬಗೆಯ ಐವತ್ತು ಸಹಸ್ರ ಗುರುತರ ಪ್ರೋಟೀನ್‍ಗಳಿರುತ್ತವೆ.  ಈ ಪ್ರೋಟೀನ್‍ಗಳಿಂದಾಗಿಯೇ ನಾವು ತಿನ್ನುವ ಆಹಾರ ಜೀರ್ಣವಾಗುವುದು, ಗಾಯದ ಮೇಲಿನ ರಕ್ತ ಹೆಪ್ಪುಗಟ್ಟುವುದು, ಜತೆಗೆ ಹರಿದ ಅಂಗಾಂಶಗಳು ಬೆಳೆದು ಮತ್ತೆ ಕೂಡಿಕೊಳ್ಳುವುದು.  ಭೂಮಿಯ ಮೇಲೆ ಸುಗಮವಾಗಿ ಕಾರ್ಯನಿರ್ವಹಿಸುವ ಜೀನ್‍ಗಳು ಬಾಹ್ಯಾಕಾಶದ ವಾತಾವರಣದಲ್ಲಿ ಅಂದರೆ ವಿಕಿರಣ ಶಕ್ತಿ ಹೆಚ್ಚಿರುವ ಹಾಗೂ ಗುರುತ್ವಾಕರ್ಷಣ ಬಲ ಕಮ್ಮಿಯಾಗಿರುವ ಸಂದರ್ಭದಲ್ಲಿ ಬೇರೆಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಬಹುದೆ? ಎಂಬುದು ಪ್ರಶ್ನೆ.  ಹಾಗಾದಲ್ಲಿ ಜೀನ್‍ಗಳು ಸಾಮಾನ್ಯಕ್ಕಿಂತಲೂ ಬೇರೆಯದಾದ ಪ್ರೋಟೀನ್‍ಗಳಿಗೆ ಪ್ರಚೋದನೆ ನೀಡಿ ಇಡೀ ಜೈವಿಕ ಕ್ರಿಯೆಗಳನ್ನು ಏರುಪೇರಾಗಿಸಬಹುದು.  ಇಂಥ ಆತಂಕಗಳಿಗೆ ಕಾರಣಗಳಿಲ್ಲದಿಲ್ಲ.  ಕ್ರಿ.ಶ.1999ರಲ್ಲಿ ಬಾಹ್ಯಾಕಾಶ ಶಟಲ್ ಒಳಗಡೆ ಮಾನವ ಮೂತ್ರಪಿಂಡದ ಜೀವಕೋಶಗಳನ್ನು ಬೆಳೆಸುವ ಪ್ರಯೋಗವೊಂದು ನಡೆದಿತ್ತು.  ಈ ಜೀವಕೋಶಗಳಲ್ಲಿ ಸಹಸ್ರಕ್ಕೂ ಹೆಚ್ಚಿನ ಜೀನ್‍ಗಳು ವಿಭಿನ್ನವಾಗಿ ಕಾರ್ಯನಿರ್ವಹಿಸಿದ್ದವು.  ಕೆಲವೊಂದು ಜೀನ್‍ಗಳು ವೈಟಮಿನ್ (ಜೀವಸತ್ವ) ‘ಡಿ’ ಅನ್ನು ಸಾಮಾನ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವಂತೆ ಮಾಡಿದ್ದವು.  ಮೂತ್ರಪಿಂಡದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ‘ಡಿ’ ಜೀವಸತ್ವ ಉತ್ಪಾದನೆಯಾದರೆ ಗಂಡಸರಿಗೆ ತಗಲುವ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್‌ನ ಬೆಳವಣಿಗೆಗೆ ಅಡ್ಡಿಯಾಗುತ್ತದೆ.&lt;br /&gt;&lt;br /&gt;   ಆದರೆ ಬಾಹ್ಯಾಕಾಶ ಪಯಣ ಸದಾಕಾಲ ಒಳಿತನ್ನೇ ತರುವುದಿಲ್ಲ.  ಸಾಮಾನ್ಯವಾಗಿ ಭೂಮಿಯ ಮೇಲಿರುವಾಗ ಕಾರ್ಯತತ್ಪರವಾಗುವ ದೇಹದ ರೋಗ ನಿರೋಧಕ ವ್ಯವಸ್ಥೆಯು ಒಮ್ಮೊಮ್ಮೆ ತೂಕ ರಾಹಿತ್ಯ ವಾತಾವರಣದಲ್ಲಿ ಸರಿಯಾಗಿ ಕೆಲಸ ಮಾಡುವುದಿಲ್ಲ.  ಸುದೀರ್ಘ ವ್ಯೋಮಯಾನ ಆರೋಗ್ಯ ಕೆಡಿಸುತ್ತದೆ, ಮೂಳೆಗಳು ಮೃದುವಾಗುತ್ತದೆ, ಸ್ನಾಯುಗಳು ತಮ್ಮ ಬಳಕುವಿಕೆಯನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಳ್ಳುತ್ತದೆ.  ಉಳಿದ ಮನೋದೈಹಿಕ ಚಟುವಟಿಕೆಗಳಲ್ಲೂ ಸಾಕಷ್ಟು ಬದಲಾವಣೆಗಳಾಗುತ್ತಿವೆ.  ಹಲವು ಬಾರಿ ವಿವಿಧ ತಲೆಮಾರುಗಳಿಗೆ ಸೇರಿದ ನೊಣಗಳ ತಂಡವನ್ನು ಈಗಾಗಲೇ ಬಾಹ್ಯಾಕಾಶ ಶಟಲ್‍ಗಳ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕೆ ಕಳುಹಿಸಲಾಗಿದೆ.  ಇಲ್ಲಿ ಅವುಗಳ ನಿತ್ಯ ಚಟುವಟಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ.  ಯಾವುದೇ ಚಟುವಟಿಕೆಯಲ್ಲಿ ವ್ಯತ್ಯಯ ಕಂಡುಬಂದರೆ, ಅವುಗಳಿಗೆ ಕಾರಣವಾದ ಜೀನ್ ಯಾವುದು.  ಅದರ ಕಾರ್ಯಾಚರಣೆಯಲ್ಲಿ ಎಂಥ ವ್ಯತ್ಯಾಸಗಳಾಗಿರಬಹುದು ... ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.     &lt;br /&gt;&lt;br /&gt;    ‘ಡಿಸ್ಕವರಿ’ ಬಾಹ್ಯಾಕಾಶ ಶಟಲ್ ಕಳೆದ ವರ್ಷದ ಜುಲೈನಲ್ಲಿ ಹದಿನೈದು ದಿನಗಳ ಯಶಸ್ವಿ ಉಡ್ಡಯಣ ಮುಗಿಸಿ ಬಂದದ್ದು ನಿಮ್ಮ ನೆನಪಿನಲ್ಲಿರಬಹುದು.  ಈ ಕಾರ್ಯಕ್ರಮದಲ್ಲಿ ‘ನೊಣಗಳ ರೋಗನಿರೋಧಕ ಸಾಮರ್ಥ್ಯ ಹಾಗೂ ಊತಗಳು’ ಎಂಬ ಯೋಜನೆಯೊಂದಿತ್ತು.  ಇದರ ನೇತೃತ್ವ ವಹಿಸಿದ್ದವರು ಜೀವವಿಜ್ಞಾನಿ ಶರ್ಮಿಳಾ ಭಟ್ಟಾಚಾರ್ಯ. ಈಕೆ ಪ್ರತಿಷ್ಠಿತ ಪ್ರಿನ್ಸ್‍ಟನ್&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_WOq6aPUeAO4/RoUwW_SerbI/AAAAAAAAALk/8PaB586WUxU/s1600-h/sharmila_bhattacharya_NASA.jpg"&gt;&lt;img style="margin: 0pt 0pt 10px 10px; float: right; cursor: pointer;" src="http://1.bp.blogspot.com/_WOq6aPUeAO4/RoUwW_SerbI/AAAAAAAAALk/8PaB586WUxU/s200/sharmila_bhattacharya_NASA.jpg" alt="" id="BLOGGER_PHOTO_ID_5081520926061669810" border="0" /&gt;&lt;/a&gt; ವಿವಿಯಿಂದ ಜೀವ ಅಣು ವಿಜ್ಞಾನ ವಿಷಯದಲ್ಲಿ ಪದವಿಯೋತ್ತರ ಹಾಗೂ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ.  ಜತೆಗೆ ನರಜೀವವಿಜ್ಞಾನ ಕ್ಷೇತ್ರದಲ್ಲಿ ಸ್ಟಾನ್‍ಫರ್ಡ್ ವಿವಿಯಲ್ಲಿ ಡಾಕ್ಟರೇಟೋತ್ತರ ಅಧ್ಯಯನವನ್ನು ನಡೆಸಿದ್ದಾರೆ.  ಸದ್ಯಕ್ಕೆ ‘ಆಮೆಸ್ ಸಂಶೋಧನಾ ಕೇಂದ್ರ’ದಲ್ಲಿ ‘ಜೈವಿಕ ಮಾದರಿಗಳ ಕಾರ್ಯಕ್ಷಮತೆ ಹಾಗೂ ನಡಾವಳಿ ಅಧ್ಯಯನ ಪ್ರಯೋಗಶಾಲೆ’ಯ ಪ್ರಧಾನ ತನಿಖಾಧಿಕಾರಿಯಾಗಿದ್ದಾರೆ.  ಕೀಟಗಳ ಸಹಜ ವಾಸಸ್ಥಾನಗಳ ಬಗ್ಗೆ ಕೂಲಂಕಷ ಅಧ್ಯಯನ ನಡೆಸಿರುವ ಶರ್ಮಿಳಾ, ಕೀಟಗಳಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಕಾಶ ನಿಲ್ದಾಣದಲ್ಲೊಂದು ವಾಸಸ್ಥಾನ ನಿರ್ಮಿಸಿದ್ದಾರೆ.  ‘ಆಸ್ಟ್ರೋಬಯಾನಿಕ್ಸ್’ ಅಂದರೆ ‘ಬಾಹ್ಯಾಕಾಶದಲ್ಲಿ ಜೈವಿಕತೆ’ ಎಂಬ ಹೊಸ ಜ್ಞಾನ ಶಾಖೆಯ ಪರಿಣತರಾದ ಇವರು ವ್ಯೋಮಯಾನದ ಸಮಯದಲ್ಲಿ ‘ರೋಗ ನಿರೋಧ ವ್ಯವಸ್ಥೆ’ ಅಂದರೆ ‘ಇಮ್ಯೂನ್ ಸಿಸ್ಟಮ್’ನಲ್ಲಿ ಆಗುವ ಬದಲಾವಣೆಗಳ ಅಧ್ಯಯನ ನಡೆಸುತ್ತಿದ್ದಾರೆ.  ಬದಲಾಗುವ ಗುರುತ್ವಾಕರ್ಷಣ ಬಲ ಹಾಗೂ ವಿಕಿರಣ ಶಕ್ತಿಯು ಜೀವಿಗಳ ಮೇಲೆ ಎಂಥ ಪರಿಣಾಮಗಳನ್ನು ಬೀರುತ್ತವೆಂದು ಅರಿಯುವುದರಲ್ಲಿ ಇವರಿಗೆ ಆಸಕ್ತಿ ಹೆಚ್ಚು.  ಇದಕ್ಕೆಂದೇ ಶರ್ಮಿಳಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ನಿರ್ದಿಷ್ಟ ಉದ್ದಿಶ್ಯಗಳಿಗೆಂದೇ ಉಡ್ಡಯಿಸಲಾದ ಪುಟ್ಟ ಕೃತಕ ಉಪಗ್ರಹಗಳು ಹಾಗೂ ಬಾಹ್ಯಾಕಾಶ ಶಟಲ್‍ಗಳಿಗೆ ಪ್ರಯೋಗ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಾರೆ.&lt;br /&gt;&lt;br /&gt;   ಶರ್ಮಿಳಾ ಅವರ ಪ್ರಯೋಗಗಳಿಗೆ ಇದೀಗ ಹೆಚ್ಚಿನ ಮಹತ್ವ.  ಕಾರಣ ಅಮೆರಿಕದ ಸದರ್ನ್ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಿಂದ ಹೊರಬಂದಿರುವ ಸುದ್ದಿಯ ಪ್ರಕಾರ ನೊಣಗಳಲ್ಲಿರುವ ಒಂದು ಜೀನ್‍ಗೆ ಕೊಂಚ ಮಾರ್ಪಾಡು ಮಾಡಿದರೆ ಸಾಕು, ಅದನ್ನು ಚಿರಂಜೀವತ್ವಕ್ಕೆ ನೂಕಬಹುದು.  ಅಂದರೆ ಅದರ ಜೀವಿತಾವಧಿಯನ್ನು ಮತ್ತಷ್ಟು ಕಾಲ ಹೆಚ್ಚಿಸಬಹುದು.  ಯಾವುದೇ ಜೀವಕೋಶವೊಂದರ ಹೊರಪದರದಿಂದ ಸಂಕೇತಗಳನ್ನು ಕಳುಹಿಸಲು ಪ್ರೋಟೀನ್‍ನ ನೆರವು ಬೇಕು.  ಇಂಥ ಪ್ರೋಟೀನ್‍ಗಳನ್ನು ಜೀವ ವಿಜ್ಞಾನದಲ್ಲಿ ‘ರಿಸೆಪ್ಟರ್’ಗಳೆಂದು ಗುರುತಿಸಲಾಗುತ್ತದೆ.  ‘ರಿಸೆಪ್ಟರ್’ಗಳ ಚಲನವಲನಗಳನ್ನು ನಿರ್ಬಂಧಕ್ಕೆ ಒಳಪಡಿಸುವುದರ ಮೂಲಕ ಜೀವಕೋಶದ ಚಟುವಟಿಕೆಗಳ ಮೇಲೆ ಹತೋಟಿ ಸಾಧಿಸಬಹುದು.  ಸದರ್ನ್ ಕ್ಯಾಲಿಫೋರ್ನಿಯ ವಿವಿಯ ವಿಜ್ಞಾನಿಗಳು ನೊಣಗಳ ಜೀವಕೋಶಗಳಿಗೆ ಮುದಿತನ ತರುವಂಥ ‘ರಿಸೆಪ್ಟರ್’ ಪ್ರೋಟೀನ್‍ಗಳು ಯಾವುವು ಎಂದು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಜತೆಗೆ ಮತ್ಯಾವ ಬಗೆಯ ಪ್ರೋಟೀನ್‍ಗಳನ್ನು ಅಂಥ ಜೀವಕೋಶಗಳ ಮೇಲೆ ಪ್ರಯೋಗಿಸಿದರೆ ಮುದಿತನ ತರುವ ಪ್ರೋಟೀನ್‍ಗಳ ಕಾರ್ಯಚಟುವಟಿಕೆ ಸ್ಥಗಿತವಾಗಬಲ್ಲದು ಎಂದು ಕಂಡುಕೊಂಡಿದ್ದಾರೆ.  ಅಂದರೆ ಜೀವಕೋಶಗಳಿಗೆ ಮುದಿತನ ತರುತ್ತಿದ್ದ ‘ರಿಸೆಪ್ಟರ್’ ಪ್ರೋಟೀನ್‍ಗಳು ತಮ್ಮ ಕಾರ್ಯಾಚರಣೆಯನ್ನು ಮುಂದೂಡಬಲ್ಲವು.  ಅಂತೆಯೇ ಜೀವಿತಾವಧಿ ಮತ್ತಷ್ಟು ಹೆಚ್ಚಬಹುದೆಂಬ ನಿರೀಕ್ಷೆ ವಿಜ್ಞಾನಿಗಳದು.  ಪ್ರಯೋಗಶಾಲೆಯ ಪರೀಕ್ಷೆಗಳಲ್ಲಿ ಇಂಥ ಜೀನ್ ಬದಲಾವಣೆ ಮಾಡಿಕೊಂಡ ನೊಣಗಳು ತಮ್ಮ ಜೀವಿತಾವಧಿಯನ್ನು ಮೂರನೆಯ ಒಂದು ಭಾಗದಷ್ಟು ಹೆಚ್ಚಿಸಿಕೊಂಡಿವೆ.  ಇಲ್ಲಿ ಪ್ರಶಂಸನೀಯ ಅಂಶವೆಂದರೆ ಈ ಪ್ರಕ್ರಿಯೆಯಲ್ಲಿ ಯಾವುದೇ ಅಡ್ಡ ಪರಿಣಾಮಗಳಿರಲಿಲ್ಲ.&lt;br /&gt;&lt;br /&gt;   ಪ್ರಯೋಗಗಳು ನಡೆಯುತ್ತಿರುವ ಈ ವಿವಿಯ ಪ್ರಾಧ್ಯಾಪಕರಾದ ರಿಚರ್ಡ್ ರಾಬರ್ಟ್ಸ್ ಹೇಳುವಂತೆ ‘ಎರಡು ಕಾರಣಗಳಿಗಾಗಿ ನೊಣಗಳ ಮೇಲಿನ ಸಂಶೋಧನೆಗಳು ನಮಗೆ ಮಹತ್ವದ್ದು.  ಮೊದಲನೆಯದಾಗಿ ಕೇವಲ ಒಂದೇ ಒಂದು ರಿಸೆಪ್ಟರ್ ಬದಲಾವಣೆಯಿಂದ ಅತ್ಯಂತ ಕ್ಲಿಷ್ಟ ಜೀವವಿಜ್ಞಾನ ಪ್ರಕ್ರಿಯೆಯಾದ ಜೀವಿತಾವಧಿಯನ್ನು ಮಾರ್ಪಡಿಸಬಹುದು.  ಇದನ್ನು ಕೇವಲ ಒಂದೇ ಒಂದು ಜಿನೆಟಿಕ್ ಬದಲಾವಣೆಯ ಮೂಲಕವೇ ನಡೆಸಬಹುದು’.  ಹಾಗೆಂದ ಮಾತ್ರಕ್ಕೆ ಜೀವವಿಜ್ಞಾನಿಗಳ ಮೂಲ ಉದ್ದಿಶ್ಯ ಕೇವಲ ನೊಣಗಳ ಜೀವಿತಾವಧಿಯನ್ನು ವಿಸ್ತರಿಸುವುದಲ್ಲ.  ಆದರೆ ಈ ಬಗೆಯ ಪ್ರಯೋಗಗಳು ಯಶಸ್ವಿಯಾದಲ್ಲಿ ಮನುಷ್ಯನ ಜೀವಿತಾವಧಿಯನ್ನು ವಿಸ್ತರಿಸುವ ಬಗ್ಗೆ ಯೋಜನೆಗಳನ್ನು ಹಮ್ಮಿಕೊಳ್ಳಬಹುದು.  ಇನ್ನು ಎರಡನೆಯ ಕಾರಣ.  ‘ಯಾವುದೇ ಬೆಳವಣಿಗೆಯನ್ನು ತಡೆಗಟ್ಟುವ ಪ್ರೋಟೀನ್‍ಗಳ ಅಭಿವೃದ್ಧಿಯೂ ಜೀವವಿಜ್ಞಾನದಲ್ಲಿ ಮಹತ್ವದ್ದು.  ಜೀನ್‍ಗಳಿಗೆ ಸಂಬಂಧಿಸಿದ ಅನೇಕ ದೈಹಿಕ ತೊಂದರೆಗಳಿಗೆ ಕೆಲವೊಂದು ವಿಪರೀತ ಬೆಳವಣಿಗೆಗಳೂ ಕಾರಣ.  ಈ ಸಂದರ್ಭದಲ್ಲಿ ಜೀನ್‍ಗಳಲ್ಲಿರುವ ನಿರ್ದಿಷ್ಟ ಪ್ರೋಟೀನ್‍ಗಳ ವಿಪರೀತ ಕಾರ್ಯಚಟುವಟಿಕೆಯನ್ನು ತಡೆಗಟ್ಟಬೇಕಾಗುತ್ತದೆ.  ಅಂದರೆ ಕ್ಯಾನ್ಸರ್ ಸೇರಿದಂತೆ ಕೆಲವು ಆನುವಂಶಿಕ ಕಾಯಿಲೆಗಳಿಗೆ ಮದ್ದನ್ನು ರೂಪಿಸಲು ಈ ಬಗೆಯ ಪ್ರೋಟೀನ್‍ಗಳು ಅವಶ್ಯವಾಗುತ್ತವೆ’.&lt;br /&gt;&lt;br /&gt;   ಸಾಮಾನ್ಯವಾಗಿ ಸಂಶೋಧನಾಲಯಗಳಲ್ಲಿ ನೊಣಗಳು ಹಾರಾಡುತ್ತಿವೆಯೆಂದರೆ ಅಲ್ಲಿನ ವಿಜ್ಞಾನಿಗಳಿಗೆ ಅವುಗಳನ್ನು ಓಡಿಸುವುದು ಬಿಟ್ಟು ಬೇರೇನೂ ಕೆಲಸವಿಲ್ಲ ಎಂದರ್ಥ.  ಆದರೆ ಸದರ್ನ್ ಕ್ಯಾಲಿಫೋರ್ನಿಯ ವಿವಿ ಹಾಗೂ ನಾಸಾದ ಜೆ.ಪಿ.ಎಲ್. ಸಂಶೋಧನಾಲಯಗಳಲ್ಲಿ ವಿಜ್ಞಾನಿಗಳ ಒಡನಾಟ ನೊಣಗಳೊಂದಿಗೆ.  ಅವುಗಳ ಜೀವಿತಾವಧಿಯಲ್ಲಿನ ಒಟ್ಟಾರೆ ಚಟುವಟಿಕೆಗಳ ಬಗ್ಗೆಯೇ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ.  ಜತೆಗೆ ಅವುಗಳ ಜೀವಿತಾವಧಿಯನ್ನು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ.  ನೊಣಗಳೊಂದಿಗೆ ಸೆಣಸಾಡುವುದಿರಲಿ, ಸರಸವಾಡುವುದರ ಮೂಲಕವೂ ನೆಣ ಕರಗಿಸಿಕೊಳ್ಳಬಹುದೆಂದು ತೋರಿಸಿಕೊಟ್ಟಿದ್ದಾರೆ.&lt;br /&gt;&lt;br /&gt;&lt;span style="font-style: italic;"&gt;&lt;span style="font-weight: bold;"&gt;(ಕೃಪೆ: ವಿಜಯ ಕರ್ನಾಟಕ 18-06-2007)&lt;/span&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/752423363868781697-5480316132707806483?l=netnota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://netnota.blogspot.com/feeds/5480316132707806483/comments/default' title='Post Comments'/><link rel='replies' type='text/html' href='http://www.blogger.com/comment.g?blogID=752423363868781697&amp;postID=5480316132707806483' title='0 Comments'/><link rel='edit' type='application/atom+xml' href='http://www.blogger.com/feeds/752423363868781697/posts/default/5480316132707806483'/><link rel='self' type='application/atom+xml' href='http://www.blogger.com/feeds/752423363868781697/posts/default/5480316132707806483'/><link rel='alternate' type='text/html' href='http://netnota.blogspot.com/2007/06/blog-post_18.html' title='ನೊಣಗಳಿಂದ ಮತ್ತಷ್ಟು ದಿನ ಬದುಕಲು ಕಲಿಯೋಣ!'/><author><name>HNS</name><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_WOq6aPUeAO4/SdR5qYZ87xI/AAAAAAAAAWg/cXIYJSqE8Z4/S220/sudhi1.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_WOq6aPUeAO4/RnXcLnqiU5I/AAAAAAAAAKk/iXH5f1MVss0/s72-c/Fruit+Fly.jpg' height='72' width='72'/><thr:total>0</thr:total></entry><entry><id>tag:blogger.com,1999:blog-752423363868781697.post-2184956335522284688</id><published>2007-06-11T07:24:00.000+05:30</published><updated>2007-06-11T07:34:41.696+05:30</updated><category scheme='http://www.blogger.com/atom/ns#' term='Operating System'/><category scheme='http://www.blogger.com/atom/ns#' term='Linux'/><category scheme='http://www.blogger.com/atom/ns#' term='Brazil'/><title type='text'>ಹೀಗೊಂದು ಮುಕ್ತ ‘ಕಾವ್ಯ’ ಮೀಮಾಂಸೆ !</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_WOq6aPUeAO4/Rmys0XqiU3I/AAAAAAAAAKU/NRgWDVV7v58/s1600-h/Brazil.GilbertoGil.jpg"&gt;&lt;img style="margin: 0pt 10px 10px 0pt; float: left; cursor: pointer;" src="http://2.bp.blogspot.com/_WOq6aPUeAO4/Rmys0XqiU3I/AAAAAAAAAKU/NRgWDVV7v58/s200/Brazil.GilbertoGil.jpg" alt="" id="BLOGGER_PHOTO_ID_5074620895845307250" border="0" /&gt;&lt;/a&gt;&lt;span style="font-size:180%;"&gt;ಪ್ರ&lt;/span&gt;ವಾಸಿಗರ ಸ್ವರ್ಗವೆಂದೇ ಪರಿಗಣಿತವಾದ ರಿಯೋ ಡಿ ಜನೈರೊ ನಗರ ಕೇವಲ ಬ್ರೆಝಿಲ್ ದೇಶದಲ್ಲಷ್ಟೇ ಅಲ್ಲ, ಇಡೀ ಜಗತ್ತಿಗೇ ಹೆಸರುವಾಸಿ.  ನಾಲ್ಕು ವರ್ಷಗಳ ಹಿಂದಿನ ಮಾತು.  ಸಮುದ್ರದಂಡೆಗೆ ಎದುರಾದ ಇಲ್ಲಿನ ಶ್ರೀಮಂತ ವಸತಿ ಸಮುಚ್ಛಯವೊಂದರ ಮೇಲಂತಸ್ತಿನ ಐಷಾರಾಮಿ ಫ್ಲಾಟ್‍ನಲ್ಲಿ ಸಂಜೆ ರಂಗೇರಿದಂತೆ ನಗು, ಹರಟೆ, ಸಂಗೀತ, ವಾಗ್ಯುದ್ಧ ನಡೆಯುತ್ತಿದೆ.  ಆ ಫ್ಲಾಟಿನ ಒಡೆಯ ಗ್ರಾಮಿ ಪ್ರಶಸ್ತಿ ಪುರಸ್ಕೃತ ಹಾಡುಗಾರ, ಗಿಟಾರ್ ವಾದಕ ಹಾಗೂ ಗೀತ ರಚನಕಾರ ಗಿಲ್ಬರ್ಟೋ ಗಿಲ್.  ಹಾಸಿಲ್ಲದ ಬರಿಯ ನೆಲದ ಮೇಲೆ, ಬರಿಗಾಲಿನಲ್ಲಿ ಚಕ್ಕಳಮಕ್ಕಳ ಹಾಕಿ ಆ ಸಂತೋಷ ಕೂಟವನ್ನಾತ ಆನಂದಿಸುತ್ತಿದ್ದಾನೆ.  ಲುಲ ಡ ಸಿಲ್ವ ನೇತೃತ್ವದ ಬ್ರೆಝಿಲ್ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಈ ಹೆಮ್ಮೆಯ ಸಂಗೀತಗಾರನನ್ನು ಸಂಸ್ಕೃತಿ ಇಲಾಖೆಯ ಸಚಿವನನ್ನಾಗಿ ನೇಮಿಸಿ ಕೆಲ ದಿನಗಳಷ್ಟೇ ಆಗಿದೆ.  ತನ್ನೊಂದಿಗೆ ಚರ್ಚೆ ನಡೆಸಲು ಅಮೆರಿಕದಿಂದ ಬಂದವರಿಗೆ ಆತ ಆತಿಥ್ಯ ನೀಡುತ್ತಿದ್ದಾನೆ.  ವಿಷಯ ಇಷ್ಟೇ ಆಗಿದ್ದರೆ ಅದನ್ನಿಲ್ಲಿ ಪ್ರಸ್ತಾಪಿಸುವ ಅಗತ್ಯವಿರಲಿಲ್ಲ.  ಗಿಲ್‍ನೊಂದಿಗೆ ಅಂದು ಮಾತುಕತೆ ನಡೆಸಲು ಬಂದವರು ಸ್ಟಾನ್‍ಫರ್ಡ್ ವಿವಿಯ ಪ್ರಾಧ್ಯಾಪಕ ಲಾರೆನ್ಸ್ ಲೆಸಿಗ್, ಹಾರ್ವರ್ಡ್ ವಿವಿಯ ಪ್ರಾಧ್ಯಾಪಕ ವಿಲಿಯಮ್ ಫಿಶರ್ ಹಾಗೂ ಅಮೆರಿಕದ ‘ಮುಂಚೂಣಿ ವಿದ್ಯುನ್ಮಾನ ಪ್ರತಿಷ್ಠಾನ’ದ ನೇತಾರ ಜಾನ್ ಪೆರಿ ಬಾರ್ಲೊ.  ಇವರೆಲ್ಲರೂ ಅಮೆರಿಕವಷ್ಟೇ ಅಲ್ಲ, ಜಗನ್ಮಾನ್ಯ ಕಂಪ್ಯೂಟರ್ ತಜ್ಞರು.  ಜತೆಗೆ ಇಂಟರ್‌ನೆಟ್ ಕ್ಷೇತ್ರದ ಪರಿಣತರು.  ಗಿಲ್ ಸಂಪರ್ಕ ಖಾತೆ ಅಥವಾ ವಿದ್ಯುನ್ಮಾನ ಖಾತೆ ಅಥವಾ ವಿಜ್ಞಾನ ಖಾತೆ  ಕೊನೆಗೆ ವಾಣಿಜ್ಯ ಖಾತೆ ಅಥವಾ ವಿತ್ತ ಖಾತೆಯ ಸಚಿವನಾಗಿದ್ದರೂ ಇಂಥದೊಂದು ದಂಡು ದಾಳಿ ನಡೆಸಲು ಸಕಾರಣಗಳಿರುತ್ತಿದ್ದವು.  ಆದರೆ ಬಂದಿದ್ದ ಈ ತಜ್ಞವೃಂದಕ್ಕೆ ಗಿಲ್‍ನ ಭೇಟಿ ಅತಿ ಮುಖ್ಯವಾಗಿತ್ತು.&lt;br /&gt;&lt;br /&gt;ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಬ್ರೆಝಿಲ್ ದೇಶದ ಸಾಂಸ್ಕೃತಿಕ ವಕ್ತಾರನಾಗಿದ್ದ ಗಿಲ್‍ಗೆ ರಾಜಕಾರಣ ಹೊಸತಲ್ಲದಿದ್ದರೂ ಸಚಿವ ಪದವಿ ಅಪರಿಚಿತವಾಗಿತ್ತು.  ತನ್ನ ಮುಂದಿದ್ದ ಗಣ್ಯರಿಗೆ ಗಿಟಾರ್‌ನ ಆತಿಥ್ಯ ಸೂಕ್ತವೆಂದಾತ ಭಾವಿಸಿದ.  ಸಂಗೀತ ಸುಧೆ ಹರಿಯುತ್ತಿದ್ದಂತೆ ಮಾತುಕತೆ ಆರ್‍ಅಂಭವಾದವು.  ‘ಇಂಟರ್‌ನೆಟ್‍ನಲ್ಲಿ ಗಿಲ್‍ನ ರಾಗಮಾಲಿಕೆಯೂ ಸೇರಿದಂತೆ ಇಡೀ ಬ್ರೆಝಿಲ್ ಸಂಗೀತವನ್ನು ಶೇಖರಿಸಿಟ್ಟರೆ ಎಷ್ಟು ಚೆನ್ನ ಅಲ್ಲವೆ’? - ಪ್ರಾಧ್ಯಾಪಕರೊಬ್ಬರು ಪ್ರಸ್ತಾವನೆಯನ್ನಿಟ್ಟರು.  ‘ಈ ಸಂಗೀತ ಸಂಚಿಕೆಯಲ್ಲಿ ನೇರ ಪ್ರಸಾರಗಳನ್ನೂ ಅಳವಡಿಸಿಕೊಳ್ಳಬಹುದು’ - ಮತ್ತೊಬ್ಬರು ಪ್ರಲೋಭನೆ ತೋರಿಸಿದರು.  ‘ಈ ಎಲ್ಲ ಸಂಗೀತ ಸ್ಮರಣಿಕೆಗಳು ಬೇಕೆಂದವರಿಗೆಲ್ಲ ಉಚಿತವಾಗಿ ಲಭ್ಯವಾಗಬೇಕು’ - ಎಂಬ ಮೂರನೆಯವರ ಮಾತು ಮುಗಿಯುವಷ್ಟರಲ್ಲಿ ಗಿಲ್ ‘ಖಂಡಿತವಾಗಿಯೂ ಮಾಡೋಣ.  ನನ್ನಿಂದೇನಾಗಬೇಕು, ಹೇಳಿ’? ಎಂದ ತನ್ನ ಗಿಟಾರ್ ತಂತಿಗಳನ್ನು ಮತ್ತೊಮ್ಮೆ ಮೀಟಿ.  ಗಿಲ್‍ನೊಂದಿಗೆ ಅಮೆರಿಕದ ತಂಡವೂ ಸರಿಯಾದ ತಂತಿಗಳನ್ನು ಮೀಟಿತ್ತು.  ಸಂಗೀತ ಕೂಟ ಬರಾಕಸ್ತಾಗುವ ಹೊತ್ತಿಗೆ ತನ್ನ ಜನಪ್ರಿಯ ಸಂಗೀತ ಮಟ್ಟುಗಳನ್ನು ಯಾವ ರಾಯಧನದ ಅಪೇಕ್ಷೆಯೂ ಇಲ್ಲದೆಯೆ ಇಂಟರ್‌ನೆಟ್‍ನಲ್ಲಿ ಪುಕ್ಕಟೆ ಹಂಚಲು ಆತ ಸಹಿ ಹಾಕಿಬಿಟ್ಟಿದ್ದ.  ಮೈಕ್ರೋಸಾಫ್ಟ್‍ನಿಂದ ಹೊರತಾದ ಮುಕ್ತ ಕಂಪ್ಯೂಟರ್ ಕಾರ್ಯಾಚರಣೆ ವ್ಯವಸ್ಥೆ ತಂತ್ರಾಂಶ ಹಾಗೂ ಉಳಿದ ಉಪಯೋಗಿ ಸಲಕರಣೆಯನ್ನು ಜಗತ್ತಿನೆಲ್ಲೆಡೆ ಜನಪ್ರಿಯಗೊಳಿಸಲು ಹೊರಟಿದ್ದ ಅಮೆರಿಕದ ತಜ್ಞರ ತಂಡಕ್ಕೆ ಬ್ರೆಝಿಲ್‍ನ ಮೊದಲ ಭೇಟಿಯಲ್ಲಿಯೇ ಯಶಸ್ಸು ದಕ್ಕಿತ್ತು.  ಮುಂದಿನದು ಇತಿಹಾಸ.                   &lt;br /&gt;&lt;br /&gt;ಕಂಪ್ಯೂಟರಿನ ಕಾರ್ಯ ನಿರ್ವಹಣೆಗೆ ಅಗತ್ಯವಾಗಿ ಬೇಕಾದ ತಂತ್ರಾಂಶ ಯಾವುದು ಎಂದರೆ ತಕ್ಷಣವೇ ಸಿಗುವ ಉತ್ತರ - ‘ವಿಂಡೋಸ್’.  ಬಿಲ್‍ಗೇಟ್ಸ್ ಒಡೆತನದ ‘ಮೈಕ್ರೋಸಾಫ್ಟ್’ ಸೃಷ್ಟಿಸಿದ ಈ ‘ಕಾರ್ಯಾಚರಣೆ ವ್ಯವಸ್ಥೆಯು - ಕಾ.ವ್ಯ.’ (Operating System - OS) ನಿಮ್ಮ ಗಣಕಯಂತ್ರದ ಒಳಗಡೆಯಿರುವ ಸ್ಮೃತಿ (ಮೆಮೊರಿ), ಸೂಕ್ಷ್ಮ ಸಂಸ್ಕಾರಕ (ಮೈಕ್ರೊಪ್ರಾಸೆಸರ್, ಚಿಪ್) ಮತ್ತಿತರ ವ್ಯವಸ್ಥೆಗಳ ಸಂಪನ್ಮೂಲಗಳನ್ನು ಸಮರ್ಥವಾಗಿ ನಿರ್ವಹಿಸುತ್ತದೆ.  ಜತೆಗೆ ಕಂಪ್ಯೂಟರಿಗೆ ಹೊರಗಡೆಯಿಂದ ಜೋಡಿಸುವ ಸಾಧನಗಳಾದ ಮುದ್ರಕ, ಪ್ರದರ್ಶಕ ತೆರೆ (ಮಾನಿಟರ್), ಮೋಡೆಮ್ (ಅಂತರ್ಜಾಲ ಸಂಪರ್ಕಕ್ಕೆ ಬೇಕಾದ ಸಂವಹನಾ ಸಾಧನ) ಮುಂತಾದವುಗಳ ವ್ಯವಸ್ಥಾ ಸಂಪನ್ಮೂಲ ನಿರ್ವಹಣೆಯೂ ಸಹಾ ‘ಕಾ.ವ್ಯ.’ದ್ದೇ ಜವಾಬ್ದಾರಿ.  ಹೀಗಾಗಿ ಕಂಪ್ಯೂಟರ್ ಕ್ಷೇತ್ರದಲ್ಲಿ ಔನ್ನತ್ಯ ಸಾಧಿಸಬೇಕೆಂಬ ಹಂಬಲವಿರುವವರಿಗೆ ‘ಕಾವ್ಯ’ ಪ್ರಜ್ಞೆ ಚೆನ್ನಾಗಿರಬೇಕು.  ಹಾಗೆಂದ ಮಾತ್ರಕ್ಕೆ ‘ವಿಂಡೋಸ್’ ಒಂದೇ ಜಗತ್ತಿನ ಎಲ್ಲ ಕಂಪ್ಯೂಟರುಗಳ ಕಾರ್ಯ ನಿರ್ವಹಣೆ ಮಾಡುತ್ತಿದೆಯೆಂದು ಅರ್ಥವಲ್ಲ.  ‘ಯೂನಿಕ್ಸ್’, ‘ಲಿನಕ್ಸ್’, ‘ಮ್ಯಾಕ್’ ಮುಂತಾದ ಕಾ.ವ್ಯ.ಗಳು ಇದೀಗ ಸಾಕಷ್ಟು ಜನಪ್ರಿಯವಾಗುತ್ತಿವೆ.&lt;br /&gt;&lt;br /&gt;‘ವಿಂಡೋಸ್’ನ ಮೊದಲ ಮಾದರಿ ಸೃಷ್ಟಿಸುವ ಮುನ್ನ ಮೈಕ್ರೋಸಾಫ್ಟ್ ಕಂಪನಿ ‘ಡಿಸ್ಕ್ ಆಪರೇಟಿಂಗ್ ಸಿಸ್ಟಮ್ - ಡಾಸ್’ ಎಂಬ ಕಾ.ವ್ಯ.ವನ್ನು ಮೇಜಿನ ಮೇಲಿಡಬಹುದಾದ ಪುಟ್ಟ ಕಂಪ್ಯೂಟರ್‌ಗಳಿಗೆ ಅಳವಡಿಸಿತ್ತು.  ಈ ಹೊತ್ತಿಗೆ ಬೃಹತ್ ಕಂಪ್ಯೂಟರ್‌ಗಳ ಕಾರ್ಯಾಚರಣೆ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ ತಂತ್ರಾಂಶ ‘ಯೂನಿಕ್ಸ್’.  ‘ಡಾಸ್’ನಷ್ಟು ಸುಲಲಿತವಾಗಿರದಿದ್ದ ‘ಯೂನಿಕ್ಸ್’ ಕೇವಲ ಎಂಜಿನಿಯರುಗಳ ಸೊತ್ತಾಗಿತ್ತು.  ಕಂಪ್ಯೂಟರಾಸಕ್ತ ಸಾಮಾನ್ಯರು ಅತಿ ಶೀಘ್ರದಲ್ಲಿ ‘ಡಾಸ್’ನ ವ್ಯಾಮೋಹಕ್ಕೆ ‘ಬಲಿ’ಯಾದರು.  ದೂರದರ್ಶಿತ್ವ ಹೊಂದಿದ್ದ ಮೈಕ್ರೋಸಾಫ್ಟ್ ‘ವಿಂಡೋಸ್’ ಆವೃತ್ತಿಗಳನ್ನು ಒಂದೊಂದಾಗಿ ಬಿಡುಗಡೆ ಮಾಡ ಹೊರಟಿತು.  ಬಳಕೆದಾರ-ಸ್ನೇಹಿಯಾಗಿದ್ದ ಈ ಕಾ.ವ್ಯ. ವ್ಯವಸ್ಥೆಗಳು ಜಗತ್ತಿನೆಲ್ಲೆಡೆ ಜನಪ್ರಿಯವಾಗತೊಡಗಿತು.  ಎಲ್ಲೆಡೆಯಿಂದ ಮೈಕ್ರೋಸಾಫ್ಟ್ ಕಂಪನಿಗೆ ಹಣದ ಹೊಳೆ ಹರಿಯಲಾರಂಭಿಸಿತು.  ‘ವಿಂಡೋಸ್’ನಲ್ಲಿ ಅದೆಷ್ಟೇ ನ್ಯೂನತೆಗಳಿದ್ದರು ದಾಸ್ಯಕ್ಕೆ ಬಲಿ ಬಿದ್ದ ಕಂಪ್ಯೂಟರ್ ಬಳಕೆದಾರರಿಗೆ ಅದರಿಂದ ಬಿಡಿಸಿಕೊಳ್ಳುವುದು ಸಾಧ್ಯವಾಗಲಿಲ್ಲ.  ಆವೃತ್ತಿಯಿಂದ ಆವೃತ್ತಿಗೆ ಹೆಚ್ಚಿನ ರಾಯಧನ ನೀಡಲಾರಂಭಿಸಿದರು.  ಬೇರೆ ದಾರಿಯಿಲ್ಲದೆಯೇ ಅವುಗಳಿಗೆ ಅನುಗುಣವಾದ ತಂತ್ರಾಂಶ ಸಲಕರಣೆಗಳನ್ನು ಮಾತ್ರ ಕೊಳ್ಳಲಾರಂಭಿಸಿದರು.&lt;br /&gt;&lt;br /&gt;ಏತನ್ಮಧ್ಯೆ ಮೇಜಿನ ಮೇಲಿಡಬಹುದಾದ ಪುಟ್ಟ ಕಂಪ್ಯೂಟರುಗಳಿಗೆಂದೇ ‘ಮಿನಿಕ್ಸ್’ ಎಂಬ ‘ಯೂನಿಕ್ಸ್’ ಕಾ.ವ್ಯ.ದ ಕಿರು ಅವತರಣಿಕೆ ಬಳಕೆಗೆ ಬಂತು.  ಫಿನ್‍ಲೆಂಡ್ ದೇಶದ ಹೆಲ್ಸಿಂಕಿ ವಿವಿಯಲ್ಲಿ ಕಂಪ್ಯೂಟರ್ ತಂತ್ರಜ್ಞಾನ ವಿದ್ಯಾರ್ಥಿಯಾಗಿದ್ದ ಲಿನಸ್ ಟೊರ್‌ವಾಲ್ಡ್‍ಸ್ &lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_WOq6aPUeAO4/RmytLXqiU4I/AAAAAAAAAKc/O0Uc5DhmRUI/s1600-h/Linus_Torvalds.jpeg"&gt;&lt;img style="margin: 0pt 0pt 10px 10px; float: right; cursor: pointer;" src="http://2.bp.blogspot.com/_WOq6aPUeAO4/RmytLXqiU4I/AAAAAAAAAKc/O0Uc5DhmRUI/s200/Linus_Torvalds.jpeg" alt="" id="BLOGGER_PHOTO_ID_5074621290982298498" border="0" /&gt;&lt;/a&gt;ಮಿನಿಕ್ಸ್‍ನ ಸೌಲಭ್ಯಗಳನ್ನು ಮತ್ತಷ್ಟು ಉತ್ತಮಗೊಳಿಸಲು ಪ್ರಯತ್ನಿಸತೊಡಗಿದ.  ಕ್ರಿ.ಶ.1991ರಲ್ಲಿ ಮೊದಲ ಮಾದರಿಯೊಂದನ್ನು ಆತ ಸೃಷ್ಟಿಸಿದ, ಗೆಳೆಯರ ಒತ್ತಾಸೆಯ ಮೇರೆಗೆ ಆ ಕಾ.ವ್ಯ. ತಂತ್ರಾಂಶದ ಹೆಸರು ‘ಲಿನಕ್ಸ್’ ಎಂದಾಯಿತು. ಮುಂದಿನ ಮೂರು ವರ್ಷಗಳಲ್ಲಿ (1994) ‘ಲಿನಕ್ಸ್’ನ ಅಧಿಕೃತ ಅವತರಣಿಕೆ 1.0 ಮಾರುಕಟ್ಟೆಗೆ ಬಂತು - ಉಚಿತವಾಗಿ.  ತನ್ನೆಲ್ಲ ಆಕರ ಸಂಕೇತಗಳನ್ನು ಹೊಂದಿದ್ದ ಹೃದಯ ಭಾಗ ‘ಕರ್ನೆಲ್’ ಕೂಡಾ ಮುಕ್ತವಾಗಿ ತಜ್ಞರ ಪರಿಶೀಲನೆಗೆ ಬಂತು.  &lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_WOq6aPUeAO4/RmysRHqiU1I/AAAAAAAAAKE/374I33fLpDY/s1600-h/linux.png"&gt;&lt;img style="margin: 0pt 10px 10px 0pt; float: left; cursor: pointer;" src="http://1.bp.blogspot.com/_WOq6aPUeAO4/RmysRHqiU1I/AAAAAAAAAKE/374I33fLpDY/s200/linux.png" alt="" id="BLOGGER_PHOTO_ID_5074620290254918482" border="0" /&gt;&lt;/a&gt;‘ಲಿನಕ್ಸ್’ ಕಾ.ವ್ಯ.ದ ಮೂಲ ಹಂದರ ‘ಕರ್ನೆಲ್’ ತನ್ನ ಆಕರ ಸಂಕೇತಗಳೊಂದಿಗೆ ಬಳಕೆದಾರರೆಲ್ಲರಿಗೂ ಮುಕ್ತವಾಗಿ ಲಭ್ಯವಾದಂತೆ, ‘ಲಿನಕ್ಸ್’ ವೈಯಕ್ತಿಕ ಅವತರಣಿಕೆಗಳನ್ನು ನೂರಾರು ತಜ್ಞರು ರೂಪಿಸತೊಡಗಿದರು.  ಅಂಥ ಅವತರಣಿಕೆಗಳನ್ನು ಮುಕ್ತವಾಗಿ ಅಂತರ್ಜಾಲದಲ್ಲಿ ಉಚಿತವಾಗಿ ಹಂಚಿಕೊಳ್ಳಲಾರಂಭಿಸಿದರು.  ಅವುಗಳೊಂದಿಗೆ ‘ನೆಂಚಿ’ಕೊಳ್ಳಲು ಅನ್ವಯ ತಂತ್ರಾಂಶಗಳೂ ಮುಕ್ತವಾಗಿ ಸಿಗುವ ಅವಕಾಶ ದೊರೆತಿತು.&lt;br /&gt;&lt;br /&gt; ಆದರೂ, ಮೈಕ್ರೋಸಾಫ್ಟ್ ಸ್ವಾಮ್ಯತೆಗೆ ತೀರಾ ಧಕ್ಕೆಯೇನಾಗಲಿಲ್ಲ.  ಒಟ್ಟಾರೆ ಬಳಕೆಯಲ್ಲಿ ‘ಲಿನಕ್ಸ್’ನ ಪ್ರಾತಿನಿಧ್ಯ ಕಡಿಮೆಯೇ ಇತ್ತು.  ನಮ್ಮಷ್ಟೇ ಬಡತನ, ನಮಗಿಂತಲೂ ಹೆಚ್ಚಿನ ಅರಾಜಕತೆ, ನಮ್ಮಲ್ಲಿರುವಷ್ಟೇ ಬುದ್ಧಿವಂತರ ಅದರಲ್ಲೂ ಕಂಪ್ಯೂಟರ್ ಕ್ಷೇತ್ರದಲ್ಲಿ ನಮಗಿಂತ ತುಸು ಕಡಿಮೆ ಹಾಗೂ ವಿಮಾನ ವಿಜ್ಞಾನ ಕ್ಷೇತ್ರದಲ್ಲಿ ನಮಗಿಂತಲೂ ಗಣನೀಯ ಪ್ರಗತಿ ಸಾಧಿಸಿರುವ, ನಮ್ಮಷ್ಟು ಅಮೆರಿಕವನ್ನು ಪ್ರೀತಿಸದಿರುವ ದೇಶ ಬ್ರೆಝಿಲ್.  ಗಿಲ್‍ನ ಭೇಟಿಯ ನಂತರ ರಾಷ್ಟ್ರಾಧ್ಯಕ್ಷರಿಗೇ ‘ಲಿನಕ್ಸ್’ ಹಾಗೂ ಮುಕ್ತ ತಂತ್ರಾಂಶಗಳ ಮಹತ್ವ ಮನವರಿಕೆಯಾಯಿತು.  ಇಂಥ ಕಂಪ್ಯೂಟರ್ ಸಲಕರಣೆಗಳ ಅಭಿವೃದ್ಧಿ ಮತ್ತು ಅಳವಡಿಕೆಗೆಂದೇ ಅಧ್ಯಕ್ಷರು ಸಂಚಾಲನಾ ಸಮಿತಿಯನ್ನು ಸ್ಥಾಪಿಸಿದರು.  ಈ ಸಮಿತಿ ಮೊದಲ ಪರಿಶೀಲನಾ ಸಭೆಯನ್ನು ನಡೆಸಿದಾಗ ಹೊರಬಂದ ಅಂಕೆ-ಅಂಶ ದಂಗು ಬಡಿಸುವಂತಿತ್ತು.  ‘ದೇಶದ ಎರಡೂಕಾಲು ಕೋಟಿ ಜನ ಅರೆ ಹೊಟ್ಟೆಯಲ್ಲಿದ್ದಾರೆ.  ಆದರೆ ಪ್ರತಿಯೊಂದು ವಿಂಡೋಸ್ ಆವೃತ್ತಿಯನ್ನು ಅಧಿಕೃತವಾಗಿ ಕೊಳ್ಳುವಾಗ ನೀಡುವ ವಿದೇಶಿ ವಿನಿಮಯವನ್ನು ಸರಿದೂಗಿಸಲು ದೇಶ ಕನಿಷ್ಠ ಅರವತ್ತು ಸೋಯಾ ಅವರೆ ಚೀಲಗಳನ್ನು ಹೊರ ದೇಶಗಳಿಗೆ ರಫ್ತು ಮಾಡಬೇಕು.  ಇದೆಂಥ ವಿಪರ್ಯಾಸ’?  ಅಧ್ಯಕ್ಷರು ಫರ್ಮಾನು ಹೊರಡಿಸಲು ಇದೊಂದೇ ಹೇಳಿಕೆ ಸಾಕಾಗಿತ್ತು.  ದೇಶದೆಲ್ಲೆಡೆ ಸರಕಾರಿ ಅನುದಾನ ಪಡೆಯುವ ಯಾವುದೇ ಸಂಸ್ಥೆ ‘ವಿಂಡೋಸ್’ ಬಳಸುವಂತಿಲ್ಲ, ಹಾಗೂ ಕೇವಲ ‘ಲಿನಕ್ಸ್’ ಆಧರಿತ ತಂತ್ರಾಂಶಗಳನ್ನಷ್ಟೇ ಅಭಿವೃದ್ಧಿ ಪಡಿಸಬೇಕು.  ಹೀಗೆ ರೂಪುಗೊಂಡ ಎಲ್ಲ ಕಂಪ್ಯೂಟರ್ ತಂತ್ರಾಂಶಗಳೂ ದೇಶದ ಜನತೆಗೆ ಮುಕ್ತವಾಗಿ ಲಭ್ಯವಾಗಬೇಕು’.  ಇಂದು ಇಡೀ ದೇಶದ ಎಲ್ಲ ಬ್ಯಾಂಕುಗಳ ಎ.ಟಿ.ಎಂ.ಗಳು (ಬೇಕೆಂದಾಗ ನಗದು ನೀಡುವ ಸ್ವಯಂಚಾಲಿತ ಯಂತ್ರ) ಸಂಪೂರ್ಣವಾಗಿ ‘ಲಿನಕ್ಸ್’ ಆಧರಿತ ತಂತ್ರಾಂಶದಲ್ಲಿ ಕಾರ್ಯನಿರ್ವಹಿಸುತ್ತಿವೆ.  ಇಂಥ ಹೆಗ್ಗಳಿಕೆ ಇಡೀ ಜಗತ್ತಿನಲ್ಲಿ ಬ್ರೆಝಿಲ್ ದೇಶಕ್ಕೆ ಮಾತ್ರವಿದೆ.    ಇಡೀ ದೇಶದ ಮಾಹಿತಿ ತಂತ್ರಜ್ಞಾನ ನೀತಿ ಸಂಹಿತೆ (ಐ.ಟಿ. ಪಾಲಿಸಿ) ಎರಡೇ ಪದಗಳದ್ದು ‘ಲಿನಕ್ಸ್‍ನದೇ ರಾಜ್ಯಭಾರ - Linux roolz'.&lt;br /&gt;&lt;br /&gt;ಇವೆಲ್ಲದರ ನೆನಪು ಬಂದದ್ದು ಕಳೆದ ಬುಧವಾರ ಬೆಂಗಳೂರಿನ ‘ಕನ್ನಡ ಗೆಳೆಯರ ಬಳಗ’ ಹಾಗೂ ಎಚ್.ಎ.ಎಲ್. ಕಾರ್ಖಾನೆಯ ‘ಕಾರ್ಮಿಕ ಲೋಕ’ಗಳ ಸಂಯುಕ್ತಾಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ ಪಂಪ ಸಭಾಂಗಣದೊಳಗೆ ಜರುಗಿದ ‘ಸುವರ್ಣ ಕರ್ನಾಟಕ ಉಪನ್ಯಾಸ ಮಾಲೆ’ಯಲ್ಲಿ ಮಾತನಾಡಲು ನಿಂತಾಗ.  ಕರ್ನಾಟಕ ಏಕೀಕರಣ, ಜಲ ಸಂಪನ್ಮೂಲಗಳು, ಪರಿಸರ, ಕನ್ನಡ ಭಾಷೆ ಹಾಗೂ ಸಾಹಿತ್ಯ ... ಹೀಗೆ ಮೌಲ್ಯಯುತ ವಿಷಯಗಳ ಬಗ್ಗೆ ಗೆಳೆಯರ ಬಳಗ ಪ್ರತಿ ತಿಂಗಳ ಮೊದಲ ಬುಧವಾರ ಸಂಜೆ ತಜ್ಞರಿಂದ ಉಪನ್ಯಾಸಗಳನ್ನು ಏರ್ಪಡಿಸುತ್ತಿದೆ.  ಈ ಬಾರಿಯ ಉಪನ್ಯಾಸದಲ್ಲಿ ‘ಮಾಹಿತಿ ಹೆದ್ದಾರಿಯಲ್ಲಿ ಕನ್ನಡದ ಗಾಡಿ’ಯ ನೋಟ ಮತ್ತು ಓಟದ ಬಗ್ಗೆ ಮಾತನಾಡುವಾಗ ‘ಬ್ರೆಝಿಲ್ ದೇಶ ನಮಗೆ ಮಾದರಿಯಾದರೆ ಕನ್ನಡವೂ ಸೇರಿದಂತೆ ಎಲ್ಲ ಭಾರ್‍ಅತೀಯ ಭಾಷೆಗಳ ಜನ ಸಾಮಾನ್ಯರಿಗೆ ಮಾಹಿತಿ ತಂತ್ರಜ್ಞಾನ ಕೈಗೆಟಕುವುದರಲ್ಲಿ ಸಂಶಯವಿಲ್ಲ’ವೆಂದೆ.&lt;br /&gt;&lt;br /&gt;ಇಂಟರ್‌ನೆಟ್‍ನಲ್ಲಿರುವ ಎಲ್ಲರೂ ಬಳಸಬಲ್ಲಂಥ, ಎಲ್ಲರೂ ಬದಲಾವಣೆ ಮಾಡಬಹುದಾದಂಥ ಮುಕ್ತ ವಿಶ್ವಕೋಶ ‘ವಿಕಿಪೀಡಿಯ’ ನಿಮಗೆ ಗೊತ್ತು.  4667 ಲೇಖನಗಳಿಂದ ಸಮೃದ್ಧವಾದ ಇದರ ಕನ್ನಡ ಅವತರಣಿಕೆಯನ್ನು (kn.wikipedia.org) ಹೊರತಂದಿರುವ ಯುವ ಕಂಪ್ಯೂಟರ್ ತಂತ್ರಜ್ಞ ಹರಿಪ್ರಸಾದ್ ನಾಡಿಗ್.  ‘ಸಂಪದ’ (www.sampada.net)  ಎಂಬ ಕನ್ನಡ ಅಂತರ್ಜಾಲ ತಾಣವನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿರುವ ಕೀರ್ತಿ ನಾಡಿಗ್ ಅವರದು.  ಅಂದಿನ ಉಪನ್ಯಾಸದಲ್ಲಿ ನಾಡಿಗ್ ‘ಯೂನಿಕೋಡ್ ಮಾನಕ ಸಂಕೇತದ ಅನುಕೂಲಗಳನ್ನು’ ಪ್ರಸ್ತಾಪಿಸುವುದರ ಜತೆಗೆ ‘ಅಂತರ್ಜಾಲದಲ್ಲಿ ಕನ್ನಡವನ್ನು ಉಳಿಸಿಕೊಳ್ಳಲು’ ಏನೆಲ್ಲಾ ಮಾಡಬಹುದೆಂದು ಪಾಂಡಿತ್ಯಪೂರ್ಣವಾಗಿ ವಿವರಿಸಿದರು.  ‘ಬ್ರೆಝಿಲ್ ದೇಶದ ಲಿನಕ್ಸ್ ಮಾದರಿಯನ್ನು ಈಗಾಗಲೇ ಕೇರಳ ರಾಜ್ಯದಲ್ಲಿ ಈಗಾಗಲೇ ಅನುಕರಿಸಲಾಗುತ್ತಿದೆ’ಯೆಂದರು.&lt;br /&gt;&lt;br /&gt;ಈ ಹೊಸ ಹೊಳಹನ್ನು ಥಟ್ಟೆಂದು ಗ್ರಹಿಸಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲರು ಇಂಥ ಕೆಲಸಗಳಿಗೆ ಕ.ಸಾ.ಪ. ಮುಕ್ತ ಸಹಕಾರ ನೀಡುವುದಾಗಿ ಘೋಷಿಸಿದರು.  ಸಭೆಯಲ್ಲಿ ಹಾಜರಿದ್ದ ‘ಕನ್ನಡ ಗಣಕ ಪರಿಷತ್’ನ ಪದಾಧಿಕಾರಿಗಳು ಪಾಟೀಲರು, ಈ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ‘ಕಗಪ’ ಅನ್ನು ಪ್ರೇರೇಪಿಸಿ ‘ನುಡಿ’ ಮಾನಕ ಕನ್ನಡ ತಂತ್ರಾಂಶದ ಅಭಿವೃದ್ಧಿ ಕಾರಣರಾದ ಸಂದರ್ಭವನ್ನು ನೆನೆಸಿಕೊಂಡರು.                &lt;br /&gt;&lt;br /&gt;&lt;span style="font-weight: bold;"&gt;&lt;span style="font-style: italic;"&gt;(ಕೃಪೆ: ವಿಜಯ ಕರ್ನಾಟಕ, 11 - 06 - 2007)&lt;/span&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/752423363868781697-2184956335522284688?l=netnota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://netnota.blogspot.com/feeds/2184956335522284688/comments/default' title='Post Comments'/><link rel='replies' type='text/html' href='http://www.blogger.com/comment.g?blogID=752423363868781697&amp;postID=2184956335522284688' title='0 Comments'/><link rel='edit' type='application/atom+xml' href='http://www.blogger.com/feeds/752423363868781697/posts/default/2184956335522284688'/><link rel='self' type='application/atom+xml' href='http://www.blogger.com/feeds/752423363868781697/posts/default/2184956335522284688'/><link rel='alternate' type='text/html' href='http://netnota.blogspot.com/2007/06/blog-post_11.html' title='ಹೀಗೊಂದು ಮುಕ್ತ ‘ಕಾವ್ಯ’ ಮೀಮಾಂಸೆ !'/><author><name>HNS</name><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_WOq6aPUeAO4/SdR5qYZ87xI/AAAAAAAAAWg/cXIYJSqE8Z4/S220/sudhi1.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_WOq6aPUeAO4/Rmys0XqiU3I/AAAAAAAAAKU/NRgWDVV7v58/s72-c/Brazil.GilbertoGil.jpg' height='72' width='72'/><thr:total>0</thr:total></entry><entry><id>tag:blogger.com,1999:blog-752423363868781697.post-1752508086117132104</id><published>2007-06-04T13:40:00.000+05:30</published><updated>2007-06-04T13:46:31.632+05:30</updated><title type='text'>ಸಿಲಿಕಾನ್ ಕೊಳ್ಳ ಈ(ಗ)-ತ್ಯಾಜ್ಯದ ಗುಂಡಿ!</title><content type='html'>&lt;a href="http://3.bp.blogspot.com/_WOq6aPUeAO4/RmPKALahtyI/AAAAAAAAAJ0/I4Szepavbwo/s1600-h/EWaste.jpg"&gt;&lt;img id="BLOGGER_PHOTO_ID_5072119709762172706" style="FLOAT: right; MARGIN: 0px 0px 10px 10px; CURSOR: hand" alt="" src="http://3.bp.blogspot.com/_WOq6aPUeAO4/RmPKALahtyI/AAAAAAAAAJ0/I4Szepavbwo/s200/EWaste.jpg" border="0" /&gt;&lt;/a&gt;&lt;br /&gt;&lt;div&gt;&lt;strong&gt;&lt;span style="font-size:180%;"&gt;‘ಬೆ&lt;/span&gt;&lt;/strong&gt;ಳಗ್ಗೆ ವಾಕಿಂಗ್ ಹೋಗುವಾಗ ಮನೆಯಲ್ಲಿದ್ದ ಹಳೆಯ ವೀಡಿಯೋ ಕ್ಯಾಸೆಟ್ ಪ್ಲೇಯರ್ (ವೀಸೀಪಿ) ಅನ್ನು ಕಸದ ತೊಟ್ಟಿಗೆ ಹಾಕಿಬಂದೆ’ - ಮಕ್ಕಳನ್ನು ನೋಡಲೊ ಅಥವಾ ಕಚೇರಿಯ ಕೆಲಸ ನಿಮಿತ್ತವೊ ಆಗಿಂದಾಗ್ಗೆ ಅಮೆರಿಕಕ್ಕೆ ಭೇಟಿ ಕೊಡುವ ಹಿರಿಯ ಅಧಿಕಾರಿಗಳೊಬ್ಬರು ಮೊನ್ನೆ ಸಿಕ್ಕಾಗ ತಮ್ಮ ಇತ್ತೀಚಿನ ಸಾಹಸದ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದರು. ಅವರ ಮನದಾಳದೊಳಗೆ ‘ನೀವೆಲ್ಲಾ ಯಕಃಶ್ಚಿತ್ ಮಾವಿನ ಓಟೆ, ಪುಸ್ತಕದ ಹೊದಿಕೆ, ಒಡೆದ ಹೂಕುಂಡ ... ಗಳನ್ನು ಕಸದ ತೊಟ್ಟಿಗೆ ಎಸೆದರೆ, ನಾನು ಬೇಡದ ವಸ್ತು ಅದೆಷ್ಟೇ ಮೌಲ್ಯದ್ದಿರಲಿ ಎಸೆಯಬಲ್ಲೆ’ ಎಂಬ ಅಹಂಭಾವವಿತ್ತು. ‘ಈ ಕೆಲಸ ನೀವು ಮಾಡಿದ್ದು, ಅಮೆರಿಕದಲ್ಲಿನ ಮಗಳ ಮನೆಯಲ್ಲಲ್ಲವೆ’? ಎಂಬ ಮುಗ್ಧ ಪ್ರಶ್ನೆ ಎಸೆದೆ. ಥಟ್ಟನೇ ಬಂತು ಉತ್ತರ ‘ಅಲ್ಲೇಕೆ, ಬೆಂಗಳೂರಿನಲ್ಲೇ ನಾನು ವೀಸೀಪಿ ಎಸೆದದ್ದು’ ಎಂದರು ಮತ್ತಷ್ಟು ಹುರುಪಿನಿಂದ. ಅಂಥ ಕೆಲಸವನ್ನು ಅಮೆರಿಕದಲ್ಲಿ ಮಾಡಿದ್ದರೆ ಪೊಲೀಸರೊ, ನಗರಪಾಲಿಕೆಯವರೊ, ನೆರೆಮನೆಯವರೊ, ಪರಿಸರ ಸಂಸ್ಥೆಗಳೊ ಅವರ ಮೇಲೆ ಕೇಸುಗಳನ್ನು ಜಡಿಯುತ್ತಿದ್ದರು. ಆ ವಿಷಯ ಅವರಿಗೆ ತಿಳಿದಿತ್ತೊ, ಇಲ್ಲವೊ ಗೊತ್ತಿಲ್ಲ.&lt;/div&gt;&lt;br /&gt;&lt;div&gt;&lt;br /&gt;ಹೊಸ ಆವಿಷ್ಕಾರಗಳಿಲ್ಲದ ಕ್ಷಣವೇ ಇಲ್ಲವೆನ್ನಬಹುದು. ಅತ್ಯಂತ ವೇಗದ ವಿಶ್ಲೇಷಕಗಳು, ಸಪಾಟಾದ ತೆರೆಗಳು, ಮುಷ್ಟಿ ಗಾತ್ರದಲ್ಲಿ ಮಿಲಿಯಗಟ್ಟಲೆ ಮಾಹಿತಿ ತುಂಬಿಟ್ಟುಕೊಳ್ಳುವ ಸ್ಮರಣಕೋಶಗಳು ಬರುತ್ತಿವೆ. ಇವುಗಳ ಜತೆಗೆ ಹೊಸ ಟೀವಿಗಳು, ಮೊಬೈಲ್ ಫೋನ್‌ಗಳು, ಡೀವೀಡಿ ಪ್ಲೇಯರ್‌ಗಳು, ಮ್ಯೂಸಿಕ್ ಸಿಸ್ಟಮ್‍ಗಳು, ಸಂಗೀತ ವಾದ್ಯಗಳು, ವಾಚುಗಳು, ಬ್ಯಾಟರಿಗಳು, ಮಿಕ್ಸಿಗಳು, ವಾಷಿಂಗ್ ಮೆಶಿನ್‍ಗಳು, ರಿಮೋಟ್ ಕಂಟ್ರೋಲ್‌ಗಳು, ಏರ್ ಕಂಡೀಶನರ್‌ಗಳು, ಸೀಡಿಗಳು, ಫ್ಲಾಪಿಗಳು, ಪೆನ್ ಡ್ರೈವ್‍ಗಳು, .... ಇಂದಿನ ‘ಹೊಸ’ ಎಲೆಕ್ಟ್ರಾನಿಕ್ ವಸ್ತುಗಳೆಲ್ಲ ನಾಳೆಗೆ ‘ಹಳೆ’ಯದು. ನಿರುಪಯೋಗಿ ವಸ್ತುಗಳನ್ನೆಲ್ಲ ನೇರವಾಗಿ ಕಸದ ಬುಟ್ಟಿಗೆ ಎಸೆಯುವ ಇಂದಿನ ಯುಗದಲ್ಲಿ ಇ-‘ತ್ಯಾಜ್ಯ’ಗಳ ನಿರ್ವಹಣೆ ದೊಡ್ಡ ತಲೆನೋವಾಗಿದೆ. ಬಣ್ಣ ಅಥವಾ ಅವುಗಳನ್ನು ಕರಗಿಸುವ ರಾಸಾಯನಿಕಗಳನ್ನು ಶೇಖರಿಸುವ ಡಬ್ಬಿಗಳನ್ನು ಮನೆಯ ಗ್ಯಾರೇಜು ಮೂಲೆಯಲ್ಲಿ ಎಸೆಯುವಂತೆ, ನಮ್ಮ ಮನೆಗಳಲ್ಲಿಯೇ ಈಗ ಹಳೆಯ ಎಲೆಕ್ಟ್ರಾನಿಕ್ ವಸ್ತುಗಳನ್ನೂ ತುಂಬಲಾಗುತ್ತಿದೆ, ಈ ತ್ಯಾಜ್ಯ ವಸ್ತುಗಳಲ್ಲಿ ಅಡಗಿರುವ ವಿಷ ಮಿಶ್ರಿತ ಲೋಹಗಳು ತರಬಹುದಾದ ಅಪಾಯಗಳ ಬಗ್ಗೆ ಯಾವುದೇ ಚಿಂತನೆಗಳಿಲ್ಲದೆಯೇ.&lt;/div&gt;&lt;br /&gt;&lt;div&gt;&lt;br /&gt;ನಮ್ಮಂಥ ಖಾಸಗಿ ವ್ಯಕ್ತಿಗಳ ಮಾತು ಬಿಡಿ, ದೊಡ್ಡ ಕಂಪನಿಗಳೂ ಸಹಾ ಹಳೆಯ ಕಂಪ್ಯೂಟರ್‌ಗಳನ್ನು ಬಿಸಾಕದಿರಲು ‘ಪರಿಸರ ಸಂರಕ್ಷಣಾ ಪ್ರಜ್ಞೆ’ ಕಾರಣವಲ್ಲ. ಮುಂದೆಂದಾದರೂ ತಮಗೇ ಉಪಯೋಗವಾಗಬಹುದು ಅಥವಾ ‘ಗಿರಾಕಿ’ ಸಿಗಬಹುದೇನೋ ಎಂಬ ನಿರೀಕ್ಷೆಯಿಂದ ಈ ಕಂಪ್ಯೂಟರ್‌ಗಳನ್ನೂ ‘ಹಿತ್ತಲಿನಲ್ಲಿ’ ಜಮಾಯಿಸುತ್ತಿದ್ದೇವೆ. ಬಳಕೆದಾರರು ಹೆಚ್ಚಾದಂತೆ, ನವ ನವೀನ ಕಂಪ್ಯೂಟರ್‌ಗಳು ಬಿಕರಿಗೆ ಬಂದಂತೆ ಈ ಸಂಗ್ರಹಣೆ ಹೆಚ್ಚಾಗುತ್ತಾ ಹೋಗುತ್ತಿದೆ. ಭಾರತ ಪ್ರತಿ ವರ್ಷ ಉತ್ಪಾದಿಸುವ ಇ-ತ್ಯಾಜ್ಯದ ಪ್ರಮಾಣ 1,46,180 ಟನ್‍ಗಳಷ್ಟಾದರೆ ‘ಕಂಪ್ಯೂಟರ್ ವ್ಯಾಮೋಹಿ’ಗಳ ತವರೂರಾದ ಬೆಂಗಳೂರಿನಲ್ಲಿ ಪ್ರತಿ ವರ್ಷ ಉತ್ಪತ್ತಿಯಾಗುವ ಇ-ತ್ಯಾಜ್ಯದ ಪ್ರಮಾಣ 8,000 ಟನ್‍ಗಳಷ್ಟು! ಎಲೆಕ್ಟ್ರಾನಿಕ್ ತ್ಯಾಜ್ಯ ವಸ್ತುಗಳನ್ನು ನಿರ್ವಹಿಸುವ ಕಂಪನಿಗಳ ವಕ್ತಾರರು ಹೇಳುವಂತೆ ಸದ್ಯಕ್ಕೆ ತಿಂಗಳಿಗೆ ಒಂದು ಲಾರಿ ಭರ್ತಿ ‘ಕಸ’ವನ್ನು ನಮ್ಮೂರಿನಲ್ಲಿ ಶೇಖರಣೆಯಾಗುತ್ತಿದೆ. &lt;/div&gt;&lt;br /&gt;&lt;div&gt;&lt;br /&gt;ಜಗನ್ಮಾನ್ಯ ಮ್ಯಾನೇಜ್‍ಮೆಂಟ್ ಗುರು ‘ಸಿ.ಕೆ. ಪ್ರಹ್ಲಾದ್’ ನಿಮಗೆ ಗೊತ್ತಿರಬೇಕು. ಅಹ್ಮದಾಬಾದಿನ ಪ್ರತಿಷ್ಠಿತ ‘ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ - ಐ.ಐ.ಎಂ.’ನ ಮ್ಯಾನೇಜ್‍ಮೆಂಟ್ ಸ್ನಾತಕೋತ್ತರ ಪದವಿಯ ನಂತರ ಅಮೆರಿಕದ ‘ಹಾರ್ವರ್ಡ್ ವಿವಿ’ಯಿಂದ ಎರಡು ಪದವಿಗಳನ್ನು ಪಡೆದವರು. ‘ಕಂಪೀಟಿಂಗ್ ಫಾರ್ ದ ಫ್ಯೂಚರ್’, ‘ದಿ ಫಾರ್ಚ್ಯೂನ್ ಅಟ್ ದ ಬಾಟಮ್ ಆಫ್ ದ ಪಿರಮಿಡ್’ ಮತ್ತಿತರ ಮ್ಯಾನೇಜ್‍ಮೆಂಟ್ ಸಂಬಂಧಿತ ಪುಸ್ತಕಗಳ ಕರ್ತೃವಾದ ಸಿ.ಕೆ. ಪ್ರಹ್ಲಾದ್, ‘ಹಾರ್ವರ್ಡ್ ಬ್ಯುಸಿನೆಸ್ ರೆವ್ಯೂ’ ಜಗನ್ಮಾನ್ಯ ನಿಯತಕಾಲಿಕದ ಬರಹಗಾರರು. ತಮ್ಮ ಲೇಖನವೊಂದರಲ್ಲಿ ಪ್ರಹ್ಲಾದ್ ಹೇಳುತ್ತಾರೆ - ‘ಭಾರತ ಭೀತಿ ಪಡಬೇಕಾಗಿರುವುದು ತನ್ನ ಶತಕೋಟಿ ಜನಸಂಖ್ಯೆಯ ಬಗ್ಗೆ ಖಂಡಿತವಾಗಿಯೂ ಅಲ್ಲ. ಆ ಒಂದು ಶತಕೋಟಿ ಜನ ಎಸೆಯಬಹುದಾದ ಕಸದ ನಿರ್ವಹಣೆ’. ಈ ಮಾತನ್ನು ಅವರು ಉದ್ಘರಿಸಿ ಒಂದು ದಶಕ ಕಳೆದಿರಬಹುದು. ಬಹುಶಃ ಇಂದು ಅವರು ಮಾತಿಗೆ ಸಿಕ್ಕರೆ ಹೇಳಬಹುದಾದ ಮಾತುಗಳು - ‘ಭಾರತದಲ್ಲಿ ಕಂಪ್ಯೂಟರ್ ಸಾಕ್ಷರರ ಸಂಖ್ಯೆ ಕೋಟಿ ಸಂಖ್ಯೆ ಮುಟ್ಟಲಿದೆಯೆಂದು ಖುಷಿ ಪಡಬೇಕಾಗಿಲ್ಲ. ನಿಜವಾದ ಆತಂಕವಿರುವುದು ಆ ಸಾಕ್ಷರರು ರಸ್ತೆಗೆ ಎಸೆಯಬಹುದಾದ ಇ-ತ್ಯಾಜ್ಯದ ನಿರ್ವಹಣೆ’. &lt;/div&gt;&lt;br /&gt;&lt;div&gt;&lt;br /&gt;ಹೋದೆಯಾ ಪಿಶಾಚಿ ಎಂದು ನಾವು ಉತ್ಪಾದಿಸುವ ಇ-ತ್ಯಾಜ್ಯ ನಿರ್ವಹಣೆಗೆ ಹರಸಾಹಸ ಮಾಡುತ್ತಿದ್ದರೆ ಇತ್ತ ಬಂದೆ ಗವಾಕ್ಷಿಯಲ್ಲಿ ಎಂಬಂತೆ ತಿಂಗಳಿಗೆ 40,000 ಟನ್‍ಗಳಷ್ಟು ತೂಕದ ಬಳಕೆಯಾದ ಎಲೆಕ್ಟ್ರಾನಿಕ್ ಉಪಕರಣಗಳು ವಿವಿಧ ದೇಶಗಳಿಂದ ಭಾರತಕ್ಕೆ ಬಂದು ಬೀಳುತ್ತಿವೆ. ಇತ್ತೀಚೆಗಷ್ಟೇ ಇಂಥ ಆಮದುಗಳನ್ನು ಚೀನಾ ದೇಶ ತಡೆ ಹಾಕಿರುವುದರಿಂದ ಭಾರತ ಮತ್ತು ಪಾಕಿಸ್ತಾನ ದೇಶಗಳಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಇ-ತ್ಯಾಜ್ಯ ಹರಿದು ಬರುತ್ತಿದೆ. ಈ ಪ್ರಕ್ರಿಯೆಗೊಂದು ಆರ್ಥಿಕ ಹಿನ್ನೆಲೆಯಿದೆ. ಅಮೆರಿಕದಲ್ಲಿ ಒಂದು ತ್ಯಾಜ್ಯ ಕಂಪ್ಯೂಟರ್ ಅನ್ನು ಮರುಬಳಕೆಗೆ ಸಿದ್ಧಗೊಳಿಸಲು ತಗಲುವ ವೆಚ್ಚ ತಲಾ ಇಪ್ಪತ್ತು ಡಾಲರ್‌ಗಳು. ಇಂಥ ತ್ಯಾಜ್ಯ ಕಂಪ್ಯೂಟರ್‌ಗಳನ್ನು ಭಾರತದ ಗುಜರಿ ವ್ಯಾಪಾರಿಗಳು ತಲಾ ಹದಿನೈದು ಡಾಲರ್ ಬೆಲೆ ಕೊಟ್ಟು ಕೊಳ್ಳುತ್ತಾರೆ. ಅಂದರೆ ಕಂಪನಿಗಳಿಗೆ ಒಂದೊಂದು ತ್ಯಾಜ್ಯ ಕಂಪ್ಯೂಟರ್‌ಗಳಿಂದ ಒಟ್ಟು ಮೂವತ್ತೈದು ಡಾಲರ್ ಲಾಭ. ಇತ್ತ ತ್ಯಾಜ್ಯ ಕಂಪ್ಯೂಟರ್‌ಗಳಲ್ಲಡಗಿರುವ ಅಮೂಲ್ಯ ಲೋಹಗಳನ್ನು ಹೊರತೆಗೆಯುವ ಗುಜರಿ ವ್ಯಾಪಾರಿಗಳು ಪ್ರತಿ ಕಂಪ್ಯೂಟರ್‌ನಿಂದ ಗಳಿಸುವ ಹಣ ಇಪ್ಪತ್ತೈದು ಡಾಲರ್‌ಗಳು. ಅಂದರೆ ಹತ್ತು ಡಾಲರ್‌ಗಳ ನಿವ್ವಳ ಲಾಭ. &lt;/div&gt;&lt;br /&gt;&lt;div&gt;&lt;br /&gt;ಎಸೆಯುವವ, ಆಯುವವ - ಇಬ್ಬರಿಗೂ ಲಾಭ ತರುವ ಈ ಉದ್ದಿಮೆಯಿಂದ ಒಟ್ಟಾರೆ ನಷ್ಟವಾಗುವುದು ಯಾರಿಗೆ? ಒಂದು, ನಮ್ಮ ದೇಶದ ಪರಿಸರಕ್ಕೆ. ಮತ್ತೊಂದು ಇಂಥ ತ್ಯಾಜ್ಯ ನಿರ್ವಹಣಾ ಕೇಂದ್ರಗಳಲ್ಲಿ ದುಡಿಯುವ ಅಶಿಕ್ಷಿತ ಮಕ್ಕಳು ಹಾಗೂ ದೊಡ್ಡವರಿಗೆ. ಯಾವುದೇ ರೂಪದಲ್ಲಿ ನಮ್ಮ ದೇಹ ಸೇರಿಕೊಂಡರೂ ಸೀಸದಿಂದಾಗುವ ಅಪಾಯ ಹೇಳಲಸದಳ. ಇದರ ಬಳಕೆ ಹೆಚ್ಚಾಗಿರುವುದು, ಪಿ.ಸಿ ಗಳಲ್ಲಿ (ಪರ್ಸನಲ್ ಕಂಪ್ಯೂಟರ್) ಇರುವ ಟೀವಿಯಂತಹ ತೆರೆಯಲ್ಲಿ (ಮಾನಿಟರ್). ಉಳಿದಂತೆ ಪಾದರಸ ಮತ್ತು ಕ್ಯಾಡ್ಮಿಯಮ್ ಲೋಹಗಳು ಎಲ್ಲ ವಿದ್ಯುನ್ಮಾನ ಬಿಡಿಭಾಗಗಳಲ್ಲಿ ಯಥೇಚ್ಛವಾಗಿ ಬಳಸಲಾಗುತ್ತದೆ. ಇಂಥ ನಿರುಪಯೋಗಿ ಇ-ತ್ಯಾಜ್ಯವನ್ನು ಈ ಹಿಂದೆ ಅಮೆರಿಕದ ನಗರಗಳಲ್ಲಿ ಹಳ್ಳ-ಕೊಳ್ಳಗಳನ್ನು ಮುಚ್ಚಲು ಬಳಸಲಾಗುತ್ತಿತ್ತು. ಪರಿಸರ ಕಾಳಜಿ ಹೊಂದಿರುವ ಸೇವಾ ಸಂಸ್ಥೆ ‘ಸಿಲಿಕಾನ್ ವ್ಯಾಲಿ ಟಾಕ್ಸಿಕ್ಸ್ ಕೋಅಲಿಶನ್’ ನ ವರದಿಯಂತೆ ಕಂಪ್ಯೂಟರ್‌ಗಳ ತವರೂರಾದ ‘ಸಿಲಿಕಾನ್ ಕೊಳ್ಳ’ದ (ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದ ಸ್ಯಾನ್‍ಫ್ರಾನ್ಸಿಸ್ಕೋ/ಸ್ಯಾನ್ ಹ್ಯೂಸೆ ಪಟ್ಟಣಗಳು) ಅಂತರ್ಜಲ ಈಗಾಗಲೇ ಕಲುಷಿತವಾಗಿದೆ. ಇ-ತ್ಯಾಜ್ಯ ನಿರ್ವಹಣೆಯ ಮಾತು ಬಂದಾಗ ಕಂಪ್ಯೂಟರ್ ತ್ಯಾಜ್ಯಕ್ಕೇ ಏಕಿಷ್ಟು ಪ್ರಾಮುಖ್ಯವೆಂದರೆ ಬಟ್ಟೆ ಒಗೆಯುವ ಯಂತ್ರ, ಹವಾ ನಿಯಂತ್ರಕ, ಶೈತ್ಯೀಕರಣ ಯಂತ್ರ ಮುಂತಾದ ಗೃಹ ಬಳಕೆ ವಸ್ತುಗಳಲ್ಲಿ ಶೇ.70ರಷ್ಟು ತ್ಯಾಜ್ಯ ವಸ್ತುಗಳು ಮರುಬಳಕೆಯಾಗಿದ್ದರೆ, ತ್ಯಾಜ್ಯ ಕಂಪ್ಯೂಟರ್‌ಗಳ ಮರುಬಳಕೆ ಕೇವಲ ಶೇ.6.&lt;/div&gt;&lt;br /&gt;&lt;div&gt;&lt;br /&gt;ಭಾರತದಲ್ಲಿ ಇ-ತ್ಯಾಜ್ಯ ನಿರ್ವಹಣೆ ನಡೆಯುವುದು ಅಸಂಘಟಿತ ಉದ್ದಿಮೆಗಳಲ್ಲಿ. ದೆಹಲಿ, ಬೆಂಗಳೂರು, ಮೀರತ್, ಚೆನ್ನೈ, ಮುಂಬೈ ನಗರಗಳ ಗಲ್ಲಿಗಳಲ್ಲಿ ಕಾರ್ಯನಿರ್ವಹಿಸುವ ಇಂಥ ಕಾರ್ಖಾನೆಗಳ ಪ್ರಧಾನ ಆಸಕ್ತಿ, ಎಲೆಕ್ಟ್ರಾನಿಕ್ ಮಂಡಲಗಳಲ್ಲಿ ಹುದುಗಿರಬಹುದಾದ ಚಿನ್ನ ಹಾಗೂ ಪ್ಲಾಟಿನಂ ಲೋಹಗಳ ತುಣಕುಗಳು. ಈ ಪ್ರಕ್ರಿಯೆಯ ಮೊದಲ ಭಾಗ ಪ್ಲಾಸ್ಟಿಕ್ ಭಾಗಗಳನ್ನು ಕುಟ್ಟಿ, ತಟ್ಟಿ, ಸುಟ್ಟು ಹೊರತೆಗೆಯುವುದು. ನಂತರ ತೀಕ್ಷ್ಣ ಶಕ್ತಿಯ ಆಮ್ಲಗಳಲ್ಲಿ ಉಳಿದ ಭಾಗಗಳನ್ನು ಅದ್ದಿ ತೆಗೆದು ಅಮೂಲ್ಯ ಲೋಹಗಳನ್ನು ಕರಗಿಸಿಕೊಳ್ಳುವುದು. ನಂತರ ರಾಸಾಯನಿಕಗಳನ್ನು ಬೆರೆಸಿ ಲೋಹಗಳನ್ನು ಹೊರತೆಗೆಯುವುದು. ಸೂಕ್ತ ಚರ್ಮ ರಕ್ಷಕ ಕವಚಗಳನ್ನು ನೀಡದೆಯೆ ಅನಕ್ಷರಸ್ಥ ಕಾರ್ಮಿಕವರ್ಗದಿಂದ ಮಾಡಿಸಿಕೊಳ್ಳುವ ಅಮಾನವೀಯ ಕೆಲಸವಿದು. ನಿರುಪಯೋಗಿ ಎನಿಸಿದ ಕೇಬಲ್‍ಗಳು, ಮುದ್ರಕದ ಇಂಕು ಖಾಲಿಯಾದ ಟೋನರ್ ಕಾರ್ಟ್ರಿಜ್‍ಗಳು, ನಿರುಪಯೋಗಿ ವಿದ್ಯುನ್ಮಾನ ಮಂಡಲಗಳು ಪುಡಿಯಾಗುವುದರ ಜತೆಗೆ ಬೆಂಕಿಗಾಹುತಿಯಾಗಿ ತಮ್ಮೊಳಗೆ ಅಡಗಿರುವ ಕ್ಯಾಡ್ಮಿಯಂ, ಕ್ರೋಮಿಯಂ, ಸೀಸ, ಪಾದರಸ ಮತ್ತಿತರ ವಿಷವಸ್ತುವಿನ ಅನಿಲಗಳನ್ನು ಪರಿಸರಕ್ಕೆ ಬಿಡುಗಡೆ ಮಾಡುತ್ತವೆ. &lt;/div&gt;&lt;br /&gt;&lt;div&gt;&lt;br /&gt;ಏತನ್ಮಧ್ಯೆ ಪರಿಸರ ವಾದಿಗಳ ಬೆದರಿಕೆಗೆ ಮಣಿದು ಉತ್ಪಾದಕರು, ಅಪಾಯಕಾರಿ ಲೋಹಗಳ ಬಳಕೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುತ್ತಿದ್ದಾರೆ. ಆದರೆ ಬಳಕೆದಾರರು ಹೆಚ್ಚುತ್ತಿರುವುದರಿಂದ ಒಟ್ಟಾರೆ ಉತ್ಪಾದನೆ ಏರುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ. ತ್ಯಾಜ್ಯ ವಸ್ತುಗಳನ್ನು ಮರುಬಳಕೆಗೆ ತರುವುದರಿಂದ ಒಟ್ಟಾರೆ ಪರಿಸರ ಸಮತೋಲನವನ್ನು ಸಾಧ್ಯವಾದಷ್ಟು ಕಾಪಾಡಬಹುದು. ಇಂತಹ ಪ್ರಯತ್ನಗಳಿಗೆ ಸಾಕಷ್ಟು ಉತ್ತೇಜನ ಕೊಡಿ ಎಂದು ಉತ್ಪಾದಕರನ್ನು ‘ಪರಿಸರ ಸಂಸ್ಥೆಗಳು’ ಒತ್ತಾಯಿಸುತ್ತಿವೆ. ರಾಸಾಯನಿಕ ಅಪಾಯಗಳನ್ನು ಮನಗಂಡು ಹಳ್ಳ ಕೊಳ್ಳಗಳಲ್ಲಿ ನಿರುಪಯೋಗಿ ಕಂಪ್ಯೂಟರ್ ತೆರೆಗಳು, ಟೀವಿಗಳು ಮತ್ತಿತರ ಗಾಜಿನ ತೆರೆಗಳನ್ನು ಎಸೆಯುವಂತಿಲ್ಲವೆಂಬ ನಿಯಮ ನಮ್ಮ ಮಹಾನಗರ ಪಾಲಿಕೆಯಲ್ಲಿಯೇ ಇದೆ. ಕುಟ್ಟಿ, ಪುಡಿಮಾಡಿ, ಕರಗಿಸಿ, ರಾಸಾಯನಿಕ ‘ಸಾರ’ವನ್ನು ಹೊರ ತೆಗೆಯಲು ಸಾಧ್ಯವೇ ಎಂಬ ಪರಿಶೀಲನೆಯನ್ನು ಕೆಲವು ಕಂಪನಿಗಳು ನಡೆಸಿ, ತುಟ್ಟಿಯ ಬಾಬ್ತೆಂದು ಕೈಚೆಲ್ಲಿವೆ. ಇತ್ತ ಎಸೆಯುವಂತಿಲ್ಲ, ಅತ್ತ ಬಳಸುವಂತಿಲ್ಲ ಎಂಬ ಸಂದಿಗ್ದದಲ್ಲಿರುವ ಕಂಪ್ಯೂಟರ್ ಬಳಕೆದಾರರು, ಶಾಲಾ ಕಾಲೇಜುಗಳಿಗೆ ‘ದಾನ’ ನೀಡಿ ಪುಣ್ಯ ಕಟ್ಟಿಕೊಳ್ಳುವ ಸನ್ನಾಹದಲ್ಲಿದ್ದಾರೆ. ‘ಸೂಕ್ತ’ ರಿಪೇರಿ ಮಾಡಿ, ಬಿಕರಿ ಮಾಡಬಲ್ಲ ‘ಗುಜರಿ’ ಕಂಪನಿಗಳೂ ಸಾಕಷ್ಟು ತಲೆಯೆತ್ತಿವೆ. ಸರ್ವದಾ ಹೊಸತನ್ನೇ ಅರಸುವವರೇ ಹೆಚ್ಚಾಗಿರುವ (ಹೊಸ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಇಳಿಯುತ್ತಿರುವ) ಇಂದಿನ ದಿನಗಳಲ್ಲಿ ಈ ವ್ಯಾಪಾರ ಲಾಭದಾಯಕವಲ್ಲ. ಇಂತಹ ಪರಿಸ್ಥಿತಿಯಲ್ಲಿ ನಿರುಪಯೋಗಿ, ಕಂಪ್ಯೂಟರ್‌ಗಳನ್ನು ಏನು ಮಾಡಬೇಕೆಂಬ ಚಿಂತೆ ಕಂಪ್ಯೂಟರ್ ತಜ್ಞರಿಗಿಂತ, ಪರಿಸರ ವಿಜ್ಞಾನಿಗಳನ್ನು ಕಾಡುತ್ತಿದೆ. ಪರಮಾಣು ‘ತ್ಯಾಜ್ಯ’ ವಸ್ತುಗಳನ್ನು ಆಳವಾದ ಸುರಕ್ಷಿತ ಗಣಿಗಳಲ್ಲಿ ಹೂತಿಡುವಂತೆ, ಕಂಪ್ಯೂಟರ್‌ಗಳನ್ನೂ ಭೂಗರ್ಭದಲ್ಲಿ ನೇರವಾಗಿ ಹುದುಗಿಸುವ ಯೋಜನೆಯೊಂದು ಮೆಸಾಶ್ಯುಸೆಟ್ಸ್ ರಾಜ್ಯದ ಕಂಪನಿಯ ಮೇಜಿನ ಮೇಲಿದೆ. ರಸ್ತೆಗಳ ಗುಂಡಿಗಳನ್ನು ಮುಚ್ಚಲು ತ್ಯಾಜ್ಯ ಕಂಪ್ಯೂಟರಿನ ಪ್ಲಾಸ್ಟಿಕ್ ಬಳಸುವಂತಹ ಮತ್ತೊಂದು ವಿನೂತನ ಯೋಜನೆಗಳ ಬಗ್ಗೆಯೂ ಅಲ್ಲಲ್ಲಿ ಚಿಂತನೆ ನಡೆದಿದೆ. &lt;/div&gt;&lt;br /&gt;&lt;div&gt;&lt;br /&gt;ನಮ್ಮ ನಿಮ್ಮೆಲ್ಲರ ಮನೆಗಳಲ್ಲಿರುವ ನಿರುಪಯೋಗಿ ಎಲೆಕ್ಟ್ರಾನಿಕ್ ವಸ್ತುಗಳ ಪಟ್ಟಿ ಮಾಡಿ, ಅವುಗಳನ್ನು ರಸ್ತೆಗೆ ಎಸೆಯದೆಯೆ ನಿರ್ವಹಿಸುವುದು ಹೇಗೆಂದು ಯೋಚಿಸಲು ನಾಳೆಗಿಂತ (ವಿಶ್ವ ಪರಿಸರ ದಿನ) ಪ್ರಶಸ್ತ ದಿನ ಮತ್ತೊಂದಿಲ್ಲ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;strong&gt;&lt;em&gt;(ಕೃಪೆ : ವಿಜಯ ಕರ್ನಾಟಕ, 04-06-2007)&lt;/em&gt;&lt;/strong&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/752423363868781697-1752508086117132104?l=netnota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://netnota.blogspot.com/feeds/1752508086117132104/comments/default' title='Post Comments'/><link rel='replies' type='text/html' href='http://www.blogger.com/comment.g?blogID=752423363868781697&amp;postID=1752508086117132104' title='4 Comments'/><link rel='edit' type='application/atom+xml' href='http://www.blogger.com/feeds/752423363868781697/posts/default/1752508086117132104'/><link rel='self' type='application/atom+xml' href='http://www.blogger.com/feeds/752423363868781697/posts/default/1752508086117132104'/><link rel='alternate' type='text/html' href='http://netnota.blogspot.com/2007/06/blog-post.html' title='ಸಿಲಿಕಾನ್ ಕೊಳ್ಳ ಈ(ಗ)-ತ್ಯಾಜ್ಯದ ಗುಂಡಿ!'/><author><name>HNS</name><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_WOq6aPUeAO4/SdR5qYZ87xI/AAAAAAAAAWg/cXIYJSqE8Z4/S220/sudhi1.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_WOq6aPUeAO4/RmPKALahtyI/AAAAAAAAAJ0/I4Szepavbwo/s72-c/EWaste.jpg' height='72' width='72'/><thr:total>4</thr:total></entry><entry><id>tag:blogger.com,1999:blog-752423363868781697.post-7586145764870658651</id><published>2007-05-29T20:57:00.000+05:30</published><updated>2007-05-29T21:03:24.867+05:30</updated><title type='text'>‘ಪಿಷ್ಟ’ - ಪರಿಸರ ಪ್ರೇಮಿಗಳು ಇಷ್ಟ ಪಡಬಹುದಾದ ಇಂಧನಜನಕ</title><content type='html'>&lt;a href="http://3.bp.blogspot.com/_WOq6aPUeAO4/RlxHp7ahtwI/AAAAAAAAAJk/yMzpB3If4NA/s1600-h/potato_car.jpg"&gt;&lt;img id="BLOGGER_PHOTO_ID_5070006066161497858" style="FLOAT: right; MARGIN: 0px 0px 10px 10px; CURSOR: hand" alt="" src="http://3.bp.blogspot.com/_WOq6aPUeAO4/RlxHp7ahtwI/AAAAAAAAAJk/yMzpB3If4NA/s200/potato_car.jpg" border="0" /&gt;&lt;/a&gt;&lt;br /&gt;&lt;div&gt;&lt;span style="font-size:180%;"&gt;&lt;strong&gt;‘ಮ&lt;/strong&gt;&lt;/span&gt;ತ್ತೊಮ್ಮೆ ತಿನ್ನುವ ಆಹಾರದಿಂದ ನಾವು ಇಂಧನ ರೂಪಿಸಲು ಯೋಚಿಸುತ್ತಿದ್ದೇವೆ, ಅಂದರೆ ಶಕ್ತಿ ಸಂಚಯಿಸಿಕೊಳ್ಳುವಲ್ಲಿ ಇದೀಗ ನಮಗೂ ನಮ್ಮ ಕಾರಿಗೂ ನೇರ ಸ್ಫರ್ಧೆ. ಅಲ್ಲ ಸರ್, ನಾವು ತಿನ್ನಬೇಕೊ? ಅಥವಾ ಕಾರ್ ಓಡಿಸಬೇಕೊ’? ‘ಇಂಧನ ಕೋಶ’ದ ಬಗ್ಗೆ ವಿಜ್ಞಾನ ಪತ್ರಿಕೆಯೊಂದರಲ್ಲಿ ಮೊನ್ನೆ ಶುಕ್ರವಾರ ಪ್ರಕಟವಾದ ಲೇಖನವೊಂದಕ್ಕೆ ಓದುಗರೊಬ್ಬರು ಥಟ್ಟೆಂದು ಕೊಟ್ಟ ಪ್ರತಿಕ್ರಿಯೆಯಿದು. ಆ ಪ್ರತಿಕ್ರಿಯೆಯ ಪೂರ್ಣಪಾಠವನ್ನು ಮುಂದೆ ಓದೋಣ. ಯಾವುದೇ ಒಂದು ಲೇಖನ ಪ್ರಕಟವಾದ ಅರ್ಧ ಗಂಟೆಯೊಳಗೆ ಓದುಗನ/ಳ ಪ್ರತಿಕ್ರಿಯೆ ಈ ರೀತಿ ಬಂತೆಂದರೆ ಅದು ಲೇಖಕನ ಹಾಗೂ ಸಂಪಾದಕನ ಸೌಭಾಗ್ಯ. ಇಂಟರ್‌ನೆಟ್‍ನಲ್ಲಿ ಲಭ್ಯವಿರುವ ‘ಆನ್‍ಲೈನ್’ ಪತ್ರಿಕೆಗಳಲ್ಲಿ ಪ್ರಕಟವಾದ ಯಾವುದೇ ಸುದ್ದಿ, ವರದಿ, ವಿಶ್ಲೇಷಣೆ, ಲೇಖನ, ಚಿತ್ರಗಳಿಗೆ ಅದರಡಿಯಲ್ಲಿಯೇ ಓದುಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು. ಈ ಸೌಲಭ್ಯ ಕೇವಲ ಇಂಗ್ಲಿಷ್ ಹಾಗೂ ಕೆಲ ಯೂರೋಪ್ ಭಾಷೆಗಳಿಗೆ ಮಾತ್ರ ಸಿಕ್ಕಿದೆ. ಸಾರ್ವತ್ರಿಕ ಹಾಗೂ ಜಗನ್ಮಾನ್ಯ ಲಿಪಿ ಸಂಕೇತಗಳ ಸೌಕರ್ಯವಿದ್ದರೆ ನಮ್ಮ ಕನ್ನಡವೂ ಸೇರಿದಂತೆ ಯಾವುದೇ ಇಂಗ್ಲಿಷ್-ಅಲ್ಲದ ಭಾಷೆಯ ಇಂಟರ್‌ನೆಟ್ ಪ್ರಕಟನೆಗಳಿಗೆ ಬಾಲಂಗೋಚಿ ಸೇರಿಸಬಹುದು.&lt;/div&gt;&lt;br /&gt;&lt;div&gt;&lt;br /&gt;ಇಂ’ಧನ’ ಎಂದೊಡನೆ ಕೇವಲ ಅದರೊಳಗೇ ಹಾಸುಹೊಕ್ಕಾಗಿರುವ ‘ಧನ’ದ ಬಗ್ಗೆ ಮಾತ್ರ ಚಿಂತಿಸುವ ಹಾಗಿಲ್ಲ. ದನ ತಿನ್ನುವ ಹುಲ್ಲಿನಿಂದ ಹಿಡಿದು ಮನುಷ್ಯರು ಮೆಲ್ಲುವ ಜೋಳ-ಕಬ್ಬು ಅಥವಾ ಸವಿಯುವ ಆಲ್ಕೋಹಾಲ್ ಇತ್ಯಾದಿಗಳ ಬಗ್ಗೆಯೂ ಚರ್ಚಿಸಬೇಕಾಗುತ್ತದೆ. ‘ಜಾಗತಿಕ ಬಿಸಿ’ಯನ್ನು ಕಮ್ಮಿಯಾಗಿಸುವ, ಹೆಚ್ಚು ಮಾಲಿನ್ಯ ಮಾಡದ ಪರ್ಯಾಯ ಇಂಧನಗಳು ಹಾಗೂ ಇಂಧನಕ್ಕೆ ಬೆರೆಸಬಹುದಾದ ದ್ರಾವಣಗಳ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಜಲಜನಕ ತುಂಬಿದ ಇಂಧನ ಕೋಶ‍ಗಳ್ (ಫ್ಯೂಯಲ್ ಸೆಲ್) ಅನುಕೂಲಗಳೇನೆಂದರೆ ಉತ್ತಮ ಕಾರ್ಯಕ್ಷಮತೆ ಹಾಗೂ ಸಂಪೂರ್ಣ ಮಾಲಿನ್ಯರಹಿತ್ಯ. ಆದರೆ ಜಲಜನಕ ದಹನಕಾರಿ ಅನಿಲವಾದ್ದರಿಂದ ಅದರ ಸುರಕ್ಷ ಶೇಖರಣೆಯೊಂದು ದೊಡ್ಡ ಸಮಸ್ಯೆ. ಜತೆಗೆ ತಂತ್ರಜ್ಞಾನ ಅದೆಷ್ಟೇ ಪ್ರಗತಿ ಸಾಧಿಸಿದ್ದರೂ ಅಗ್ಗದ ದರದಲ್ಲಿ ಭಾರಿ ಪ್ರಮಾಣದ ಜಲಜನಕವನ್ನು ಉತ್ಪಾದನೆ ಮಾಡುವುದು ಸಾಧ್ಯವಾಗಿಲ್ಲ. ಹೀಗಾಗಿ ಗಾಳಿ ಹಾಗೂ ನೀರಿನ ಹೊರತಾದ ಜಲಜನಕ ಮೂಲಗಳನ್ನು ವಿಜ್ಞಾನಿಗಳು ಅರಸುತ್ತಿದ್ದಾರೆ. &lt;/div&gt;&lt;br /&gt;&lt;div&gt;&lt;br /&gt;ಗಾಳಿ ಹಾಗೂ ನೀರಿನಿಂದ ಜಲಜನಕವನ್ನು ಹೊರತೆಗೆಯಲು ಅಪಾರ ಪ್ರಮಾಣದ ವಿದ್ಯುತ್ ಬೇಕು. ಇತ್ತ ಜಲಜನಕ ಸಮೃದ್ಧವಾಗಿರುವ ಜೈವಿಕ ವಸ್ತುಗಳಿಂದ ಈ ಅನಿಲ ಹೊರತೆಗೆಯುವ ಸಾಂಪ್ರದಾಯಿಕ ಪದ್ಧತಿಗಳು ಸಾಮಾನ್ಯವಾಗಿ ಹೆಚ್ಚಿನ ತಾಪಮಾನದಲ್ಲಿ ಕಾರ್ಯನಿರ್ವಹಿಸುತ್ತವೆ. ಅಂತೆಯೇ ಹೆಚ್ಚು ಶಕ್ತಿಯನ್ನು ಕಬಳಿಸುತ್ತವೆ. ಈ ಶಕ್ತಿ ಸಮಸ್ಯೆಯಿಂದ ಪಾರಾಗಲು ತಂತ್ರಜ್ಞರು ಹೂಡಿದ ಹಂಚಿಕೆ, ಸಾಮಾನ್ಯ ತಾಪಮಾನದಲ್ಲಿ ಜಲಜನಕವನ್ನು ಹೊರತೆಗೆಯುವ ರಾಸಾಯನಿಕ ಕಿಣ್ವಗಳ ವಿನ್ಯಾಸಗೊಳಿಸುವುದು. ಈ ಕಿಣ್ವಗಳೆಂದರೆ ನಿಮಗೆ ಗೊತ್ತು. ಜೀವರಾಸಾಯನಿಕ ಕ್ರಿಯೆಯನ್ನು ವೃದ್ಧಿಸುವ ಈ ವಸ್ತು ಜೀವಕೋಶಗಳಲ್ಲಿ ಉತ್ಪತ್ತಿಯಾಗುತ್ತದೆ. ಅಸಂಖ್ಯಾತ ಸಂಕೀರ್ಣ ಪ್ರೋಟೀನ್‍ಗಳು ಒಗ್ಗೂಡಿ ಇದು ನಿರ್ಮಾಣವಾಗಿರುತ್ತದೆ. ಸಹಜ ಉಷ್ಣತೆಯಲ್ಲಿ ತಾನು ನಶಿಸದೆಯೆ/ಬದಲಾಗದೆಯೆ ಜೀವರಸಾಯನಿಕ ಕ್ರಿಯೆಗಳನ್ನು ಪ್ರೇರೇಪಿಸುತ್ತದೆ. ಅಮೆರಿಕದಲ್ಲಿನ ವರ್ಜೀನಿಯ ವಿವಿ, ಜಾರ್ಜಿಯ ವಿವಿ ಹಾಗೂ ಓಕ್ ರಿಡ್ಜ್ ರಾಷ್ಟ್ರೀಯ ಪ್ರಯೋಗಶಾಲೆಯ ವಿಜ್ಞಾನಿಗಳು ಒಟ್ಟಾಗಿ ನಡೆಸಿದ ಸಂಶೋಧನೆಯಲ್ಲಿ ಹಲವಾರು ಕಿಣ್ವಗಳ ‘ರಸಾಯನ’ವು ಜಲಜನಕವನ್ನು ಅತ್ಯಂತ ಸಮರ್ಥವಾಗಿ ಹೊರತೆಗೆಯಲು ಸಾಧ್ಯವೆಂದು ಇದೀಗ ಸಾಬೀತಾಗಿದೆ. &lt;/div&gt;&lt;br /&gt;&lt;div&gt;&lt;br /&gt;ನಮ್ಮ ಬಹುತೇಕ ಆಹಾರ ಧಾನ್ಯಗಳಲ್ಲಿರುವ ‘ಪಿಷ್ಟ’ (ಸ್ಟಾರ್ಚ್) ಗೊತ್ತಲ್ಲವೆ? ಇದರೊಂದಿಗೆ ನೀರನ್ನು ಬೆರೆಸಿ ‘ಕಿಣ್ವ ಸಂಯುಕ್ತ’ದ ನೆರವಿನಿಂದ ಜಲಜನಕ ಹಾಗೂ ಇಂಗಾಲದ ಡೈ ಆಕ್ಸೈಡ್ ಉತ್ಪಾದಿಸುವ ಯೋಜನೆ ಪ್ರಯೋಗಶಾಲೆಯ ಹಂತದಲ್ಲಿ ಯಶಸ್ವಿಯಾಗಿದೆ. ಹಿಟ್ಟಿಗೆ ಹುದುಗು ಬರಿಸುವ ಯೀಸ್ಟ್, ಬ್ಯಾಕ್ಟೀರಿಯ, ಸೊಪ್ಪು, ಹಾಗೂ ಮೊಲದ ಸ್ನಾಯುಗಳಿಂದ ಹೊರತೆಗೆದ ಕಿಣ್ವಗಳನ್ನು ಹದವಾಗಿ ಬೆರೆಸಿ ರೂಪಿಸಿದ ಸಂಯುಕ್ತಕ್ಕೆ ಜಲಜನಕವನ್ನು ಸಾಮಾನ್ಯ ಉಷ್ಣತೆಯಲ್ಲಿಯೇ ಬೇರ್ಪಡಿಸುವ ಸಾಮರ್ಥ್ಯವಿರುವುದು ಪತ್ತೆಯಾಗಿದೆ. ಇಲ್ಲಿ ಉತ್ಪಾದನೆಯಾಗುವ ಇಂಗಾಲದ ಡೈ ಆಕ್ಸೈಡ್ ಅನ್ನು (ಪಿಷ್ಟ ಹಾಗೂ ಸಸ್ಯಮೂಲ ಕಿಣ್ವಗಳನ್ನು ಕೊಡುವ) ಗಿಡಮರಗಳು ಸ್ವೀಕರಿಸುವುದರಿಂದ ಪರಿಸರ ಸಮತೋಲನಕ್ಕೆ ಹೆಚ್ಚಿನ ಧಕ್ಕೆಯಾಗುವುದಿಲ್ಲವೆಂಬ ನಂಬಿಕೆ ವಿಜ್ಞಾನಿಗಳದು. &lt;/div&gt;&lt;br /&gt;&lt;div&gt;&lt;br /&gt;ಸಕ್ಕರೆ ಹಾಗೂ ಶರ್ಕರ ಪಿಷ್ಟಗಳಿಂದ ಜಲಜನಕವನ್ನು ಉತ್ಪಾದಿಸುವ ಹಿಂದಿನ ಪ್ರಯತ್ನಗಳಲ್ಲಿಯೂ ಕಿಣ್ವಗಳನ್ನು ಬಳಸಲಾಗಿತ್ತು. ಆದರೆ ಈ ಕ್ರಿಯೆಯ ಕಾರ್ಯಕ್ಷಮತೆ ಅತ್ಯಂತ ಕಡಿಮೆಯಾಗಿತ್ತು. ಕಾರಣ, ಮಾರುಕಟ್ಟೆಯಲ್ಲಿ ಲಭ್ಯವಿರುವ ಕಿಣ್ವಗಳನ್ನು ಈ ಪ್ರಯೋಗಗಳಿಗೆ ಬಳಸಲಾಗಿತ್ತು. ಹಾಗೆಂದ ಮಾತ್ರಕ್ಕೆ ಸಧ್ಯಕ್ಕೆ ರೂಪಿಸಲಾದ ವ್ಯವಸ್ಥೆಯಲ್ಲಿ ನ್ಯೂನತೆಗಳಿಲ್ಲವೆಂದೇನಲ್ಲ. ಒಂದು ಕಿಣ್ವ ರಾಸಾಯನಿಕ ಕ್ರಿಯೆಯಲ್ಲಿ ಹೊರಗೆಡಹುವ ಉಪ-ಉತ್ಪನ್ನ ಮತ್ತೊಂದು ಕಿಣ್ವದ ಕಾರ್ಯಾಚರಣೆಗೆ ಅಡ್ಡಿಯಾಗಬಹುದು. ಅಂದರೆ ರಾಸಾಯನಿಕ ಕ್ರಿಯೆಯ ಮುಂದಿನ ಹಂತಗಳು ಗತಿ ಕುಂಠಿತವಾಗಬಹುದು. ಈ ಯೋಜನಎಯಲ್ಲಿ ಭಾಗಿಯಾಗಿರುವ ಜಾರ್ಜಿಯ ವಿವಿಯ ಜೈವಿಕ ರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮೈಕೇಲ್ ಆಡಮ್ಸ್ ಅವರು ಹೇಳುವಂತೆ ಇಡೀ ಪ್ರಕ್ರಿಯೆಯನ್ನು ಕೊಂಚ ಹೆಚ್ಚಿನ ತಾಪಮಾನದಲ್ಲಿ ನಡೆಸಿದರೆ, ಜಲಜನಕದ ಇಳುವರಿಯನ್ನು ಹೆಚ್ಚಿಸಿಕೊಳ್ಳಬಹುದು. ಅವರ ಒಂದು ವೈಜ್ಞಾನಿಕ ಅಂದಾಜಿನಂತೆ ಪ್ರತಿ ಹತ್ತು ಡಿಗ್ರಿ ಸೆಂಟಿಗ್ರೇಡ್ ತಾಪಮಾನದ ಹೆಚ್ಚಳ, ಜಲಜನಕ ಉತ್ಪಾದನಾ ಕ್ರಿಯೆಯ ವೇಗವನ್ನು ದುಪ್ಪಟ್ಟಾಗಿಸಬಲ್ಲದು. &lt;/div&gt;&lt;br /&gt;&lt;div&gt;&lt;br /&gt;ಈ ಬಗೆಯ ಜಲಜನಕ ಉತ್ಪಾದನೆಯನ್ನು ಹೆಚ್ಚಾಗಿ ಎಲ್ಲಿ ಬಳಸಬಹುದು? ಎಂಬ ಪ್ರಶ್ನೆಗೆ ಆಡಮ್ಸ್ ಉತ್ತರಿಸುವುದು ಹೀಗೆ. ಎಲ್ಲೆಂದರಲ್ಲಿ ಹೊತ್ತೊಯ್ಯಬಹುದಾದ ಪೋರ್ಟಬಲ್ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಬಳಕೆಯಾಗುವ ಇಂಧನ ಕೋಶಗಳಲ್ಲಿ ಇವನ್ನು ಹುದುಗಿಸಬಹುದು. ಇದುವರೆಗೂ ಪುಟ್ಟ ಜಲಜನಕ ಇಂಧನ ಕೋಶಗಳಲ್ಲಿ ಆಕರ ದ್ರವದ ಪಾತ್ರವನ್ನು ಮೀಥೈಲ್ ಆಲ್ಕೊಹಾಲ್ ವಹಿಸುತ್ತಿತ್ತು. ಪಿಷ್ಟ ಹಾಗೂ ನೀರಿನ ಮಿಶ್ರಣವು ಮೀಥೈಲ್ ಆಲ್ಕೋಹಾಲ್‍ಗಿಂತ ಹೆಚ್ಚು ಸುರಕ್ಷವಾಗಿರುವ ಕಾರಣ, ಬರಲಿರುವ ದಿನಗಳಲ್ಲಿ ಇಂಧನ ಕೋಶಗಳಿಗೆ ಪಿಷ್ಟದ ಬಳಕೆ ಹೆಚ್ಚಾಗಬಹುದು. ಆಡಮ್ಸ್ ಆಶಾವಾದಿ. ಮುಂದಿನ ಎಂಟು ವರ್ಷಗಳಲ್ಲಿ ಇಂಥ ಪುಟಾಣಿ ಇಂಧನ ಕೋಶಗಳು ಬಳಕೆಗೆ ಬರುವುದಷ್ಟೇ ಅಲ್ಲ, ನಮ್ಮ ನಿತ್ಯ ಬಳಕೆಯ ಮೋಟಾರು ವಾಹನಗಳಲ್ಲಿಯೂ ಪಿಷ್ಟಭರಿತ ಇಂಧನ ಕೋಶಗಳೇ ಉಪಯೋಗಕ್ಕೆ ಬರುವುದಂತೆ. &lt;/div&gt;&lt;br /&gt;&lt;div&gt;&lt;br /&gt;ಇದೀಗ ಲೇಖನದ ಮೊದಲ ಪ್ಯಾರಕ್ಕೆ ಹಿಂದಿರುಗೋಣ. ಉದ್ವಿಗ್ನ ಓದುಗರೊಬ್ಬರು ತಮ್ಮ ಪ್ರತಿಕ್ರಿಯೆಯನ್ನು ಹೀಗೆ ಮುಂದುವರಿಸಿದ್ದಾರೆ. ‘ನಮ್ಮ ಆಹಾರಕ್ಕೆ ಬಳಸದ ಪಿಷ್ಟ ಭರಿತ ವಸ್ತುಗಳನ್ನೇಕೆ ಜಲಜನಕ ಉತ್ಪಾದಿಸಲು ಬಳಸಿಕೊಳ್ಳಬಾರದು? ಸಾಮಾನ್ಯ ಹುಲ್ಲಿನಿಂದ ಜಲಜನಕ ಉತ್ಪಾದಿಸಲಾಗದೆ? ನಮ್ಮ ಅಮೆರಿಕದಲ್ಲಿ ಶೋಕಿಗೆಂದು ಹುಲ್ಲುಗಾವಲನ್ನು ಬೆಳೆಸುವ ದೊಡ್ಡ ಉದ್ಯಮವೇ ಇದೆ. ಚೆನ್ನಾಗಿ ನೀರುಣಿಸಿ, ಗೊಬ್ಬರ ತುಂಬಿ, ಕೀಟನಾಶಕ ಸಿಂಪಡಿಸಿ, ಮೈಕೈ ನೋಯಿಸಿಕೊಳ್ಳುವುದು. ಹುಲ್ಲು ಹುಲುಸಾಗಿ ಬೆಳೆದಂತೆ, ಕತ್ತರಿಸುವುದು. ಕತ್ತರಿಸಿದ ಹುಲ್ಲನ್ನು ತ್ಯಾಜ್ಯದಂತೆ ಹೊರಗೆಸೆಯುವುದು’. ಹುಲ್ಲು, ಹತ್ತಿಯಂಥ ಹಸಿರು ಗಿಡ ಮರಗಳಲ್ಲಿ ‘ಸೆಲ್ಯುಲೋಸ್’ ಎಂಬ ನಾರು ಹೇರಳವಾಗಿರುತ್ತದೆ. ಈ ನಾರನ್ನು ದನ, ಮರಕೊರೆಯುವ ಹುಳು ಮುಂತಾದ ಸೊಪ್ಪು ಸದೆ ತಿನ್ನುವ ಪ್ರಾಣಿಗಳು ಜೀರ್ಣಿಸಿಕೊಳ್ಳಬಲ್ಲವು. ಆ ಪ್ರಾಣಿಗಳ ದೇಹದಲ್ಲಿರುವ ‘ಸೆಲ್ಯುಲೇಸ್’ ಎಂಬ ಕಿಣ್ವ ಮನುಷ್ಯ ದೇಹದ ಜೀರ್ಣಕೋಶಗಳಲ್ಲಿರದ ಕಾರಣ, ಅಂಥ ನಾರುಗಳು ಪಚನವಾಗುವುದಿಲ್ಲ. ಅಂದರೆ ಸೆಲ್ಯುಲೋಸ್‍ಭರಿತ ಹಸಿರು ಪದಾರ್ಥಗಳನ್ನು ಜಲಜನಕ ಉತ್ಪಾದಿಸಲು ಬಳಸಿಕೊಳ್ಳಬಹುದಲ್ಲವೆ? ಎಂಬುದು ಆ ಉದ್ವಿಗ್ನ ಓದುಗರ ಲೇವಡಿಯ ಹಿಂದಿನ ಅರ್ಥ. ಈ ರೀತಿ ಕಾಳಜಿ ಪಡುವುದಕ್ಕೆ ಕಾರಣಗಳಿವೆ. &lt;/div&gt;&lt;br /&gt;&lt;div&gt;&lt;br /&gt;‘ಮೆಸಾಶ್ಯುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ - ಎಂ.ಐ.ಟಿ.’ಯ ರಸಾಯನ ವಿಜ್ಞಾನ ಪ್ರಾಧ್ಯಾಪಕರಾದ ಜಾನ್ ಡ್ಯೂಯ್ಸ್ಚ್ ಹೇಳುವಂತೆ ‘ನಮ್ಮ ಆಹಾರವನ್ನು ಜಲಜನಕ ಉತ್ಪಾದಿಸಲು ಬಳಸುವುದು ತರವಲ್ಲ. ಈಗಾಗಲೇ ಈಥೈಲ್ ಆಲ್ಕೊಹಾಲ್ ಉತ್ಪಾದನೆಗೆ ಮುಸುಕಿನ ಜೋಳದ ಕಾಳುಗಳನ್ನು ಬಳಸಲಾಗುತ್ತಿದೆ. ಇಂಥ ಬಳಕೆ ಆರಂಭವಾದಂತೆ ಜೋಳದ ಬೆಲೆ ಅಮೆರಿಕದಲ್ಲಿ ವಿಪರೀತ ತುಟ್ಟಿಯಾಗಿದೆ. ಇನ್ನು ಜೋಳದ ಪಿಷ್ಟವನ್ನು ಜಲಜನಕ ಉತ್ಪಾದನೆಗೆ ಬಳಸಲು ಹೊರಟರೆ, ನಾವ್ಯಾರೂ ಜೋಳವನ್ನು ಕೊಳ್ಳಲಾಗದು’. ಈ ಮಾತುಗಳನ್ನು ನೇರವಾಗಿ ಒಪ್ಪದ ಜಲಜನಕ ಪ್ರಿಯರು, ಜೋಳವನ್ನು ಆಲ್ಕೋಹಾಲ್ ಆಗಿ ಬದಲಿಸಿ ಅದನ್ನು ಅಂತರ್ದಹನ ಮೋಟಾರು ಎಂಜಿನ್‍ಗಳಲ್ಲಿ ಬಳಸು
